सतीश जारकीहोळींना ईडीचा धक्का; कर्नाटक-महाराष्ट्रातील 15 ठिकाणी छापेमारी.
बेळगाव : कर्नाटकचे सार्वजनिक बांधकाम मंत्री सतीश जारकीहोळी यांच्याशी संबंधित ठिकाणांवर बुधवारी पहाटे सक्तवसुली संचालनालयाने (ईडी) छापेमारी सुरू केली. त्यांच्या निवासस्थानासह कार्यालय तसेच कर्नाटक आणि महाराष्ट्रातील विविध ठिकाणी ईडीच्या अधिकाऱ्यांकडून शोधमोहीम राबविण्यात येत आहे.
मिळालेल्या माहितीनुसार, बेळगाव, बंगळूर आणि महाराष्ट्रातील मिळून सुमारे 15 ठिकाणी ईडीच्या पथकांकडून एकाचवेळी झडती सुरू आहे. सतीश जारकीहोळी यांचे नातेवाईक तसेच अधिकारी मंजुनाथ यांच्याशी संबंधित कथित अबकारी गैरव्यवहाराच्या प्रकरणाच्या अनुषंगाने ही कारवाई होत असल्याचे सांगण्यात येत आहे.
अनधिकृतपणे बार परवाने मंजूर करणे, कथित बेकायदेशीर परकीय निधीची गुंतवणूक आणि मनी लॉन्ड्रिंग यांसारख्या आरोपांच्या पार्श्वभूमीवर ईडीकडून तपास सुरू असल्याची माहिती समोर आली आहे.
ईडीच्या या कारवाईमुळे कर्नाटकच्या राजकीय वर्तुळात मोठी खळबळ उडाली आहे. छापेमारीदरम्यान कोणती कागदपत्रे किंवा आर्थिक व्यवहारांची माहिती ईडीच्या हाती लागते आणि तपासातून पुढे काय निष्पन्न होते, याकडे राजकीय वर्तुळासह नागरिकांचे लक्ष लागले आहे.
वरील आरोप हे तपासातील कथित बाबी असून, त्यांची अंतिम सत्यता तपास पूर्ण झाल्यानंतरच स्पष्ट होईल.
ಸಚಿವರಾದ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್; ಕರ್ನಾಟಕ– ಮಹಾರಾಷ್ಟ್ರ ಸೇರಿದಂತೆ 15 ಸ್ಥಳಗಳಲ್ಲಿ ದಾಳಿ.
ಬೆಳಗಾವಿ : ಕರ್ನಾಟಕದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಬುಧವಾರ ಮುಂಜಾನೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅವರ ನಿವಾಸ, ಕಚೇರಿ ಸೇರಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಇಡಿ ಅಧಿಕಾರಿಗಳಿಂದ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಲಭ್ಯವಾದ ಮಾಹಿತಿಯ ಪ್ರಕಾರ, ಬೆಳಗಾವಿ, ಬೆಂಗಳೂರು ಹಾಗೂ ಮಹಾರಾಷ್ಟ್ರದಲ್ಲಿ ಒಟ್ಟು ಸುಮಾರು 15 ಸ್ಥಳಗಳಲ್ಲಿ ಇಡಿ ಅಧಿಕಾರಿಗಳ ತಂಡಗಳು ಏಕಕಾಲದಲ್ಲಿ ಶೋಧ ನಡೆಸುತ್ತಿವೆ. ಸತೀಶ್ ಜಾರಕಿಹೊಳಿ ಅವರ ಸಂಬಂಧಿಕರು ಹಾಗೂ ಅಧಿಕಾರಿ ಮಂಜುನಾಥ್ ಅವರಿಗೆ ಸಂಬಂಧಿಸಿದ ಅಬಕಾರಿ ಅಕ್ರಮ ವ್ಯವಹಾರ ಪ್ರಕರಣದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಅನಧಿಕೃತವಾಗಿ ಬಾರ್ ಪರವಾನಗಿಗಳನ್ನು ಮಂಜೂರು ಮಾಡುವುದು, ಅಕ್ರಮ ವಿದೇಶಿ ನಿಧಿಯ ಹೂಡಿಕೆ ಮತ್ತು ಹಣ ಅಕ್ರಮ ವರ್ಗಾವಣೆ (ಮನಿ ಲಾಂಡರಿಂಗ್) ಸೇರಿದಂತೆ ಹಲವು ಆರೋಪಗಳ ಹಿನ್ನೆಲೆಯಲ್ಲಿ ಇಡಿ ತನಿಖೆ ನಡೆಸುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಇಡಿ ನಡೆಸುತ್ತಿರುವ ಈ ಕಾರ್ಯಾಚರಣೆಯಿಂದ ಕರ್ನಾಟಕದ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಉಂಟಾಗಿದೆ. ದಾಳಿ ಮತ್ತು ಶೋಧ ಕಾರ್ಯಾಚರಣೆ ವೇಳೆ ಇಡಿ ಅಧಿಕಾರಿಗಳ ಕೈಗೆ ಯಾವ ದಾಖಲೆಗಳು ಅಥವಾ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿಗಳು ಸಿಗುತ್ತವೆ ಹಾಗೂ ತನಿಖೆಯಿಂದ ಮುಂದೆ ಏನು ಬೆಳಕಿಗೆ ಬರುತ್ತದೆ ಎಂಬುದರತ್ತ ರಾಜಕೀಯ ವಲಯದ ಜೊತೆಗೆ ಸಾರ್ವಜನಿಕರ ಗಮನವೂ ನೆಟ್ಟಿದೆ.
ಇಲ್ಲಿ ಉಲ್ಲೇಖಿಸಿರುವ ಆರೋಪಗಳು ತನಿಖೆಯಲ್ಲಿರುವ ವಿಷಯಗಳಾಗಿದ್ದು, ಅವುಗಳ ಅಂತಿಮ ಸತ್ಯಾಸತ್ಯತೆ ತನಿಖೆ ಪೂರ್ಣಗೊಂಡ ಬಳಿಕವೇ ಸ್ಪಷ್ಟವಾಗಲಿದೆ.

