डीसीसी बँक निवडणूक, आमच्या पॅनलमधील सर्व 13 उमेदवारांच्या विजयाचा मला पूर्ण विश्वास – आमदार भालचंद्र जारकीहोळी
बेळगाव : “आमच्या पॅनलमधील 13 उमेदवारांना आम्ही बीडीसीसी बँकेच्या निवडणुकीच्या रिंगणात उतरवले आहे. देव आणि मतदारांच्या आशीर्वादाने आम्ही सर्वांना विजयी करून पुढील पाच वर्षे बँकेचे प्रशासन चालविण्यास सज्ज आहोत,” असे अरभावीचे आमदार व माजी मंत्री भालचंद्र जारकीहोळी यांनी सांगितले.
शनिवारी बँकेच्या सभागृहात आपल्या पॅनलमधील सहा उमेदवारांनी अर्ज दाखल केल्यानंतर पत्रकारांशी बोलताना त्यांनी माहिती दिली की आज मूडलगी, गोकाक, रामदुर्ग, हुकेरी, बेळगाव व इतर विभागांतील एकूण सहा उमेदवारांनी नामनिर्देशन दाखल केले आहेत.
उमेदवारांची माहिती :
मूडलगी तालुक्यातून – नीलकंठ काप्पलगुडी
गोकाक तालुक्यातून – अमरनाथ जारकीहोळी
रामदुर्ग तालुक्यातून – श्रीकांत धवण
हुकेरी तालुक्यातून – राजेंद्र पाटील
बेळगाव तालुक्यातून – राहुल जारकीहोळी
इतर क्षेत्रातून – एमएलसी चन्नराज हट्टीहोळी
रविवारी नामपत्रांची पडताळणी तर सोमवारी अर्ज मागे घेण्याचा शेवटचा दिवस असल्याची माहिती त्यांनी दिली. “जिथे शक्य आहे, तिथे विरोधकांना पटवून उमेदवारांची बिनविरोध निवड करण्याचा प्रयत्न होईल. मात्र तसे न झाल्यास निवडणूक लढवू,” असे ते म्हणाले.
जारकीहोळी म्हणाले, “काही ठिकाणी आमच्या विरोधकांना बिनविरोध निवड नको आहे. आमच्या उमेदवारांना प्रलोभन दाखवून गोंधळ उडविण्याचे प्रयत्न सुरू आहेत. आम्ही स्पष्ट सांगितले होते की अथणी, कागवाड व चीकोडी तालुक्यात आम्ही उमेदवार देणार नाही. तरीसुद्धा निपाणीहून उत्तम पाटील यांनी आमच्या विनंतीकडे दुर्लक्ष करून निवडणूक लढवत आहेत. आम्ही अण्णासाहेब जोल्ले यांना पाठिंबा देऊन विजयी करून दाखवू.”
कित्तूर क्षेत्रातून विक्रम इनामदार आमचे उमेदवार आहेत. मात्र आमदार बाबासाहेब पाटील यांनी त्यांच्या भावाला विरोधक म्हणून उभे केले आहे. कागवाडचे श्रीनिवास पाटील आणि अथणीचे महेश कुमठळी यांनीही आमच्याशी सल्लामसलत न करता उमेदवारी अर्ज भरले असल्याचे त्यांनी सांगितले.
इतर क्षेत्रातून सुरुवातीला महांतेश कवटगीमठ, राजेंद्र अंकलगी, पंचनगौड द्यामनगौडर आणि गुरू मेटगुडी या नावांवर चर्चा होती. मात्र अखेरीस चन्नराज हट्टीहोळी यांना उमेदवार करण्यात आले.
जारकीहोळी घराण्याच्या दुसऱ्या पिढीचा सहभाग..
पत्रकारांनी विचारले की, या वेळी जारकीहोळी घराण्यातील दोघे उमेदवार आहेत, म्हणजेच हे घराणेशाही नाही का? यावर भालचंद्र जारकीहोळी म्हणाले, “देशभरातील इतिहास पाहा – सर्वच नेत्यांनी आपल्या मुलांना राजकारणात आणले आहे. यात काही नवीन नाही. राहुल यांना बेळगावातून उमेदवारी देण्याचा निर्णय सहा महिन्यांपूर्वीच झाला होता. गोकाक तालुक्यातील संघटनांनी अमरनाथ यांना स्वतःहून उमेदवार म्हणून मागणी केली होती.”
“मी स्वतः या निवडणुकीत लढत नाही. पण आमच्या कुटुंबातील कोणी लढू नये, असेही मी कधी म्हटले नाही. जनतेचा विश्वास टिकवण्यासाठी आणि सेवा पुढे नेण्यासाठी आमच्या पुढच्या पिढीने राजकारणात येणे आवश्यक आहे,” असे ते म्हणाले.
शेवटी त्यांनी सांगितले की, “जनतेचा आशीर्वाद मिळाल्यानेच आम्ही इथपर्यंत आलो आहोत. तो आशीर्वाद जोपर्यंत राहील, तोपर्यंत आमची जनसेवा अखंड सुरू राहील. आज, उद्या आणि सदैव आम्ही जनतेसाठी आहोत.”
ನಮ್ಮ ಬಣದ ಎಲ್ಲ 13 ಜನ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದ ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿಯವರ ವಿಶ್ವಾಸ…!!
ಜಾರಕಿಹೊಳಿ ಕುಟುಂಬದ ಎರಡನೆ ಪೀಳಿಗೆ ರಾಜಕೀಯ ಅಖಾಡಕ್ಕೆ.
ಸಚಿವ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಮತ್ತು ಹಿರಿಯ ಶಾಸಕ ರಮೇಶ್ ಜಾರಕಿಹೊಳಿ ಪುತ್ರ ಅಮರನಾಥ್ ಸೇರಿ 6 ಜನ ಅವಿರೋಧ ಆಯ್ಕೆ…
ಬೆಳಗಾವಿ ಸುದ್ದಿ : ಬೆಳಗಾವಿ : ನಮ್ಮ ಬೆಂಬಲಿತ 13 ಅಭ್ಯರ್ಥಿಗಳನ್ನು ಬಿಡಿಸಿಸಿ ಬ್ಯಾಂಕ್ ಚುನಾವಣೆಗೆ ಕಣಕ್ಕಿಳಿಸಿದ್ದು, ದೇವರು ಮತ್ತು ಮತದಾರರ ಆಶೀರ್ವಾದದಿಂದ ಅವರನ್ನು ಗೆಲ್ಲಿಸಿಕೊಂಡು ಬಂದು ಮುಂದಿನ ಐದು ವರ್ಷಗಳ ಕಾಲ ಬ್ಯಾಂಕಿನ ಆಡಳಿತ ನಡೆಸಲು ಸಿದ್ಧರಾಗಿದ್ದೇವೆ ಎಂದು ಅರಭಾವಿ ಕ್ಷೇತ್ರದ ಶಾಸಕ, ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು. ಶನಿವಾರದಂದು ಇಲ್ಲಿಯ ಬ್ಯಾಂಕಿನ ಸಭಾಗೃಹದಲ್ಲಿ ತಮ್ಮ ಬೆಂಬಲಿತ 6 ಅಭ್ಯರ್ಥಿಗಳ ನಾಮಪತ್ರಗಳನ್ನು ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಮೂಡಲಗಿ, ಗೋಕಾಕ, ರಾಮದುರ್ಗ, ಹುಕ್ಕೇರಿ, ಬೆಳಗಾವಿ ಮತ್ತು ಇತರೆ ವಿಭಾಗದಿಂದ ಒಟ್ಟು 6 ಜನರು ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಅವರು ತಿಳಿಸಿದರು.
ಮೂಡಲಗಿ ತಾಲ್ಲೂಕಿನ ಪಿಕೆಪಿಎಸ್ ಸಂಘದ ವತಿಯಿಂದ ನೀಲಕಂಠ ಕಪ್ಪಲಗುದ್ದಿ, ಗೋಕಾಕ ತಾಲೂಕಿನ ಪಿಕೆಪಿಎಸ್ ಸಂಘದ ವತಿಯಿಂದ ಅಮರನಾಥ ಜಾರಕಿಹೊಳಿ, ರಾಮದುರ್ಗ ತಾಲ್ಲೂಕಿನ ಪಿಕೆಪಿಎಸ್ ಸಂಘದ ವತಿಯಿಂದ ಶ್ರೀಕಾಂತ ಢವಣ, ಹುಕ್ಕೇರಿ ತಾಲ್ಲೂಕಿನ ಪಿಕೆಪಿಎಸ್ ಸಂಘದ ವತಿಯಿಂದ ರಾಜೇಂದ್ರ ಪಾಟೀಲ, ಬೆಳಗಾವಿ ತಾಲ್ಲೂಕಿನ ಪಿಕೆಪಿಎಸ್ ಸಂಘದ ವತಿಯಿಂದ ರಾಹುಲ್ ಜಾರಕಿಹೊಳಿ ಮತ್ತು ಇತರೆ ಕ್ಷೇತ್ರದಿಂದ ಎಂಎಲಸಿ
ಚನ್ನರಾಜ ಹಟ್ಟಿಹೊಳಿ ಅವರನ್ನು ನಮ್ಮ ಪೆನೆಲ್ ದಿಂದ ಕಣಕ್ಕಿಳಿಸಲಾಗಿದೆ ಎಂದವರು ಮಾಹಿತಿಯನ್ನು ನೀಡಿದರು.
ನಾಳೆಯ ರವಿವಾರದಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಸೋಮವಾರದಂದು ನಾಮಪತ್ರಗಳನ್ನು ಹಿಂಪಡೆಯಲು ಕಡೆಯ ದಿನವಾಗಿದೆ. ಎಲ್ಲೆಲ್ಲಿ ನಮಗೆ ಅನುಕೂಲ ಇದೆಯೋ? ಅಲ್ಲಲ್ಲಿ ಅಭ್ಯರ್ಥಿಗಳನ್ನು ಮನವೊಲಿಸಿ ಅವಿರೋಧ ಆಯ್ಕೆಗೆ ಪ್ರಯತ್ನ ಮಾಡಲಾಗುವುದು. ಒಂದು ವೇಳೆ ಅವಿರೋಧ ಆಯ್ಕೆಗೆ ಸಹಕಾರ ಸಿಗದಿದ್ದಲ್ಲಿ ಚುನಾವಣೆಯನ್ನು ಎದುರಿಸಲಾಗುವುದು. ನಮ್ಮ ಪೆನೆಲ್ ದಿಂದ ಈಗಾಗಲೇ 13 ಜನರು ಸ್ಪರ್ಧೆ ಮಾಡಿದ್ದು, ಅವರನ್ನು ಆರಿಸಿ ತರುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅವರು ಹೇಳಿದರು.
ಎಲ್ಲಿ ಅವಿರೋಧವಾಗಿ ಆಯ್ಕೆಯಾಗುವ ಅವಕಾಶವಿರುತ್ತದೆಯೋ ಅಲ್ಲಿ ನಮ್ಮ ವಿರೋಧಿಗಳು ಅಭ್ಯರ್ಥಿಗಳನ್ನು ನಿಲ್ಲಿಸುತ್ತಿದ್ದಾರೆ.
ಅವರಿಗೆ ಅವಿರೋಧ ಆಯ್ಕೆ ಬೇಕಾಗಿಲ್ಲ. ಜತೆಗೆ ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕಿ ಆಮಿಷ ಒಡ್ಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿರೋಧಿಗಳ ಹೆಸರನ್ನು ಹೇಳದೇ ಟೀಕಿಸಿದರು. ಈ ಮೊದಲೇ ಹೇಳಿದಂತೆ ಅಥಣಿ, ಕಾಗವಾಡ, ಚಿಕ್ಕೋಡಿ ತಾಲ್ಲೂಕಿನ ಕ್ಷೇತ್ರಗಳಲ್ಲಿ ನಾವು ಅಭ್ಯರ್ಥಿಗಳನ್ನು ಹಾಕುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದೇವೆ. ಈಗಲೂ ಅದನ್ನೇ ಹೇಳುತ್ತಿದ್ದೇವೆ. ನಿಪ್ಪಾಣಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಉತ್ತಮ ಪಾಟೀಲ ಅವರಿಗೆ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಡಿ ಎಂದು ಹೇಳಿದರು ಅವರು ಸ್ಪರ್ಧೆ ಮಾಡುತ್ತಿದ್ದಾರೆ. ನಾವು
ಅಣ್ಣಾಸಾಹೇಬ ಜೊಲ್ಲೆಯವರ ಆಯ್ಕೆಗೆ ಸಹಕಾರವನ್ನು ನೀಡುವಂತೆ ಅವರಲ್ಲಿ ಸಾಕಷ್ಟು ಸಲ ವಿನಂತಿಸಿಕೊಳ್ಳಲಾಗಿತ್ತು.
ಅಲ್ಲದೇ ಸಚಿವ ಸತೀಶ್ ಜಾರಕಿಹೊಳಿಯವರು ವೀರಕುಮಾರ್ ಪಾಟೀಲ ಮೂಲಕ ಸ್ಪರ್ಧೆಯನ್ನು ತಡೆಯಲಿಕ್ಕೆ ಎಲ್ಲ ಪ್ರಯತ್ನಗಳನ್ನು ಮಾಡಿದರು.
ಆದರೂ ಯಾರ ಮಾತನ್ನು ಕೇಳದೇ ಉತ್ತಮ ಅವರು ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ನಾವು ಜೊಲ್ಲೆಯವರ ಬೆಂಬಲಕ್ಕೆ ನಿಂತು ಗೆಲ್ಲಿಸಿ ತೋರಿಸುತ್ತೇವೆ ಎಂದು ಅವರು ತಿಳಿಸಿದರು.
ಇನ್ನು ಕಿತ್ತೂರು ಕ್ಷೇತ್ರದಿಂದ ವಿಕ್ರಮ ಇನಾಂದಾರ ನಮ್ಮ ಅಭ್ಯರ್ಥಿಯಾಗಿದ್ದಾರೆ. ಅಲ್ಲಿ ಸತೀಶ್ ಜಾರಕಿಹೊಳಿ ಮತ್ತು ಶಾಸಕ ಬಾಬಾಸಾಹೇಬ್ ಪಾಟೀಲ ಮಧ್ಯ ಚರ್ಚೆಗಳು ಏನು ನಡೆದಿವೆ ಎಂಬುದರ ಬಗ್ಗೆ ನಮಗೆ ಖಚಿತವಾದ ಮಾಹಿತಿಗಳಿಲ್ಲ. ಬಾಬಾಸಾಹೇಬ್ ಪಾಟೀಲ ಅವರು ತಮ್ಮ ಸಹೋದರನನ್ನು ಇನಾಂದಾರ ಅವರ ಎದುರಾಳಿಯಾಗಿ ನಿಲ್ಲಿಸಿದ್ದಾರೆ. ಕಾಗವಾಡದಿಂದ ಶ್ರೀನಿವಾಸ ಪಾಟೀಲ ಮತ್ತು ಅಥಣಿಯಿಂದ ಮಹೇಶ್ ಕುಮಠಳ್ಳಿ ಅಭ್ಯರ್ಥಿಗಳಾಗಿದ್ದರ ಬಗ್ಗೆ ನಮಗೆ ಯಾವುದೇ ಮಾಹಿತಿಗಳಿಲ್ಲ. ನಮ್ಮನ್ನು ಕೇಳದೇ ಅವರುಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇತರೇ ಕ್ಷೇತ್ರದಿಂದ ಸುಮಾರು 6 ಜನರ ಚರ್ಚೆಯಲ್ಲಿದ್ದರೂ. ಅವರಲ್ಲಿ ಮಹಾಂತೇಶ ಕವಟಗಿಮಠ, ರಾಜೇಂದ್ರ ಅಂಕಲಗಿ, ಪಂಚನಗೌಡ ದ್ಯಾಮನಗೌಡರ, ಗುರು ಮೆಟಗುಡ್ಡ ಮುಂತಾದವರ ಹೆಸರುಗಳು ಚಾಲನೆಯಲ್ಲಿದ್ದವು. ಆದರೆ, ಕೊನೆಗೆ ಚನ್ನರಾಜ ಹಟ್ಟಿಹೊಳಿ ಅವರ ಹೆಸರನ್ನು ಅಂತಿಮ ಮಾಡಲಾಯಿತು. ಇದಕ್ಕೂ ಮೊದಲು ಚನ್ನರಾಜ ಅವರು ಬೆಳಗಾವಿ-ಖಾನಾಪೂರ- ಕಿತ್ತೂರು ಕ್ಷೇತ್ರದ ಪಿಕೆಪಿಎಸ್ ದಿಂದ ಸ್ಪರ್ಧೆ ಮಾಡುವ ಪ್ರಯತ್ನದಲ್ಲಿದ್ದರು. ಸತೀಶ್ ಜಾರಕಿಹೊಳಿಯವರ ಕೋರಿಕೆ ಮೇರೆಗೆ ಅವರು ಸ್ಪರ್ಧೆಯಿಂದ ಹಿಂದಕ್ಕೆ ಸರಿದರು. ಆದರೆ, ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾವು, ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ ಅವರು ಚರ್ಚೆ ನಡೆಸಿ ಕೊನೆಗೆ ಚನ್ನರಾಜ ಹಟ್ಟಿಹೊಳಿ ಅವರನ್ನು ಇತರೇ ಕ್ಷೇತ್ರದಿಂದ ಕಣಕ್ಕಿಳಿಸುವ ನಿರ್ಧಾರವನ್ನು ತೆಗೆದುಕೊಂಡೆವು. ಅನುಭವಿಗಳು ಸಹಕಾರ ಕ್ಷೇತ್ರವನ್ನು ಪ್ರವೇಶ ಮಾಡಬೇಕು. ಒಳ್ಳೆಯವರು ಬರುವುದರಿಂದ ಬ್ಯಾಂಕ್ ಚೆನ್ನಾಗಿ ನಡೆಯುತ್ತದೆ. ಬ್ಯಾಂಕಿನ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಹೆಚ್ಚಿಸುವ ಮೂಲಕ ಹೊಸಬರಿಗೆ ಅನುಕೂಲ ಮಾಡಿಕೊಡುತ್ತಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಾರಕಿಹೊಳಿಯವರ ಕುಟುಂಬದಿಂದ ಈ ಬಾರಿ ಇಬ್ಬರು ಸ್ಪರ್ಧೆ ಮಾಡುತ್ತಿದ್ದು, ಇದು ಕುಟುಂಬ ರಾಜಕೀಯ ಅಲ್ಲವೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇಡೀ ಜಿಲ್ಲೆ, ರಾಜ್ಯ ಹಾಗೂ ದೇಶದ ಇತಿಹಾಸವನ್ನು ನೋಡಿದರೆ ಎಲ್ಲರೂ ತಮ್ಮ ಮಕ್ಕಳನ್ನು ರಾಜಕೀಯಕ್ಕೆ ತಂದಿದ್ದಾರೆ. ಇದರಲ್ಲಿ ಅಚ್ಚರಿಯೂ ಏನಿಲ್ಲ. ಬೆಳಗಾವಿಯಿಂದ ರಾಹುಲ್ ಅವರನ್ನು ನಿಲ್ಲಿಸಲು 6 ತಿಂಗಳಿನ ಹಿಂದೆಯೇ ಚರ್ಚೆ ನಡೆದಿತ್ತು. ಗೋಕಾಕದಲ್ಲಿ ಅಮರನಾಥ ಅವರನ್ನು ಆ ತಾಲ್ಲೂಕಿನ ಪಿಕೆಪಿಎಸ್ ಸಂಘಗಳು ಉತ್ಸುಕರಾಗಿದ್ದವು. ಅನಿವಾರ್ಯ ಸ್ಥಿತಿಯಲ್ಲಿ ಅಮರನಾಥ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ಸಮಜಾಯಿಷಿ ನೀಡಿದರು. ಈ ಬ್ಯಾಂಕಿನ ಚುನಾವಣೆಯಲ್ಲಿ ನಾನು (ಬಾಲಚಂದ್ರ) ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೆ. ಈಗಲೂ ಅದೇ ನಿಲುವಿಗೆ ಬದ್ಧನಿರುವೆ. ಆದರೆ, ನಮ್ಮ ಕುಟುಂಬವರು ನಿಲ್ಲುವುದಿಲ್ಲವೆಂದು ಎಲ್ಲಿಯೂ ಹೇಳಿಲ್ಲವೆಂದು ಸುದ್ದಿಗಾರರಿಗೆ ಮರು ಪ್ರಶ್ನೆ ಹಾಕಿದರು.
ನಮ್ಮನ್ನು ನಂಬಿಕೊಂಡು ಬದುಕುತ್ತಿರುವ ಜನರನ್ನು ಕೈ ಬಿಡಬಾರದು. ನಮ್ಮ ಜನಸೇವೆಯನ್ನು ಮುಂದುವರೆಸಿಕೊಂಡು ಹೋಗಲು ನಮ್ಮ ಮಕ್ಕಳು ಜನಸೇವೆಗೆ ಬರುತ್ತಿದ್ದಾರೆ. ನಮ್ಮ ಎರಡನೇ ಪೀಳಿಗೆಯು ಬೆಳೆಯಬೇಕು. ಹೀಗಾಗಿ ನಮ್ಮ ರಥವು ಮುಂದಕ್ಕೆ ಸಾಗಬೇಕು. ಜನರ ಆಶೀರ್ವಾದ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯತನಕ ನಮ್ಮ ಸೇವೆಯು ಜನರ ಮಧ್ಯ ಇರುತ್ತದೆ. ನಿರಂತರವಾಗಿ ಜನಸೇವೆಯನ್ನು ಮಾಡುತ್ತೇವೆ. ಇಂದು, ನಾಳೆ, ಎಂದೆಂದಿಗೂ ಜನರಿಗಾಗಿ ನಮ್ಮ ಸೇವೆ ಮುಡಿಪಾಗಿದೆ ಕುಟುಂಬ
ರಾಜಕೀಯವನ್ನು ಬಾಲಚಂದ್ರ ಜಾರಕಿಹೊಳಿಯವರು ಸಮರ್ಥಿಸಿಕೊಂಡರು.

