
बिजगर्णी (ता. खानापूर) ग्रामपंचायत कार्यालयीन इमारत व डिजिटल ग्रंथालयाचा उद्घाटन समारंभ मंगळवारी होणार.
खानापूर : जिल्हा प्रशासन, जिल्हा पंचायत, बेळगाव तालुका पंचायत, खानापूर आणि ग्रामपंचायत बीजगर्णी यांच्या संयुक्त विद्यमाने महात्मा गांधी राष्ट्रीय ग्रामीण रोजगार हमी योजनेअंतर्गत नव्याने उभारण्यात आलेल्या बीजगर्णी ग्रामपंचायत कार्यालयीन इमारत, डिजिटल ग्रंथालय तसेच संजीवनी शेड यांच्या उद्घाटन समारंभाचे आयोजन करण्यात आले आहे.

हा समारंभ मंगळवार, दि. 2 सप्टेंबर 2025 रोजी सकाळी 11.00 वाजता पार पडणार असून, कार्यक्रमाच्या अध्यक्षस्थानी खानापूर तालुक्याचे आमदार राहणार आहेत.
ग्रामपंचायत कार्यालयाचे उद्घाटन कर्नाटक सरकारचे माननीय सार्वजनिक बांधकाम मंत्री आणि बेळगाव जिल्ह्याचे पालकमंत्री श्री. सतीश एल. जारकीहोळी यांच्या हस्ते होणार आहे.

यावेळी प्रमुख पाहुणे म्हणून कर्नाटक सरकारच्या महिला व बालविकास मंत्री सौ. लक्ष्मी आर. हेब्बाळकर, ग्रामीण व पंचायत राज विभाग तसेच आयटी आणि बीटी मंत्री श्री. प्रियांक खरगे यांच्यासह अनेक मान्यवर उपस्थित राहणार आहेत.
या समारंभाला ग्रामपंचायत क्षेत्रातील तसेच पंचक्रोशीतील नागरिकांनी उपस्थित राहावे, असे आवाहन बिजगर्णी ग्रामपंचायतचे अध्यक्ष, उपाध्यक्ष व ग्रामपंचायत सदस्यांच्या वतीने करण्यात आले आहे.
ಖಾನಾಪುರ ತಾಲೂಕ ಬಿಜಗರ್ಣಿ ಗ್ರಾಮಪಂಚಾಯತ್ ಕಚೇರಿ ಕಟ್ಟಡ ಹಾಗೂ ಡಿಜಿಟಲ್ ಗ್ರಂಥಾಲಯ ಉದ್ಘಾಟನೆ ಸಮಾರಂಭ ನಾಳೆ.
ಖಾನಾಪುರ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಬೆಳಗಾವಿ, ತಾಲೂಕಾ ಪಂಚಾಯತ್ ಖಾನಾಪುರ ಹಾಗೂ ಬಿಜಗರ್ಣಿ ಗ್ರಾಮಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಾಣಗೊಂಡ ಹೊಸ ಗ್ರಾಮಪಂಚಾಯತ್ ಕಚೇರಿ ಕಟ್ಟಡ, ಡಿಜಿಟಲ್ ಗ್ರಂಥಾಲಯ ಹಾಗೂ ಸಂಜೀವನಿ ಶೆಡ್ ಉದ್ಘಾಟನಾ ಸಮಾರಂಭವನ್ನು ಮಂಗಳವಾರ (ದಿ. 2 ಸೆಪ್ಟೆಂಬರ್ 2025) ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಖಾನಾಪುರ ತಾಲೂಕಾ ಜನ ಪ್ರಿಯ ಶಾಸಕರಾದ ಶ್ರೀ ವಿಠ್ಠಲ ಹಲಗೇಕರ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಸರ್ಕಾರದ ಸಾರ್ವಜನಿಕ ಕಾಮಗಾರಿಗಳ ಸಚಿವರು ಹಾಗೂ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವರು ಶ್ರೀ ಸತೀಶ ಎಲ್. ಜಾರಕಿಹೊಳಿ ಅವರಿಂದ ಗ್ರಾಮಪಂಚಾಯತ್ ಕಚೇರಿ ಉದ್ಘಾಟನೆ ನಡೆಯಲಿದೆ.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸೌ. ಲಕ್ಷ್ಮೀ ಆರ್. ಹೆಬ್ಬಾಳ್ಕರ್, ಗ್ರಾಮೀಣ ಮತ್ತು ಪಂಚಾಯತ್ ರಾಜ, ಐಟಿ ಹಾಗೂ ಬಿಟಿ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಹಾಜರಾಗಲಿದ್ದಾರೆ.
ಬಿಜಗರ್ಣಿ ಗ್ರಾಮಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಪರವಾಗಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿರುವ ಹಾಗೂ ಪಂಚಕ್ರೋಶಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ವಿನಂತಿಸಲಾಗಿದೆ.
