प्रति टन ऊसाला 3500 रुपये दराची मागणी; लिंगनमठ क्रॉस येथे शेतकऱ्यांचा रास्ता रोको आंदोलन.
खानापूर (ता. 6 नोव्हेंबर) : प्रति टन ऊसाला किमान 3500 रुपये दर जाहीर करावा, ऊस तोडणी व वाहतुकीतील शेतकऱ्यांची लूट थांबवावी, ऊस बिले वेळेवर अदा करावीत अशा प्रमुख मागण्यांसाठी अखिल कर्नाटक रायत संघ व ऊस उत्पादक शेतकरी यांच्या नेतृत्वाखाली आज लिंगनमठ क्रॉस (ता. खानापूर) येथे शेतकऱ्यांनी रास्ता रोको आंदोलन छेडले. शेतकऱ्यांनी आपली मागणी मान्य न झाल्याने रस्त्यावर बसून आंदोलन सुरू केले. परिणामी खानापूर–बेळगाव–हलियाळ मार्गावरून लैला साखर कारखान्याकडे जाणारी ऊसाने भरलेली वाहने अडवण्यात आली. सकाळपासून संध्याकाळपर्यंत वाहन वाहतुकीवर परिणाम झाला व प्रवाशांना अडचणींचा सामना करावा लागला.

आंदोलनाची माहिती मिळताच लैला शुगर फॅक्टरीचे अधिकारी बाळाराम शेलार यांनी घटनास्थळी येऊन शेतकऱ्यांशी चर्चा केली. त्यांनी “बेळगाव जिल्ह्यात जसा ऊस दर निश्चित केला जाईल, तसाच दर लैला साखर कारखाना देखील देईल” अशी हमी दिल्यानंतर संध्याकाळी शेतकऱ्यांनी ऊस लादलेल्या वाहनांशिवाय इतर वाहनांना मार्ग मोकळा करून दिला.
लिंगनमठ ग्रामपंचायत अध्यक्ष व युवा शेतकरी काशीम हटीहोळी म्हणाले की, “हळियाळ येथील प्यारी साखर कारखान्याने प्रति टन ऊसाला फक्त 3200 रुपये दर जाहीर करून खानापूर तालुक्यातील विविध गावांमध्ये गट पाठवून तोडणी सुरू केली आहे. ही शेतकऱ्यांवरील अन्यायकारक कृती आहे. त्यामुळे आज लिंगनमठ व परिसरातील सर्व शेतकरी एकत्र येऊन प्यारी साखर कारखान्याच्या विरोधात लिंगनमठ क्रॉस येथे आंदोलन केले.”
ते पुढे म्हणाले, “बेळगाव जिल्ह्यातील गुरळापूर क्रॉस येथे ऊस दर घोषित होईपर्यंत प्यारी साखर कारखान्याकडे एकही ऊस भरलेली लॉरी पाठवली जाणार नाही,” असा इशाराही त्यांनी दिला.
या आंदोलनाला बीळकी मठाचे श्री चन्नबसवदेवरू व हिडकल अडवी सिद्देश्वर मठाचे काडसिद्धेश्वर स्वामी यांच्या मार्गदर्शन लाभले. तसेच अखिल कर्नाटक रयत संघाचे राज्य उपाध्यक्ष किशोर मिठारी, काशीम हटीहोळी, बाबू बिजापूर, राजू रपाटी, बसवराज मुगळीहाळ, बाबू अंबडगट्टी, पांडुरंग मिटगार, बसनगौडा पाटील, दत्ता बिडीकर, मांतेश संगोळी, सिकंदर तेरगाव, भैरु मांदवी, धरमेन्द्र पाशेट्टी यांच्यासह मोठ्या संख्येने शेतकरी व संघाचे पदाधिकारी उपस्थित होते.
ಪ್ರತಿ ಟನ್ ಕಬ್ಬಿಗೆ 3500ರೂ ಆಗ್ರಹಿಸಿ ಲಿಂಗನಮಠ ಕ್ರಾಸ್ ರೈತ ಸಂಘದಿಂದ ರಸ್ತೆ ತಡೆ:
ಖಾನಾಪುರ(ಗ್ರಾ): ಪ್ರತಿ ಟನ್ ಕಬ್ಬಿಗೆ ಕನಿಷ್ಠ 3500 ದರ ಘೋಷಣೆ, ಕಬ್ಬು ಕಟಾವು ಹಾಗೂ ಸಾರಿಗೆಯಲ್ಲಿ ನಡೆಯುತ್ತಿರುವ ರೈತರ ಸುಲಿಗೆ ತಡೆ, ಸಕಾಲದಲ್ಲಿ ಕಬ್ಬಿನ ಬಿಲ್ ಪಾವತಿ ಸೇರಿದಂತೆ ರೈತಾಪಿ ಸಮುದಾಯದ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ರೈತ ಸಂಘ ಕಬ್ಬು ಬೆಳೆಗಾರರ ನೇತೃತ್ವದಲ್ಲಿ ಗುರುವಾರದಂದು ಲಿಂಗನಮಠ ಕ್ರಾಸ್ ಅಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾನಿರತರು ತಮ್ಮ ಬೇಡಿಕೆಗೆ ಪಟ್ಟು ಹಿಡಿದು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಆರಂಭಿಸಿದರು. ಪರಿಣಾಮ ಬೆಳಗಾವಿ, ಖಾನಾಪುರ ಕಡೆಯಿಂದ ಹಳಿಯಾಳ ಪ್ಯಾರಿ ಸಕ್ಕರೆ ಕಾರ್ಖಾನೆ ಕಡೆ ಸಾಗುವ ವಾಹನಗಳನ್ನು ತಡೆದು ಬೆಳಿಗ್ಗೆಯಿಂದ ಸಂಜೆಯವರೆಗೆ ಕಬ್ಬು ತುಂಬಿದ ಲಾರಿಗಳನ್ನು ನಿಲ್ಲಿಸಿದರಿಂದ ಪ್ರಯಾಣಿಕರು ಪರದಾಡಿದರು.
ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಲೈಲಾ ಶುಗರ್ಸ್ ಅಧಿಕಾರಿ ಬಾಳರಾಮ ಶೇಲಾರ ಸರ್ ಅವರೊಡನೆ ಚರ್ಚಿಸಿದ ರೈತರು ಕೂಡಲೇ ಕಬ್ಬಿನ ದರ ಘೋಷಣೆ ಮಾಡಿ ಕಾರ್ಖಾನೆ ಆರಂಭಿಸುವಂತೆ ಪಟ್ಟು ಹಿಡಿದರು. ದೀರ್ಘಕಾಲದ ಸಂವಾದದ ಬಳಿಕ ಬಾಳರಾಮ ಶೇಲಾರ ಸರ್ ಅವರು ಬೆಳಗಾವಿ ಜಿಲ್ಲೆಯಾದ್ಯಂತ ಸಕ್ಕರೆ ಕಾರ್ಖಾನೆಗಳು ನಿಗದಿಪಡಿಸುವ ದರವನ್ನೇ ಲೈಲಾ ಕಾರ್ಖಾನೆಯೂ ಪಾವತಿಸಲಿದೆ ಎಂಬ ಭರವಸೆ ನೀಡಿದ ಬಳಿಕ ಸಂಜೆಯ ವೇಳೆಗೆ ರೈತರು ಕಬ್ಬು ತುಂಬಿದ ಲಾರಿಗಳನ್ನು ಮಾತ್ರ ನಿಲ್ಲಿಸಿ ಉಳಿದ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಲಿಂಗನಮಠ ಗ್ರಾಪಂ ಅಧ್ಯಕ್ಷ ಹಾಗೂ ಯುವ ರೈತನಾದ ಕಾಶೀಮ ಹಟ್ಟಿಹೋಳಿ ಮಾತನಾಡಿ ಹಳಿಯಾಳದ ಪ್ಯಾರಿ ಸಕ್ಕರೆ ಕಾರ್ಖಾನೆಯವರು ರೈತರಿಗೆ 3200 ಬೆಲೆಯನ್ನು ಕೊಡ್ತೀವಿ ಅಂತ ಘೋಷಣೆ ಮಾಡಿ ಖಾನಾಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗ್ಯಾಂಗ್ ಗಳನ್ನು ಹಾಕಿ ಕಬ್ಬನ್ನು ಕಟಾವು ಮಾಡಿಸುವ ಕಾರ್ಯ ಚುರುಕ ಮಾಡಿರುವುದರಿಂದ ರೈತರಿಗೆ ಅನ್ಯಾಯ ಮಾಡುವ ಕೆಲಸ ಮಾಡಿದ್ದಾರೆ. ಹೀಗಾಗಿ ಇದರಿಂದ ಎಚ್ಚೆತ್ತುಕೊಂಡ ಲಿಂಗನಮಠ ಹಾಗೂ ಸುತ್ತಮುತ್ತಲಿನ ರೈತ ಬಾಂಧವರೆಲ್ಲರೂ ಸೇರಿಕೊಂಡು ಲಿಂಗನಮಠ ಕ್ರಾಸ್ ಅಲ್ಲಿ ಹಳಿಯಾಳ ಪ್ಯಾರಿ ಸಕ್ಕರೆ ಕಾರ್ಖಾನೆಯ ಮಾಲೀಕರ ಹಾಗೂ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ಪರ ಹಾಕಿ ಪ್ಯಾರಿ ಸಕ್ಕರೆ ಕಾರ್ಖಾನೆ ಹೋಗುವ ಲಾರು ತುಂಬಿದ ವಾಹನಗಳನ್ನು ನಿಲ್ಲಿಸುವ ಕಾರ್ಯ ಇವತ್ತು ಬೆಳಗಿನ ಜಾವದಿಂದ ನಡೆದಿದೆ. ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್ ಅಲ್ಲಿ ಕಬ್ಬಿನ ಬೆಲೆ ಘೋಷಣೆ ಆಗುವವರೆಗೂ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಲಾರಿ ತುಂಬಿದ ವಾಹನಗಳನ್ನು ಕಳಿಸುವುದಿಲ್ಲ ಎಂದರು.
ಅವರೊಳ್ಳಿ ಬಿಳಕಿ ಶ್ರೀಗಳಾದ ಚನ್ನಬಸವದೇವರು, ಹಿಡಕಲ್ ಅಡವಿಸಿದ್ದೇಶ್ವರ ಮಠದ ಶ್ರೀಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಕಿಶೋರ ಮಿಠಾರಿ, ಲಿಂಗನಮಠ ಗ್ರಾಪಂ ಅಧ್ಯಕ್ಷ ಕಾಶೀಮ ಹಟ್ಟಿಹೋಳಿ, ರೈತರಾದ ಬಾಬು ಬಿಜಾಪುರ, ರಾಜು ರಪಾಟಿ, ಬಸವರಾಜ ಮುಗಳಿಹಾಳ, ಬಾಬು ಅಂಬಡಗಟ್ಟಿ, ಪಾಂಡುರಂಗ ಮೀಟಗಾರ, ಬಸನಗೌಡ ಪಾಟೀಲ, ದತ್ತ ಬಿಡೀಕರ, ಮಾಂತೇಶ ಸಂಗೊಳ್ಳಿ, ಸಿಕಂದರ ತೇರಗಾಂವ, ಭೈರು ಮಾಂದವಿ, ಧರನೇಂದ್ರ ಪಾಶೆಟ್ಟಿ, ಸೇರಿದಂತೆ ರೈತ ಮುಖಂಡರು, ರೈತರು ಇದ್ದರು.


