गविरेडेच्या हल्ल्यात बैलाचा जबडा फाटला! गणेबैल-काटगाळी रस्त्यावर जंगल भागात घडली घटना!
खानापूर ; खानापूर तालुक्यातील गणेबैल-काटगाळी रस्त्यावर, जंगल भाग असलेल्या ठिकाणी शेतवडी नजीक एका शेतकऱ्याच्या बैलावर गविरेड्याने हल्ला करून गंभीर जखमी केले आहे. गवि रेड्याच्या हल्ल्यात बैलाचा जबडा तुटला आहे त्यामुळे पशुसंघोपन खात्याच्या वैद्याधिकाऱ्यांनी उपचार करण्यास असमर्थता दाखविली आहे. त्यामुळे शासनाने सदर शेतकऱ्यास नुकसान भरपाई मिळवून देण्याची मागणी नेगील योगी शेतकरी संघटनेचे तालुका अध्यक्ष मनोहर सुळेभावी कर यांनी केली आहे.
गणेबैल येथील शेतकरी देवाप्पा राघोबा गुरव या शेतकऱ्याच्या मालकीचा बैल असून, गवी रेड्याच्या हल्ल्यात बैलाचा जबडा फाटून तुटला आहे. वन खात्याच्या अधिकाऱ्यांनी व पशु संगोपन खात्याच्या वैद्याधिकाऱ्यांनी घटनास्थळी भेट देऊन पाहणी केली. पशु संगोपन खात्याच्या वैद्याधिकाऱ्यांनी सदर बैलावर उपचार करण्यास असमर्थता दाखविली असून बैलावर उपचार होणार नाहीत असे सांगितले आहे. बैलाचा जबडा जरी फाटला असला तरी बैल शरीराला इतरत्र कोठेही गंभीर जखम झाली नाही. बैल तंदुरुस्त आहे. परंतु वैद्याधिकाऱ्यांनी उपचार करण्यास असमर्थता दाखविल्यामुळे, चारा पाण्याअभावी बैलाच्या जीवितास धोका निर्माण झाला आहे. पशु संगोपन खात्याच्या वैद्याधिकाऱ्यांनी माणुसकीच्या दृष्टीने सदर गंभीर जखमी बैलावर प्रथमोपचार सुरू करणे गरजेचे होते. परंतु टेक्नॉलॉजीच्या युगात वैद्याधिकाऱ्यांनी असमर्थता दाखविली आहे.
नेगील योगी रयत संघटनेचे तालुका अध्यक्ष मनोहर सुळेभाविकर यांनी घटनास्थळी भेट दिली असून, वन खात्याच्या अधिकाऱ्यांनी व शासनाने सदर बैल मालकास नुकसान भरपाई मिळवून देण्याची मागणी केली आहे. यावेळी नारायण कोलेकर, मारूती भुताप्पा गुरव, रमेश कवठणकर, ज्ञानेश्वर गेजपतकर, सदिप मा गुरव, मीनाजी दे गुरव, पुडलीक ग गुरव हे शेतकरी उपस्थित होते.
ಕಾಡು ಎಮ್ಮೆಯ ದಾಳಿಯಲ್ಲಿ ಎತ್ತಿನ ದವಡೆಗೆ ಭಾರಿ ಪೆಟ್ಟು ! ಗಣೇಬೈಲ್-ಕಾಟಗಾಳಿ ಮಾರ್ಗದ ಕಾಡು ಪ್ರದೇಶದಲ್ಲಿ ಘಟನೆ!
ಖಾನಾಪುರ : ಖಾನಾಪುರ ತಾಲ್ಲೂಕಿನ ಗಣೇಬೈಲ್-ಕಾಟಗಾಳಿ ಮಾರ್ಗದ ಕಾಡು ಪ್ರದೇಶದಲ್ಲಿ ಹೊಲದ ಹತ್ತಿರ ರೈತನ ಎತ್ತಿನ ಮೇಲೆ ಕಾಡು ಎಮ್ಮೆಯ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದೆ. ಈ ದಾಳಿಯಲ್ಲಿ ಎತ್ತಿನ ದವಡೆಗೆ ಭಾರಿ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದು, ಪಶುಸಂಗೋಪನಾ ಇಲಾಖೆಯ ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಲು ಅಸಮರ್ಥತೆಯನ್ನು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಸಂಬಂಧಿತ ರೈತನಿಗೆ ಪರಿಹಾರ ನೀಡಬೇಕೆಂದು ನೇಗಿಲ್ ಯೋಗಿ ರೈತ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಮನೋಹರ ಸುಳೇಭಾವಿಕರ ಆಗ್ರಹಿಸಿದ್ದಾರೆ.
ಗಣೇಬೈಲ್ ಗ್ರಾಮದ ರೈತ ದೇವಪ್ಪ ರಾಘೋಬಾ ಗುರುವ ಇವರ ಎತ್ತು ಕಾಡು ಎಮ್ಮೆ ದಾಳಿಗೆ ತುತ್ತಾಗಿದೆ. ದಾಳಿಯಲ್ಲಿ ಎತ್ತಿನ ದವಡೆ ಪೆಟ್ಟು ಬಿದ್ದಿದ್ದು, ಆದರೆ ದೇಹದ ಬೇರೆಡೆ ಯಲ್ಲಿಯೂ ಗಂಭೀರ ಗಾಯಗಳಾಗಿಲ್ಲ. ಪಶುಸಂಗೋಪನಾ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವೈದ್ಯಾಧಿಕಾರಿಗಳು ಚಿಕಿತ್ಸೆ ಅಸಾಧ್ಯವೆಂದು ಹೇಳಿದ ಕಾರಣ, ಎತ್ತಿಗೆ ಮೇವು-ನೀರು ಸೇವಿಸುವಲ್ಲಿ ಕಷ್ಟ ವಾಗಿ ಪ್ರಾಣಾಪಾಯದ ಪರಿಸ್ಥಿತಿ ಎದುರಾಗುವ ಭೀತಿ ವ್ಯಕ್ತವಾಗಿದೆ.
ಮಾನವೀಯ ದೃಷ್ಟಿಯಿಂದ ವೈದ್ಯಾಧಿಕಾರಿಗಳು ಕನಿಷ್ಠ ಪ್ರಾಥಮಿಕ ಚಿಕಿತ್ಸೆ ನೀಡಬೇಕಾಗಿತ್ತು. ಆದರೆ ತಂತ್ರಜ್ಞಾನ ಯುಗದಲ್ಲೂ ಸಹ ಅವರು ಅಸಮರ್ಥತೆಯನ್ನು ತೋರಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆ ಸ್ಥಳಕ್ಕೆ ಭೇಟಿ ನೀಡಿದ ಮನೋಹರ ಸುಳೇಭಾವಿಕರ ಅವರು ಅರಣ್ಯ ಇಲಾಖೆ ಹಾಗೂ ಸರ್ಕಾರ ತಕ್ಷಣ ರೈತನಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ನಾರಾಯಣ ಕೊಲೇಕರ್, ಮಾರುತಿ ಭುತಪ್ಪ ಗುರುವ, ರಮೇಶ್ ಕವಠಣಕರ, ಜ್ಞಾನೇಶ್ವರ ಗೇಜಪಟ್ಕರ್, ಸಂದೀಪ ಮಾ. ಗುರುವ, ಮೀನಾಜಿ ದೇ. ಗುರುವ, ಪುಂಡಲಿಕ ಗ. ಗುರುವ ಸೇರಿದಂತೆ ಹಲವು ರೈತರು ಉಪಸ್ಥಿತರಿದ್ದರು.

