गांधीनगर खून प्रकरणात अनैतिक संबंधाची पार्श्वभूमी; पत्नीसह चौघांना अटक
खानापूर (ता. ३ ऑगस्ट): खानापूर शहरानजीक असलेल्या गांधीनगर येथील शनि मंदिर – हनुमान मंदिर परिसरात रविवारी दुपारी घडलेल्या खून प्रकरणामागे अनैतिक संबंध असल्याचे उघडकीस आले आहे. या खुनात सुरेश उर्फ रमेश बंडीवड्डर (मूळ गाव तेग्गूर, सध्या राहणार गांधीनगर) याचा मृत्यू झाला असून, त्याच्या पत्नीसह चौघांना पोलिसांनी अटक केली आहे.

खून प्रकरणी अटक करण्यात आलेले संशयित आरोपी:
यल्लाप्पा शांताराम बंडीवड्डर (वय 60)
यशवंत उर्फ अनिल यल्लाप्पा बंडीवड्डर (वय 25)
सावित्री यल्लाप्पा बंडीवड्डर (वय 55)
स्नेहा सुरेश बंडीवड्डर (वय 27) – मयत सुरेश यांची पत्नी
खूनामागील कारण:
मिळालेल्या माहितीनुसार, मयत सुरेश याच्या पत्नी स्नेहा हिचे यशवंत उर्फ अनिल यल्लाप्पा बंडीवड्डर याच्याशी अनैतिक संबंध होते. काही दिवसांपूर्वी स्नेहा पतीला सोडून अनिलच्या घरी राहू लागली होती. त्यामुळे मयत सुरेश हा सतत अनिलच्या घरी जाऊन शिवीगाळ करत होता.
याच कारणावरून, गावातील काही लोकांनी मध्यस्थी करत गांधीनगर येथील शनि-हनुमान मंदिरात बैठक आयोजित केली होती. परंतु बैठकीदरम्यान वाद उफाळून आला आणि यल्लाप्पा बंडीवड्डर याने चाकूने सुरेशच्या पोटात वार केले. यामुळे त्याची आतडी व पोटगुळगुळ्या बाहेर आले आणि तो जागीच कोसळला.
मृत्यू आणि तपास:
सुरेश याला तातडीने खानापूर प्राथमिक आरोग्य केंद्रात दाखल करण्यात आले, मात्र गंभीर जखमांमुळे प्राथमिक उपचारानंतर त्याला बेळगावला हलविण्यात आले. परंतु वाटेतच त्याचा मृत्यू झाला.
या घटनेत सागर अष्टेकर या युवकाच्या हाताला ही गंभीर दुखापत झाली असून, तो सुरेशला वाचविण्याचा प्रयत्न करत होता.
अधिकाऱ्यांची घटनास्थळी उपस्थिती:
घटनेची माहिती मिळताच अतिरिक्त पोलीस अधीक्षक बसर्गी, बैलहोंगलचे डीवायएसपी वीरेश हिरेमठ, खानापूरचे पीआय एल. एच. गोवंडी यांनी घटनास्थळी भेट दिली. पोलीस तपास वेगाने सुरू असून, फॉरेन्सिक लॅबचे पथक देखील घटनास्थळी पोहोचले आहे. त्यांनी रक्ताचे नमुने व इतर पुरावे जमा केले आहेत. परिसरातील सीसीटीव्ही फुटेज पोलिसांनी ताब्यात घेतले असून, नातेवाईक व मित्रांची कसून चौकशी केली जात आहे.
सर्व आरोपींना सोमवारी न्यायालयात हजर करण्यात येणार आहे. गुन्ह्याची नोंद व पुढील तपास सुरु असून, रात्री उशिरापर्यंत तपास सुरू होता.
ಗಾಂಧೀನಗರ ಹತ್ಯೆ ಪ್ರಕರಣ: ಅನೈತಿಕ ಸಂಬಂಧ ಹಿನ್ನೆಲೆ; ಹತ್ಯೆ ಯಾದ ಯುವಕನ ಪತ್ನಿಯ ಜತೆ ಒಟ್ಟು ನಾಲ್ವರ ಬಂಧನ
ಖಾನಾಪುರ (ತಾ. ೩ ಆಗಸ್ಟ್): ಖಾನಾಪುರ ಸಮೀಪದ ಗಾಂಧೀನಗರದ ಶನಿ-ಹನುಮಾನ ದೇವಾಲಯ ಆವರಣದಲ್ಲಿ ರವಿವಾರ ಮಧ್ಯಾಹ್ನ ಸಂಭವಿಸಿದ ಹತ್ಯೆ ಪ್ರಕರಣಕ್ಕೆ ಅನೈತಿಕ ಸಂಬಂಧವೇ ಕಾರಣವಾಗಿದೆ ಎಂಬುದು ತನಿಖೆಯಿಂದ ಬಹಿರಂಗವಾಗಿದೆ.
ಈ ಹತ್ಯೆಯಲ್ಲಿ ಸುರೇಶ ಅಲಿಯಾಸ್ ರಮೇಶ ಬಂಡಿವಡ್ದರ್ (ಮೂಲ ಗ್ರಾಮ ತೆಗ್ಗೂರು, ಪ್ರಸ್ತುತ ನಿವಾಸ ಗಾಂಧೀನಗರ) ಮೃತಪಟ್ಟಿದ್ದು, ಅವರ ಪತ್ನಿಯ ಜತೆ ನಾಲ್ವರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ
ಬಂಧಿತ ಆರೋಪಿಗಳಲ್ಲಿ
ಯಲ್ಲಪ್ಪ ಶಾಂತಾರಾಮ ಬಂಡಿವಡ್ದರ್ (ವಯಸ್ಸು ೬೦)
ಯಶವಂತ ಅಲಿಯಾಸ್ ಅನಿಲ್ ಯಲ್ಲಪ್ಪ ಬಂಡಿವಡ್ದರ್ (ವಯಸ್ಸು ೨೫)
ಸಾವಿತ್ರಿ ಯಲ್ಲಪ್ಪ ಬಂಡಿವಡ್ದರ್ (ವಯಸ್ಸು ೫೫)
ಸ್ನೇಹಾ ಸುರೇಶ ಬಂಡಿವಡ್ದರ್ (ವಯಸ್ಸು ೨೭) – ಮೃತ ಸುರೇಶ ಅವರ ಪತ್ನಿ
ಘಟನೆಗೆ ಕಾರಣ:
ಮಾಹಿತಿ ಪ್ರಕಾರ, ಸ್ನೇಹಾ ಅವರು ಯಶವಂತ ಅಲಿಯಾಸ್ ಅನಿಲ ಜೊತೆ ಅನೈತಿಕ ಸಂಬಂಧ ಇತ್ತು. ಇತ್ತೀಚೆಗೆ ಅವಳು ಪತಿಯನ್ನು ಬಿಟ್ಟು ಅನಿಲ್ ಅವರ ಮನೆಗೆ ಹೋಗಿ ಅಲ್ಲೇ ವಾಸ ಮಾಡುತ್ತಿದ್ದಳು. ಇದರಿಂದಾಗಿ ಸುರೇಶ ಅಕ್ರಮ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಾ, ಅನಿಲ್ ಅವರ ಮನೆಗೆ ಹೋಗಿ ಜಗಳ ಮಾಡುತ್ತಿದ್ದ.
ಈ ಹಿನ್ನೆಲೆಯಲ್ಲೇ ಗ್ರಾಮಸ್ಥರ ಮಧ್ಯಸ್ಥಿಕೆಯಿಂದ ಗಾಂಧೀನಗರದ ಶನಿ-ಹನುಮಾನ ದೇವಾಲಯದ ಆವರಣದಲ್ಲಿ ಸಭೆ ಆಯೋಜಿಸಲಾಗಿತ್ತು. ಆದರೆ ಸಭೆ ವೇಳೆ ವಾದ ಉಂಟಾಗಿ, ಯಲ್ಲಪ್ಪ ಬಂಡಿವಡ್ದರ್ ಅವರು ಸುರೇಶ ಅವರ ಹೊಟ್ಟೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿದರು. ಇದರಿಂದ ಅವರ ಕರಳೂ ಹೊರ ಬಿದ್ದಿದ್ದು, ಸ್ಥಳದಲ್ಲೇ ಕುಸಿದು ಬಿದ್ದ.
ಮೃತ್ಯು ಮತ್ತು ತನಿಖೆ:
ಸುರೇಶ ಅವರನ್ನು ತಕ್ಷಣ ಖಾನಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಸ್ಥಿತಿ ಗಂಭೀರವಾಗಿದ್ದ ಕಾರಣ ಅವರಿಗೆ ಬೆಳಗಾವಿಗೆ ಕರೆದೊಯ್ಯಲಾಗುತ್ತಿದಾಗ ದುರಾದೃಷ್ಟವಶಾತ್ ಮಧ್ಯದಲ್ಲೇ ಅವರು ಸಾವನ್ನಪ್ಪಿದರು.
ಸಾಗರ ಅಷ್ಟೇಕರ್ ಎಂಬ ಯುವಕ ಸುರೇಶರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ಅವರ ಕೈಗೆ ಕೂಡ ಗಂಭೀರ ಗಾಯವಾಗಿದೆ.
ಸ್ಥಳಕ್ಕೆ ಅಧಿಕಾರಿಗಳ ಭೇಟಿ:
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬಸರ್ಗಿ, ಬೈಲಹೊಂಗಲ DYSP ವೀರೇಶ್ ಹಿರೇಮಠ ಮತ್ತು ಖಾನಾಪುರ PI ಎಲ್. ಎಚ್. ಗೊವಂಡಿ ಅವರು ಸ್ಥಳಕ್ಕೆ ಭೇಟಿ ನೀಡಿದರು. ಪೊಲೀಸರು ವೇಗವಾಗಿ ತನಿಖೆ ನಡೆಸುತ್ತಿದ್ದು, ಫೊರೆನ್ಸಿಕ್ ತಂಡ ಸ್ಥಳಕ್ಕೆ ಆಗಮಿಸಿ ರಕ್ತದ ಮಾದರಿ ಹಾಗೂ ಇತರ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಹಾಗೂ ಸಂಬಂಧಿಕರು, ಸ್ನೇಹಿತರಿಂದ ಅಧಿಕ ವಿಚಾರಣೆ ಹಾಗೂ ವಿವರಣೆ ಪಡೆಯೂತ್ತಿದ್ದಾರೆ.
ಬಂಧಿತ ಆರೋಪಿಗಳನ್ನು ಇಂದು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಪ್ರಕರಣ ದಾಖಲಾಗಿ ತಡರಾತ್ರಿ ತನಕ ತನಿಖೆ ಮುಂದುವರೆದಿತ್ತು.

