नेरसा ग्रामपंचायतीतील अधिकाऱ्यांच्या मनमानीचा बळी दुर्गम गवाळी गाव; पाण्यासाठी वृद्ध महिलांची अर्धा किलोमीटर पायपीट.
खानापूर : भीमगड अभयारण्याच्या दुर्गम पट्ट्यातील गवाळी गावात सध्या तीव्र पाणीटंचाई निर्माण झाली असून यासाठी ग्रामपंचायत नेरसा येथील पीडीओ व अधिकारी वर्गाची ढिलाई कारणीभूत ठरत असल्याचा आरोप नागरिकांकडून करण्यात येत आहे. गावात पाणीपुरवठा करणाऱ्या वॉटरमॅनचा सुमारे पाच महिन्यांपासूनचा मानधन (पगार) थकवण्यात आल्याने त्यानेही “माझा पगार मिळाल्याशिवाय पाणी सोडणार नाही” असा निर्धार व्यक्त केला आहे.

अधिकाऱ्यांकडून वेळेवर मानधन न मिळाल्याने त्रस्त झालेल्या वॉटरमॅनने कामबंद आंदोलन केल्याचा फटका थेट गावकऱ्यांना बसला आहे. गावातील बहुतेक युवक रोजगारानिमित्त गोवा व महाराष्ट्रात स्थलांतरित झाल्याने गावात सध्या वृद्ध नागरिक व महिला राहतात. त्यामुळे पाण्यासाठी 500 मीटर अंतरावरून पायपीट करून पाणी आणण्याची वेळ त्यांच्या वर आली आहे.
गावात सातवीपर्यंत शाळा असून लहान मुलांन सुद्धा मोठा त्रास होत आहे. नुकत्याच झालेल्या ग्रामसभेत वॉटरमॅनसह नागरिकांनी हा प्रश्न मांडला असता पीडीओ व अधिकारी वर्गाने त्याला उलट धमकावल्याचा आरोप करण्यात आला आहे. हा विषय ग्रामपंचायतीतच घ्यावा, ग्रामसभेत नको, अशी अट अधिकाऱ्यांनी घातल्याने परिस्थिती अधिक गंभीर बनली आहे.
या सर्व घटनांमुळे ग्रामस्थांमध्ये तीव्र नाराजी निर्माण झाली असून जिल्हाधिकारी मोहम्मद रोशन व जिल्हा पंचायतीचे मुख्य कार्यकारी अधिकारी राहुल शिंदे यांनी तातडीने हस्तक्षेप करून वॉटरमॅनच्या मानधनाचा प्रश्न सोडवावा, अशी मागणी नागरिकांकडून होत आहे.
गावातील वृद्ध महिलांना पाण्यासाठी जीवघेणी मेहनत करावी लागत असून, निव्वळ अधिकाऱ्यांच्या निष्काळजीपणामुळे संपूर्ण गाव त्रस्त झाल्याची प्रतिक्रिया नागरिकांकडून व्यक्त होत आहे.
ನೇರಸಾ ಗ್ರಾಮಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಗವಾಳಿ ಗ್ರಾಮದ ಜನರು ಬಲಿ; ನೀರಿಗಾಗಿ ವೃದ್ಧ ಮಹಿಳೆಯರ ಅರ್ಧ ಕಿಲೋಮೀಟರ್ ಕಾಲ್ನಡಿಗೆ.
ಖಾನಾಪುರ : ಭೀಮಗಢ ಅಭಯಾರಣ್ಯದ ಗಣ ಅರಣ್ಯ ಪ್ರದೇಶದಲ್ಲಿರುವ ಗವಾಳಿ ಗ್ರಾಮದಲ್ಲಿ ಗಂಭೀರ ನೀರಿನ ಸಮಸ್ಯೆ ಉಂಟಾಗಿದೆ. ಈ ಪರಿಸ್ಥಿತಿಗೆ ನೇರಸಾ ಗ್ರಾಮಪಂಚಾಯತ ಪಿಡಿಒ ಹಾಗೂ ಕೆಲವು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮಕ್ಕೆ ನೀರು ಸರಬರಾಜು ಮಾಡುವ ವಾಟರ್ಮನ್ಗೆ ಸುಮಾರು ಐದು ತಿಂಗಳುಗಳಿಂದ ಮಾಸಿಕ ಭತ್ಯೆ ಗೌರವಧನ ನೀಡಲಾಗಿಲ್ಲ ಎಂದು ತಿಳಿದುಬಂದಿದೆ. ವೇತನ ಸಿಗದ ಕಾರಣ ಆತ “ತನ್ನ ಗೌರವಧನ ಸಿಕ್ಕರೆ ಮಾತ್ರ ನೀರು ಬಿಡುತ್ತೇನೆ” ಎಂದು ಕೆಲಸ ನಿಲ್ಲಿಸಿದ್ದಾನೆ. ಅಧಿಕಾರಿಗಳಿಂದ ಗೌರವಧನ ಸಿಗದ ಕಾರಣ ವಾಟರ್ಮನ್ ಕೆಲಸಬಂದ್ ಮಾಡಿದ ಪರಿಣಾಮವಾಗಿ ನೇರವಾಗಿ ಗ್ರಾಮಸ್ಥರ ಮೇಲೆಯೇ ಪರಿಣಾಮ ಬಿದ್ದಿದೆ.
ಗ್ರಾಮದ ಅನೇಕ ಯುವಕರು ಉದ್ಯೋಗ ಅರಸಿ ಗೋವಾ ಹಾಗೂ ಮಹಾರಾಷ್ಟ್ರಕ್ಕೆ ವಲಸೆ ಹೋಗಿರುವುದರಿಂದ, ಗ್ರಾಮದಲ್ಲಿ ಈಗ ವೃದ್ಧರು ಮತ್ತು ಮಹಿಳೆಯರೇ ಹೆಚ್ಚಾಗಿ ಉಳಿದಿದ್ದಾರೆ. ಇದರ ಪರಿಣಾಮವಾಗಿ ಅವರು 500 ಮೀಟರ್ ದೂರದಿಂದ ನೀರು ತಂದುಕೊಳ್ಳುವ ಕಷ್ಟಕರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಗ್ರಾಮದಲ್ಲಿರುವ 7ನೇ ತರಗತಿಯ ಶಾಲೆಯ ಮಕ್ಕಳಿಗೂ ದೊಡ್ಡ ತೊಂದರೆ ಉಂಟಾಗಿದೆ.
ಇತ್ತೀಚೆಗೆ ನಡೆದ ಗ್ರಾಮಸಭೆಯಲ್ಲಿ ವಾಟರ್ಮನ್ ಮತ್ತು ಗ್ರಾಮಸ್ಥರು ಈ ಪ್ರಶ್ನೆಯನ್ನು ಚರ್ಚೆ ಮಾಡಿದರು, ಪಿಡಿಒ ಹಾಗೂ ಅಧಿಕಾರಿಗಳು ಅವರಿಗೆ ಧಮ್ಕಿಯಂತೆಯೇ ವರ್ತಿಸಿದರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ವಿಷಯವನ್ನು ಗ್ರಾಮಸಭೆಯಲ್ಲಿ ಅಲ್ಲದೆ ಗ್ರಾಮಪಂಚಾಯತ್ ಕಚೇರಿಯಲ್ಲೇ ಚರ್ಚಿಸಬೇಕು ಎಂದು ಅಧಿಕಾರಿಗಳು ಹೇಳಿದ್ದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿದೆ.
ಈ ಘಟನೆಯ ಹಿನ್ನೆಲೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂದೆ ಅವರು ತುರ್ತಾಗಿ ಮಧ್ಯಪ್ರವೇಶಿಸಿ ವಾಟರ್ಮನ್ನ ಗೌರವಧನ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಗ್ರಾಮದ ವೃದ್ಧ ಮಹಿಳೆಯರು ನೀರಿಗಾಗಿ ಜೀವಕ್ಕೆ ಹಾನಿ ಉಂಟಾಗುವಷ್ಟು ಕಷ್ಟಪಡುತ್ತಿರುವುದು, ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ದುಸ್ಥಿತಿ ಉಂಟಾಗಿದೆ ಎಂದು ಗ್ರಾಮಸ್ಥರು ಪ್ರತಿಕ್ರಿಯಿಸಿದ್ದಾರೆ.

