खानापूर भाजपच्या नूतन कार्यकारिणीचा पदग्रहण सोहळा उत्साहात संपन्न.
खानापूर (ता. 14) : खानापूर तालुका भारतीय जनता पक्षाच्या नूतन कार्यकारिणीची निवड व पदग्रहण सोहळा मंगळवारी 14 रोजी मोठ्या उत्साहात पार पडला. या प्रसंगी पक्षातील नवे- जुने पदाधिकारी, कार्यकर्ते, जनप्रतिनिधी आणि नागरिक मोठ्या संख्येने उपस्थित होते. नव्या पदाधिकाऱ्यांनी आगामी काळात संघटनेला अधिक बळकटी देण्याचा निर्धार व्यक्त केला. सुरुवातीला प्रास्ताविक व सूत्रसंचालन भाजपाचे प्रधान कार्यदर्शी मल्लाप्पा मारीहाळ यांनी उत्तमरीत्या केले.
कार्यक्रमाचे अध्यक्षस्थान भाजप तालुका नूतन अध्यक्ष बसवराज सानिकोप यांनी भूषवले. माजी अध्यक्ष संजय कुबल यांनी नव्या अध्यक्षांकडे पदाची सूत्रे सोपवली. या प्रसंगी आमदार विठ्ठल हलगेकर, जिल्हा उपाध्यक्ष प्रमोद कोचेरी, नेते बाबुराव देसाई, चेतन मनेरीकर, गुंडू तोपीनकट्टी, पंडित ओगले, मल्लाप्पा मारीहाळ आदी मान्यवर मंचावर उपस्थित होते.
मार्गदर्शन करताना आमदार विठ्ठल हलगेकर यांनी म्हटले की, “भाजप हा सर्वसामान्य व निस्वार्थी कार्यकर्त्यांचा पक्ष आहे. निस्वार्थ भावनेने कार्य करणाऱ्या प्रत्येकाला पक्षात योग्य स्थान मिळते. संघटनेची ताकद ही कार्यकर्त्यांच्या एकतेत असते. आगामी ग्रामपंचायत, तालुका आणि जिल्हा पंचायत निवडणुकांमध्ये भाजपाच्या सर्व उमेदवारांना निवडून आणण्यासाठी सर्वांनी एकजुटीने काम करावे.”
त्याचप्रमाणे जिल्हा उपाध्यक्ष प्रमोद कोचेरी, संजय कुबल यांनी नव्या कार्यकारिणीचे अभिनंदन करत संघटनेला बूथ पातळीपर्यंत मजबूत करण्याचे आवाहन केले.
यानंतर तालुक्यातील अध्यक्ष, उपाध्यक्ष, कार्यदर्शी, महिला मोर्चा, रयत मोर्चा, बूथ प्रमुख आणि शक्ती केंद्र प्रमुख यांच्या निवडी जाहीर करण्यात आल्या. निवड झालेल्या पदाधिकाऱ्यांना आमदार आणि मान्यवरांच्या हस्ते प्रमाणपत्रे देण्यात आली.
या सोहळ्यात उपाध्यक्ष चेतन मनेरीकर, प्रधान कार्यदर्शी मल्लाप्पा मारीहाळ, प्रधान कार्यदर्शी गुंडू तोपीनकट्टी, राजश्री देसाई, पंडित ओगले, लैला शुगर एमडी सदानंद पाटील, सुरेश देसाई, भरमाणी पाटील, सुनील मडीमनी, लक्ष्मण झांझरे, प्रशांत लक्केबैलकर, नगरसेवक आप्पया कोडोळी, जोतिबा रेमानी, लक्ष्मण बामणे, मोहन पाटील, सदानंद होसुरकर यांच्यासह मोठ्या संख्येने कार्यकर्ते उपस्थित होते.
नव्या कार्यकारिणीच्या पहिल्याच बैठकीत ठराव घेण्यात आला की, आगामी काळात तालुक्यातील प्रत्येक बूथ पातळीवर संघटना मजबूत करणे, पक्षविस्तार, जनसंपर्क अभियान आणि विकासाभिमुख उपक्रमांवर भर दिला जाईल.
उत्साह, संघटित वातावरण आणि नवे नेतृत्व या सर्व घटकांमुळे खानापूर भाजपचे नवे पर्व आशादायी ठरणार आहे, असा विश्वास या कार्यक्रमानिमित्ताने व्यक्त करण्यात आला.
ಖಾನಾಪುರ ತಾಲೂಕಿನ ಬಿಜೆಪಿ ಹೊಸ ಕಾರ್ಯಕಾರಿ ಮಂಡಳದ ಸ್ಥಾಪನಾ ಸಮಾರಂಭ ಉತ್ಸಾಹದಿಂದ ನೆರವೇರಿಸಲಾಯಿತು.
ಖಾನಾಪುರ (ತಾ.14): ಖಾನಾಪುರ ತಾಲೂಕು ಭಾರತೀಯ ಜನತಾ ಪಕ್ಷದ ನೂತನ ಕಾರ್ಯಕಾರಿ ಮಂಡಳಿಯ ಆಯ್ಕೆ ಹಾಗೂ ಅಧಿಕಾರ ಹಸ್ತಾಂತರ ಸಮಾರಂಭ ಮಂಗಳವಾರ (ಅ.14) ರಂದು ಭವ್ಯವಾಗಿ ಹಾಗೂ ಉತ್ಸಾಹದ ವಾತಾವರಣದಲ್ಲಿ ಶಾಸಕ ವಿಠ್ಠಲ್ ಹಲಗೇಕರ್ ಅವರ ಸಮ್ಮುಖದಲ್ಲಿ ಸಂಪನ್ನವಾಯಿತು. ಈ ಸಂದರ್ಭದಲ್ಲಿ ಪಕ್ಷದ ಹಳೆಯ ಹಾಗೂ ಹೊಸ ಪದಾಧಿಕಾರಿಗಳು, ಕಾರ್ಯಕರ್ತರು, ಜನಪ್ರತಿನಿಧಿಗಳು ಹಾಗೂ ನಾಗರಿಕರು ದೊಡ್ಡ ಸಂಖ್ಯೆಯಲ್ಲಿ ಹಾಜರಿದ್ದರು.
ಹೊಸ ಪದಾಧಿಕಾರಿಗಳು ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ದೃಢನಿಶ್ಚಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ಪ್ರಸ್ತಾವನೆ ಮತ್ತು ನಿರೂಪಣೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮಾರಿಹಾಳ ಅವರು ಉತ್ತಮ ರೀತಿಯಲ್ಲಿ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಬಿಜೆಪಿ ತಾಲೂಕು ನೂತನ ಅಧ್ಯಕ್ಷ ಬಸವರಾಜ ಸಾನಿಕೋಪ ಅವರು ವಹಿಸಿಕೊಂಡರು. ಮಾಜಿ ಅಧ್ಯಕ್ಷ ಸಂಜಯ ಕುಬಲ್ ಅವರು ಹೊಸ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಾಸಕ ವಿಠ್ಠಲ ಹಲಗೇಕರ, ಜಿಲ್ಲಾ ಉಪಾಧ್ಯಕ್ಷ ಪ್ರಮೊದ ಕೋಚೇರಿ, ನಾಯಕ ಬಾಬುರಾವ್ ದೇಸಾಯಿ, ಚೇತನ ಮನೇರಿಕರ್, ಗುಂಡು ತೋಪೀನಕಟ್ಟಿ, ಪಂಡಿತ ಒಗಲೆ, ಮಲ್ಲಪ್ಪ ಮಾರಿಹಾಳ ಮುಂತಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಾರ್ಗದರ್ಶನ ನೀಡುತ್ತಾ ಶಾಸಕ ವಿಠ್ಠಲ ಹಲಗೇಕರ ಹೇಳಿದರು: “ಬಿಜೆಪಿ ಸಾಮಾನ್ಯ ಮತ್ತು ನಿಸ್ವಾರ್ಥ ಕಾರ್ಯಕರ್ತರ ಪಕ್ಷವಾಗಿದೆ. ನಿಸ್ವಾರ್ಥ ಮನೋಭಾವದಿಂದ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಪಕ್ಷದಲ್ಲಿ ಯೋಗ್ಯ ಸ್ಥಾನ ದೊರಕುತ್ತದೆ. ಸಂಘಟನೆಯ ಬಲ ಕಾರ್ಯಕರ್ತರ ಏಕತೆಯಲ್ಲಿದೆ. ಮುಂದಿನ ಗ್ರಾಮಪಂಚಾಯತ್, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು.” ಎಂದರು.
ಅದೇ ರೀತಿ ಜಿಲ್ಲಾ ಉಪಾಧ್ಯಕ್ಷ ಪ್ರಮೊದ ಕೋಚೇರಿ ಮತ್ತು ಸಂಜಯ ಕುಬಲ್ ಅವರು ಹೊಸ ಕಾರ್ಯಕಾರಿ ಮಂಡಳಿಗೆ ಅಭಿನಂದನೆ ಸಲ್ಲಿಸಿ, ಸಂಘಟನೆಯನ್ನು ಬೂತ್ ಮಟ್ಟದವರೆಗೆ ಬಲಪಡಿಸುವಂತೆ ಕರೆ ನೀಡಿದರು.
ನಂತರ ತಾಲೂಕು ಮಟ್ಟದ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಮಹಿಳಾ ಮೋರ್ಚಾ, ರೈತ ಮೋರ್ಚಾ, ಬೂತ್ ಪ್ರಭಾರಿ ಮತ್ತು ಶಕ್ತಿ ಕೇಂದ್ರ ಪ್ರಭಾರಿಗಳ ಆಯ್ಕೆ ಘೋಷಿಸಲಾಯಿತು. ಆಯ್ಕೆಯಾದ ಪದಾಧಿಕಾರಿಗಳಿಗೆ ಶಾಸಕರು ಮತ್ತು ಗಣ್ಯರ ಹಸ್ತದಿಂದ ಪ್ರಮಾಣಪತ್ರ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಚೇತನ ಮನೇರಿಕರ್, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮಾರಿಹಾಳ, ಗುಂಡು ತೋಪೀನಕಟ್ಟಿ, ರಾಜಶ್ರೀ ದೇಸಾಯಿ, ಪಂಡಿತ ಒಗಲೆ, ಸುರೇಶ್ ದೇಸಾಯಿ, ಭರಮಾಣಿ ಪಾಟೀಲ, ಸುನಿಲ್ ಮಡ್ಡಿಮಣಿ, ಲಕ್ಷ್ಮಣ ಝಾಂಝರೆ, ಪ್ರಶಾಂತ್ ಲಕ್ಕೇಬೈಲ್ಕರ್, ನಗರಸಭೆ ಸದಸ್ಯ ಅಪ್ಪಯ್ಯ ಕೋಡೋಳಿ, ಜೋತಿಬಾ ರೇಮಾಣಿ, ಲಕ್ಷ್ಮಣ ಬಾಮಣೆ, ಮೋಹನ್ ಪಾಟೀಲ, ಸದಾನಂದ ಹೊಸೂರಕರ, ಮೊದಲಾದವರು ಹಾಜರಿದ್ದರು.
ಹೊಸ ಕಾರ್ಯಕಾರಿ ಮಂಡಳಿಯ ಮೊದಲ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಪ್ರತಿ ಬೂತ್ ಮಟ್ಟದಲ್ಲಿ ಸಂಘಟನೆ ಬಲಪಡಿಸುವುದು, ಪಕ್ಷವಿಸ್ತಾರ, ಜನಸಂಪರ್ಕ ಅಭಿಯಾನ ಹಾಗೂ ಅಭಿವೃದ್ಧಿಮುಖ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವುದು ಎಂಬ ನಿರ್ಣಯ ಕೈಗೊಳ್ಳಲಾಯಿತು.
ಉತ್ಸಾಹ, ಸಂಘಟಿತ ವಾತಾವರಣ ಮತ್ತು ಹೊಸ ನಾಯಕತ್ವದಿಂದ ಖಾನಾಪುರ ಬಿಜೆಪಿ ಹೊಸ ಅಧ್ಯಾಯವು ಆಶಾದಾಯಕವಾಗಲಿದೆ ಎಂಬ ವಿಶ್ವಾಸ ಈ ಕಾರ್ಯಕ್ರಮದ ವೇಳೆ ವ್ಯಕ್ತವಾಯಿತು.

