कुसमळी गवळी वाड्यात शंभर वर्षांनंतर पहिल्यांदाच सिमेंटचा सी.सी. रस्ता; बैलूर ग्रामपंचायत माजी अध्यक्षांनी विकास कामाला दिला वेग.
जांबोटी : बैलूर ग्रामपंचायत हद्दीतील कुसमळी गावातील गवळी वाडा येथे तब्बल शंभर वर्षांनंतर प्रथमच सिमेंटचा सी.सी. रस्ता करण्यात आला आहे. बैलूर ग्रामपंचायतीच्या माजी अध्यक्षा आरोही अनंत सावंत यांच्या विशेष प्रयत्नातून हे काम पूर्णत्वास गेले असून ग्रामस्थांमध्ये समाधानाचे वातावरण आहे.

गेल्या अनेक वर्षांपासून गवळी वाड्यात पावसाळ्यात चिखल व खड्ड्यांमुळे नागरिकांना मोठ्या अडचणींचा सामना करावा लागत होता. विशेषतः शालेय विद्यार्थी, महिला व ज्येष्ठ नागरिकांना वाहतुकीसाठी त्रास सहन करावा लागत होता. या पार्श्वभूमीवर माजी अध्यक्षा आरोही सावंत यांनी आपल्या कार्यकाळात पुढाकार घेत संबंधित विभागांशी पाठपुरावा करून निधी उपलब्ध करून घेतला आणि सी.सी. रस्त्याचे काम पूर्ण केले.
अध्यक्षा पदाच्या अवघ्या दहा महिन्यांच्या कालावधीत आरोही सावंत यांनी बैलूर ग्रामपंचायतीच्या इमारतीसह ग्रामपंचायत व्याप्तीतील सर्व गावांमध्ये सी.सी. रस्त्यांची कामे, पिण्याच्या पाण्याच्या सुविधा, गटार व्यवस्था आदी विविध विकासकामे हाती घेऊन ती मार्गी लावण्यात आली आहेत. यामुळे ग्रामपंचायतीच्या विकासकामांना गती मिळाली आहे.
दरम्यान, फेब्रुवारी 2027 मध्ये कुसमळी येथे होणाऱ्या श्री महालक्ष्मी यात्रेच्या पार्श्वभूमीवर कुसमाळी गावातील अंतर्गत गल्ली रस्त्यांचेही सिमेंट काँक्रीटीकरण करण्यात आले आहे. तसेच उर्वरित काम सुद्धा सुरू आहे. यात्रेसाठी येणाऱ्या भाविकांना कोणतीही अडचण येऊ नये, यासाठी नियोजनबद्ध पद्धतीने कामे पूर्ण करण्यात आली आहेत.
आरोही अनंत सावंत या कुसमळी गावचे सामाजिक कार्यकर्ते अनंत सावंत यांच्या पत्नी असून, ग्रामविकासाबाबत त्यांची कटिबद्धता दिसून येते. आपले पती अनंत सावंत यांच्या सहकार्यानव मदतीने कुसमळी गावासह ग्रामपंचायतीच्या कार्यक्षेत्रातील इतर गावांमध्येही मूलभूत सुविधा उपलब्ध करून देण्यासाठी तसेच प्रलंबित प्रश्न सोडविण्यासाठी त्यांनी सातत्याने प्रयत्न सुरू ठेवले आहेत.
या विकासकामांमुळे ग्रामस्थांनी अध्यक्षा आरोही सावंत यांचे अभिनंदन करून आभार व्यक्त केले आहेत.
ಸಿಮೆಂಟ್ ಸಿ.ಸಿ. ರಸ್ತೆ ನಿರ್ಮಾಣ; ಬೈಲೂರು ಗ್ರಾಮಪಂಚಾಯಿತಿ ಅಧ್ಯಕ್ಷೆಯರಿಂದ ಅಭಿವೃದ್ಧಿ ಕಾರ್ಯಗಳಿಗೆ ದೊರಕಿದ ವೇಗ.
ಜಾಂಬೋಟಿ : ಬೈಲೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಕುಸಮಳಿ ಗ್ರಾಮದ ಗವಳಿ ವಾಡಾದಲ್ಲಿ ಶತಮಾನಗಳ ಬಳಿಕ ಮೊದಲ ಬಾರಿಗೆ ಸಿಮೆಂಟ್ ಸಿ.ಸಿ. ರಸ್ತೆ ನಿರ್ಮಾಣ ಮಾಡಲಾಗಿದೆ. ಬೈಲೂರು ಗ್ರಾಮಪಂಚಾಯಿತಿಯ ಅಧ್ಯಕ್ಷೆ ಆರೋಹಿ ಅನಂತ ಸಾವಂತ ಅವರ ವಿಶೇಷ ಪ್ರಯತ್ನದಿಂದ ಈ ಕಾಮಗಾರಿ ಪೂರ್ಣಗೊಂಡಿದ್ದು, ಗ್ರಾಮಸ್ಥರಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ.
ಗವಳಿ ವಾಡಾದಲ್ಲಿ ಕಳೆದ ಅನೇಕ ವರ್ಷಗಳಿಂದ ಮಳೆಯ ಕಾಲದಲ್ಲಿ ಕೆಸರು ಮತ್ತು ಗುಂಡಿಗಳ ಕಾರಣದಿಂದ ನಾಗರಿಕರು ದೊಡ್ಡ ಮಟ್ಟದ ತೊಂದರೆ ಅನುಭವಿಸುತ್ತಿದ್ದರು. ವಿಶೇಷವಾಗಿ ಶಾಲಾ ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಸಂಚಾರದಲ್ಲಿ ಸಂಕಷ್ಟ ಅನುಭವಿಸುತ್ತಿದ್ದರು. ಈ ಹಿನ್ನೆಲೆಯನ್ನು ಮನಗಂಡ ಅಧ್ಯಕ್ಷೆ ಆರೋಹಿ ಸಾವಂತ ಅವರು ಸಂಬಂಧಿತ ಇಲಾಖೆಗಳೊಂದಿಗೆ ನಿರಂತರವಾಗಿ ಅನುಸರಣೆ ನಡೆಸಿ ಅಗತ್ಯ ನಿಧಿಯನ್ನು ಮಂಜೂರು ಮಾಡಿಸಿ ಸಿ.ಸಿ. ರಸ್ತೆ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಅಧ್ಯಕ್ಷೆಯಾಗಿ ಕೇವಲ ಹತ್ತು ತಿಂಗಳ ಅವಧಿಯಲ್ಲೇ ಆರೋಹಿ ಸಾವಂತ ಅವರು ಬೈಲೂರು ಗ್ರಾಮಪಂಚಾಯಿತಿ ಕಟ್ಟಡ ಸೇರಿದಂತೆ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಸಿ.ಸಿ. ರಸ್ತೆಗಳ ನಿರ್ಮಾಣ, ಕುಡಿಯುವ ನೀರಿನ ಸೌಲಭ್ಯ, ಒಳಚರಂಡಿ ವ್ಯವಸ್ಥೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡು ಅವುಗಳನ್ನು ಕ್ರಮಬದ್ಧವಾಗಿ ಪೂರ್ಣಗೊಳಿಸಿದ್ದಾರೆ. ಇದರ ಫಲವಾಗಿ ಗ್ರಾಮಪಂಚಾಯಿತಿಯ ಅಭಿವೃದ್ಧಿ ಕಾರ್ಯಗಳಿಗೆ ಚೈತನ್ಯ ಬಂದಿದೆ.
ಇದೇ ಸಂದರ್ಭದಲ್ಲಿ ಫೆಬ್ರವರಿ 2027ರಲ್ಲಿ ಕುಸಮಳಿಯಲ್ಲಿ ನಡೆಯಲಿರುವ ಶ್ರೀ ಮಹಾಲಕ್ಷ್ಮಿ ಜಾತ್ರೆಯ ಹಿನ್ನೆಲೆಯಲ್ಲೂ ಗ್ರಾಮದ ಒಳಗಲ್ಲಿಗಳ ರಸ್ತೆಗಳನ್ನು ಸಿಮೆಂಟ್ ಕಾಂಕ್ರೀಟಿನಿಂದ ನಿರ್ಮಿಸಲಾಗಿದೆ. ಉಳಿದ ಕಾಮಗಾರಿಗಳೂ ಪ್ರಗತಿಯಲ್ಲಿವೆ. ಜಾತ್ರೆಗೆ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆ ಉಂಟಾಗದಂತೆ ಸಮರ್ಪಕ ಯೋಜನೆಯೊಂದಿಗೆ ಕೆಲಸಗಳನ್ನು ಕೈಗೊಳ್ಳಲಾಗಿದೆ.
ಅರೋಹಿ ಅನಂತ ಸಾವಂತ ಅವರು ಕುಸಮಳಿ ಗ್ರಾಮದ ಸಾಮಾಜಿಕ ಕಾರ್ಯಕರ್ತರಾದ ಅನಂತ ಸಾವಂತ ಅವರ ಧರ್ಮ ಪತ್ನಿಯಾಗಿದ್ದು, ಗ್ರಾಮಾಭಿವೃದ್ಧಿಯ ಮೇಲಿನ ಅವರ ಬದ್ಧತೆ ಸ್ಪಷ್ಟವಾಗಿ ಕಾಣಿಸುತ್ತದೆ. ತಮ್ಮ ಪತಿ ಅನಂತ ಸಾವಂತ ಅವರ ಸಹಕಾರ ಮತ್ತು ಮಾರ್ಗದರ್ಶನದೊಂದಿಗೆ ಕುಸಮಳಿ ಗ್ರಾಮ ಸೇರಿದಂತೆ ಪಂಚಾಯಿತಿ ವ್ಯಾಪ್ತಿಯ ಇತರ ಗ್ರಾಮಗಳಲ್ಲೂ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಹಾಗೂ ಬಾಕಿ ಉಳಿದ ಸಮಸ್ಯೆಗಳನ್ನು ಪರಿಹರಿಸಲು ಅವರು ನಿರಂತರ ಪ್ರಯತ್ನಿಸುತ್ತಿದ್ದಾರೆ.
ಈ ಅಭಿವೃದ್ಧಿ ಕಾರ್ಯಗಳಿಂದ ಸಂತುಷ್ಟರಾದ ಗ್ರಾಮಸ್ಥರು ಅಧ್ಯಕ್ಷೆ ಆರೋಹಿ ಸಾವಂತ ಅವರನ್ನು ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.


