कवळे मठ जमिनीवरील आंबेडकरांच्या बॅनरवरून वाद पेटला; तात्काळ कारवाईची दलित संघटनेच्या नेत्यांची मागणी, अन्यथा आंदोलनाचा इशारा.
खानापूर : तालुक्यातील कवळे मठाच्या वादग्रस्त जागेवर लावण्यात आलेल्या डॉ. बाबासाहेब आंबेडकर यांच्या प्रतिमेच्या बॅनरमुळे नव्या वादाला तोंड फुटले आहे. संबंधित जागेचा न्यायालयीन वाद सुरू असतानाच हे बॅनर उभारण्यात आल्याने कायदा व सुव्यवस्थेचा प्रश्न निर्माण होण्याची शक्यता व्यक्त होत असून, वेगवेगळ्या दलित संघटनेच्या नेत्यांनी तातडीने कारवाईची मागणी केली आहे.

आंबेडकर ब्रिगेडचे संस्थापक लक्ष्मण मादार यांनी शुक्रवारी सार्वजनिक बांधकाम विभागाच्या विश्रामगृहात घेतलेल्या पत्रकार परिषदेत प्रशासनावर निशाणा साधत, “ही कृती डॉ. आंबेडकर यांच्या प्रतिमेचा गैरवापर असून ती अजिबात सहन केली जाणार नाही,” असा इशारा दिला. येत्या दोन दिवसांत जिल्हा पोलीस प्रमुख व जिल्हाधिकाऱ्यांची भेट घेऊन अधिकृत निवेदन सादर करण्यात येणार असल्याचे त्यांनी स्पष्ट केले. लक्ष्मण मादार यांच्या मते, सर्वे क्रमांक 30, 38, 40 आणि 45 या जागेवर अनधिकृतपणे बॅनर व नामफलक लावण्यात आले असून, यामागे काही अज्ञात व्यक्तींचा हात आहे. “डॉ. आंबेडकर हे संपूर्ण समाजाचे दैवत आहेत. त्यांच्या नावाचा गैरवापर करून तणाव निर्माण करणे हा गंभीर प्रकार आहे,” असे ते म्हणाले.

या प्रकरणात “जय भीम भीम सेना कर्नाटक अध्यक्ष कंदी रविकुमार” असा उल्लेख असलेला फलक लावण्यात आल्याचे निदर्शनास आले आहे. मात्र, अशा नावाची अधिकृत संघटना कर्नाटकात अस्तित्वात नसल्याचा दावा करत, या माध्यमातून दिशाभूल करण्याचा प्रयत्न झाल्याचा आरोप करण्यात आला. तसेच, संबंधित फलक लावताना घेतलेल्या छायाचित्रात स्थानिक दलित समाजातील व्यक्ती नसून मराठा व इतर समाजातील लोकांना निळा टिळा लावून उभे करण्यात आल्याचा गंभीर आरोपही करण्यात आला आहे.
या संपूर्ण प्रकाराची सखोल चौकशी करून जबाबदारांवर गुन्हे दाखल करावेत, तसेच पोलिसांनी तात्काळ बॅनर हटवावेत, अशी मागणी करण्यात आली आहे. अन्यथा उग्र आंदोलन छेडण्याचा इशाराही देण्यात आला.
दरम्यान, कवळे मठ हा तालुक्यातील ऐतिहासिक व धार्मिक दृष्ट्या महत्त्वाचा केंद्रबिंदू मानला जातो. या मठाच्या जागेसंदर्भात सारस्वत ब्राह्मण समाजाने आंदोलन केल्यास त्याला खानापूर तालुक्यातील दलित समाजाचा पाठिंबा राहील, असेही मादार यांनी स्पष्ट केले.
या पत्रकार परिषदेला राम मादार, शिवाजी मादार, मनोहर मादार, आदित्य मादार, विनायक बिलावर, सातेरी कोलकार, संजू मादार, यल्लाप्पा कोलकार, नागेश कांबळे यांच्यासह आंबेडकर ब्रिगेड, दलित सेना, कर्नाटक दलित महासंघ आणि भीम आर्मी व इतर संघटनेचे पदाधिकारी उपस्थित होते.
ಕವಳೆ ಮಠದ ಜಮೀನಿನ ಮೇಲೆ ಅಂಬೇಡ್ಕರ್ ಬ್ಯಾನರ್ ವಿಚಾರವಾಗಿ ವಾದ ತೀವ್ರ; ತಕ್ಷಣ ಕ್ರಮಕ್ಕೆ ದಲಿತ ಸಂಘಟನೆಗಳ ನಾಯಕರ ಆಗ್ರಹ, ಇಲ್ಲವಾದಲ್ಲಿ ಹೋರಾಟದ ಎಚ್ಚರಿಕೆ.
ಖಾನಾಪುರ : ತಾಲ್ಲೂಕಿನ ಕವಳೆ ಮಠದ ವಿವಾದಾತ್ಮಕ ಜಾಗೆಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿತ್ರದ ಬ್ಯಾನರ್ ಅಳವಡಿಸಿರುವ ಹಿನ್ನೆಲೆಯಲ್ಲಿ ಹೊಸ ವಾದಕ್ಕೆ ನಾಂದಿ ಹಾಡಿದೆ. ಸಂಬಂಧಿತ ಜಾಗೆಯ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗಲೇ ಈ ಬ್ಯಾನರ್ ಹಾಕಿರುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ವಿವಿಧ ದಲಿತ ಸಂಘಟನೆಗಳ ನಾಯಕರು ತಕ್ಷಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಅಂಬೇಡ್ಕರ್ ಬ್ರಿಗೇಡ್ನ ಸಂಸ್ಥಾಪಕ ಲಕ್ಷ್ಮಣ ಮಾದಾರ ಅವರು ಶುಕ್ರವಾರ ಸಾರ್ವಜನಿಕ ಕಾಮಗಾರಿಗಳ ಇಲಾಖೆಯ ವಿಶ್ರಾಂತಿ ಗೃಹದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆಡಳಿತದ ವಿರುದ್ಧ ಟೀಕೆ ನಡೆಸಿ, “ಇದು ಡಾ. ಅಂಬೇಡ್ಕರ್ ಅವರ ಪ್ರತಿಮೆಯ ದುರುಪಯೋಗವಾಗಿದ್ದು, ಇದನ್ನು ಯಾವತ್ತೂ ಸಹಿಸಲಾಗುವುದಿಲ್ಲ,” ಎಂದು ಎಚ್ಚರಿಕೆ ನೀಡಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಅಧಿಕೃತ ಮನವಿ ಸಲ್ಲಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಲಕ್ಷ್ಮಣ ಮದಾರ ಅವರ ಪ್ರಕಾರ, ಸರ್ವೇ ಸಂಖ್ಯೆ 30, 38, 40 ಮತ್ತು 45 ರ ಜಾಗೆಯಲ್ಲಿ ಅನಧಿಕೃತವಾಗಿ ಬ್ಯಾನರ್ ಮತ್ತು ಹೆಸರು ಫಲಕ ಅಳವಡಿಸಲಾಗಿದೆ. “ಡಾ. ಅಂಬೇಡ್ಕರ್ ಅವರು ಸಮಗ್ರ ಸಮಾಜದ ದೈವವಾಗಿದ್ದಾರೆ. ಅವರ ಹೆಸರನ್ನು ದುರುಪಯೋಗ ಮಾಡಿಕೊಂಡು ಉದ್ವಿಗ್ನತೆ ಸೃಷ್ಟಿಸುವುದು ಗಂಭೀರ ವಿಚಾರವಾಗಿದೆ,” ಎಂದು ಅವರು ಹೇಳಿದರು.
ಈ ಪ್ರಕರಣದಲ್ಲಿ “ಜೈ ಭೀಮ್ ಭೀಮ್ ಸೇನಾ ಕರ್ನಾಟಕ ಅಧ್ಯಕ್ಷ ಕಂಠಿ ರವಿಕುಮಾರ್” ಎಂಬ ಉಲ್ಲೇಖವಿರುವ ಫಲಕವನ್ನು ಅಳವಡಿಸಿರುವುದು ಗಮನಕ್ಕೆ ಬಂದಿದೆ. ಆದರೆ ಇಂತಹ ಹೆಸರಿನ ಅಧಿಕೃತ ಸಂಘಟನೆ ಕರ್ನಾಟಕದಲ್ಲಿ ಇಲ್ಲವೆಂದು ಹೇಳಿ, ಇದರ ಮೂಲಕ ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ.
ಇದಲ್ಲದೆ, ಸಂಬಂಧಿತ ಫಲಕ ಅಳವಡಿಸುವಾಗ ತೆಗೆದ ಛಾಯಾಚಿತ್ರದಲ್ಲಿ ಸ್ಥಳೀಯ ದಲಿತ ಸಮುದಾಯದವರು ಕಾಣಿಸದೇ, ಬದಲಾಗಿ ಮರಾಠಾ ಹಾಗೂ ಇತರ ಸಮುದಾಯದವರನ್ನು ನೀಲಿ ಟಿಲಕ್ ಹಚ್ಚಿ ನಿಲ್ಲಿಸಿರುವುದಾಗಿ ಗಂಭೀರ ಆರೋಪ ಮಾಡಲಾಗಿದೆ.
ಈ ಸಂಪೂರ್ಣ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಹೊಣೆಗಾರರ ವಿರುದ್ಧ ಪ್ರಕರಣ ದಾಖಲಿಸಬೇಕು ಹಾಗೂ ಪೊಲೀಸರು ತಕ್ಷಣ ಬ್ಯಾನರ್ ತೆರವುಗೊಳಿಸಬೇಕು ಎಂದು ಆಗ್ರಹಿಸಲಾಗಿದೆ. ಇಲ್ಲವಾದರೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಇದೇ ವೇಳೆ, ಕವಳೆ ಮಠವು ತಾಲ್ಲೂಕಿನ ಐತಿಹಾಸಿಕ ಮತ್ತು ಧಾರ್ಮಿಕವಾಗಿ ಮಹತ್ವದ ಕೇಂದ್ರವಾಗಿದೆ. ಈ ಮಠದ ಜಮೀನಿನ ವಿಚಾರವಾಗಿ ಸಾರಸ್ವತ ಬ್ರಾಹ್ಮಣ ಸಮಾಜ ಹೋರಾಟ ನಡೆಸಿದರೆ, ಖಾನಾಪುರ ತಾಲ್ಲೂಕಿನ ದಲಿತ ಸಮಾಜದಿಂದ ಬೆಂಬಲ ದೊರೆಯುತ್ತದೆ ಎಂದು ಮಾದಾರ ಅವರು ತಿಳಿಸಿದ್ದಾರೆ.
ಈ ಪತ್ರಿಕಾಗೋಷ್ಠಿಯಲ್ಲಿ ರಾಮ ಮಾದಾರ, ಶಿವಾಜಿ ಮಾದಾರ, ಮನೋಹರ ಮಾದಾರ, ಆದಿತ್ಯ ಮಾದಾರ, ವಿನಾಯಕ ಬಿಲಾವರ, ಸಾತೇರಿ ಕೋಲ್ಕಾರ್, ಸಂಜು ಮಾದಾರ, ಯಲ್ಲಪ್ಪ ಕೋಲ್ಕಾರ್, ನಾಗೇಶ್ ಕಾಂಬಳೆ ಸೇರಿದಂತೆ ಅಂಬೇಡ್ಕರ್ ಬ್ರಿಗೇಡ್, ದಲಿತ ಸೇನಾ, ಕರ್ನಾಟಕ ದಲಿತ ಮಹಾಸಂಘ ಮತ್ತು ಭೀಮ್ ಆರ್ಮಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.



