सर्पदंशाने हत्तरवाड (ता. खानापूर) येथील शेतकऱ्याचा मृत्यू.
खानापूर : हत्तरवाड (तालुका खानापूर) येथील शेतकरी गणपती नारायण हलसकर (वय 52) यांचा सर्पदंशामुळे उपचारादरम्यान मृत्यू झाल्याची दुर्दैवी घटना घडली आहे.
मिळालेल्या माहितीनुसार, गणपती हलसकर हे सोमवार दिनांक 13 ऑक्टोबर रोजी, आपल्या शेतामध्ये भात बांधणीचे काम करत असताना विषारी सर्पाने दंश केला. त्यानंतर त्या ठिकाणी उपस्थित असलेल्या इतर शेतकऱ्यांनी तात्काळ ॲम्बुलन्स बोलावून त्यांना नंदगड येथील प्राथमिक आरोग्य केंद्रात दाखल केले. मात्र, तेथील डॉक्टरांनी तपासणी केल्यानंतर त्यांना मृत घोषित केले. यानंतर मृतदेह खानापूर येथील प्राथमिक आरोग्य केंद्रात उत्तरीय तपासणीसाठी नेण्यात आला. तपासणीनंतर मृतदेह नातेवाईकांच्या ताब्यात देण्यात आला आहे.
गणपती हलसकर यांच्या पश्चात पत्नी, अविवाहित मुलगा, विवाहित मुलगी व वयस्कर वडील असा परिवार आहे.
त्यांचा अंत्यसंस्कार आज मंगळवार, दिनांक 14 ऑक्टोबर रोजी हत्तरवाड येथे पार पडणार आहेत.
स्थानिक शेतकरी व ग्रामस्थांनी या घटनेबद्दल हळहळ व्यक्त केली असून, प्रशासनाकडून मदतीची अपेक्षा व्यक्त करण्यात आली आहे.
ಹತ್ತರವಾಡ (ತಾ.ಖಾನಾಪುರ ) ಗ್ರಾಮದಲ್ಲಿ ಸರ್ಪ ಕಡಿತದಿಂದ ರೈತನ ಸಾವು.
ಖಾನಾಪುರ : ಖಾನಾಪುರ ತಾಲ್ಲೂಕಿನ ಹತ್ತರವಾಡ ಗ್ರಾಮದ ರೈತ ಗಣಪತಿ ನರಾಯಣ ಹಲಸಕರ (ವಯಸ್ಸು 52) ಅವರು ಸರ್ಪ ಕಡಿತದಿಂದ ಚಿಕಿತ್ಸೆ ವೇಳೆ ಸಾವನ್ನಪ್ಪಿದ ದುರ್ಘಟನೆಯ ಸಂಭವಿಸಿದೆ.
ಮಾಹಿತಿಯ ಪ್ರಕಾರ, ಗಣಪತಿ ಹಲಸಕರ ಅವರು ಅಕ್ಟೋಬರ್ 13, ಸೋಮವಾರದಂದು ತಮ್ಮ ಹೊಲದಲ್ಲಿ ಭತ್ತ ಕಟಾವಿನ ಕೆಲಸ ಮಾಡುತ್ತಿದ್ದಾಗ ವಿಷಕಾರಿ ಹಾವು ಕಚ್ಚಿದೆ. ಈ ವೇಳೆ ಅಲ್ಲಿ ಇದ್ದ ಇತರ ರೈತರು ತಕ್ಷಣ ಆಂಬ್ಯುಲೆನ್ಸ್ ಕರೆಸಿ ಅವರನ್ನು ನಂದಗಡದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದರೆ ಅಲ್ಲಿ ವೈದ್ಯರು ಪರೀಕ್ಷಿಸಿದ ನಂತರ ಅವರನ್ನು ಮೃತಪಟ್ಟಿದ್ದಾರೆಂದು ಘೋಷಿಸಿದರು.
ನಂತರ ಮೃತದೇಹವನ್ನು ಖಾನಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪೋಸ್ಟ್ಮಾರ್ಟಂಗೆ ಕಳುಹಿಸಲಾಯಿತು. ಪರಿಶೀಲನೆ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.
ಗಣಪತಿ ಹಲಸಕರ ಅವರು ಪತ್ನಿ, ಅವಿವಾಹಿತ ಮಗ, ವಿವಾಹಿತ ಮಗಳು ಮತ್ತು ವಯೋವೃದ್ಧ ತಂದೆಯನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಇಂದು, ಅಕ್ಟೋಬರ್ 14 ಮಂಗಳವಾರ ಹತ್ತರವಾಡದಲ್ಲಿ ನಡೆಯಲಿದೆ. ಸ್ಥಳೀಯ ರೈತರು ಮತ್ತು ಗ್ರಾಮಸ್ಥರು ಈ ದುರ್ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಸರ್ಕಾರದಿಂದ ನೆರವಿನ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

