
केवळ मोदीच देशाचे भविष्य उज्ज्वल करू शकतात : विश्वेश्वर हेगडे-कागेरी! हल्याळ येथे प्रचार सभा.
हल्याळ : पंतप्रधान नरेंद्र मोदीच देशाचे भविष्य उज्वल करू शकतात. आता पुढे होणारी ग्राम पंचायत निवडणूक नसुन. तर देशाचे भवितव्य ठरवणारी लोकसभा निवडणूक आहे. त्यासाठी सर्वांनी विचार करून मतदान करणे गरजेचे आहे. असे, उत्तर कन्नडा लोकसभा मतदारसंघातील भाजपचे उमेदवार विश्वेश्वर हेगडे- कागेरी यांनी हल्याळ येथील भाजपच्या प्रचार सभेत बोलताना त्यांनी वरील उद्गार काढले.

रविवारी हल्याळ येथील भाजपाच्या प्रचार सभेला संबोधित करताना, ते पुढे म्हणाले की, काँग्रेस पक्ष या देशाचे नेतृत्व करू शकत नाही. त्यांच्या 50 जागा सुद्धा येणे कठीण आहे. कर्नाटक राज्यात काँग्रेस सत्तेवर आल्यापासून बेकायदेशीर व गुन्हेगारी कारवायांमध्ये वाढ झाली आहे. नेहा हिरेमठच्या हत्येसारख्या दुर्घटनेमुळे, सरकार आपल्या संरक्षणासाठी आले आहे, असे गुन्हेगारी वृत्ती बाळगणाऱ्यां लोकांना वाटत आहे. याशिवाय राज्यात गेल्या 24 तासात 10 खून झाले आहेत. असे असताना राज्यातील माणसांच्या जीवाची हमी कोण देणार, असा सवाल त्यांनी केला.
आता राज्यात जय श्रीराम म्हणता येणार नाही. हनुमान ध्वज फडकवता येणार नाही. हनुमान चालीसा म्हणता येणार नाही. मग आपली परिस्थिती पुढे काय होणार आहे? कागेरी म्हणाले की, वरील कारणाचा गांभीर्याने विचार करून मतदानात सहभागी होऊन, लोकांचे जीवन आणि सनातन धर्म टिकवायचा असेल, तर, कमळाच्या फुलाला मतदान केले पाहिजे.
सर्वांनी भाजपच्या विजयासाठी, बूथ स्तरावर आघाडी देण्याचा प्रयत्न केला पाहिजे. मेरा बूथ सबसे मजबूत बूथ, या प्रमाणे बूथवर आघाडी घेतली तर विजय आपलाच आहे. त्यासाठी येत्या 15 दिवसात, बूथमधील प्रत्येक घराघरात संपर्क साधून संघटन मजबूत करून, विजयात हातभार लावावा. पेज प्रमुख सर्व पदाधिकाऱ्यांनी याबाबत प्रयत्न करावेत, अल्पसंख्याकांनी एकतर्फी मतदान करू नये, असे ते म्हणाले. काँग्रेस तुम्हाला मुख्य प्रवाहात येऊ देत नाही. त्यांना उज्वला गॅस, आयुष्मान योजना, किसान सन्मान योजना, शौचालय, तांदूळही मोदी सरकार देत आहे. भाजपने सर्वांचे भले केले आहे. मग तुम्ही एकाच पक्षाला मतदान का करता? असा सवाल त्यांनी यावेळी केला.
आपले मत विकले जाऊ नये याची खबरदारी घेऊन. तसे न करता जबाबदारीने मतदानात सहभागी व्हा आणि कमळाच्या फुलाला सर्वाधिक मतदान करा. देश सुरक्षित ठेवण्यासाठी मोदींना पंतप्रधान व्हायलाच हवे, असे ते म्हणाले. हल्याळ तालुक्यातील विविध भागात रविवारी त्यांनी आपल्या प्रचार सभा घेतल्या, त्यावेळी उपस्थित लोकांनी त्यांना भरघोस पाठिंबा व्यक्त केला.
यावेळी माजी आमदार सुनील हेगडे, माजी विधान परिषद सदस्य श्रीकांत एल घोटणेकर, आदींसह भाजपाचे व जेडीएसचे नेतेमंडळी व पदाधिकारी उपस्थित होते.
ದೇಶದ ಭವಿಷ್ಯ ಉಜ್ವಲವಾಗಿರಲು ಮೋದಿಯಿಂದ ಮಾತ್ರ ಸಾಧ್ಯ : ಕಾಗೇರಿ
ಹಳಿಯಾಳ ತಾಲೂಕಿನ ವಿವಿಧೆಡೆ ಪ್ರಚಾರ ನಡೆಸಿದ ಬಿಜೆಪಿ ಅಭ್ಯರ್ಥಿ ಅಭಿಮತ
ಹಳಿಯಾಳ : ಈಗ ಬರುವುದು ಪಂಚಾಯತದ ಚುನಾವಣೆ ಅಲ್ಲ. ದೇಶದ ಭವಿಷ್ಯ ನಿರ್ಧಾರ ಮಾಡುವ ಲೋಕಸಭಾ ಚುನಾವಣೆ. ಕಾರಣ ದೇಶದ ಮುಂದಿನ ಭವಿಷ್ಯ ಉಜ್ವಲ ಆಗಿರಲು ನರೇಂದ್ತ ಮೋದಿ ಅವರಿಂದ ಮಾತ್ರ ಸಾಧ್ಯ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಹಳಿಯಾಳದಲ್ಲಿ ಭಾನುವಾರ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಈ ದೇಶಕ್ಕೆ ನೇತೃತ್ವ ಕೊಡಲು ಸಾಧ್ಯವಿಲ್ಲ. ಅವರಿಗೆ ಮತ ನೀಡಿದಲ್ಲಿ ೫೦ ಸೀಟೂ ಬರದವರಿಗೆ ಮತ ನೀಡಿದಂತಾಗುತ್ತದೆ. ಆದ್ದರಿಂದ ಬಿಜೆಪಿ ೪೦೦ ಕ್ಕೂ ಹೆಚ್ಚು ಸ್ಥಾನ ಪಡೆಯಲು ನಾವು ಕಾರಣ ಆಗಬೇಕು ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ರಾಜ್ಯದಲ್ಲಿ ದ್ವೇಷದ ಚಟುವಟಿಕೆಗಳು ಹೆಚ್ಚಾಗಿದೆ. ಅಪರಾಧಿಕರಣದ ಮನೋಭಾವ ಇದ್ದವರು ತಮ್ಮ ರಕ್ಷಣೆ ಮಾಡುವ ಸರ್ಕಾರ ಬಂದಿದೆ ಅಂದುಕೊಳ್ಳುತ್ತಾರೆ.ಕಾರಣ ನೇಹಾ ಹಿರೇಮಠ ಅವರ ಕೊಲೆಯಂತಹ ದುರ್ಘಟನೆ ನಡೆದಿದೆ. ಜೊತೆಗೆ ಕಳೆದ ೨೪ ಗಂಟೆಯಲ್ಲಿ ರಾಜ್ಯದಲ್ಲಿ ೧೦ ಕೊಲೆಗಳಾಗಿದೆ. ಹೀಗಾದಲ್ಲಿ ರಾಜ್ಯದಲ್ಲಿ ಮನುಷ್ಯರ ಜೀವಕ್ಕೆ ಗ್ಯಾರಂಟಿ ಕೊಡವವರು ಯಾರು ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಈಗ ಜೈ ಶ್ರೀರಾಮ್ ಹೇಳುವಂತಿಲ್ಲ, ಹನುಮ ಧ್ವಜ ಹಾರಿಸುವಂತಿಲ್ಲ, ಹಮಮ ಚಾಲೀಸ ಹೇಳುವಂತಿಲ್ಲ. ಹೀಗಾದಲ್ಲಿ ನಮ್ಮ ಸ್ಥಿತಿ ಮುಂದೆ ಏನು ? ಕಾರಣ ಗಂಭೀರವಾಗಿ ಯೋಚಿಸಿ ಮತದಾನ ಪಾಲ್ಗೊಳ್ಳಬೇಕು ಎಂದ ಕಾಗೇರಿ, ಜನರ ಜೀವಕ್ಕೆ, ಸತಾನದ ಧರ್ಮಕ್ಕೆ ಉಳಿಗಾಲ ಇರಬೇಕು ಎಂದಾದಲ್ಲಿ ಕಮಲದ ಹೂವಿಗೆ ಮತ ನೀಡಬೇಕು. ಆ ಮೂಲಕ ನನ್ನನ್ನು ಸಂಸತ್ ಪ್ರವೇಶಿಸಲು ಗೆಲ್ಲಿಸುವ ಭರವಸೆಯಿದೆ ಎಂದರು.
ಬಿಜೆಪಿಯ ಗೆಲುವಿಗೆ ಬೂತ್ ಮಟ್ಟದಲ್ಲಿ ಲೀಡ್ ಕೊಡಿಸಲು ಪ್ರಯತ್ನಿಸಬೇಕು. ಮೆರಾ ಬೂತ್ ಸಬ್ಸೇ ಮಜಬೂತ್ ಎಂಬಂತೆ ಬೂತ್ ನಲ್ಲಿ ಲೀಡ್ ಬಂದಲ್ಲಿ ಗೆಲುವು ಸಾಧ್ಯ. ಹಾಗಾಗಿ ಮುಂದಿನ ೧೫ ದಿನ ಬೂತ್ ನಲ್ಲಿ ಪ್ರತಿ ಮನೆ ಮನೆ ಸಂಪರ್ಕ ಮಾಡಿ, ಸಂಘಟನೆ ಗಟ್ಟಿ ಮಾಡಿ ಗೆಲುವಿಗೆ ನಮ್ಮ ಕೊಡುಗೆ ನೀಡಬೇಕು. ಪೇಜ್ ಪ್ರಮುಖರು ಸೇರಿದಂಗೆ ಎಲ್ಲಾ ಪದಾಧಿಕಾರಿಗಳು ಈ ಬಗ್ಗೆ ಪ್ರಯತ್ನ ಮಾಡಬೇಕು ಎಂದ ಅವರು, ಅಲ್ಪ ಸಂಖ್ಯಾತರು ಒನ್ ಸೈಡೆಡ್ ಮತ ಹಾಕಬಾರದು. ಕಾಂಗ್ರೆಸ್ ನಿಮ್ಮನ್ನು ಮುಖ್ಯ ವಾಹಿನಿಗೆ ಬರಲು ಬಿಡುತ್ತಿಲ್ಲ. ಅವರಿಗೂ ಸಹ ಉಜ್ವಲ ಗ್ಯಾಸ್, ಆಯುಷ್ಮಾನ್ ಯೋಜನೆ, ಕಿಸಾಮ್ ಸಮ್ಮಾನ್ ಯೋಜನೆ, ಶೌಚಾಲಯ, ಅಕ್ಕಿ ಎಲ್ಲವೂ ಸಿಗುತ್ತಿದೆ. ಮತ್ಯಾಕೆ ಒಂದೇ ಕಡೆ ಮತ ಚಲಾಯಿಸುವುದು ಎಂದು ಪ್ರಶ್ನಿಸಿದರು. ಬಿಜೆಪಿ ಎಲ್ಲರಿಗೂ ಒಳ್ಳೆಯದನ್ನು ಮಾಡಿದೆ. ಕಾರಣ ಅದಕ್ಕೆ ಬೆಂಬಲ ನೀಡಬೇಕು ಎಂದರು.
ನಾವು ಸಂತೆಯಲ್ಲಿ ಸಿಗುವ ತರಕಾರಿಯಲ್ಲ. ಕಾರಣ ನಮ್ಮ ಮತವನ್ನು ಮಾರಾಟ ಮಾಡಿಕೊಳ್ಳಬಾರದು. ಹಾಗೆ ಮಾಡದೇ ಜವಾಬ್ದಾರಿಯುತವಾಗಿ ಮತದಾನದಲ್ಲಿ ಪಾಲ್ಗೊಂಡು ಅತಿ ಹೆಚ್ಚಿನ ಮತವನ್ನು ಕಮಲದ ಹೂವಿಗೆ ಕೊಡಬೇಕು. ದೇಶದ ಸುರಕ್ಷಿತವಾಗಿ ಇರಲು ಮೋದಿ ಪ್ರಧಾನಿ ಆಗಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ, ಮಾಜಿ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ್ ಹಾಗೂ ಇತರ ಪದಾಧಿಕಾರಿಗಳು ಇದ್ದರು.
ಅಲ್ಪ ಸಂಖ್ಯಾತರೂ ಬಿಜೆಪಿಗೆ ಬೆಂಬಲ ಕೊಡಬೇಕು. ಅವರು ಒಂದೇ ಕಡೆ ಮತ ಹಾಕಿದಲ್ಲಿ ನಾವೂ ಮಾಡಬೇಕು. ಕಾಂಗ್ರೆಸ್ ಹಿಙದೂಗಳನ್ನು ಜಾತಿ, ಮತ, ಸುಳ್ಳು ಭರವಸೆಯಿಂದ ಒಡೆದು ಸ್ವಾರ್ಥ ಸಾಧನೆಗೆ ಮುಂದಾಗಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಅಭ್ಯರ್ಥಿ.
ಕಾಗೇರಿ ಅವರು ಹಳಿಯಾಳ ತಾಲೂಕಾ ವ್ಯಾಪ್ತಿಯಲ್ಲಿ ಕಲಕಟ್ಟಾ, ಬೆಳವಟಿಗೆ, ಹವಗಿ, ಯಡೋಗಾ, ಹಳಿಯಾಳ ಪಟ್ಟಣ ಭಾಗದಲ್ಲಿ ಪ್ರಚಾರ ನಡೆಸಿದರು. ಸಾರ್ವಜನಿಕ ಸಭೆಗೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಯಿತು. ಭಾಜಪ ಗೆಲುವಿಗೆ ಶ್ರಮ ವಹಿಸುವುದಾಗಿ ಕಾರ್ಯಕರ್ತರು ಘೋಷಣೆ ಮಾಡಿದರು.
