अखिल कर्नाटक शेतकरी संघटनेच्या वतीने मुख्यमंत्री व पालकमंत्र्यांना निवेदन.
बेळगाव ; राज्यातील ज्वलंत पाणीटंचाई, मूलभूत सुविधांची कमतरता आणि संपूर्ण उत्तर कर्नाटकच्या विकासासाठी विविध मागण्या मांडत अखिल कर्नाटक शेतकरी संघटना (नोंदणीकृत), बेंगळुरू यांच्या वतीने गुरुवारी बेळगाव येथील सुवर्णसौध येथे मुख्यमंत्री सिद्धरामय्या तसेच जिल्हा पालकमंत्री व सार्वजनिक बांधकाम मंत्री सतीश जारकीहोळी यांना निवेदन सादर करण्यात आले.
या वेळी संघटनेचे राज्य उपाध्यक्ष किशोर मिठारी यांनी शेतकऱ्यांच्या प्रमुख मागण्या मांडल्या. राज्यातील शेतकऱ्यांची संपूर्ण कर्जमाफी, ऊसाला प्रतिटन 4500 रुपये, ज्वारीला प्रतिक्विंटल 2500 रुपये दर देण्यात यावा. शेतकऱ्यांच्या कृषी पंपसंचांसाठी लागू करण्यात आलेला नवीन वीज कायदा रद्द करून जुनी पद्धत लागू करावी, अशी मागणी करण्यात आली.
खानापूर तालुक्यातील शेतकऱ्यांसाठी मलप्रभा नदीवर बंधारा उभारून उचल सिंचन योजना राबवावी, तसेच शाश्वत पिण्याच्या पाण्याची योजना मंजूर करावी, अशी मागणी करण्यात आली. शेतमालाला स्थिर व हमीभाव द्यावा, अशीही मागणी यावेळी करण्यात आली.
कक्केरी गावासाठी शासकीय हायस्कूल, शासकीय महाविद्यालय, शासकीय रुग्णालयाचे उन्नतीकरण करून 50 खाटांचे रुग्णालय उभारावे. कक्केरी–धारवाड दरम्यान बस सेवा सुरू करावी, शेतकऱ्यांच्या पंपसंचांना दिवसा 10 तास तीन फेज वीजपुरवठा करावा. खानापूर तालुक्यातील सुमारे 850 किलोमीटर रस्त्यांची दुरवस्था असून, त्यांचे नूतनीकरण व डांबरीकरण तातडीने हाती घ्यावे, अशी मागणी करण्यात आली.
ही सर्व मागणी मागील अनेक वर्षांपासून प्रलंबित असून, वारंवार निवेदन देऊनही संबंधित अधिकारी व लोकप्रतिनिधींनी दखल घेतलेली नाही. त्यामुळे अधिवेशनादरम्यान यावर चर्चा करून ठोस निर्णय घ्यावा, अन्यथा बेळगाव प्रादेशिक आयुक्त कार्यालयासमोर अहोरात्र धरणे व सत्याग्रह करण्यात येईल, असा इशाराही यावेळी देण्यात आला.
या प्रसंगी लिंगनमठ ग्रामपंचायत अध्यक्ष काशिम हट्टीहोळी, पांडुरंग मिटगार, रमेश वीरापूर, बिष्टप्पा सुंबळी, दत्ता बिडकर, सेबॅस्टियन सोज, यल्लप्पा चन्नापूर, शिवाजी अंबडगट्टी, गोपाळ अगसिमणी, विपुलकुमार मिठारी, यशिका मिठारी, नारायण पाटील, राजू वीरापूर, किरण अंग्रोळी, राजू रपाटी, पास्कल सोज, अँथॉन सोज यांच्यासह इतर पदाधिकारी व कार्यकर्ते उपस्थित होते.
ಅಖಿಲ ಕರ್ನಾಟಕ ರೈತ ಸಂಘದ ಪರವಾಗಿ ಮುಖ್ಯಮಂತ್ರಿಗಳಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.
ಬೆಳಗಾವಿ ; ರಾಜ್ಯದ ಜಲಂತ ಸಮಸ್ಯೆಗಳು ಹಾಗೂ ಮೂಲಭೂತ ಸೌಕರ್ಯಗಳಿಗೆ ಹಾಗೂ ಸಂಪೂರ್ಣ ಉತ್ತರ ಕರ್ನಾಟಕ ಅಭಿವೃದ್ಧಿಗೋಸ್ಕರ, ರೈತರ ಸಾಲ ಸಂಪೂರ್ಣ ಮನ್ನಾ ಮಾಡುವುದು, ಪ್ರತಿ ಟನ್ ಕಬ್ಬಿಗೆ 4500 ರೂ, ಮೆಕ್ಕೆ ಜೋಳ ಕ್ವಿಂಟಲ 2500ರೂ, ರಾಜ್ಯದ ರೈತರ ಕೃಷಿ ಪಂಪ ಸೇಟಗಳಿಗೆ ಸರ್ಕಾರ ನೂತನ ವಿದ್ಯುತ್ ಕಾಯ್ದೆ ಜಾರಿಗೆ ತಂದಿದ್ದನ್ನು ಕೈಬಿಟ್ಟು ಹಳೆ ಕಾಯ್ದೆಯ ಪದ್ಧತಿಯನ್ನು ಜಾರಿಗೆ ತರುವುದು,ಖಾನಾಪುರ ತಾಲೂಕಿನ ರೈತರಿಗೆ ಮಲಪ್ರಭಾ ನದಿಗೆ ಆಣೆಕಟ್ಟು ನಿರ್ಮಾಣ ಮಾಡಿ ಏತ ನೀರಾವರಿ ಕಾಲುವೆ ಮೂಲಕ ರೈತರ ಭೂಮಿಗಳಿಗೆ ನೀರಾವರಿ, ಶಾಶ್ವತ ಕುಡಿಯುವ ನೀರಿನ ಯೋಜನೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿ . ಅಖಿಲ ಕರ್ನಾಟಕ ರೈತ ಸಂಘ ರಿ ಬೆಂಗಳೂರು ರಾಜ್ಯದ ಉಪಾಧ್ಯಕ್ಷರು ಕಿಶೋರ ಮಿಠಾರಿ ಹಾಗೂ ರೈತ ಸಂಘದ ಕಾರ್ಯಕರ್ತರು, ಮುಖಂಡರು . ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ರವರಿಗೆ ಗುರುವಾರದಂದು ಸುವರ್ಣಸೌಧ ಬೆಳಗಾವಿಯಲ್ಲಿ ಮನವಿ ಪತ್ರ ಸಲ್ಲಿಸಿದರು.
ರೈತರ ಬೆಳೆದ ಬೆಳೆಗಳಿಗೆ ಸ್ಥಿರವಾದ ಬೆಂಬಲ ಬೆಲೆ ನೀಡಬೇಕು, ಕಕ್ಕೇರಿ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳಾದ , ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಕಾಲೇಜ್, ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆ ಹಾಗೂ 50 ಹಾಸಿಗೆ ಆಸ್ಪತ್ರೆ ನಿರ್ಮಾಣ, ವಿದ್ಯಾರ್ಥಿಗಳಿಗೆ, ಗ್ರಾಮಸ್ಥರಿಗೆ, ಪುಣ್ಯ ಕ್ಷೇತ್ರಕ್ಕೆ ಬರುವ ಭಕ್ತರಿಗೆ,ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕಕ್ಕೇರಿಯಿಂದ- ಧಾರವಾಡಕ್ಕೆ ಹೋಗಲು ಬಸ್ಸಿನ ವ್ಯವಸ್ಥೆ ಕಲ್ಪಿಸಿ, ರೈತರ ಪಂಪ್ ಸೆಟ್ ಗಳಿಗೆ ಹಗಲು ಹೊತ್ತು 10 ಗಂಟೆ ಥ್ರೀ ಫೇಸ್ ವಿದ್ಯುತ್ ಪೂರೈಸುವುದು, ಖಾನಾಪುರ ತಾಲೂಕಿನ ಸಂಪೂರ್ಣ 850 ಕಿಲೋಮೀಟರ್ ರಸ್ತೆ ಹದಗೆಟ್ಟಿದ್ದು ನವೀಕರಣ ಹಾಗೂ ಡಾಂಬರೀಕರಣ ಕಾಮಗಾರಿ ಕೈಗೊಳ್ಳಬೇಕು, ಎಲ್ಲ ಬೇಡಿಕೆಗಳು ಸುಮಾರು ವರ್ಷದಿಂದ ಹಾಗೆಯೇ ಉಳಿದುಕೊಂಡಿದ್ದು. ಹಲವಾರು ಬಾರಿ ಮನವಿ ಕೊಟ್ಟರು ಇದುವರೆಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು, ಸ್ಪಂದಿಸಿಲ್ಲ. ಅಧಿವೇಶನದ ವೇಳೆ ಚರ್ಚಿಸಿ ತೀರ್ಮಾನ ಕೈಗೊಂಡು ರೈತರ ಬೇಡಿಕೆಗಳು ಈಡೇರಿಸಬೇಕು. ರಾಜ್ಯದ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಒಂದು ವೇಳೆ ಸ್ಪಂದಿಸುದಿದ್ದಲ್ಲಿ. ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಯ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಲಿಂಗನಮಠ ಗ್ರಾಪಂ ಅಧ್ಯಕ್ಷ ಕಾಶೀಮ ಹಟ್ಟಿಹೋಳಿ, ಪಾಂಡು ರಂಗ ಮಿಟಗಾರ,
ರಮೇಶ ವಿರಾಪುರ, ಬಿಷ್ಟಪ್ಪ ಸುಂಬಳಿ, ದತ್ತಾ ಬಿಡಕರ, ಸೇಬಸ್ಥಿನ್ ಸೋಜ, ಯಲ್ಲಪ್ಪ ಚನ್ನಾಪುರ, ಶಿವಾಜಿ ಅಂಬಡಗಟ್ಟಿ, ಗೋಪಾಲ ಅಗಸಿಮನಿ, ವಿಪುಲ್ ಕುಮಾರ ಮಿಠಾರಿ, ಯಶಿಕಾ ಮಿಠಾರಿ, ನಾರಾಯಣ ಪಾಟೀಲ, ರಾಜು ವೀರಾಪುರ, ಕಿರಣ ಅಂಗ್ರೋಳಿ, ರಾಜು ರಪಾಟಿ, ಪಾಸ್ಕಲ್ ಸೋಜ, ಅಂತೋನ್ ಸೋಜ, ಹಾಗೂ ಇತರೆ ಸಂಘಟನೆಯ ಕಾರ್ಯಕರ್ತರು ಈ ವೇಳೆ ಹಾಜರಿದ್ದರು.

