मंत्री हेब्बाळकर यांच्या राजीनाम्यासाठी भाजपचे आंदोलन! लक्ष्मी अक्का, एल्लि इदे रोक्का घोषणा!
बेळगाव : गृहलक्ष्मी योजनेच्या निधीच्या गैरवापराचा आरोप करत महिला व बालकल्याण मंत्री लक्ष्मी हेब्बाळकर यांच्या राजीनाम्याच्या मागणीसाठी भारतीय जनता पक्षातर्फे आज, शुक्रवारी सकाळी बेळगाव शहरात जोरदार आंदोलन छेडण्यात आले. यावेळी “लक्ष्मी अक्का, एल्लि इदे रोक्का” अशा घोषणा देण्यात येत होत्या.
शहरातील राणी कित्तूर चन्नम्मा चौकात जमलेल्या भाजपच्या पदाधिकारी व कार्यकर्त्यांनी मंत्री लक्ष्मी हेब्बाळकर यांच्या विरोधात तीव्र घोषणाबाजी करत निदर्शने केली. गृहलक्ष्मी योजनेतील निधीच्या कथित गैरवापराविरोधात संताप व्यक्त करण्यात आला. निषेधाचे फलक हातात घेऊन आंदोलन करणाऱ्या कार्यकर्त्यांमध्ये महिलांचा सहभाग लक्षणीय होता.
आंदोलकांनी मंत्री लक्ष्मी हेब्बाळकर यांनी विधानसभेत खोटी माहिती दिल्याचा आरोप केला. तसेच राज्य सरकारच्या हमी योजनांपैकी एक असलेल्या 5 हजार कोटी रुपयांच्या गृहलक्ष्मी योजनेबाबत महिलांची फसवणूक झाल्याचा गंभीर आरोप करण्यात आला. मंत्री हेब्बाळकर अधिकाऱ्यांवर दोष ढकलण्याचा प्रयत्न करत असल्याचेही आंदोलकांनी सांगितले. काँग्रेस सरकार सत्तेवर आल्यानंतर अधिकाऱ्यांच्या आत्महत्यांच्या घटना वाढल्याकडेही त्यांनी लक्ष वेधले.
अधिकाऱ्यांनी राजकीय दबावाला बळी न पडता प्रामाणिकपणे काम करावे, अशी मागणी करत महिला व बालकल्याण मंत्री लक्ष्मी हेब्बाळकर यांनी नैतिक जबाबदारी स्वीकारून तात्काळ आपल्या पदाचा राजीनामा द्यावा, अशी जोरदार मागणी आंदोलकांनी केली.
आंदोलनस्थळी प्रसारमाध्यमांशी बोलताना एका महिला भाजप नेत्या म्हणाल्या की, राज्यातील काँग्रेस सरकार गॅरंटी योजनांच्या नावाखाली जनतेची फसवणूक करत आहे. गृहलक्ष्मी योजनेच्या माध्यमातून तब्बल 5 हजार कोटी रुपयांचा घोटाळा झाला असल्याचा आरोप त्यांनी केला. या योजनेअंतर्गत राज्यातील कुटुंबप्रमुख महिलांना देण्यात येणारे मानधन गेल्या दोन महिन्यांपासून मिळालेले नाही. फेब्रुवारी व मार्च महिन्यातील थकीत मानधनाचा आकडा 1 कोटी रुपयांहून अधिक असून, तो अद्याप महिलांच्या खात्यावर जमा झालेला नाही, असे त्यांनी सांगितले.
या संदर्भात भाजपच्या नेत्यांनी विधानसभेत प्रश्न उपस्थित केला असता, ऑगस्टमध्ये महिलांच्या खात्यावर पैसे जमा करण्यात आले असून फेब्रुवारी व मार्चचे पैसे त्यातच समाविष्ट असल्याचे उत्तर मंत्री हेब्बाळकर यांनी दिले. मात्र, पुराव्यासह फेब्रुवारी व मार्च महिन्यांचे पैसे महिलांच्या खात्यावर जमा न झाल्याचे निदर्शनास आणून दिल्यानंतर तीन दिवसांनी मंत्र्यांनी आपली चूक मान्य करत त्या दोन महिन्यांचे पैसे जमा न झाल्याची कबुली दिली, असा आरोपही त्यांनी केला.
मंत्र्यांनी क्षमा मागण्याची पद्धत ही सभागृहाची दिशाभूल करणारी होती. मंत्री हेब्बाळकर स्वतः महिला असूनही अशा प्रकारे राज्यातील महिलांवर अन्याय करत असतील, तर त्यांना मंत्रिपदावर राहण्याचा कोणताही अधिकार नाही, असेही त्या म्हणाल्या. त्यामुळे त्यांनी नैतिक जबाबदारी स्वीकारून तात्काळ राजीनामा द्यावा, अशी मागणी करण्यात आली.
दरम्यान, मुख्यमंत्र्यांनी महिलांच्या खात्यावर पैसे जमा झाले नसतील तर ते तात्काळ जमा करण्यात येतील, असे आश्वासन दिले आहे. तथापि, अद्याप त्याची पूर्तता झालेली नाही. तसेच, फक्त क्षमा मागून हा प्रश्न सुटणार नसून महिलांचे दोन महिन्यांचे 5 हजार कोटी रुपये नेमके कुठे गेले, कोणाच्या खात्यावर जमा झाले आणि त्याचा कुठे विनियोग झाला, याची सविस्तर माहिती आवश्यक कागदपत्रांसह मंत्री लक्ष्मी हेब्बाळकर यांनी द्यावी, अशी ठाम भूमिका महिला भाजप नेत्या यांनी मांडली.
ಸಚಿವೆ ಹೆಬ್ಬಾಳ್ಕರ್ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ! “ಲಕ್ಷ್ಮಿ ಅಕ್ಕ, ಎಲ್ಲ ಇದೆ ರೊಕ್ಕ” ಘೋಷಣೆ!
ಬೆಳಗಾವಿ : ಗೃಹಲಕ್ಷ್ಮಿ ಯೋಜನೆಯ ನಿಧಿಯ ದುರ್ಬಳಕೆಯ ಆರೋಪದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ರಾಜೀನಾಮೆ ಆಗ್ರಹಿಸಿ ಭಾರತೀಯ ಜನತಾ ಪಕ್ಷದ ವತಿಯಿಂದ ಇಂದು, ಶುಕ್ರವಾರ ಬೆಳಿಗ್ಗೆ ಬೆಳಗಾವಿ ನಗರದಲ್ಲಿ ಭಾರೀ ಪ್ರತಿಭಟನೆ ನಡೆಸಲಾಯಿತು. ಈ ಸಮಯದಲ್ಲಿ, “ಲಕ್ಷ್ಮಿ ಅಕ್ಕಾ, ಎಲ್ಲಾ ಇದೆ ರೊಕ್ಕಾ” ಎಂಬ ಘೋಷಣೆಗಳು ಮೊಳಗುತ್ತಿದ್ದವು.
ನಗರದ ರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ತೀವ್ರ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಗೃಹಲಕ್ಷ್ಮಿ ಯೋಜನೆಯಲ್ಲಿನ ನಿಧಿಯ ದುರ್ಬಳಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಪ್ರತಿಭಟನಾಕಾರರು ಕೈಯಲ್ಲಿ ಫಲಕಗಳನ್ನು ಹಿಡಿದು ಪ್ರತಿಭಟಿಸಿದ್ದು, ಇದರಲ್ಲಿ ಮಹಿಳೆಯರ ಉಪಸ್ಥಿತಿ ಗಮನಾರ್ಹವಾಗಿತ್ತು. ಗೃಹಲಕ್ಷ್ಮಿ ಯೋಜನೆಯ ನಿಧಿಯ ದುರ್ಬಳಕೆಯ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿಧಾನಸಭೆಯಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಹಾಗೂ ಎಂದು ಆರೋಪಿಸಿ. ಜೊತೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿನ 5 ಸಾವಿರ ಕೋಟಿ ರೂ.ಗಳ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮಹಿಳೆಯರಿಗೆ ನೀಡದೆ ಮೋಸ ಮಾಡಲಾಗಿದೆ ಎಂಬ ಗಂಭೀರ ಆರೋಪವೂ ಮಾಡಲಾಯಿತು. ಸಚಿವೆ ಹೆಬ್ಬಾಳ್ಕರ್ ಅಧಿಕಾರಿಗಳ ಮೇಲೆ ಆರೋಪ ತಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಧಿಕಾರಿಗಳ ಆತ್ಮಹತ್ಯೆಗಳ ಘಟನೆಗಳು ಹೆಚ್ಚಾಗಿರುವುದನ್ನೂ ಅವರು ಉಲ್ಲೇಖಿಸಿದರು. ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಒಳಗಾಗದೇ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಆಗ್ರಹಿಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೈತಿಕ ಹೊಣೆ ಹೊತ್ತು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಹಿಳಾ ಬಿಜೆಪಿ ನಾಯಕಿ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದೆ ಎಂದು ಹೇಳಿದರು. ಗೃಹಲಕ್ಷ್ಮಿ ಯೋಜನೆಯ ಮೂಲಕ ಸಾವಿರಾರು ಕೋಟಿ ರೂಪಾಯಿಗಳ (5 ಸಾವಿರ ಕೋಟಿ ರೂ.) ಭ್ರಷ್ಟಾಚಾರ ನಡೆದಿದೆ ಎಂದು ಅವರು ಆರೋಪಿಸಿದರು. ಈ ಯೋಜನೆಯಡಿ ರಾಜ್ಯದ ಕುಟುಂಬದ ಮುಖ್ಯಸ್ಥೆಯಾದ ಮಹಿಳೆಯರಿಗೆ ನೀಡಲಾಗುವ ಗೌರವಧನ ಕಳೆದ ಎರಡು ತಿಂಗಳಿನಿಂದ ದೊರಕಿಲ್ಲ. ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಬಾಕಿ ಗೌರವಧನ ಮೊತ್ತ 1 ಕೋಟಿ ರೂಪಾಯಿಗಿಂತ ಹೆಚ್ಚು ಆಗಿದ್ದು, ಅದು ಇನ್ನೂ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ ಎಂದು ಅವರು ತಿಳಿಸಿದರು.
ಈ ಸಂಬಂಧ ಬಿಜೆಪಿ ನಾಯಕರು ವಿಧಾನಸಭೆಯಲ್ಲಿ ಪ್ರಶ್ನೆ ಎತ್ತಿದಾಗ, ಆಗಸ್ಟ್ ತಿಂಗಳ ವರೆಗೆ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲಾಗಿದೆ ಹಾಗೂ ಅದರಲ್ಲಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣವೂ ಸೇರಿದೆ ಎಂದು ಸಚಿವ ಹೆಬ್ಬಾಳ್ಕರ್ ಉತ್ತರಿಸಿದ್ದರು. ಆದರೆ ಪುರಾವೆಗಳೊಂದಿಗೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ ಎಂಬುದು ಬೆಳಕಿಗೆ ಬಂದ ನಂತರ, ಮೂರು ದಿನಗಳ ಬಳಿಕ ಸಚಿವರು ತಮ್ಮ ತಪ್ಪನ್ನು ಒಪ್ಪಿಕೊಂಡು ಆ ಎರಡು ತಿಂಗಳ ಹಣ ಜಮಾ ಆಗಿಲ್ಲ ಎಂದು ವಿಧಾನಸಭೆಯಲ್ಲಿ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು. ಸಚಿವರು ಕ್ಷಮೆ ಕೇಳಿದ ವಿಧಾನವೇ ಸದನವನ್ನು ದಾರಿ ತಪ್ಪಿಸುವಂತಿತ್ತು. ಸಚಿವೆ ಹೆಬ್ಬಾಳ್ಕರ್ ತಾವೇ ಮಹಿಳೆಯಾಗಿದ್ದು, ಈ ರೀತಿ ರಾಜ್ಯದ ಮಹಿಳೆಯರ ಮೇಲೆ ಅನ್ಯಾಯ ಮಾಡುತ್ತಿದ್ದರೆ, ಅವರಿಗೆ ಸಚಿವ ಸ್ಥಾನದಲ್ಲಿ ಮುಂದುವರಿಯುವ ಯಾವುದೇ ಹಕ್ಕಿಲ್ಲ ಎಂದು ಅವರು ಹೇಳಿದರು. ಆದ್ದರಿಂದ ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಲಾಯಿತು.
ಈ ನಡುವೆ ಮುಖ್ಯಮಂತ್ರಿ, ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲದಿದ್ದರೆ ಅದನ್ನು ತಕ್ಷಣ ಜಮಾ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೆ ಇದುವರೆಗೆ ಅದು ಜಾರಿಯಾಗಿಲ್ಲ. ಕೇವಲ ಕ್ಷಮೆ ಕೇಳುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ; ಮಹಿಳೆಯರ ಎರಡು ತಿಂಗಳ 5 ಸಾವಿರ ಕೋಟಿ ರೂ. ಹಣ ಎಲ್ಲಿಗೆ ಹೋಯಿತು, ಯಾರ ಖಾತೆಗೆ ಜಮಾ ಆಯಿತು ಮತ್ತು ಅದನ್ನು ಎಲ್ಲಿಗೆ ಬಳಸಲಾಗಿದೆ, ಎಂಬುದರ ಕುರಿತು ಅಗತ್ಯ ದಾಖಲೆಗಳೊಂದಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸವಿಸ್ತಾರ ಮಾಹಿತಿ ನೀಡಬೇಕು ಎಂದು ಮಹಿಳಾ ಬಿಜೆಪಿ ನಾಯಕಿ ಒತ್ತಾಯಿಸಿದ್ದಾರೆ.



