खानापूरातील सुविधा क्लिनिकल लॅबोरटरीचा परवाना रद्द करण्याची नागरिकांची मागणी — प्रयोगशाळा मालकावर महिला कर्मचाऱ्याचा लैंगिक छळाचा गुन्हा दाखल!
खानापूर (ता. 13 नोव्हेंबर) : खानापूर शहरातील वर्दे कॉलनी, (बेळगाव-गोवा रोड) येथील सुविधा क्लिनिकल लॅबोरटरीचा मालक सुलतान मोमिनने आपल्या प्रयोगशाळेत काम करणाऱ्या महिला कर्मचाऱ्यावर लैंगिक छळ करण्याचा प्रयत्न केला असुन त्याच्यावर पोलिसांनी गुन्हा दाखल करून त्याची न्यायालयीन कोठडीत रवानगी करण्यात आली आहे. सदर क्लिनिकचा गैरवापर करण्यात येत आहे. त्यासाठी त्याचा परवाना तात्काळ रद्द करण्यात यावा, अशी मागणी खानापूर शहर व तालुक्यातील युवा वर्ग नागरिक व रहिवाशांनी खानापूर’चे तालुका आरोग्य अधिकाऱ्यांकडे लेखी निवेदनाद्वारे केली. निवेदनाचा स्वीकार तालुका आरोग्य अधिकारी महेश किवडसन्नावर यांनी केला. यावेळी सामाजिक कार्यकर्ते व हींदुत्ववादी युवा नेते व भाजपाचे युवा मोर्चा जिल्हा उपाध्यक्ष पंडित ओगले, भाजपा जिल्हा उपाध्यक्ष प्रमोद कोचेरी, तालुका उपाध्यक्ष एडवोकेट चेतन मनेरिकर, भाजपा जेष्ठ नेते संजय कुबल, शिवसेनेचे राज्य उपाध्यक्ष के पी पाटील, जॉर्डन गोन्सालवीस यांची क्लिनिकचा परवाना राज्य करण्याबाबतची भाषणे झाली.
सदर निवेदनात म्हटले आहे की, सुलतान अब्बालाल मोमिन नावाचा व्यक्ती वर्दे कॉलनीती सुविधा क्लिनिकल लॅबोरटरी नावाने, वर्दे पेट्रोल पंपासमोर, प्रयोगशाळा चालवत आहे. बुधवार दिनांक 12 नोव्हेंबर 2025 रोजी संध्याकाळी, या सुलतान मोमिनने आपल्या प्रयोगशाळेत काम करणाऱ्या महिला कर्मचाऱ्यावर लैंगिक छळ करण्याचा प्रयत्न केला.
या संदर्भात खानापूर पोलिस ठाण्यात गुन्हा दाखल करण्यात आला असून, भारतीय न्याय संहिता 2023 च्या कलम 75(1)(i) आणि कलम 126(2) अंतर्गत त्याच्यावर गुन्हा नोंदविण्यात आला आहे.
स्थानिक नागरिकांनी दिलेल्या माहितीनुसार, सुलतान मोमिन हा सवयीचा गुन्हेगार असून, यापूर्वीही त्याने आपल्या प्रयोगशाळेतील महिला कर्मचारी तसेच महिला ग्राहकांशी अश्लील वर्तन व छेडछाड करण्याचे प्रकार घडवून आणले आहेत. त्याच्याविरुद्ध अनेक तक्रारी आधीपासूनच ऐकिवात होत्या, व नागरिकांमध्ये चर्चेचा विषय ठरल्या आहेत.
निवेदनात असेही नमूद करण्यात आले आहे की, सुलतान मोमिनला क्लिनिकल लॅबोरटरी चालविण्याची आवश्यक पात्रता नाही, तसेच त्याने खोटे आणि बनावट कागदपत्रे सादर करून परवाना मिळवला आहे. त्यामुळे त्याने कर्नाटक प्रायव्हेट मेडिकल इस्टॅब्लिशमेंट्स कायदा, 2007 (KPME Act, 2007) च्या तरतुदींचे गंभीर उल्लंघन केले आहे.
म्हणून या गंभीर प्रकरणाची सखोल चौकशी करून सुविधा क्लिनिकल लॅबोरटरीचा परवाना रद्द करण्यात यावा आणि संबंधित आरोपीवर कायदेशीर कारवाई करण्यात यावी, अशी मागणी नागरिकांनी केली आहे.
या प्रकरणामुळे खानापूर परिसरात तीव्र संताप व्यक्त होत असून, आरोग्य विभागाने व पोलिस प्रशासनाने तातडीने कारवाई करावी, अशी सर्वसामान्य नागरिकांची मागणी होत आहे.
यावेळी भाजपाचे प्रधान कार्यदर्शक गुंडू तोपिनकट्टी, राजेंद्र रायका, प्रकाश निलजकर, मोहन पाटील, संजू गुरव, संजय मयेकर, पंकज कुट्रे, भूषण ठोंबरे, रवी पाटील, बबन आल्लोळकर, राज गावडे, प्रशांत काजुनेकर, संदीप शेंबले आदीजण उपस्थित होते.
ಖಾನಾಪುರನಲ್ಲಿರುವ ಸುವಿಧಾ ಕ್ಲಿನಿಕಲ್ ಲ್ಯಾಬೋರೇಟರಿಯ ಪರವಾನಗಿ ರದ್ದುಪಡಿಸಲು ನಾಗರಿಕರ ಬೇಡಿಕೆ — ಪ್ರಯೋಗಾಲಯ ಮಾಲೀಕರ ವಿರುದ್ಧ ಮಹಿಳಾ ನೌಕರಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ!
ಖಾನಾಪುರ (ತಾ. 13 ನವೆಂಬರ್) : ಖಾನಾಪುರ ನಗರದ ವರದೆ ಕಾಲೋನಿ (ಬೆಳಗಾವಿ–ಗೋವಾ ರಸ್ತೆ) ಪಕ್ಕದಲ್ಲಿರುವ ಸುವಿಧಾ ಕ್ಲಿನಿಕಲ್ ಲ್ಯಾಬೋರೇಟರಿಯ ಮಾಲೀಕ ಸುಲ್ತಾನ್ ಮೊಮಿನ್ ತನ್ನ ಪ್ರಯೋಗಾಲಯದಲ್ಲಿ ಕೆಲಸ ಮಾಡುವ ಮಹಿಳಾ ನೌಕರಳಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಆರೋಪ ಹಿನ್ನೆಲೆಯಲ್ಲಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ. ಪ್ರಯೋಗಾಲಯದ ದುರ್ಬಳಕೆ ನಡೆಯುತ್ತಿರುವುದರಿಂದ ಅದರ ಪರವಾನಗಿ ತಕ್ಷಣ ರದ್ದುಪಡಿಸಬೇಕೆಂದು ಖಾನಾಪುರ ನಗರ ಮತ್ತು ತಾಲ್ಲೂಕಿನ ಯುವಕರು ಹಾಗೂ ಸ್ಥಳೀಯ ನಾಗರಿಕರು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಲಿಖಿತ ವಿನಂತಿ ಸಲ್ಲಿಸಿದ್ದು. ಈ ಮನವಿಯನ್ನು ತಾಲ್ಲೂಕು ಆರೋಗ್ಯಾಧಿಕಾರಿ ಮಹೇಶ್ ಕಿವಡಸನ್ನವರ ಸ್ವೀಕರಿಸಿದರು.
ಈ ವೇಳೆ ಸಾಮಾಜಿಕ ಕಾರ್ಯಕರ್ತ ಮತ್ತು ಹಿಂದೂತ್ವವಾದಿ ಯುವ ನಾಯಕ, ಬಿಜೆಪಿ ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪಂಡಿತ ಓಗಲೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೊದ ಕೋಚೇರಿ, ತಾಲ್ಲೂಕು ಉಪಾಧ್ಯಕ್ಷ ಅಡ್ವೊ. ಚೇತನ್ ಮನೇರಿಕರ್, ಬಿಜೆಪಿ ಹಿರಿಯ ನಾಯಕ ಸಂಜಯ ಕುಬಲ್, ಶಿವಸೇನೆಯ ರಾಜ್ಯ ಉಪಾಧ್ಯಕ್ಷ ಕೆ.ಪಿ. ಪಾಟೀಲ ಮತ್ತು ಜಾರ್ಡನ್ ಗೊನ್ಸಾಲ್ವಿಸ್ ಇವರು ಕ್ಲಿನಿಕಿನ ಪರವಾನಗಿ ರದ್ದು ಪಡಿಸಬೇಕೆಂದು ಆಗ್ರಹಿಸಿದರು.
ಮನವಿಯಲ್ಲಿ — ಸುಲ್ತಾನ್ ಅಬ್ಬಾಲಾಲ ಮೊಮಿನ್ ಎಂಬ ವ್ಯಕ್ತಿ ವರದೆ ಕಾಲೋನಿಯಲ್ಲಿ ಸುವಿಧಾ ಕ್ಲಿನಿಕಲ್ ಲ್ಯಾಬೋರೇಟರಿ ಹೆಸರಿನಲ್ಲಿ, ವರದೆ ಪೆಟ್ರೋಲ್ ಬಂಕ್ ಎದುರು ಪ್ರಯೋಗಾಲಯವನ್ನು ನಡೆಸುತ್ತಿದ್ದಾನೆ. ಬುಧವಾರ, 12 ನವೆಂಬರ್ 2025 ರಂದು ಸಂಜೆ, ಈ ಸುಲ್ತಾನ್ ಮೊಮಿನ್ ತನ್ನ ಪ್ರಯೋಗಾಲಯದಲ್ಲಿ ಕೆಲಸ ಮಾಡುವ ಮಹಿಳಾ ನೌಕರಳಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಘಟನೆ ನಡೆದಿದೆ. ಈ ಸಂಬಂಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 75(1)(i) ಹಾಗೂ ಕಲಂ 126(2) ಅಡಿಯಲ್ಲಿ ಅವನ ವಿರುದ್ಧ ಪ್ರಕರಣ ದಾಖಲಾಗಿದೆ. ಸ್ಥಳೀಯರ ಮಾಹಿತಿಯ ಪ್ರಕಾರ ಸುಲ್ತಾನ್ ಮೊಮಿನ್ ಈ ಹಿಂದೆ ಕೂಡಾ ಹಿನ ಕೃತ್ಯ ಮಾಡಿ ಅಪರಾಧಿ ಆಗಿದ್ದು, ಹಿಂದೆಯೂ ತನ್ನ ಪ್ರಯೋಗಾಲಯದ ಮಹಿಳಾ ನೌಕರರು ಹಾಗೂ ಮಹಿಳಾ ಗ್ರಾಹಕರೊಂದಿಗೆ ಅಶ್ಲೀಲ ವರ್ತನೆ ಮತ್ತು ಕಿರುಕುಳದ ಘಟನೆಗಳನ್ನು ನಡೆಸಿದ್ದಾನೆ. ಅವನ ವಿರುದ್ಧ ಹಲವು ದೂರುಗಳು ಈ ಹಿಂದೆ ಕೇಳಿ ಬಂದಿದ್ದು, ಜನರಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದೆ.
ಮನವಿಯಲ್ಲಿ ಸ್ಪಷ್ಟನೆ ನೀಡುತ್ತಾ, ಸುಲ್ತಾನ್ ಮೊಮಿನ್ಗೆ ಕ್ಲಿನಿಕಲ್ ಲ್ಯಾಬೋರೇಟರಿ ನಡೆಸುವ ಅಗತ್ಯವಾದ ಅರ್ಹತೆ ಇಲ್ಲ, ಮತ್ತು ಅವನು ನಕಲಿ ಹಾಗೂ ಸುಳ್ಳು ದಾಖಲೆಗಳನ್ನು ಸಲ್ಲಿಸಿ ಪರವಾನಗಿ ಪಡೆದಿದ್ದಾನೆ. ಇದರಿಂದ ಅವನು ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟ್ಯಾಬ್ಲಿಶ್ಮೆಂಟ್ಸ್ ಕಾಯ್ದೆ, 2007 (KPME Act, 2007) ನ ನಿಯಮಗಳನ್ನು ಉಲ್ಲಂಘಿಸಿದ್ದಾನೆ.
ಆದ್ದರಿಂದ ಈ ಗಂಭೀರ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಸುವಿಧಾ ಕ್ಲಿನಿಕಲ್ ಲ್ಯಾಬೋರೇಟರಿಯ ಪರವಾನಗಿ ರದ್ದುಪಡಿಸಿ, ಸಂಬಂಧಿಸಿದ ಆರೋಪಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಈ ಘಟನೆಯಿಂದ ಖಾನಾಪುರ ಪ್ರದೇಶದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ ಮತ್ತು ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಆಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.
ಈ ವೇಳೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಗುಂಡು ಟೋಪಿನಕಟ್ಟಿ, ರಾಜೇಂದ್ರ ರೈಕಾ, ಪ್ರಕಾಶ ನಿಲಜಕರ್, ಮೋಹನ್ ಪಾಟೀಲ, ಸಂಜು ಗುರುವ್, ಸಂಜಯ ಮಯೆಕರ್, ಪಂಕಜ ಕುಟ್ರೆ, ಭೂಷಣ ಠೊಂಬರೆ, ರವಿ ಪಾಟೀಲ, ಬಬನ್ ಅಲ್ಲೋಳ್ಕರ್, ರಾಜು ಗಾವಡೆ, ಪ್ರಶಾಂತ್ ಕಾಜುನೆಕರ್, ಸಂದೀಪ ಶೇಂಬಳೆ ಮತ್ತಿತರರು ಹಾಜರಿದ್ದರು.



