
खानापूर-हेमाडगा रस्त्यावर खड्ड्यांचे साम्राज्य; सार्वजनिक बांधकाम विभागाकडे तातडीने दुरुस्तीची मागणी
खानापूर (ता. 31 जुलै): खानापूर-हेमाडगा मार्गावरील रस्त्याची अवस्था अत्यंत दयनीय झाली असून, अनेक ठिकाणी मोठमोठे खड्डे पडले आहेत. विशेषतः शिरोली येथील वनखात्याच्या विश्रामधाम परिसरात खड्ड्यांमध्ये पाणी साचल्यामुळे वाहनचालकांची मोठी कसरत होत आहे. तसेच रस्त्यावर एका ठिकाणी झाड पडले असून, झाडामुळे वाहतुकीस अडथळा निर्माण होत आहे, त्यासाठी वन खात्याने सुद्धा हे झाड रस्त्यावरून हटवण्याची मागणी प्रवासी वर्गातून करण्यात येत आहे.
या मार्गावरून प्रवास करणे दिवसेंदिवस धोकादायक ठरत असून, काही दिवसांपूर्वी तीओली गावाजवळ एका महिलेला दुचाकीवरून जाताना अपघात झाला. ती गंभीर जखमी झाली होती आणि अनेक दिवस उपचारानंतर अखेर तिचा मृत्यू झाला. या घटनेने परिसरात संतापाची लाट पसरली आहे.
हेमाडगा परिसरातील नागरीकांच्या वतीने सामाजिक कार्यकर्ते नारायण काटगाळकर यांनी जिल्हाधिकारी मोहम्मद रोशन यांना निवेदन देत रस्त्यांची दुर्दशा दाखवणारे फोटो सादर केले होते. जिल्हाधिकारी स्वतः खानापूर येथे एका कार्यक्रमासाठी आले असताना हे निवेदन देण्यात आले. मात्र, या निवेदनावर अद्याप कोणतीही ठोस कारवाई झालेली नाही, ही बाब नागरिकांच्या नाराजीस कारणीभूत ठरत आहे.
“या रस्त्याला अजून किती बळी हवेत?” असा संतप्त सवाल नागरिक प्रशासनाला विचारत असून, सार्वजनिक बांधकाम विभागाने तातडीने या रस्त्याची पाहणी करून किमान तात्पुरती दुरुस्ती तरी करावी, अशी जोरदार मागणी करण्यात येत आहे.
ಖಾನಾಪುರ-ಹೆಮಾಡಗಾ ರಸ್ತೆಯು ಮೇಲೆ ಗುಂಡಿಗಳ ಸಾಮ್ರಾಜ್ಯ; ಸಾರ್ವಜನಿಕ ಕಾಮಗಾರಿ ಇಲಾಖೆ ಇತ್ತ ಕಡೆ ಗಮನ ಹರಿಸಿ ತಕ್ಷಣದ ದುರಸ್ತಿ ಮಾಡಲು ಒತ್ತಾಯ
ಖಾನಾಪುರ (ಜು. ೩೧): ಖಾನಾಪುರ-ಹೆಮಾಡಗಾ ರಸ್ತೆಯ ಸ್ಥಿತಿ ತುಂಬಾ ದಯನೀಯವಾಗಿದೆ. ಈ ರಸ್ತೆಯ ಶಿರೋಳಿ ಗ್ರಾಮದ ಅರಣ್ಯ ಇಲಾಖೆಯ ವಿಶ್ರಾಂತಿಧಾಮದ ಬಳಿಯಲ್ಲಿಯೂ ಸೇರಿದಂತೆ ಹಲವೆಡೆ ಗಭೀರ ಗುಂಡಿಗಳು ಬಿದ್ದಿದ್ದು, ಅವುಗಳಲ್ಲಿ ನೀರು ನಿಲ್ಲುತ್ತಿರುವುದರಿಂದ ವಾಹನಚಾಲಕರಿಗೆ ತೀವ್ರ ತೊಂದರೆಯಾಗುತ್ತಿದೆ. ಜೊತೆಗೆ ಒಂದು ಸ್ಥಳದಲ್ಲಿ ರಸ್ತೆಯ ಮೇಲೆ ಮರವೊಂದು ಬಿದ್ದಿದ್ದು, ಸಾರಿಗೆಗೆ ಅಡಚಣೆ ಉಂಟುಮಾಡುತ್ತಿದೆ. ಪ್ರಯಾಣಿಕರು ಆ ಮರವನ್ನು ತೆಗೆದುಹಾಕುವಂತೆ ಅರಣ್ಯ ಇಲಾಖೆಯ ಮೇಲೆ ಒತ್ತಡ ಹಾಗೂ ಒತ್ತಾಯ ಮೂಡಿಸಿದ್ದಾರೆ.
ಈ ರಸ್ತೆಯಲ್ಲಿ ಸಂಚಾರ ಈಗ ದಿನದಿಂದ ದಿನಕ್ಕೆ ಅಪಾಯಕಾರಿಯಾಗುತ್ತಿದೆ. ಇತ್ತೀಚೆಗೆ ತಿಯೋಲಿ ಗ್ರಾಮದ ಬಳಿ ಮಹಿಳೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ಅಪಘಾತ ಸಂಭವಿಸಿ ಗಂಭೀರವಾಗಿ ಗಾಯಗೊಂಡಿದ್ದರು. ಹಲವಾರು ದಿನಗಳ ಚಿಕಿತ್ಸೆಯ ಬಳಿಕ ಅವರು ಮೃತಪಟ್ಟಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆಕ್ರೋಶ ಹುಟ್ಟುಹಾಕಿದೆ.
ಹೆಮಾಡಗಾ ಪರಿಸರದ ನಾಗರಿಕರ ಪರವಾಗಿ ಸಮಾಜ ಸೇವಕರಾದ ನಾರಾಯಣ ಕಾಟಗಾಳಕರ ಅವರು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ರಸ್ತೆ ದುಸ್ಥಿತಿಯ ಫೋಟೋಗಳೊಂದಿಗೆ ಮನವಿ ಸಲ್ಲಿಸಿದ್ದರು. ಅವರು ಖಾನಾಪುರಕ್ಕೆ ಒಂದು ಕಾರ್ಯಕ್ರಮಕ್ಕಾಗಿ ಬಂದಾಗ ಈ ಮನವಿ ನೀಡಲಾಗಿತ್ತು. ಆದರೆ ಈವರೆಗೂ ಯಾವುದೇ ತೀರ್ಮಾನಾತ್ಮಕ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದೇ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
“ಈ ರಸ್ತೆಗೆ ಇನ್ನೂ ಎಷ್ಟು ಬಲಿಗಳ ಬೇಕು?” ಎಂಬ ತೀವ್ರ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬರುತ್ತಿದ್ದು, ಸಾರ್ವಜನಿಕ ಕಾಮಗಾರಿಗಳ ಇಲಾಖೆ ತಕ್ಷಣ ಈ ರಸ್ತೆಯ ಪರಿಶೀಲನೆ ನಡೆಸಿ ಕನಿಷ್ಠ ತಾತ್ಕಾಲಿಕ ದುರಸ್ತಿ ಕೈಗೊಳ್ಳಬೇಕು ಎಂಬ ಒತ್ತಾಯ ಜೋರಾಗಿ ಕೇಳಿಬರುತ್ತಿದೆ.
