खानापूर येथील CVPI संस्थेच्या नवीन इमारतीच्या बांधकामासाठी, खासदारांच्या प्रयत्नाने ₹11.83 कोटींचा निधी मंजूर.
खानापूर ; कुंभारकाम क्षेत्रात कौशल्य प्रशिक्षण देणारी कर्नाटकातील एकमेव आणि ऐतिहासिक संस्था असलेल्या सेंट्रल व्हिलेज पॉटरी इन्स्टिट्यूट (CVPI), खानापूर यांना केंद्र सरकारकडून मोठी आर्थिक मदत जाहीर करण्यात आली आहे. सुमारे पाच दशकांपूर्वी उभारलेली संस्थेची विद्यमान इमारत अत्यंत जीर्ण अवस्थेत असून प्रशिक्षणार्थी व कर्मचाऱ्यांच्या सुरक्षिततेस गंभीर धोका निर्माण झाला होता. या पार्श्वभूमीवर, त्याच जागेवर अत्याधुनिक नवीन प्रशिक्षण इमारत उभारण्यासाठी खादी व ग्रामोद्योग आयोग (KVIC) यांनी ₹11.83 कोटींचा निधी मंजूर केला आहे. सदर निधी खासदार विश्वेश्वर हेगडे-कागेरी यांच्या प्रयत्नाने मंजूर झाला असून, त्यांचे प्रयत्न मोलाचे ठरले आहेत अशी माहिती भारतीय जनता पार्टीचे जिल्हा उपाध्यक्ष प्रमोद कोचेरी यांनी दिली आहे.
माननीय खासदार श्री. विश्वेश्वर हेगडे कागेरी यांनी अलीकडेच संस्थेला भेट दिल्यानंतर हा विषय केंद्रीय सूक्ष्म, लघु व मध्यम उद्योग मंत्र्यांच्या निदर्शनास आणून दिला होता. पॉलिटेक्निक तसेच सिव्हिल इंजिनिअरिंग पदवीधरांसह विविध विद्यार्थ्यांना निवासी सुविधांसह प्रशिक्षण देऊन त्यांना रोजगाराभिमुख कौशल्ये प्रदान करण्यामध्ये, तसेच बेरोजगार युवक व कुंभार समाजाच्या सक्षमीकरणामध्ये CVPI महत्त्वाची भूमिका बजावत आहे. संस्थेची नामशेष होत चाललेली परंपरा जपण्यासाठी व प्रशिक्षणाचे वातावरण अधिक सक्षम करण्यासाठी नवीन इमारतीचे बांधकाम अत्यावश्यक असल्याचे खासदारांनी आपल्या निवेदनात ठामपणे नमूद केले होते.
या महत्त्वाकांक्षी प्रकल्पाच्या अंमलबजावणीसाठी KVIC यांनी राष्ट्रीय बांधकाम महामंडळ (NBCC) यांना ₹11.83 कोटींचा निधी मंजूर केला असून, कामास प्रारंभ करण्यासाठी प्राथमिक टप्प्यात बिनव्याजी आगाऊ रक्कम देखील जारी करण्यात आली आहे.
संस्थेच्या गरजांचा आढावा घेण्यासाठी KVIC व NBCC अधिकाऱ्यांच्या संयुक्त पथकाने प्रस्तावित बांधकाम स्थळाला भेट देऊन भौतिक व तांत्रिक परिस्थितीची सखोल तपासणी केली. या संयुक्त पाहणीदरम्यान झालेल्या चर्चेच्या आधारे, स्टील (Steel) व आरसीसी (RCC) या दोन्ही संरचनात्मक पर्यायांसाठी सुधारित तांत्रिक आराखडा व खर्चाचा अंदाज KVIC कडे सादर करण्याच्या सूचना NBCC ला देण्यात आल्या आहेत.
या प्रकल्पाच्या अंमलबजावणीमुळे कुंभारकाम व्यवसाय पुढे नेण्यास इच्छुक प्रशिक्षणार्थींना सुरक्षित, प्रेरणादायी व आधुनिक प्रशिक्षण केंद्र उपलब्ध होणार आहे. तसेच, भविष्यात स्किल इंडिया योजनेअंतर्गत विविध प्रशिक्षण कार्यक्रम राबविण्यासाठी हे केंद्र विकसित करण्यास ही योजना पूरक ठरणार आहे. कुंभारकाम व्यवसायाला चालना देणे आणि कौशल्यसंपन्न मनुष्यबळ निर्माण करण्याच्या दृष्टीने ही योजना अत्यंत उपयुक्त ठरणार आहे.
ಖಾನಾಪುರದ CVPI ಸಂಸ್ಥೆಗೆ ಬಹುದೊಡ್ಡ ಆರ್ಥಿಕ ಸಹಾಯ: ಹೊಸ ಕಟ್ಟಡ ನಿರ್ಮಾಣಕ್ಕೆ ₹11.83 ಕೋಟಿ ಮಂಜೂರು.
ಕುಂಬಾರಿಕೆ ಕ್ಷೇತ್ರದಲ್ಲಿ ಕೌಶಲ್ಯ ತರಬೇತಿಯನ್ನು ನೀಡುವ ಕರ್ನಾಟಕದ ಏಕೈಕ ಮತ್ತು ಐತಿಹಾಸಿಕ ಸಂಸ್ಥೆಯಾದ ಸೆಂಟ್ರಲ್ ವಿಲೇಜ್ ಪಾಟರಿ ಇನ್ಸ್ಟಿಟ್ಯೂಟ್ (CVPI), ಖಾನಾಪುರ ಈ ಕೇಂದ್ರಕ್ಕೆ ಸರ್ಕಾರದಿಂದ ಬಹುದೊಡ್ಡ ಆರ್ಥಿಕ ನೆರವು ಘೋಷಣೆಯಾಗಿದೆ. ಸುಮಾರು ಐದು ದಶಕಗಳಷ್ಟು ಹಳೆಯದಾದ ಈ ಸಂಸ್ಥೆಯ ಕಟ್ಟಡವು ಸಂಪೂರ್ಣ ದುಸ್ಥಿತಿಗೆ ತಲುಪಿದ್ದು, ತರಬೇತಿದಾರರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ಗಂಭೀರ ಅಪಾಯವನ್ನುಂಟು ಮಾಡುತ್ತಿರುವ ಹಿನ್ನೆಲೆಯಲ್ಲಿ, ಅದೇ ಸ್ಥಳದಲ್ಲಿ ಅತ್ಯಾಧುನಿಕ ಹೊಸ ತರಬೇತಿ ಕಟ್ಟಡವನ್ನು ನಿರ್ಮಿಸಲು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (KVIC)ವು ₹11.83 ಕೋಟಿ ಅನುದಾನವನ್ನು ಮಂಜೂರು ಮಾಡಿದೆ. ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಅವರ ಪ್ರಯತ್ನದಿಂದ ಈ ನಿಧಿಗೆ ಅನುಮೋದನೆ ದೊರೆತಿದ್ದು, ಅವರ ಪ್ರಯತ್ನಗಳು ಸಾರ್ಥಕವಾಗಿವೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಪ್ರಮೋದ್ ಕೊಚೇರಿ ತಿಳಿಸಿದ್ದಾರೆ.
ಮಾನ್ಯ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂಸ್ಥೆಗೆ ಇತ್ತೀಚೆಗೆ ಭೇಟಿ ನೀಡಿದ ನಂತರ ಈ ವಿಷಯವನ್ನು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರ ಗಮನಕ್ಕೆ ತಂದಿದ್ದರು. ಪಾಲಿಟೆಕ್ನಿಕ್ ಮತ್ತು ಸಿವಿಲ್ ಇಂಜಿನಿಯರಿಂಗ್ ಪದವೀಧರರಂತಹ ಹಲವು ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯಗಳೊಂದಿಗೆ ತರಬೇತಿ ನೀಡಿ, ಅವರಿಗೆ ಉದ್ಯೋಗ ಕೌಶಲ್ಯಗಳನ್ನು ಒದಗಿಸಿ, ನಿರುದ್ಯೋಗಿ ಯುವಕರು ಮತ್ತು ಕುಂಬಾರ ಸಮುದಾಯಕ್ಕೆ ಸಬಲೀಕರಣ ನೀಡುವಲ್ಲಿ CVPI ಪ್ರಮುಖ ಪಾತ್ರ ವಹಿಸುತ್ತಿದೆ. ಸಂಸ್ಥೆಯ ಅಳಿವಿನಂಚಿನಲ್ಲಿರುವ ಪರಂಪರೆಯನ್ನು ಕಾಪಾಡಲು ಹಾಗೂ ತರಬೇತಿ ಪರಿಸರವನ್ನು ಸುಧಾರಿಸಲು ಹೊಸ ಕಟ್ಟಡದ ನಿರ್ಮಾಣ ಅನಿವಾರ್ಯ ಎಂಬುದನ್ನು ಸಂಸದರು ಮನವಿಯಲ್ಲಿ ಒತ್ತಿ ಹೇಳಿದ್ದರು.
ಈ ಮಹತ್ವದ ಯೋಜನೆಯ ಅನುಷ್ಠಾನಕ್ಕಾಗಿ KVIC ಯು ರಾಷ್ಟ್ರೀಯ ಕಟ್ಟಡ ನಿರ್ಮಾಣ ನಿಗಮ (NBCC)ಕ್ಕೆ ₹11.83 ಕೋಟಿ ಮಂಜೂರಾತಿ ನೀಡಿದ್ದು, ಕಾಮಗಾರಿಗೆ ಚಾಲನೆ ನೀಡಲು ಆರಂಭಿಕ ಹಂತವಾಗಿ ಬಡ್ಡಿ-ರಹಿತ ಮುಂಗಡ ಹಣವನ್ನು ಸಹ ಬಿಡುಗಡೆ ಮಾಡಿದೆ.
ಸಂಸ್ಥೆಯ ಅಗತ್ಯತೆಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ, KVIC ಮತ್ತು NBCC ಅಧಿಕಾರಿಗಳನ್ನೊಳಗೊಂಡ ಜಂಟಿ ತಂಡವು ಪ್ರಸ್ತಾವಿತ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ, ಭೌತಿಕ ಮತ್ತು ತಾಂತ್ರಿಕ ಪರಿಸ್ಥಿತಿಗಳ ಸಮಗ್ರ ಪರಿಶೀಲನೆ ನಡೆಸಿದೆ. ಜಂಟಿ ಪರಿಶೀಲನೆಯಲ್ಲಿ ನಡೆದ ಚರ್ಚೆಗಳ ಆಧಾರದ ಮೇಲೆ, ಉಕ್ಕಿನ (Steel) ಮತ್ತು ಸಿಮೆಂಟ್ ಕಾಂಕ್ರೀಟ್ (RCC) ಎರಡೂ ರಚನಾತ್ಮಕ ವಿನ್ಯಾಸಗಳಿಗೆ ಸೂಕ್ತವಾದ ಪರಿಷ್ಕೃತ ತಾಂತ್ರಿಕ ಯೋಜನೆ ಮತ್ತು ವೆಚ್ಚದ ಅಂದಾಜುಗಳನ್ನು KVIC ಗೆ ಸಲ್ಲಿಸುವಂತೆ NBCC ಗೆ ಸೂಚಿಸಲಾಗಿದೆ. ಈ ಯೋಜನೆಯ ಅನುಷ್ಠಾನವು ಕುಂಬಾರಿಕೆ ವೃತ್ತಿಯನ್ನು ಮುಂದುವರಿಸಲು ಉತ್ಸುಕರಾಗಿರುವ ತರಬೇತಿದಾರರಿಗೆ ಸುರಕ್ಷಿತ, ಸ್ಪೂರ್ತಿದಾಯಕ ಮತ್ತು ಆಧುನಿಕ ತರಬೇತಿ ಕೇಂದ್ರವನ್ನು ಒದಗಿಸಲಿದೆ.
ಮುಂದಿನ ದಿನಗಳಲ್ಲಿ ಸ್ಕಿಲ್ ಇಂಡಿಯಾ ಯೋಜನೆ ಅಡಿಯಲ್ಲಿ ಬರುವಂತಹ ತರಬೇತಿಗಳನ್ನು ನೀಡುವ ಕೇಂದ್ರವಾಗಿ ವ್ಯವಸ್ಥಿತವಾಗಿ ರೂಪಿಸಲು ಇಂತಹ ಯೋಜನೆಗಳು ಪೂರಕವಾಗಲಿದೆ.
ಈ ಯೋಜನೆಯು ಕುಂಬಾರಿಕೆ ವೃತ್ತಿಗೆ ಉತ್ತೇಜನ ನೀಡಲು ಮತ್ತು ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ಸೃಷ್ಟಿಸಲು ಸಹಕಾರಿಯಾಗಿದೆ.

