कार व ट्रॅक्टरचा भीषण अपघात ; चार तरुणांचा जागीच मृत्यू.
बागलकोट : जमखंडी तालुक्यातील सिद्दापूर परिसरात प्रभू‧लिंगेश्वर साखर कारखान्याजवळ बुधवारी मध्यरात्री झालेल्या भीषण अपघातात चार तरुणांचा जागीच मृत्यू झाल्याची हृदयद्रावक घटना उघडकीस आली आहे. रात्री अंदाजे 12.30 वाजता ऊसाने भरलेला ट्रॅक्टर जात असताना त्याच्या मागून एक कार गाडीने वेगाने जाऊन धडक दिल्याने हा भीषण अपघात झाला असल्याचे समजते.
या दुर्घटनेत विश्वनाथ (17), प्रवीण (22), गणेश (20) आणि प्रज्वल (17) या तरुणांचा घटनास्थळीच मृत्यू झाला. या अपघातात मृत्यू पावलेले सर्व तरुण जमखंडी तालुक्यातील सिद्दापूर गावचे रहिवासी असल्याचे समजले आहे.
मध्यरात्री हे तरुण मित्रांसोबत शिरोळ येथील काडसिद्धेश्वर देवाच्या जत्रेला जात असताना ही दुर्घटना घडल्याची माहिती मिळाली आहे. कार आणि ट्रॅक्टरची झालेले प्रचंड नुकसान पाहता धडकेची तीव्रता किती मोठी होती, हे स्पष्ट होते.
ಕಾರು – ಟ್ರ್ಯಾಕ್ಟರ್ ಡಿಕ್ಕಿ ; ಸ್ಥಳದಲ್ಲಿಯೇ ನಾಲ್ವರು ಯುವಕರ
ದುರ್ಮರಣ.!
ಬಾಗಲಕೋಟೆ : ಸಿದ್ದಾಪುರ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಹತ್ತಿರ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತ (Accident) ದಲ್ಲಿ ನಾಲ್ವರು ಯುವಕರು ದುರ್ಮರಣ ಹೊಂದಿರುವ ದಾರುಣ ಘಟನೆ ವರದಿಯಾಗಿದೆ. ಬುಧವಾರ ಮಧ್ಯರಾತ್ರಿ ಸುಮಾರು 12.30 ಗಂಟೆಗೆ, ಕಬ್ಬು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ಗೆ ಕಾರು ರಭಸವಾಗಿ ಹಿಂಭಾಗದಿಂದ ಡಿಕ್ಕಿ ಹೊಡೆಯುವುದರಿಂದ ಘಟನೆ ಸಂಭವಿಸಿದೆ.
ಈ ಅಪಘಾತ ದಲ್ಲಿ ವಿಶ್ವನಾಥ್ (17), ಪ್ರವೀಣ್ (22), ಗಣೇಶ (20), ಪ್ರಜ್ವಲ್ (17) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತರೆಲ್ಲರೂ ಜಮಖಂಡಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ.
ತಡರಾತ್ರಿ ಸ್ನೇಹಿತರೊಂದಿಗೆ ಶಿರೋಳ ಕಾಡಸಿದ್ಧೇಶ್ವರ ದೇವರ ಜಾತ್ರೆಗೆ ತೆರಳುತ್ತಿರುವ ವೇಳೆ ಈ ದುರ್ಘಟನೆ ಸಂಭವಿಸಿದೆಂದು ಮಾಹಿತಿ ಲಭ್ಯವಾಗಿದೆ. ಕಾರು ಹಾಗೂ ಟ್ರ್ಯಾಕ್ಟರ್ ಸಂಪೂರ್ಣ ನಜ್ಜುಗುಜ್ಜಾಗಿರುವುದನ್ನು ನೋಡಿದರೆ ಅಪಘಾತ ದ ತೀವ್ರತೆ ಬಗ್ಗೆ ತಿಳಿದು ಬರುತ್ತದೆ.

