पैसे डबल करून देण्याचे आमिष दाखवून लाखो रुपयांची फसवणूक – चौघेजण अटकेत
बेळगाव : टोयोटा कंपनीच्या पांढऱ्या रंगाच्या कारमधून आलेल्या महिला व तिघा पुरुषांनी एका व्यक्तीच्या घरी येऊन बॅगेत जुने कपडे ठेवून त्यात पैसे आहेत असे भासवून लाखो रुपयांची फसवणूक केली. या प्रकरणातील चौघांना पोलिसांनी अटक केली आहे.
याबाबत सविस्तर माहिती अशी की,12 सप्टेंबर रोजी संध्याकाळी 7 वाजण्याच्या सुमारास संशयित महिला व पुरुषांनी “तुम्ही आम्हाला पैसे दिल्यास आम्ही त्याचे डबल पैसे परत देऊ” असे सांगून, अमसिद्द हणमंत पुजारी यांच्याकडून तब्बल 17 लाख 50 हजार रुपये घेतले. या बॅगेत 34 लाख रुपये आहेत असे सांगून, घरात जाऊन पाहा असे सांगून विश्वासघात करून ते पसार झाले. या संदर्भात अथणी तालुक्यातील ऐगळी पोलीस ठाण्यात गुन्हा दाखल करण्यात आला होता.
घटनेनंतर बेळगाव जिल्हा पोलीस अधीक्षकांनी फरार आरोपींचा शोध घेण्यासाठी विशेष पथक स्थापन केले. पोलिसांनी कारवाई करून 17 सप्टेंबर रोजी चौघांना अटक केली
अटक केलेल्या आरोपींची नावे..
माधुरी पुवलन मेहरून्ना अल्ताफ सर्कवास (48, घटप्रभा मल्लापूर, सध्या कोल्हापूर, जवाहरनगर, साई मंदिराजवळ)
इमामसाब राजेसाब दरूबाई (34, कमडोळी, ता. कुंदगोल, जि. धारवाड), अक्षय शांतिनाथ अवटी (वय 30, डिग्रजन, जि. सांगली), विश्वास हरी पाटील (40, पोहाळे, ता. पन्हाळा, जि. कोल्हापूर) अटक केलेल्यांची नावे अशी आहेत.
पोलिसांनी त्यांच्याकडून रक्कम व कार जप्त केली असून पुढील तपास सुरू आहे.
ಹಣ ಡಬಲ್ ನೀಡುವುದಾಗಿ ಹೇಳಿ ಲಕ್ಷಾಂತರ ರೂ. ವಂಚಿಸಿ ಪರಾರಿಯಾಗಿದ್ದ ನಾಲ್ವರ ಬಂಧನ
ಬೆಳಗಾವಿ : ಟೊಯೋಟಾ ಕಂಪನಿಯ ಬಿಳಿ ಬಣ್ಣದ ಕಾರಿನಲ್ಲಿ ವ್ಯಕ್ತಿಯೊಬ್ಬರ ಮನೆಯ ಬಳಿ ಬಂದು ಬ್ಯಾಗ್ ನಲ್ಲಿ ಹಳೆ ಬಟ್ಟೆ ಹಾಕಿ ಅದರಲ್ಲಿ ಹಣ ಇದೆ ಎಂದು ನಂಬಿಸಿ ಹಣ ತೆಗೆದುಕೊಂಡು ಪರಾರಿಯಾದ ನಾಲ್ವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸೆಪ್ಟೆಂಬರ್ 12 ರ ಸಂಜೆ 7:00 ಗಂಟೆ ಸುಮಾರಿಗೆ ಮಹಿಳೆ ಮತ್ತು ಮೂವರು ಪುರುಷರು ನಮಗೆ ಹಣ ಕೊಟ್ಟರೆ ಅದಕ್ಕೆ ಡಬಲ್ ಹಣ ಕೊಡುವುದಾಗಿ ಹೇಳಿ ಅಮಸಿದ್ದ ಹಣಮಂತ ಪೂಜಾರಿ ಅವರಿಂದ 17, 50, 000 ರೂ. ಹಣವನ್ನು ತೆಗೆದುಕೊಂಡು ಈ ಬ್ಯಾಗಿನಲ್ಲಿ ಒಟ್ಟು 34 ಲಕ್ಷ ರೂ. ಹಣ ಇದೆ, ಮನೆಯ ಒಳಗಡೆ ಹೋಗಿ ನೋಡಿ ಎಂದು ನಂಬಿಕೆ ದ್ರೋಹ ಮಾಡಿ ಮೋಸ ಮಾಡಿದ್ದರು. ಈ ಬಗ್ಗೆ ಅಥಣಿ ತಾಲೂಕಿನ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಬೆಳಗಾವಿ ಎಸ್ ಪಿ ಪರಾರಿ ಆದವರ ಪತ್ತೆಗೆ ತಂಡವನ್ನು ರಚಿಸಿದ್ದರು.
ಪೊಲೀಸರು ಆರೋಪಿಗಳಾದ ಸಾ: ಘಟಪ್ರಭಾ ಮಲ್ಲಾಪುರದ ಹಾಲಿ ಕೊಲ್ಲಾಪುರ ಜವ್ಹಾರನಗರ ಸಾಯಿ ಮಂದಿರ ಬಳಿಯ ಮಾಧುರಿ ಪೂವಲನ ಮೆಹರೂನ ಅಲ್ತಾಫ್ ಸರ್ಕವಾಸ್(48), ಧಾರವಾಡ ಜಿಲ್ಲೆ ಕುಂದಗೋಳ ತಾಲೂಕು ಕಮಡೊಳ್ಳಿಯ ಇಮಾಮಸಾಬ ರಾಜೇಸಾಬ ದರೂಬಾಯಿ(34), ಸಾಂಗಲಿ ಜಿಲ್ಲೆ ಡಿಗ್ರಜನ ಅಕ್ಷಯ ಶಾಂತಿನಾಥ ಅವಟಿ(30)ಮತ್ತು ಕೊಲ್ಲಾಪುರ ಜಿಲ್ಲೆ ಪನ್ಹಾಳ ತಾಲೂಕಿನ ಪೊಹಾಳಿಯ ವಿಶ್ವಾಸ ಹರಿ ಪಾಟೀಲ (40) ಇವರನ್ನು ಸೆಪ್ಟೆಂಬರ್ 17ರಂದು ಬಂಧಿಸಿ ಹಣ ಮತ್ತು ಕಾರನ್ನು ವಶಪಡಿಸಿಕೊಂಡಿದ್ದಾರೆ.

