श्री मलप्रभा सहकारी साखर कारखान्याच्या अध्यक्षपदी आमदार चन्नराज हट्टीहोळी यांची बिनविरोध निवड.
बेळगाव ; एम. के. हुबळी येथील प्रतिष्ठित श्री मलप्रभा सहकारी साखर कारखान्याच्या नूतन प्रशासकीय मंडळाच्या अध्यक्षपदी विधान परिषद सदस्य चन्नराज हट्टीहोळी यांची बिनविरोध निवड करण्यात आली आहे. तर श्री शिवनगौडा पाटील यांची उपाध्यक्षपदी निवड झाली असून, या दोघांनीही गुरुवारी उत्साहात पदभार स्वीकारला.
पदभार स्वीकारण्यापूर्वी, आमदार हट्टीहोळी यांनी आपल्या समर्थकांसह परिसरातील शक्तिदेवता श्री बंडेम्मा देवी तसेच विघ्नविनाशक श्री महागणपती यांचे विशेष पूजन करून आशीर्वाद घेतले. त्यानंतर कारखान्याच्या कार्यालयात झालेल्या सोहळ्यात त्यांनी अध्यक्षपदाची सूत्रे स्वीकारली.
या वेळी शेतकरी पुनरुत्थान पॅनेलचे सदस्य, आजूबाजूच्या गावांमधील शेतकरी बंधू, कारखान्यातील कामगार कर्मचारी, तसेच अनेक स्थानिक मान्यवरांची उपस्थिती होती. समारंभात सर्वांनी नव्या नेतृत्वाचे हार्दिक स्वागत करत आगामी कार्यकाळासाठी शुभेच्छा दिल्या.
आपल्या मनोगतात आमदार चन्नराज हट्टीहोळी म्हणाले की,
“श्री मलप्रभा सहकारी साखर कारखाना हा केवळ उद्योग नसून तो शेतकऱ्यांच्या आयुष्याशी निगडित आहे. कारखान्याचा सर्वांगीण विकास, शेतकऱ्यांना योग्य दर, आणि कामगारांच्या कल्याणासाठी आम्ही प्रामाणिकपणे काम करू. पारदर्शक व सहकारभावाने कारखान्याला नवे यश मिळवून देण्याचा आमचा निर्धार आहे.”
उपाध्यक्ष शिवनगौडा पाटील यांनीही सहकार्य, संघटन आणि प्रामाणिक प्रशासनाच्या माध्यमातून कारखान्याचा गौरव वाढवण्याचा संकल्प व्यक्त केला.
या निवडीमुळे एम. के. हुबळी परिसरातील सहकार क्षेत्रात आनंदाचे वातावरण असून, कारखान्याच्या प्रगतीसाठी नव्या नेतृत्वाकडून सकारात्मक बदलांच्या अपेक्षा व्यक्त केल्या जात आहेत.
ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿ ಶಾಸಕರಾದ ಚನ್ನರಾಜ ಹಟ್ಟಿಹೊಳ್ಳಿ ಅವಿರೋಧವಾಗಿ ಆಯ್ಕೆ
ಬೆಳಗಾವಿ : ಎಂ.ಕೆ. ಹುಬ್ಬಳ್ಳಿಯ ಪ್ರಸಿದ್ಧ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಹೊಸ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳ್ಳಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಾಗೆಯೇ ಶಿವನಗೌಡ ಪಾಟೀಲ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಇಬ್ಬರೂ ಗುರುವಾರದಂದು ಹೊಸ ಹುಮ್ಮಸ್ಸಿನಿಂದ ಹುದ್ದೆಯನ್ನು ಅಲಂಕರಿಸಿದ್ದರು.
ಹುದ್ದೆ ಸ್ವೀಕರಿಸುವ ಮೊದಲು ಶಾಸಕರಾದ ಹಟ್ಟಿಹೊಳ್ಳಿ ಅವರು ತಮ್ಮ ಬೆಂಬಲಿಗರೊಂದಿಗೆ ಸ್ಥಳೀಯ ಶಕ್ತಿದೇವತೆ ಶ್ರೀ ಬಂಡೆಮ್ಮಾ ದೇವಿ ಹಾಗೂ ವಿಘ್ನವಿನಾಶಕ ಶ್ರೀ ಮಹಾಗಣಪತಿ ದೇವರ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ನಂತರ ಕಾರ್ಖಾನೆಯ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅವರು ಅಧ್ಯಕ್ಷ ಸ್ಥಾನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ರೈತರ ಪುನರುತ್ಥಾನ ಪ್ಯಾನಲ್ನ ಸದಸ್ಯರು, ಸುತ್ತಮುತ್ತಲಿನ ರೈತ ಬಂಧುಗಳು, ಕಾರ್ಖಾನೆಯ ಕಾರ್ಮಿಕ ಸಿಬ್ಬಂದಿ ಹಾಗೂ ಅನೇಕ ಸ್ಥಳೀಯ ಗಣ್ಯರು ಹಾಜರಿದ್ದರು. ಎಲ್ಲರೂ ಹೊಸ ನೇತೃತ್ವಕ್ಕೆ ಹಾರ್ದಿಕ ಅಭಿನಂದನೆ ನೀಡಿ ಮುಂದಿನ ಕಾರ್ಯಕಾಲಕ್ಕೆ ಶುಭ ಹಾರೈಸಿದರು.
ತಮ್ಮ ಮನೋಗತ ವ್ಯಕ್ತಪಡಿಸುತ್ತಾ ಶಾಸಕರಾದ ಚನ್ನರಾಜ ಹಟ್ಟಿಹೊಳಿ ಹೇಳಿದರು: “ಶ್ರೀ ಮಲಪ್ರಭಾ ಸಕ್ಕರೆ ಕಾರ್ಖಾನೆ ಕೇವಲ ಒಂದು ಉದ್ಯಮವಲ್ಲ, ಇದು ರೈತರ ಜೀವನದೊಂದಿಗೆ ನಂಟಿರುವ ಸಂಸ್ಥೆ. ಕಾರ್ಖಾನೆಯ ಸಮಗ್ರ ಅಭಿವೃದ್ಧಿ, ರೈತರಿಗೆ ನ್ಯಾಯಸಮ್ಮತ ಬೆಲೆ ಹಾಗೂ ಕಾರ್ಮಿಕರ ಕಲ್ಯಾಣಕ್ಕಾಗಿ ನಾವು ಪ್ರಾಮಾಣಿಕವಾಗಿ ಕೆಲಸ ಮಾಡುವೆವು. ಪಾರದರ್ಶಕತೆ ಮತ್ತು ಸಹಕಾರಭಾವದಿಂದ ಕಾರ್ಖಾನೆಯನ್ನು ಹೊಸ ಯಶಸ್ಸಿನ ಹಾದಿಯತ್ತ ಕೊಂಡೊಯ್ಯುವ ದೃಢ ಸಂಕಲ್ಪ ನಮ್ಮದು,” ಎಂದು ಹೇಳಿದರು.
ಉಪಾಧ್ಯಕ್ಷರಾದ ಶಿವನಗೌಡ ಪಾಟೀಲ ಅವರು ಸಹಕಾರ, ಸಂಘಟನೆ ಹಾಗೂ ಪ್ರಾಮಾಣಿಕ ಆಡಳಿತದ ಮೂಲಕ ಕಾರ್ಖಾನೆಯ ಗೌರವವನ್ನು ಮತ್ತಷ್ಟು ಎತ್ತುವ ಸಂಕಲ್ಪ ವ್ಯಕ್ತಪಡಿಸಿದರು.
ಈ ಅವಿರೋಧ ಆಯ್ಕೆಯಿಂದ ಎಂ.ಕೆ. ಹುಬ್ಬಳ್ಳಿ ಭಾಗದ ಸಹಕಾರ ಕ್ಷೇತ್ರದಲ್ಲಿ ಸಂತೋಷದ ವಾತಾವರಣ ನಿರ್ಮಾಣಗೊಂಡಿದ್ದು, ಕಾರ್ಖಾನೆಯ ಪ್ರಗತಿಗೆ ಹೊಸ ನೇತೃತ್ವದಿಂದ ಸಕಾರಾತ್ಮಕ ಬದಲಾವಣೆಗಳ ನಿರೀಕ್ಷೆ ವ್ಯಕ್ತವಾಗುತ್ತಿದೆ.

