खानापूर : नागुर्डा, मोदेकोप, काटगाळी, गणेबैल परिसरात गविरेडा व कळपाचा संचार; ग्रामस्थ व ऊस तोडप्यांमध्ये भीतीचे वातावरण.
खानापूर तालुक्यातील नागुर्डा, मोदेकोप, काटगाळी, गणेबैल या परिसरात गविरेडा व त्याच्या कळपाचा मुक्त संचार सुरू असून त्यामुळे ग्रामस्थांमध्ये तसेच ऊस तोडप्यांमध्ये भीतीचे वातावरण निर्माण झाले आहे. गविरेडा व कळपाने भात व ऊस पिके तुडवून मोठ्या प्रमाणावर नुकसान करण्याचे प्रकार सातत्याने सुरू असल्याने शेतकरी चिंतेत आहेत.
नागुर्डा भागात सध्या एक गविरेडा विशेष चर्चेत असून तो रात्री तसेच दिवसा निर्भयपणे परिसरात फिरत आहे. त्याला कोणतीही भीती उरलेली नसल्याने तो शेतात जाणे, ऊसामध्ये बसणे, कुठेही थांबणे असे प्रकार करत असल्याचे दिसून येत आहे. यामुळे साखर कारखान्यांकडून पाठवण्यात आलेल्या ऊस तोडप्यांनाही ऊस तोडण्यास भीती वाटत आहे.
दरम्यान, हा गविरेडा चालताना तोल जाऊन झाडाला आदळणे, चालता-चालता पडणे असे प्रकार करत असल्याचे काही नागरिकांच्या निदर्शनास आले असून, त्यामुळे तो आजारी असावा किंवा त्याला आंधळेपणा आलेला असावा, असा संशय व्यक्त केला जात आहे.
यापूर्वी जळगे येथे वन विभागाच्या अधिकाऱ्यांनी हत्तीला बेशुद्ध करून पकडून शिमोगा येथील जंगलात सोडले होते. त्याच धर्तीवर सदर गविरेडा व त्याच्या कळपाला बेशुद्ध करून पकडून एखाद्या घनदाट अरण्यात सोडण्याची मोहीम राबवावी, अशी मागणी नागरिक व ग्रामस्थांकडून होत आहे.
यासाठी वन खात्याने तसेच खानापूर तालुक्याचे आमदार विठ्ठल हलगेकर यांनी तातडीने लक्ष देऊन प्रयत्न करावेत, अन्यथा शेतकऱ्यांच्या हातातोंडाशी आलेल्या पिकांचे मोठे नुकसान होण्याची शक्यता व्यक्त केली जात आहे.
ಖಾನಾಪುರ : ನಾಗುರ್ಡಾ, ಮೋದೆಕೋಪ್ಪ, ಕಾಟಗಾಳಿ, ಗಣೇಬೈಲ್ ಈ ಊರಿನ ಸುತ್ತ ಮುತ್ತ ಭಾಗದಲ್ಲಿ ಕಾಡೆಮ್ಮೆಯ (ಗವಿರೇಡಾ) ಹಿಂಡಿನ ಸಂಚಾರ; ಗ್ರಾಮಸ್ಥರು ಮತ್ತು ಕಬ್ಬು ಕಟಾವು ಕಾರ್ಮಿಕರಲ್ಲಿ ಭಯದ ವಾತಾವರಣ.
ಖಾನಾಪುರ ತಾಲ್ಲೂಕಿನ ನಾಗುರ್ಡಾ, ಮೋದೆಕೋಪ್ಪ, ಕಾಟಗಾಳಿ, ಗಣೇಬೈಲ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡೆಮ್ಮೆಯ (ಗವಿರೇಡಾ) ಹಿಂಡು ಮುಕ್ತವಾಗಿ ಸಂಚರಿಸುತ್ತಿರುವುದರಿಂದ ಗ್ರಾಮಸ್ಥರು ಹಾಗೂ ಕಬ್ಬು ಕಟಾವು ಕಾರ್ಮಿಕರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಕಾಡೆಮ್ಮೆಯ ಹಾಗೂ ಅದರ ಹಿಂಡು ಭತ್ತ ಮತ್ತು ಕಬ್ಬಿನ ಬೆಳೆಗಳನ್ನು ತುಳಿದು ಭಾರಿ ಪ್ರಮಾಣದ ಹಾನಿ ಉಂಟುಮಾಡುತ್ತಿರುವ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು, ಇದರಿಂದ ರೈತರು ತೀವ್ರ ಆತಂಕದಲ್ಲಿದ್ದಾರೆ.
ನಾಗುರ್ಡಾ ಭಾಗದಲ್ಲಿ ಪ್ರಸ್ತುತ ಒಂದು ಕಾಡೆಮ್ಮೆ ವಿಶೇಷವಾಗಿ ಚರ್ಚೆಯ ವಿಷಯವಾಗಿದ್ದು, ಅದು ರಾತ್ರಿ ಹಾಗೂ ಹಗಲು ಯಾವುದೇ ಭಯವಿಲ್ಲದೆ ಪ್ರದೇಶದಲ್ಲಿ ಸಂಚರಿಸುತ್ತಿದೆ. ಈ ಕಾಡೆಮ್ಮೆ ಯಾವುದೇ ಆತಂಕವಿಲ್ಲದಂತಾಗಿ ಹೊಲಗಳಿಗೆ ಪ್ರವೇಶಿಸುವುದು, ಕಬ್ಬಿನೊಳಗೆ ಕುಳಿತುಕೊಳ್ಳುವುದು, ಎಲ್ಲೆಂದರಲ್ಲಿ ನಿಂತುಕೊಳ್ಳುವುದು ಮುಂತಾದ ವರ್ತನೆಗಳನ್ನು ಮಾಡುತ್ತಿರುವುದು ಕಂಡುಬರುತ್ತಿದೆ. ಇದರ ಪರಿಣಾಮವಾಗಿ ಸಕ್ಕರೆ ಕಾರ್ಖಾನೆಗಳಿಂದ ಕಳುಹಿಸಲಾದ ಕಬ್ಬು ಕಟಾವು ಕಾರ್ಮಿಕರು ಕೂಡ ಕಬ್ಬು ಕಟಾವು ಮಾಡಲು ಭಯಪಡುವ ಪರಿಸ್ಥಿತಿ ಎದುರಾಗಿದೆ.
ಇದಲ್ಲದೆ, ಈ ಕಾಡೆಮ್ಮೆ ನಡೆಯುವಾಗ ತೂಕ ತಪ್ಪಿ ಮರಗಳಿಗೆ ಢಿಕ್ಕಿ ಹೊಡೆಯುವುದು, ನಡೆಯುತ್ತಲೇ ಬಿಳ್ಳುವುದು ಮುಂತಾದ ಘಟನೆಗಳು ಕೆಲ ನಾಗರಿಕರ ಗಮನಕ್ಕೆ ಬಂದಿದ್ದು, ಇದರಿಂದಾಗಿ ಅದು ಅಸ್ವಸ್ಥವಾಗಿರಬಹುದೇ ಅಥವಾ ದೃಷ್ಟಿದೋಷ (ಅಂಧತ್ವ) ಉಂಟಾಗಿರಬಹುದೇ ಎಂಬ ಅನುಮಾನಗಳು ವ್ಯಕ್ತವಾಗಿವೆ.
ಈ ಹಿಂದೆ ಜಳಗೆ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಆನೆಯನ್ನು ಪ್ರಜ್ಞೆ ತಪ್ಪಿಸಿ ಹಿಡಿದು ಶಿಮೋಗಾ ಜಿಲ್ಲೆಯ ಕಾಡಿನಲ್ಲಿ ಬಿಡುವ ಕಾರ್ಯಾಚರಣೆ ನಡೆಸಿದ್ದರು. ಅದೇ ರೀತಿಯಲ್ಲಿ ಈ ಕಾಡೆಮ್ಮೆಯನು ಹಾಗೂ ಅದರ ಹಿಂಡನ್ನು ಮಯಗೊಳಿಸಿ ಹಿಡಿದು ಯಾವುದಾದರೂ ಘನ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವ ಕಾರ್ಯಾಚರಣೆ ಕೈಗೊಳ್ಳಬೇಕು, ಎಂಬ ಬೇಡಿಕೆ ಗ್ರಾಮಸ್ಥರು ಹಾಗೂ ನಾಗರಿಕರಿಂದ ಕೇಳಿಬರುತ್ತಿದೆ.
ಈ ಸಂಬಂಧ ಅರಣ್ಯ ಇಲಾಖೆ ಹಾಗೂ ಖಾನಾಪುರ ತಾಲ್ಲೂಕಿನ ಶಾಸಕರಾದ ವಿಠ್ಠಲ ಹಲಗೇಕರ್ ಅವರು ತಕ್ಷಣ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ರೈತರ ಕೈಗೆ ಬಂದಿರುವ ಬೆಳೆಗಳಿಗೆ ಭಾರಿ ನಷ್ಟ ಸಂಭವಿಸುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.



