बैलूर यात्रेसाठी 10 लाख रुपयांचा निधी मंजूर; गदगा बांधकाम व पेव्हर्स बसविणार.
खानापूर : बैलूर येथील प्रसिद्ध लक्ष्मी यात्रेच्या विकासासाठी विधान परिषद सदस्य चन्नराज हट्टीहोळी यांच्या निधीतून १० लाख रुपयांचा निधी मंजूर करण्यात आला आहे. या निधीतून यात्रास्थळी गदगा (स्टेज) बांधकाम तसेच पेव्हर्स बसविण्याचे काम करण्यात येणार आहे.
हा दहा लाख रुपयांचा निधी एमएलसी चन्नराज हट्टीहोळी यांनी मंजूर केला असून यासाठी सामाजिक कार्यकर्ते इरफान तालिकोटी यांच्या प्रयत्नांना यश आले आहे. नुकतेच इरफान तालिकोटी यांनी बैलूर लक्ष्मी यात्रा कमिटीच्या सदस्यांसह चन्नराज हट्टीहोळी यांची भेट घेतली. यावेळी बैलूर येथे होणाऱ्या लक्ष्मी यात्रेसाठी आवश्यक सोयी-सुविधा निर्माण करण्यासाठी निधी उपलब्ध करून देण्याची मागणी करण्यात आली होती.

या मागणीची दखल घेत चन्नराज हट्टीहोळी यांनी लक्ष्मी यात्रा कमिटीच्या सदस्यांच्या उपस्थितीत यात्रेसाठी 10 लाख रुपयांचा निधी मंजूर करण्याची घोषणा केली. यात्रेच्या ठिकाणी येणाऱ्या भाविकांना आवश्यक सुविधा उपलब्ध व्हाव्यात तसेच परिसराचा विकास व्हावा, या उद्देशाने हा निधी देण्यात आल्याचे त्यांनी सांगितले.
या प्रसंगी बैलूर लक्ष्मी यात्रा कमिटीचे लक्ष्मण झांजरे, कृष्णकांत बीर्जे तसेच पदाधिकारी व सदस्य उपस्थित होते. निधी मंजूर केल्याबद्दल कमिटीच्या वतीने एमएलसी चन्नराज हट्टीहोळी यांचे आभार व्यक्त करण्यात आले. तसेच या निधीमुळे यात्रास्थळाचा विकास होऊन भाविकांना अधिक चांगल्या सुविधा उपलब्ध होतील, असा विश्वासही कमिटीच्या सदस्यांनी व्यक्त केला.
ಬೈಲೂರು ಯಾತ್ರೆಗೆ 10 ಲಕ್ಷ ರೂಪಾಯಿ ಅನುದಾನ ಮಂಜೂರು; ನಿಧಿಯ ಹಣದಲ್ಲಿ ಗದ್ದಿಗೆ ನಿರ್ಮಾಣ ಹಾಗೂ ಪೇವರ್ಸ್ ಅಳವಡಿಕೆ ಕಾರ್ಯಕ್ಕೆ ಚಾಲನೆ.
ಖಾನಾಪುರ : ಬೈಲೂರು ಗ್ರಾಮದ ಪ್ರಸಿದ್ಧ ಲಕ್ಷ್ಮೀ ಯಾತ್ರೆಯ ಅಭಿವೃದ್ಧಿಗಾಗಿ ವಿಧಾನ ಪರಿಷತ್ ಸದಸ್ಯರಾದ ಚನ್ನರಾಚ ಹಟ್ಟಿಹೊಳಿ ಅವರ ಎಂ ಎಲ್ ಸಿ ನಿಧಿಯಿಂದ 10 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ. ಈ ನಿಧಿಯಿಂದ ಯಾತ್ರಾಸ್ಥಳದಲ್ಲಿ ಗದ್ದಿಗೆ ನಿರ್ಮಾಣ ( ವೇದಿಕೆ)ಹಾಗೂ ಪೇವರ್ಸ್ ಅಳವಡಿಸುವ ಕೆಲಸ ಕೈಗೊಳ್ಳಲಾಗುತ್ತದೆ.
ಈ 10 ಲಕ್ಷ ರೂಪಾಯಿ ಅನುದಾನವನ್ನು ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಅವರು ಮಂಜೂರು ಮಾಡಿದ್ದು, ಇದಕ್ಕಾಗಿ ಸಮಾಜ ಸೇವಕರಾದ ಇರ್ಫಾನ್ ತಾಳಿಕೋಟಿ ಅವರ ಪ್ರಯತ್ನಗಳು ಫಲ ನೀಡಿವೆ. ಇತ್ತೀಚೆಗೆ ಇರ್ಫಾನ್ ತಾಲಿಕೋಟಿ ಅವರು ಬೈಲೂರು ಲಕ್ಷ್ಮೀ ಯಾತ್ರಾ ಸಮಿತಿಯ ಸದಸ್ಯರೊಂದಿಗೆ ಚನ್ನರಾಜ ಹಟ್ಟಿಹೊಳಿ ಅವರನ್ನು ಭೇಟಿ ಮಾಡಿದ್ದರು.
ಈ ಸಂದರ್ಭದಲ್ಲಿ ಬೈಲೂರಿನಲ್ಲಿ ನಡೆಯುವ ಲಕ್ಷ್ಮೀ ಯಾತ್ರೆಗೆ ಅಗತ್ಯವಾದ ಸೌಲಭ್ಯಗಳನ್ನು ನಿರ್ಮಿಸಲು ನಿಧಿ ಒದಗಿಸುವಂತೆ ಮನವಿ ಮಾಡಲಾಗಿತ್ತು. ಈ ಮನವಿಯನ್ನು ಪರಿಗಣಿಸಿದ ಚನ್ನರಾಜ ಹಟ್ಟಿಹೊಳಿ ಅವರು ಲಕ್ಷ್ಮೀ ಯಾತ್ರಾ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಯಾತ್ರೆಗೆ 10 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡುವುದಾಗಿ ಘೋಷಿಸಿದರು.
ಯಾತ್ರಾಸ್ಥಳಕ್ಕೆ ಆಗಮಿಸುವ ಭಕ್ತರಿಗೆ ಅಗತ್ಯ ಸೌಲಭ್ಯಗಳು ಲಭ್ಯವಾಗಬೇಕು ಹಾಗೂ ಪ್ರದೇಶದ ಅಭಿವೃದ್ಧಿಯಾಗಬೇಕು ಎಂಬ ಉದ್ದೇಶದಿಂದ ಈ ನಿಧಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬೈಲೂರು ಲಕ್ಷ್ಮೀ ಯಾತ್ರಾ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ನಿಧಿ ಮಂಜೂರು ಮಾಡಿದಕ್ಕಾಗಿ ಸಮಿತಿಯ ಪರವಾಗಿ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಜೊತೆಗೆ ಈ ನಿಧಿಯಿಂದ ಯಾತ್ರಾಸ್ಥಳದ ಅಭಿವೃದ್ಧಿಯಾಗಿದ್ದು ಭಕ್ತರಿಗೆ ಇನ್ನಷ್ಟು ಉತ್ತಮ ಸೌಲಭ್ಯಗಳು ಲಭ್ಯವಾಗಲಿವೆ ಎಂಬ ವಿಶ್ವಾಸವನ್ನು ಸಮಿತಿಯ ಸದಸ್ಯರು ವ್ಯಕ್ತಪಡಿಸಿದರು.



