
माणसाच्या चेहऱ्यावरील हास्य आणि उत्साह हे त्याच्या आरोग्याचे रहस्य आहे ; गणपती नाईक.
खानापूर ; श्री क्षेत्र धर्मस्थळ ग्रामीण विकास प्रकल्पातर्फे खानापूर तालुक्यातील पारिषवाड गावातील उच्च प्राथमिक शाळेत पर्यावरण माहिती कार्यक्रमाचे आयोजन करण्यात आले होते. या कार्यक्रमाचे उद्घाटन तालुका नियोजन अधिकारी गणपती नाईक यांनी रोप लावून आणि दीपप्रज्वलन करून केले.

कार्यक्रमाच्या अनुषंगाने बोलताना मंजुनाथ धर्मस्थळाचे योजना अधिकारी गणपती नाईक म्हणाले, माणसाच्या चेहऱ्यावरील हास्य आणि उत्साह हे त्याच्या आरोग्याचे रहस्य आहे आणि आपल्या सभोवतालचे वातावरण स्वच्छ ठेवण्यासोबतच, गुरूंजनांचा व मोठ्यांचा आदर केला पाहिजे आणि चांगले आचरण जोपासले पाहिजे. ते म्हणाले की, प्रत्येक मुलाने आपला वाढदिवस साजरा करताना दरवर्षी एक झाड लावण्याची सवय लावली पाहिजे. ते म्हणाले की, वाढत्या रोपाप्रमाणे मुलांनी वाईट सवयींपासून दूर राहिले पाहिजे आणि वाईट सवयी असलेल्यांशी मैत्री करू नये. ते म्हणाले की आपण आपली घरे, आपली शहरे आणि आपल्या शाळा स्वच्छ ठेवल्या पाहिजेत. गावच्या भल्यासाठी तलावांची स्वच्छता, व्यावसायिक शिक्षण घेणाऱ्या हुशार विद्यार्थ्यांसाठी सुग्ननिधी शिष्यवृत्ती, गरजूंसाठी आणि मंदिरांच्या रक्षणकर्त्यांना मदत, अशा समाजाला मदत करण्यासाठी राबविल्या जाणाऱ्या कार्यक्रमांचीही त्यांनी यावेळी माहिती दिली.
कार्यक्रमाच्या अध्यक्षस्थानी शाळेचे मुख्याध्यापक बसवराज हिरेमठ होते, तर कार्यक्रमाला गौरीश बडिगेर एसडीएमसी सदस्य, नेत्रावती वाली युनियनचे पदाधिकारी, गीता वाली एसडीएमसी सदस्या, शिक्षक अश्विनी कल्लूर, वीणा शानभाग, पुट्टाक्का अक्केनवर, सिंगम्मा कोरीमठ, मंजुळे, सुपर किंगडम, मंजुळकर पर्यवेक्षक प्रकाश, आणि सेवा प्रतिनिधी सुजाता कडेमनी व आदिजन उपस्थित होते.
ಒಬ್ಬ ವ್ಯಕ್ತಿಯ ಮುಖದಲ್ಲಿನ ನಗು ಮತ್ತು ಉತ್ಸಾಹವೇ ಅವನ ಆರೋಗ್ಯದ ರಹಸ್ಯ ; ಗಣಪತಿ ನಾಯಕ್.
ಖಾನಾಪುರ ತಾಲೂಕಿನ ಪಾರಿಶ್ವಾಡ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆದ ಪರಿಸರ ಮಾಹಿತಿ ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ಗಣಪತಿ ನಾಯ್ಕ್ ಗಿಡನಾಟಿ ಮಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು,
ಈ ಸಂದರ್ಭದಲ್ಲಿ ಮಾತನಾಡಿದ ಮಂಜುನಾಥ ಧರ್ಮಸ್ಥಳದ ಯೋಜನಾ ಅಧಿಕಾರಿ ಗಣಪತಿ ನಾಯಕ್, ಮನುಷ್ಯನ ಮುಖದ ಮೇಲಿನ ನಗು ಮತ್ತು ಉತ್ಸಾಹ ಆತನ ಅರೋಗ್ಯ ಮೂಲ ಗುಟ್ಟು, ಹಾಗೂ ನಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳುವುದರೊಂದಿಗೆ ಗುರು ಹಿರಿಯರನ್ನು ಗೌರವಿಸಬೇಕು ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು, ಪ್ರತೀ ಮಕ್ಕಳು ಪ್ರತೀ ವರ್ಷ ಹುಟ್ಟಿದ ಹಬ್ಬ ಆಚರಣೆ ಮಾಡುವಾಗ ಒಂದೊಂದು ಗಿಡ ನಾಟಿಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳು ದುಶ್ಚಟಗಳಿಂದ ದುರಭ್ಯಾಸಗಳಿಂದ ದೂರವಿರಬೇಕು ಹಾಗೂ ದುಶ್ಚಟ ಹೊಂದಿರುವವರ ಗೆಳೆತನ ಮಾಡದಂತೆ ತಿಳಿಸಿದರು, ನಮ್ಮ ಮನೆ, ನಮ್ಮಊರು, ನಮ್ಮಶಾಲೆ ಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ತಿಳಿಸಿದರು. ಮತ್ತು ಗ್ರಾಮದ ಒಳಿತಿಗಾಗಿ ಕೆರೆ ಹುಳೆತ್ತುವುದು, ಪ್ರತಿಭಾವಂತ ವೃತ್ತಿಪರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯವೇತನ, ನಿರ್ಗತಿಕರಿಗೆ ಮಾಶಾಶನ, ದೇವಾಲಯಗಳ ಜೆರ್ಣೋದ್ದಾರಕ್ಕೆ ಸಹಾಯಧನ ಮುಂತಾದ ಸಮಾಜಕ್ಕೆ ಸಹಾಯವಾಗುವ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಧ್ಯಾಪಕರಾದ ಬಸವರಾಜ್ ಹಿರೇಮಠ್ ವಹಿಸಿದ್ದರು, ಹಾಗೂ ಈ ಕಾರ್ಯಕ್ರಮದಲ್ಲಿ ಗೌರೀಶ್ ಬಡಿಗೇರ್ sdmc ಸದಸ್ಯರು, ನೇತ್ರಾವತಿ ವಾಲಿ ಒಕ್ಕೂಟದ ಪದಾಧಿಕಾರಿಗಳು, ಗೀತಾ ವಾಲಿ sdmc ಸದಸ್ಯರು, ಶಿಕ್ಷಕರಾದ ಅಶ್ವಿನಿ ಕಲ್ಲೂರ್, ವೀಣಾ ಶಾನಭಾಗ್, ಪುಟ್ಟಕ್ಕ ಅಕ್ಕೆನ್ನವರ, ಸಿಂಗಮ್ಮ ಕೊರಿಮಠ್, ಮಂಜುಳಾ ಬಾಳೆಕಾಯಿ, ಮೇಲ್ವಿಚಾರಕಾರದ ಯದುನಂದ ಎಲ್ , ಕೃಷಿ ಮೇಲ್ವಿಚಾರಕರಾದ ಪ್ರಕಾಶ್, ಸೇವಾಪ್ರತಿನಿಧಿ ಸುಜಾತ ಕಡೆಮನಿ ಹಾಜರಿದ್ದರು.
