सीमा प्रश्नासंदर्भात मुंबईत लवकरच संयुक्त बैठक ; उपमुख्यमंत्री अजित पवारांचे आश्वासन.
बेळगाव : सर्वोच्च न्यायालयात प्रलंबित असलेल्या सीमा प्रश्नाच्या खटल्याची सुनावणी येत्या महिनाभरात सुरू होणार आहे. या पार्श्वभूमीवर सीमा प्रश्नासंबंधी पुढील धोरण व कार्ययोजना ठरविण्यासाठी राज्य सरकारने संयुक्त बैठक बोलवावी, अशी मागणी महाराष्ट्र एकीकरण समितीच्या शिष्टमंडळाने राज्याचे उपमुख्यमंत्री अजित पवार यांच्याकडे केली.
इस्लामपूर (सांगली) येथे झालेल्या या भेटीदरम्यान शिष्टमंडळाने दिलेल्या निवेदनात राज्याचे सीमा समन्वयक मंत्री, उच्चाधिकार समिती, तज्ञ समिती तसेच मध्यवर्ती महाराष्ट्र एकीकरण समितीच्या पदाधिकाऱ्यांची बैठक मुंबईत घ्यावी, असे स्पष्ट करण्यात आले.
उपमुख्यमंत्री अजित पवार यांनी मुख्यमंत्री देवेंद्र फडणवीस यांच्याशी चर्चा करून लवकरच बैठक आयोजित केली जाईल, असे आश्वासन शिष्टमंडळाला दिले.
या वेळी माजी मंत्री व आमदार जयंत पाटील, आमदार रोहित पवार, मध्यवर्ती समितीचे खजिनदार प्रकाश मरगाळे, गोपाळराव देसाई, गोपाळराव पाटील, आबासाहेब दळवी, राजाराम देसाई, एन. बी. खांडेकर आदी मान्यवर उपस्थित होते.
ಸೀಮಾ ಪ್ರಶ್ನೆ ಕುರಿತು ಶೀಘ್ರದಲ್ಲೇ ಮುಂಬೈಯಲ್ಲಿ ಸಂಯುಕ್ತ ಸಭೆ; ಉಪಮುಖ್ಯಮಂತ್ರಿ ಅಜಿತ್ ಪವಾರ್ ಭರವಸೆ
ಬೆಳಗಾವಿ : ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಉಳಿದಿರುವ ಮಹಾರಾಷ್ಟ್ರ-ಕರ್ನಾಟಕ ಸೀಮಾ ಪ್ರಶ್ನೆಯ ವಿಚಾರಣೆ ಮುಂದಿನ ಒಂದು ತಿಂಗಳೊಳಗೆ ಆರಂಭವಾಗಲಿದೆ. ಈ ಹಿನ್ನೆಲೆ ಮುಂದಿನ ನೀತಿ ಹಾಗೂ ಕಾರ್ಯಯೋಜನೆ ನಿಶ್ಚಯಿಸಲು ರಾಜ್ಯ ಸರ್ಕಾರವು ತುರ್ತು ಸಂಯುಕ್ತ ಸಭೆ ಕರೆಯಬೇಕೆಂದು ಮಹಾರಾಷ್ಟ್ರ ಏಕೀಕರಣ ಸಮಿತಿಯ ಶಿಷ್ಟಮಂಡಳಿಯು ರಾಜ್ಯದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಲ್ಲಿ ಮನವಿ ಮಾಡಿತು.
ಸಾಂಗಲಿ ಜಿಲ್ಲೆಯ ಇಸ್ಲಾಂಪುರದಲ್ಲಿ ನಡೆದ ಈ ಭೇಟಿಯಲ್ಲಿ ಶಿಷ್ಟಮಂಡಳಿಯವರು ನೀಡಿದ ಮನವಿಯಲ್ಲಿ ರಾಜ್ಯದ ಸೀಮಾ ಸಂಯೋಜಕ ಸಚಿವರು, ಉನ್ನತಾಧಿಕಾರಿ ಸಮಿತಿ, ತಜ್ಞರ ಸಮಿತಿ ಹಾಗೂ ಕೇಂದ್ರೀಯ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪದಾಧಿಕಾರಿಗಳ ಸಂಯುಕ್ತ ಸಭೆ ಮುಂಬೈಯಲ್ಲಿ ನಡೆಸಬೇಕು ಎಂದು ಮನವಿ ಮಾಡಿದರು.
ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು, ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಸಭೆ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಜಯಂತ ಪಾಟೀಲ, ಶಾಸಕ ರೋಹಿತ್ ಪವಾರ್, ಕೇಂದ್ರೀಯ ಸಮಿತಿಯ ಖಜಾಂಚಿ ಪ್ರಕಾಶ್ ಮಾರಗಾಳೆ, ಗೊಪಾಲರಾವ್ ದೇಸಾಯಿ, ಗೊಪಾಲರಾವ್ ಪಾಟೀಲ, ಆಬಾಸಾಹೇಬ ದಳವಿ, ರಾಜಾರಾಮ ದೇಸಾಯಿ, ಎನ್. ಬಿ. ಖಾಂಡೆಕರ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.



