चापोली (जांबोटी) येथे अखेर बीएसएनएल 4G नेटवर्क सुरू; ग्रामस्थांचा आनंद, मिठाई वाटून जल्लोष
खानापूर (ता. 16) : खानापूर तालुक्यातील अतिदुर्गम भाग म्हणून ओळखल्या जाणाऱ्या जांबोटी परिसरातील चापोली गावात अखेर बीएसएनएलच्या 4G नेटवर्क सेवेचा शुभारंभ झाला आहे. अनेक वर्षांच्या प्रतीक्षेनंतर मोबाईल नेटवर्क उपलब्ध झाल्याने ग्रामस्थांनी एकमेकांना मिठाई वाटून आनंद व्यक्त केला. व टॉवर मंजूर केलेले माजी खासदार अनंत कुमार हेगडे यांचे व यासाठी प्रयत्न केलेले भाजपाचे जिल्हा उपाध्यक्ष प्रमोद कोचेरी यांचे आभार मानले.
चापोली येथे सुमारे एक वर्षांपूर्वी बीएसएनएलचा टॉवर उभारण्यात आला होता, मात्र नेटवर्कची अडचण कायम होती. त्यामुळे गावातील नागरिकांना फोन कॉल किंवा इंटरनेट वापरण्यासाठी गावाबाहेर जावे लागत होते. या अडचणींमुळे विद्यार्थ्यांचे शिक्षण तसेच आरोग्य सेवांमध्येही मोठा अडथळा निर्माण झाला होता.
या समस्येवर तोडगा काढण्यासाठी गावातील युवा कार्यकर्ते प्रवीण वारिक यांनी सातत्याने बीएसएनएल अधिकाऱ्यांकडे पाठपुरावा केला. अखेर त्यांच्या प्रयत्नांना यश मिळाले आणि आज गुरुवार, दिनांक १६ ऑक्टोबरपासून बीएसएनएलचा 4G नेटवर्क टॉवर पूर्ण क्षमतेने कार्यरत झाला आहे.
यावेळी ग्रामस्थांनी नेटवर्क सुरू झाल्याचा आनंद साजरा करत माजी खासदार अनंतकुमार हेगडे, भाजप जिल्हा उपाध्यक्ष प्रमोद कोचेरी, आणि भाजपाचे माजी अध्यक्ष संजय कुबल यांचे आभार मानले.
प्रविण वारिक यांचे मनोगत :
“आम्ही अनेक वर्षांपासून नेटवर्कसाठी प्रयत्न करत होतो. आज BSNL मुळे आमच्या गावात रेंज आली आहे, याचा आम्हाला अत्यंत आनंद आहे. आता आमच्या गावातील मुले ऑनलाईन शिक्षण घेऊ शकतील. तसेच गावातील नागरिक डिजिटल सेवांचा लाभ घेऊ शकतील. या कार्यासाठी माजी खासदार अनंतकुमार हेगडे, पंतप्रधान नरेंद्र मोदी, आणि प्रमोद कोचेरी साहेब यांचे मनःपूर्वक आभार,” असे वारिक यांनी सांगितले.
बीएसएनएलच्या या उपक्रमामुळे चापोली गाव आता खऱ्या अर्थाने ‘डिजिटल इंडिया’शी जोडले गेले असून, ग्रामस्थांच्या जीवनात नवीन संवादयुगाचा प्रारंभ झाला आहे.
ಜಾಂಬೋಟಿ (ಚಾಪೋಲಿ) ಗ್ರಾಮದಲ್ಲಿ ಕೊನೆಗೂ ಬಿಎಸ್ಎನ್ಎಲ್ 4G ನೆಟ್ವರ್ಕ್ ಆರಂಭ; ಗ್ರಾಮಸ್ಥರ ಸಂಭ್ರಮ – ಸಿಹಿ ಹಂಚಿ ಹರ್ಷೋದ್ಗಾರ
ಖಾನಾಪುರ (ತಾ. 16): ಖಾನಾಪುರ ತಾಲ್ಲೂಕಿನ ಅತಿ ದುರ್ಗಮ ಪ್ರದೇಶವೆಂದು ಗುರುತಿಸಲ್ಪಟ್ಟ ಜಾಂಬೋಟಿ ಭಾಗದ ಚಾಪೋಲಿ ಗ್ರಾಮದಲ್ಲಿ ಕೊನೆಗೂ ಬಿಎಸ್ಎನ್ಎಲ್ 4G ಮೊಬೈಲ್ ನೆಟ್ವರ್ಕ್ ಸೇವೆ ಪ್ರಾರಂಭಗೊಂಡಿದೆ. ಹಲವು ವರ್ಷಗಳ ನಿರೀಕ್ಷೆಯ ಬಳಿಕ ಮೊಬೈಲ್ ಸಿಗ್ನಲ್ ಸಿಕ್ಕ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪರಸ್ಪರ ಸಿಹಿ ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಟವರ್ ಮಂಜೂರು ಮಾಡಿಸಿದ ಮಾಜಿ ಸಂಸದ ಅನಂತಕುಮಾರ ಹೆಗಡೆ, ವಿಶ್ವೇಶ್ವರ ಹೆಗಡೆ-ಕಾಗೇರಿ ಹಾಗೂ ಈ ಕಾರ್ಯಕ್ಕಾಗಿ ಪ್ರಯತ್ನ ಮಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೊದ್ ಕೊಚೇರಿ ಅವರಿಗೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದರು.
ಚಾಪೋಲಿ ಗ್ರಾಮದಲ್ಲಿ ಸುಮಾರು ಒಂದು ವರ್ಷ ಹಿಂದೆ ಬಿಎಸ್ಎನ್ಎಲ್ ಟವರ್ ಸ್ಥಾಪಿಸಲ್ಪಟ್ಟಿದ್ದರೂ, ತಾಂತ್ರಿಕ ತೊಂದರೆಗಳಿಂದಾಗಿ ನೆಟ್ವರ್ಕ್ ಲಭ್ಯವಿರಲಿಲ್ಲ. ಇದರ ಪರಿಣಾಮವಾಗಿ ಗ್ರಾಮದ ನಾಗರಿಕರು ಕರೆ ಮಾಡಲು ಅಥವಾ ಇಂಟರ್ನೆಟ್ ಬಳಸಲು ಗ್ರಾಮದಿಂದ ಹೊರಗೆ ಹೋಗಬೇಕಾಗುತ್ತಿತ್ತು. ಈ ಅಡಚಣೆಗಳಿಂದ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳಲ್ಲಿಯೂ ತೊಂದರೆ ಉಂಟಾಗುತ್ತಿತ್ತು.
ಈ ಸಮಸ್ಯೆಗೆ ಪರಿಹಾರ ಹುಡುಕುವ ಸಲುವಾಗಿ ಗ್ರಾಮದ ಯುವ ಕಾರ್ಯಕರ್ತ ಪ್ರವೀಣ ವಾರಿಕ ಅವರು ಬಿಎಸ್ಎನ್ಎಲ್ ಅಧಿಕಾರಿಗಳ ಬಳಿ ನಿರಂತರವಾಗಿ ಹೋರಾಟ ನಡೆಸಿದರು. ಕೊನೆಗೂ ಅವರ ಪ್ರಯತ್ನ ಫಲ ನೀಡಿದ್ದು, ಇಂದು ಗುರುವಾರ, ಅಕ್ಟೋಬರ್ 16ರಿಂದ ಬಿಎಸ್ಎನ್ಎಲ್ 4G ಟವರ್ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದೆ.
ಈ ಸಂದರ್ಭದಲ್ಲಿ ಗ್ರಾಮಸ್ಥರು ಹರ್ಷೋದ್ಗಾರ ವ್ಯಕ್ತಪಡಿಸಿ, ಮಾಜಿ ಸಂಸದ ಅನಂತಕುಮಾರ ಹೆಗಡೆ, ವಿಶ್ವೇಶ್ವರ ಹೆಗಡೆ-ಕಾಗೇರಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೊದ್ ಕೊಚೇರಿ ಹಾಗೂ ಮಾಜಿ ಜಿಲ್ಲಾ ಅಧ್ಯಕ್ಷ ಸಂಜಯ ಕುಬಲ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಪ್ರವೀಣ ವಾರಿಕ ಅವರ ಪ್ರಕಾರ:
“ನಾವು ಹಲವು ವರ್ಷಗಳಿಂದ ಗ್ರಾಮದಲ್ಲಿ ನೆಟ್ವರ್ಕ್ ಸಿಗುವಂತೆ ಪ್ರಯತ್ನ ಮಾಡುತ್ತಿದ್ದೆವು. ಇಂದು ಬಿಎಸ್ಎನ್ಎಲ್ನಿಂದ ನಮ್ಮ ಗ್ರಾಮಕ್ಕೆ ರೇಂಜ್ ಬಂದಿದೆ ಎಂಬುದು ನಮಗೆ ಅತ್ಯಂತ ಸಂತೋಷದ ವಿಷಯ. ಈಗ ನಮ್ಮ ಮಕ್ಕಳು ಆನ್ಲೈನ್ ಶಿಕ್ಷಣ ಪಡೆಯಬಹುದು ಮತ್ತು ನಾಗರಿಕರು ಡಿಜಿಟಲ್ ಸೇವೆಗಳನ್ನು ಉಪಯೋಗಿಸಬಹುದು. ಈ ಕಾರ್ಯಕ್ಕಾಗಿ ಮಾಜಿ ಸಂಸದ ಅನಂತಕುಮಾರ ಹೆಗಡೆ, ವಿಶ್ವೇಶ್ವರ ಹೆಗಡೆ-ಕಾಗೇರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಪ್ರಮೊದ್ ಕೊಚೇರಿ ಸಾರ್ ಅವರಿಗೆ ಹೃತೂರ್ವಕ ಧನ್ಯವಾದಗಳು,” ಎಂದು ವಾರಿಕ ಹೇಳಿದರು.
ಬಿಎಸ್ಎನ್ಎಲ್ನ ಈ ಮಹತ್ವದ ಹೆಜ್ಜೆಯಿಂದ ಚಾಪೋಲಿ ಗ್ರಾಮ ಈಗ ನಿಜವಾದ ಅರ್ಥದಲ್ಲಿ ‘ಡಿಜಿಟಲ್ ಇಂಡಿಯಾ’ಗೆ ಸಂಪರ್ಕಗೊಂಡಿದ್ದು, ಗ್ರಾಮಸ್ಥರ ಜೀವನದಲ್ಲಿ ಹೊಸ ಸಂವಹನ ಯುಗಕ್ಕೆ ಚಾಲನೆ ದೊರಕಿದೆ.

