सीसी रस्ता ठरला व्यापाऱ्यांसाठी डोकेदुखी; सार्वजनिक बांधकाम विभागाच्या दुर्लक्षामुळे लाखोंचे नुकसान, आमदारांनीही तत्काळ हस्तक्षेप करावा!
खानापूर : प्रतिनिधी
खानापूर परिसरात सार्वजनिक बांधकाम विभागामार्फत करण्यात आलेल्या मराठा मंडळ डिग्री कॉलेज ते करंबळ कत्री पर्यंत खानापूर शहरांतर्गत नवीन बनविण्यात आलेल्या सिमेंट काँक्रीट (सीसी) रस्त्यामुळे व्यापाऱ्यांवर मोठे आर्थिक संकट ओढवले आहे. रस्त्याची उंची वाढविण्यात आल्याने पावसाचे पाणी थेट दुकानांमध्ये शिरत असून, संबंधित अधिकाऱ्यांच्या हलगर्जीपणामुळे व्यापाऱ्यांना मोठ्या प्रमाणात नुकसान सहन करावे लागत आहे.
गेल्या दोन दिवसांपासून सुरू असलेल्या मुसळधार पावसामुळे रूमेवाडी क्रॉस परिसरातील परिस्थिती गंभीर बनली. येथील किराणा व्यापारी विठ्ठल हलगेकर यांच्या दुकानात रस्त्यावरील संपूर्ण पावसाचे पाणी घुसल्याने साखर, जोंधळा, तूरडाळ, साबणाचे बॉक्स तसेच इतर किराणा माल पूर्णपणे भिजून खराब झाला. या घटनेत त्यांचे सुमारे ₹50 ते ₹60 हजारांचे नुकसान झाल्याचा अंदाज आहे.
याच ठिकाणी असलेले मिठाई व्यावसायिक बाळकृष्ण हलगेकर यांच्या दुकानातही पाणी शिरल्याने मिठाईसह इतर साहित्याचे मोठे नुकसान झाले असून त्यांना ₹20 ते ₹25 हजारांचा फटका बसला आहे.
व्यापाऱ्यांनी यापूर्वीच रस्ता उंच झाल्यामुळे पाण्याचा निचरा होत नसल्याची तक्रार सार्वजनिक बांधकाम विभागाच्या अधिकाऱ्यांकडे तसेच खानापूरचे आमदार विठ्ठल हलगेकर यांच्याकडे केली होती. मात्र या गंभीर समस्येकडे वेळेत लक्ष न दिल्यामुळे अखेर व्यापाऱ्यांवर आर्थिक संकट कोसळले. त्यामुळे “या नुकसानाला जबाबदार कोण?” असा संतप्त सवाल व्यापारी वर्गातून उपस्थित केला जात आहे.
स्थानिकांच्या म्हणण्यानुसार, या परिसरातील गटारावर अनधिकृतपणे खोके उभारण्यात आल्याने गटार पूर्णपणे बुजले आहे. त्यामुळे पावसाचे पाणी वाहून जाण्याऐवजी थेट दुकानांमध्ये शिरत आहे. संबंधित यंत्रणांनी याकडे सातत्याने दुर्लक्ष केल्याचा आरोपही नागरिकांनी केला आहे.
या पार्श्वभूमीवर सार्वजनिक बांधकाम विभागाचे असिस्टंट एक्झिक्युटिव्ह इंजिनियर संजय गस्ती आणि आमदार विठ्ठल हलगेकर यांनी तातडीने घटनास्थळी भेट देऊन परिस्थितीची पाहणी करावी, नुकसानग्रस्त व्यापाऱ्यांना आर्थिक भरपाई मिळवून द्यावी तसेच कायमस्वरूपी गटाराची व्यवस्था करून पाण्याचा निचरा सुरळीत करण्यासाठी तात्काळ उपाययोजना कराव्यात, अशी जोरदार मागणी नागरिक व व्यापारी वर्गातून होत आहे.
याशिवाय करंबळ ग्रामपंचायतीनेही या प्रश्नाकडे गांभीर्याने लक्ष देऊन अनधिकृत अतिक्रमणे हटवून गटाराची दुरुस्ती आणि नव्याने निचऱ्याची व्यवस्था करण्यासाठी तातडीने पावले उचलावीत, अशी मागणी स्थानिकांनी केली आहे.
ನೂತನವಾಗಿ ನಿರ್ಮಿಸಲಾಗಿರುವ ಸಿಸಿ ರಸ್ತೆ ವ್ಯಾಪಾರಿಗಳಿಗೆ ತಲೆನೋವು; ಸಾರ್ವಜನಿಕ ಕಾಮಗಾರಿಗಳ ಇಲಾಖೆಯ ನಿರ್ಲಕ್ಷ್ಯದಿಂದ ಲಕ್ಷಾಂತರ ರೂಪಾಯಿ ನಷ್ಟ, ಶಾಸಕರು ಕೂಡಲೇ ಮಧ್ಯಪ್ರವೇಶಿಸಲು ಆಗ್ರಹ!
ಖಾನಾಪುರ : ಪ್ರತಿನಿಧಿ
ಖಾನಾಪುರ ನಗರದಲ್ಲಿ ಸಾರ್ವಜನಿಕ ಕಾಮಗಾರಿಗಳ ಇಲಾಖೆಯ ವತಿಯಿಂದ ಮರಾಠಾ ಮಂಡಳ ಡಿಗ್ರಿ ಕಾಲೇಜಿನಿಂದ ಕರಂಬಳ ಕತ್ರಿವರೆಗೆ ಖಾನಾಪುರ ಪಟ್ಟಣದ ಒಳಭಾಗದಲ್ಲಿ ನಿರ್ಮಿಸಲಾದ ಹೊಸ ಸಿಮೆಂಟ್ ಕಾಂಕ್ರೀಟ್ (ಸಿಸಿ) ರಸ್ತೆಯಿಂದ ವ್ಯಾಪಾರಿಗಳು ಭಾರೀ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಸ್ತೆಯ ಎತ್ತರ ಹೆಚ್ಚಿಸಿರುವ ಕಾರಣ ಮಳೆನೀರು ಹರಿದು ಹೋಗದೇ ನೇರವಾಗಿ ಅಂಗಡಿಗಳೊಳಗೆ ನುಗ್ಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯದಿಂದ ವ್ಯಾಪಾರಿಗಳಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ರೂಮೇವಾಡಿ ಕ್ರಾಸ್ ಪ್ರದೇಶದ ಪರಿಸ್ಥಿತಿ ಗಂಭೀರವಾಗಿದೆ. ಇಲ್ಲಿನ ಕಿರಾಣಿ ವ್ಯಾಪಾರಿ ವಿಠ್ಠಲ ಹಲಗೇಕರ ಅವರ ಅಂಗಡಿಗೆ ರಸ್ತೆಯ ಮೇಲಿನ ಸಂಪೂರ್ಣ ಮಳೆನೀರು ನುಗ್ಗಿದ ಪರಿಣಾಮ ಸಕ್ಕರೆ, ಜೋಳ, ತೊಗರಿಬೇಳೆ, ಸಾಬೂನು ಪೆಟ್ಟಿಗೆಗಳು ಸೇರಿದಂತೆ ಇತರೆ ಕಿರಾಣಿ ಸಾಮಗ್ರಿಗಳು ಸಂಪೂರ್ಣವಾಗಿ ನೆನೆದು ಹಾಳಾಗಿದ್ದು. ಈ ಘಟನೆಯಲ್ಲಿ ಅವರಿಗೆ ಸುಮಾರು ₹50 ರಿಂದ ₹60 ಸಾವಿರದವರೆಗೆ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಇದೇ ಸ್ಥಳದಲ್ಲಿರುವ ಸಿಹಿತಿಂಡಿ ವ್ಯಾಪಾರಿ ಬಾಳಕೃಷ್ಣ ಹಲಗೇಕರ ಅವರ ಅಂಗಡಿಗೂ ನೀರು ನುಗ್ಗಿದ ಪರಿಣಾಮ ಸಿಹಿತಿಂಡಿಗಳು ಹಾಗೂ ಇತರೆ ಸಾಮಗ್ರಿಗಳು ಹಾಳಾಗಿದ್ದು, ಅವರಿಗೆ ಸುಮಾರು ₹20 ರಿಂದ ₹25 ಸಾವಿರದಷ್ಟು ನಷ್ಟ ಉಂಟಾಗಿದೆ.
ರಸ್ತೆಯ ಎತ್ತರ ಹೆಚ್ಚಿರುವುದರಿಂದ ಮಳೆನೀರು ಸರಿಯಾಗಿ ಹರಿದು ಹೋಗುತ್ತಿಲ್ಲ ಎಂದು ವ್ಯಾಪಾರಿಗಳು ಈ ಹಿಂದೆಯೇ ಸಾರ್ವಜನಿಕ ಕಾಮಗಾರಿಗಳ ಇಲಾಖೆಯ ಅಧಿಕಾರಿಗಳು ಹಾಗೂ ಖಾನಾಪುರದ ಶಾಸಕ ವಿಠ್ಠಲ ಹಲಗೇಕರ ಅವರ ಗಮನಕ್ಕೆ ತಂದಿದ್ದರು. ಆದರೆ ಈ ಗಂಭೀರ ಸಮಸ್ಯೆಯನ್ನು ಸಮಯಕ್ಕೆ ಸರಿಯಾಗಿ ಪರಿಗಣಿಸದ ಕಾರಣ ಅಂತಿಮವಾಗಿ ವ್ಯಾಪಾರಿಗಳ ಮೇಲೆ ಆರ್ಥಿಕ ಸಂಕಷ್ಟ ಉಂಟಾಗಿದೆ. ಇದರಿಂದ “ಈ ನಷ್ಟಕ್ಕೆ ಹೊಣೆ ಯಾರು?” ಎಂಬ ಆಕ್ರೋಶಭರಿತ ಪ್ರಶ್ನೆಯನ್ನು ವ್ಯಾಪಾರಿ ವರ್ಗ ಎತ್ತಿದೆ.
ಸ್ಥಳೀಯರ ಹೇಳಿಕೆಯಂತೆ, ಈ ಪ್ರದೇಶದಲ್ಲಿರುವ ಚರಂಡಿಯ ಮೇಲೆ ಅನಧಿಕೃತವಾಗಿ ಅಂಗಡಿ ಶೆಡ್ಗಳು ಮತ್ತು ಬಾಕ್ಸ್ಗಳನ್ನು ನಿರ್ಮಿಸಿರುವುದರಿಂದ ಚರಂಡಿ ಸಂಪೂರ್ಣವಾಗಿ ಮುಚ್ಚಿಕೊಂಡಿದೆ. ಇದರಿಂದ ಮಳೆನೀರು ಸರಾಗವಾಗಿ ಹರಿದು ಹೋಗುವ ಬದಲು ನೇರವಾಗಿ ಅಂಗಡಿಗಳೊಳಗೆ ನುಗ್ಗುತ್ತಿದೆ. ಸಂಬಂಧಿತ ಇಲಾಖೆಗಳು ಈ ಸಮಸ್ಯೆಯನ್ನು ನಿರಂತರವಾಗಿ ನಿರ್ಲಕ್ಷ್ಯ ಮಾಡುತ್ತಿವೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಕಾಮಗಾರಿಗಳ ಇಲಾಖೆಯ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಸಂಜಯ ಗಸ್ತಿ ಹಾಗೂ ಶಾಸಕ ವಿಠ್ಠಲ ಹಲಗೇಕರ ಅವರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಬೇಕು. ನಷ್ಟಕ್ಕೊಳಗಾದ ವ್ಯಾಪಾರಿಗಳಿಗೆ ಸೂಕ್ತ ಆರ್ಥಿಕ ಪರಿಹಾರ ಒದಗಿಸಬೇಕು ಹಾಗೂ ಶಾಶ್ವತ ಚರಂಡಿ ವ್ಯವಸ್ಥೆ ನಿರ್ಮಿಸಿ ಮಳೆನೀರಿನ ಸರಿಯಾದ ಹರಿವಿಗೆ ಅಗತ್ಯ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ನಾಗರಿಕರು ಹಾಗೂ ವ್ಯಾಪಾರಿಗಳು ಆಗ್ರಹಿಸಿದ್ದಾರೆ.
ಇದಲ್ಲದೆ ಕರಂಬಳ ಗ್ರಾಮ ಪಂಚಾಯಿತಿಯೂ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಅನಧಿಕೃತ ಅತಿಕ್ರಮಣಗಳನ್ನು ತೆರವುಗೊಳಿಸಿ, ಚರಂಡಿಯ ದುರಸ್ತಿ ಹಾಗೂ ನೀರು ಹರಿವಿನ ವ್ಯವಸ್ಥೆ ಕಲ್ಪಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.



