नंदगड येथील अंगणवाडी कार्यकर्तीचा मृतदेह तीनई घाटाजवळ सापडला; खून की आत्महत्या? तपास सुरू.
खानापूर : बेळगाव-गोवा राष्ट्रीय महामार्गावरील तीनई घाट पारडा रस्ता क्रॉसजवळील पुलाखालील पाण्यात एका महिलेचा मृतदेह आढळून आल्याने परिसरात खळबळ उडाली आहे. मृत महिलेची ओळख अश्विनी बाबुराव पाटील (वय ५०, रा. दुर्गा नगर, नंदगड, ता. खानापूर) अशी झाली असून, त्या अंगणवाडी कार्यकर्ती म्हणून कार्यरत होत्या.

रामनगर पोलिसांनी घटनास्थळी धाव घेऊन मृतदेह पाण्यातून बाहेर काढला. प्राथमिक तपासात महिलेच्या चेहरा व डोक्यावर गंभीर जखमा असल्याचे आढळून आले आहे. त्यामुळे पोलिसांनी हा प्रकार खून असण्याची शक्यता वर्तवली आहे.
मिळालेल्या माहितीनुसार, अश्विनी पाटील या २ ऑक्टोबर रोजी गावातील टेम्पोतून कक्केरी येथील यात्रेसाठी गेल्या होत्या. यात्रा आटोपल्यानंतर परत येताना बिडी येथे काम असल्याचे सांगून त्या टेम्पोतून उतरल्या. मात्र त्यानंतर त्या घरी परतल्या नाहीत. रात्री उशिरापर्यंत त्यांचा काहीच संपर्क न आल्याने मुलाने नंदगड पोलीस ठाण्यात तक्रार दाखल केली होती.
दरम्यान, पोलिसांच्या चौकशीत त्यांच्या मोबाईलमधून दोन संदेश आढळले आहेत. एका संदेशात “मी आत्महत्या करत आहे” असे तर दुसऱ्या संदेशात “मी बेंगलोरला जात आहे” असे लिहिलेले होते. त्यामुळे या मृत्यूमागे खून आहे की आत्महत्या, याबाबत गोंधळ निर्माण झाला आहे.
सदर प्रकरणाचा तपास रामनगर पोलिसांकडून सुरू असून, उत्तरीय तपासणीनंतरच मृत्यूचे खरे कारण स्पष्ट होणार असल्याचे पोलिसांकडून सांगण्यात आले आहे.
ನಂದಗಡದ ಅಂಗನವಾಡಿ ಕಾರ್ಯಕರ್ತೆಯ ಶವ ಪತ್ತೆ. ಮರಣದ ಕಾರಣ — ಹತ್ಯೆಯೋ? ಆತ್ಮಹತ್ಯೆಯೋ? ಪೊಲೀಸರು ತನಿಖೆ ಆರಂಭಿಸಿದ್ದಾರೆ
ಖಾನಾಪುರ : ಬೆಳಗಾವಿ–ಗೋವಾ ರಾಷ್ಟ್ರೀಯ ಹೆದ್ದಾರಿಯ ತೀನೈ ಘಾಟ್ ಪಾರಡಾ ರಸ್ತೆ ಕ್ರಾಸ್ ಸಮೀಪದ ಸೇತುವೆ ಕೆಳಗಿನ ನೀರಿನಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾದ ಘಟನೆ ಖಾನಾಪುರ ತಾಲೂಕಿನ ತೀನೈಘಾಟ್ ಬಳಿ ಬೆಳಕಿಗೆ ಬಂದಿದೆ. ಮೃತೆಯ ಗುರುತು ನಂದಗಡದ ದುರ್ಗಾ ನಗರ ನಿವಾಸಿ ಅಶ್ವಿನಿ ಬಾಬುರಾವ ಪಾಟೀಲ್ (ವಯಸ್ಸು 50) ಎಂದು ತಿಳಿದುಬಂದಿದೆ. ಅವರು ಅಂಗನವಾಡಿ ಕಾರ್ಯಕರ್ತೆ ಆಗಿದ್ದರು.
ರಾಮನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ನೀರಿನಿಂದ ಹೊರ ತೆಗೆದಿದ್ದು. ಪ್ರಾಥಮಿಕ ಪರಿಶೀಲನೆಯಲ್ಲಿ ಮಹಿಳೆಯ ಮುಖ ಮತ್ತು ತಲೆಯ ಭಾಗದಲ್ಲಿ ತೀವ್ರ ಗಾಯದ ಗುರುತುಗಳು ಪತ್ತೆಯಾಗಿದ್ದು, ಈ ಪ್ರಕರಣ ಹತ್ಯೆಯಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮಾಹಿತಿಯ ಪ್ರಕಾರ, ಅಶ್ವಿನಿ ಪಾಟೀಲ್ ಅವರು ಅಕ್ಟೋಬರ್ 2 ರಂದು ತಮ್ಮ ಊರಿನಿಂದ ಟೆಂಪೊ ಮೂಲಕ ಕಕ್ಕೇರಿ ಯಾತ್ರೆಗೆ ತೆರಳಿದ್ದರು. ಯಾತ್ರೆ ಮುಗಿಸಿಕೊಂಡು ಹಿಂತಿರುಗುವ ವೇಳೆ ಬೀಡಿಯಲ್ಲಿ ಕೆಲಸವಿದೆ ಎಂದು ಹೇಳಿ ಟೆಂಪೊನಿಂದ ಇಳಿದಿದ್ದರು. ನಂತರ ಅವರು ಮನೆಗೆ ಮರಳದೆ, ರಾತ್ರಿ ತಡವರೆಗೆ ಸಂಪರ್ಕವಿಲ್ಲದ ಕಾರಣ ಅವರ ಮಗನು ನಂದಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆಯ ವೇಳೆ ಅವರ ಮೊಬೈಲ್ನಲ್ಲಿ ಎರಡು ಸಂದೇಶಗಳು ಪತ್ತೆಯಾಗಿವೆ. ಒಂದರಲ್ಲಿ “ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು, ಮತ್ತೊಂದರಲ್ಲಿ “ನಾನು ಬೆಂಗಳೂರಿಗೆ ಹೋಗುತ್ತಿದ್ದೇನೆ” ಎಂದು ಬರೆದಿರುವುದು ಪತ್ತೆಯಾಗಿದೆ. ಇದರಿಂದ ಈ ಸಾವಿನ ಹಿಂದೆ ಹತ್ಯೆಯೋ ಅಥವಾ ಆತ್ಮಹತ್ಯೆಯೋ ಎಂಬ ಗೊಂದಲ ಸೃಷ್ಟಿಯಾಗಿದೆ.
ಘಟನೆಯ ತನಿಖೆಯನ್ನು ರಾಮನಗರ ಪೊಲೀಸರು ಕೈಗೊಂಡಿದ್ದು, ಶವಪರೀಕ್ಷೆಯ ವರದಿ ಬಂದ ನಂತರ ಸಾವಿನ ನಿಜವಾದ ಕಾರಣ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

