कलबुर्गी–बेळगाव हवाई मार्गावरील प्रशिक्षण विमानाची विजयापुरात आपत्कालीन क्रॅश लँडिंग; दोन वैमानिक जखमी, जीवितहानी टळली.
विजयापुरा : कलबुर्गीहून बेळगावकडे उड्डाण करत असलेल्या रेड बर्ड एव्हिएशनच्या प्रशिक्षण विमानाने विजयापुरा जिल्ह्यातील बाबळेश्वर तालुक्यातील मंगळूरू गावाजवळील शेतजमिनीत आपत्कालीन लँडिंग केले.
या विमानात कॅप्टन कुणाल मल्होत्रा आणि प्रशिक्षणार्थी वैमानिक गौतम शंकर प्रवास करत होते. लँडिंगदरम्यान विमानाचे नुकसान झाले असून दोन्ही वैमानिकांना दुखापत झाली आहे. दोघांनाही तातडीने जवळील रुग्णालयात दाखल करण्यात आले असून त्यांची प्रकृती सध्या स्थिर व धोक्याबाहेर आहे.
प्राथमिक माहितीनुसार इंधन टंचाईमुळे (फ्युएल शॉर्टेज) विमानाला आपत्कालीन लँडिंग करावे लागल्याची शक्यता व्यक्त करण्यात येत आहे, मात्र याबाबत अधिकृत पुष्टी झालेली नाही.
घटनेची माहिती मिळताच बाबळेश्वर पोलीस घटनास्थळी दाखल झाले असून अपघाताचे नेमके कारण शोधण्यासाठी तपास सुरू करण्यात आला आहे. नागरी विमान वाहतूक विभागाकडूनही या प्रकरणाची चौकशी होणार आहे.
ಕಲಬುರ್ಗಿ–ಬೆಳಗಾವಿ ಹವಾಯಿ ಮಾರ್ಗದಲ್ಲಿದ್ದ ತರಬೇತಿ ವಿಮಾನ ವಿಜಯಪುರದಲ್ಲಿ ತುರ್ತು ಕ್ರ್ಯಾಶ್ ಲ್ಯಾಂಡಿಂಗ್; ಇಬ್ಬರು ಪೈಲಟ್ಗಳಿಗೆ ಗಾಯ, ಜೀವಹಾನಿ ತಪ್ಪಿತು
ವಿಜಯಪುರ : ಕಲಬುರ್ಗಿಯಿಂದ ಬೆಳಗಾವಿಗೆ ಹಾರುತ್ತಿದ್ದ ರೆಡ್ ಬರ್ಡ್ ಏವಿಯೇಷನ್ ಸಂಸ್ಥೆಯ ತರಬೇತಿ ವಿಮಾನವು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಮಂಗಳೂರು ಗ್ರಾಮ ಸಮೀಪದ ಕೃಷಿ ಭೂಮಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ.
ಈ ವಿಮಾನದಲ್ಲಿ ಕ್ಯಾಪ್ಟನ್ ಕುನಾಲ್ ಮಲ್ಹೋತ್ರಾ ಮತ್ತು ತರಬೇತಿ ಪೈಲಟ್ ಗೌತಮ್ ಶಂಕರ್ ಪ್ರಯಾಣಿಸುತ್ತಿದ್ದರು. ಲ್ಯಾಂಡಿಂಗ್ ಸಮಯದಲ್ಲಿ ವಿಮಾನಕ್ಕೆ ಹಾನಿಯಾಗಿದ್ದು, ಇಬ್ಬರು ಪೈಲಟ್ಗಳಿಗೆ ಗಾಯಗಳಾಗಿವೆ.
ಇಬ್ಬರನ್ನೂ ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದ್ದು ಅಪಾಯದಿಂದ ಹೊರಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಇಂಧನ ಕೊರತೆಯ (ಫ್ಯುಯೆಲ್ ಶಾರ್ಟೇಜ್) ಕಾರಣದಿಂದ ವಿಮಾನಕ್ಕೆ ತುರ್ತು ಲ್ಯಾಂಡಿಂಗ್ ಮಾಡಬೇಕಾಯಿತು ಎಂಬ ಶಂಕೆ ವ್ಯಕ್ತವಾಗಿದ್ದು, ಇದಕ್ಕೆ ಇನ್ನೂ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಬಬಲೇಶ್ವರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ. ನಾಗರಿಕ ವಿಮಾನಯಾನ ಇಲಾಖೆ ಕೂಡ ಈ ಪ್ರಕರಣದ ಕುರಿತು ತನಿಖೆ ನಡೆಸಲಿದೆ ಎಂದು ತಿಳಿದುಬಂದಿದೆ.



