
जिल्हाधिकारी मोहम्मद रोशन यांच्या हस्ते गणेश मूर्ती प्रतिष्ठापना; सामाजिक सलोख्याचा अनोखा आदर्श.
बेळगाव : श्री गणेश चतुर्थी निमित्त दरवर्षीप्रमाणे यंदाही जिल्हाधिकारी कार्यालय तसेच जिल्हाधिकाऱ्यांच्या प्रशासकीय निवासस्थानी श्री गणेश मूर्तीची प्रतिष्ठापना करण्यात आली. विशेष म्हणजे जिल्हाधिकारी मोहम्मद रोशन यांनी स्वतःच्या हाताने गणेश मूर्ती आणून प्रतिष्ठापना करून सामाजिक आणि धार्मिक सलोख्याचा उत्तम आदर्श घालून दिला.
मोहम्मद रोशन यांचे कुटुंब सकाळी राणी कित्तूर चन्नम्मा चौकातील श्री गणेश मंदिरात दाखल झाले. त्यांनी आपल्या चिरंजीवासमवेत मंदिरात दर्शन घेऊन पूजन केले. त्यानंतर पारंपरिक मिरवणुकीत “गणपती बाप्पा मोरया”च्या घोषणांमध्ये श्री गणेश मूर्ती कार्यालयात आणण्यात आली.
यंदा जिल्हाधिकारी कार्यालयात पर्यावरणपूरक गणेश मूर्तीची प्रतिष्ठापना करण्यात आली असून पूजन विधीत अधिकारी व कर्मचारी मोठ्या संख्येने सहभागी झाले. जिल्हाधिकारी रोशन यांनी माध्यमांशी बोलताना जिल्ह्यातील नागरिकांना गणेशोत्सवाच्या शुभेच्छा दिल्या व हा सण शांततेत, बंधुभावाने आणि सौहार्दपूर्ण वातावरणात साजरा करण्याचे आवाहन केले.
याप्रसंगी त्यांचे कुटुंबीय, शासकीय अधिकारी तसेच हितचिंतक उपस्थित होते. मागील वर्षीप्रमाणे यंदाही जिल्हाधिकाऱ्यांचा हा उपक्रम शहरवासीयांच्या कौतुकाचा विषय ठरला आहे.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಂದ ಗಣೇಶ ವಿಗ್ರಹದ ಪ್ರತಿಷ್ಠಾಪನೆ; ಸಾಮಾಜಿಕ ಸೌಹಾರ್ದತೆಯ ಮಾದರಿ.
ಬೆಳಗಾವಿ : ಶ್ರೀ ಗಣೇಶ ಚತುರ್ಥಿ ಪ್ರಯುಕ್ತ ಪ್ರತೀ ವರ್ಷದಂತೆ ಈ ವರ್ಷವೂ ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದಲ್ಲಿ ಗಣೇಶ ವಿಗ್ರಹದ ಪ್ರತಿಷ್ಠಾಪನೆ ಮಾಡಲಾಯಿತು. ವಿಶೇಷವೆಂದರೆ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸ್ವತಃ ಗಣೇಶಮೂರ್ತಿಯನ್ನು ತಂದು ಪ್ರತಿಷ್ಠಾಪನೆ ನಡೆಸಿ, ಸಾಮಾಜಿಕ ಮತ್ತು ಧಾರ್ಮಿಕ ಸೌಹಾರ್ದತೆಯ ಉಜ್ವಲ ಮಾದರಿಯನ್ನು ನಿರ್ಮಿಸಿದರು.
ಬೆಳಿಗ್ಗೆ ಮೊಹಮ್ಮದ್ ರೋಷನ್ ಹಾಗೂ ಅವರ ಕುಟುಂಬ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಶ್ರೀ ಗಣೇಶ ದೇವಾಲಯಕ್ಕೆ ಆಗಮಿಸಿತು. ತಮ್ಮ ಮಗನೊಂದಿಗೆ ದೇವರ ದರ್ಶನ, ಪೂಜೆ ಸಲ್ಲಿಸಿದ ಬಳಿಕ ಪಾರಂಪರಿಕ ಮೆರವಣಿಗೆಯಲ್ಲಿ “ಗಣಪತಿ ಬಪ್ಪಾ ಮೋರಯಾ” ಘೋಷಣೆಗಳ ನಡುವೆ ಗಣೇಶಮೂರ್ತಿಯನ್ನು ಕಚೇರಿಗೆ ತಂದು ಪ್ರತಿಷ್ಠಾಪಿಸಲಾಯಿತು.
ಈ ಬಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರಿಸರ ಸ್ನೇಹಿ ಗಣೇಶಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಪೂಜಾ ವಿಧಿಯಲ್ಲಿ ಅಧಿಕಾರಿಗಳು ಹಾಗೂ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲೆಯ ನಾಗರಿಕರಿಗೆ ಗಣೇಶೋತ್ಸವದ ಹಾರ್ದಿಕ ಶುಭಾಶಯಗಳನ್ನು ತಿಳಿಸಿ, ಹಬ್ಬವನ್ನು ಶಾಂತಿಯುತವಾಗಿ, ಸಹೋದರತ್ವದಿಂದ ಹಾಗೂ ಸೌಹಾರ್ದಪೂರ್ಣ ವಾತಾವರಣದಲ್ಲಿ ಆಚರಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅವರ ಕುಟುಂಬದವರು, ಸರ್ಕಾರಿ ಅಧಿಕಾರಿಗಳು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು. ಕಳೆದ ವರ್ಷಗಳಂತೆ ಈ ಬಾರಿ ಕೂಡ ಜಿಲ್ಲಾಧಿಕಾರಿಗಳ ಈ ಉಪಕ್ರಮ ನಾಗರಿಕರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
