भीमगड अभयारण्यातील गावांच्या स्थानांतरास तीव्र विरोध; अरण्य रहिवासी हितरक्षणा समितीच्या सभेत ठराव
खानापूर : “जल, जंगल, जमीन ही फक्त भौतिक मालमत्ता नसून आमचे आध्यात्मिक वारस, संस्कृती, धर्म, भाषा आणि परंपरा आहेत. कितीही आर्थिक लाभ देऊ केला तरी या गोष्टी विकता येणार नाहीत. आमिषाला बळी पडू नका, एकत्र या व स्थानांतराला ठाम विरोध करा,” असे ठाम मत विधानपरिषद सदस्य शांताराम सिद्धी यांनी व्यक्त केले.
भीमगड अभयारण्य परिसरातील गावांचे प्रस्तावित स्थानांतर रद्द करण्याच्या मागणीसाठी अरण्य रहिवासी हितरक्षणा समिती, खानापूर तालुका यांच्या वतीने मंगळवार, दि. 2 डिसेंबर 2025 रोजी सकाळी 11 वा. हेमाडगा येथे भव्य समालोचन सभेचे आयोजन करण्यात आले होते. सभेला नागरिकांनी मोठ्या संख्येने हजेरी लावून स्थानांतराविरोधात एकमुखी भूमिका घेतली. सभेच्या अध्यक्षस्थानी गावचे पुजारी नागप्पा नारायण गावडे होते. सुरुवातीला ग्रामपंचायत सदस्य दीपक गवाळकर यांनी सर्वांचे स्वागत करून सभेचा उद्देश मांडला.
यावेळी हल्ल्याळ व जोयडा तालुक्याचे माजी आमदार सुनील हेगडे यांनी मार्गदर्शन करताना सांगितले, “स्थलांतराला ठाम विरोध करा, मी संघर्षात तुमच्यासोबत कायम उभा राहीन.”
तसेच वकील संघटनेचे अध्यक्ष ईश्वर घाडी यांनी कायदेशीर लढाईसाठी पाठींबा देताना म्हटले, “नागरिकांच्या न्याय आणि हक्कासाठी आम्ही न्यायालयात तुमची बाजू भक्कमपणे मांडू आणि प्रसंगी न्यायासाठी रस्त्यावरही उतरू.”
दरम्यान भाजपाचे जिल्हा उपाध्यक्ष प्रमोद कोचेरी, संजय कुबल आणि पंडित ओगले यांनी येत्या काही दिवसांत आमदारांसोबत पत्रकार परिषद घेऊन भाजपाची भूमिका जाहीर करणार असल्याचे सांगत, स्थलांतरास आपला ठाम विरोध नोंदवला.
ग्रामपंचायत सदस्य कृष्णा गुरव यांनी तालुक्यातील लोकप्रतिनिधींनी ठोस भूमिका का घेत नाहीत असा सवाल उपस्थित केला. “दुय्यम भूमिका सोडा आणि नागरिकांच्या पाठीशी उभे रहा,” असे त्यांनी आवाहन केले.
सभेत ज्येष्ठ वकील एच एन देसाई, महाराष्ट्र एकीकरण समितीचे नेते विलास बेळगावकर, ऍड. चेतन मनेरिकर, अशोक देसाई, भैरू पाटील आणि पत्रकार विवेक गिरी यांनी स्थानांतराला विरोध करणारी भाषणे केली.
व्यासपीठावर शिरोली ग्रामपंचायत अध्यक्षा नीलम मादार, सदस्या गीता मादार, सुभाष देशपांडे, एडवोकेट सिद्धार्थ कपिलेश्वरी, विजय मादार, किशोर हेबाळकर तसेच परिसरातील मान्यवर उपस्थित होते. सभेला परिसरातील 13 गावांतील प्रमुख मंडळी मोठ्या संख्येने हजर होती.
सभेचे सूत्रसंचालन दीपक गवाळकर यांनी केले तर आभार प्रदर्शन ग्रामपंचायत सदस्य महादेव शिवोलकर यांनी केले.
ಭೀಮಗಡ ಅಭಯಾರಣ್ಯದಲ್ಲಿನ ಗ್ರಾಮಗಳ ಸ್ಥಳಾಂತರಕ್ಕೆ ತೀವ್ರ ವಿರೋಧ; ಅರಣ್ಯ ನಿವಾಸಿ ಹಿತರಕ್ಷಣೆ ಸಮಿತಿಯ ಸಭೆಯಲ್ಲಿ ತೀರ್ಮಾನ
ಖಾನಾಪುರ : “ಜಲ, ಅರಣ್ಯ, ಜಮೀನು ಇವು ಕೇವಲ ಭೌತಿಕ ಆಸ್ತಿ ಅಲ್ಲ, ನಮ್ಮ ಆತ್ಮಿಯ ಪರಂಪರೆ, ಸಂಸ್ಕೃತಿ, ಧರ್ಮ, ಭಾಷೆ ಮತ್ತು ಆಚರಣೆಗಳಾಗಿವೆ. ಎಷ್ಟು ಆರ್ಥಿಕ ಲಾಭ ನೀಡಿದರೂ ಈ ಅಮೂಲ್ಯ ಪರಂಪರೆ ಮಾರಾಟ ಮಾಡಲು ಸಾಧ್ಯವಿಲ್ಲ. ಆಮಿಷಕ್ಕೆ ಬಲಿಯಾಗಬೇಡಿ, ಒಗ್ಗೂಡಿ ಮತ್ತು ಸ್ಥಳಾಂತರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ” ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅವರು ಹೇಳಿದರು.
ಭೀಮಗಡ ಅಭಯಾರಣ್ಯ ಪ್ರದೇಶದ ಗ್ರಾಮಗಳ ಪ್ರಸ್ತಾವಿತ ಸ್ಥಳಾಂತರ ರದ್ದುಪಡಿಸುವ ಬೇಡಿಕೆಗೆ ಅರಣ್ಯ ನಿವಾಸಿ ಹಿತರಕ್ಷಣೆ ಸಮಿತಿ, ಖಾನಾಪುರ ತಾಲೂಕ ಅವರ ವತಿಯಿಂದ ಮಂಗಳವಾರ, ದಿ. 2 ಡಿಸೆಂಬರ್ 2025ರಂದು ಬೆಳಿಗ್ಗೆ 11 ಗಂಟೆಗೆ ಹೆಮಾಡಗದಲ್ಲಿ ಭವ್ಯ ಸಮಾಲೋಚನಾ ಸಭೆ ಆಯೋಜಿಸಲಾಯಿತು. ಸಭೆಗೆ ನಾಗರಿಕರು ಭಾರೀ ಸಂಖ್ಯೆಯಲ್ಲಿ ಹಾಜರಾಗಿ ಸ್ಥಳಾಂತರ ವಿರೋಧದಲ್ಲಿ ಏಕಮತದ ನಿಲುವು ತೆಗೆದುಕೊಂಡರು.
ಸಭೆಯ ಅಧ್ಯಕ್ಷತೆ ಗ್ರಾಮ ಪೂಜಾರಿ ನಾಗಪ್ಪ ನಾಯರಣ ಗಾವಡೆ ಇದ್ದರು. ಆರಂಭದಲ್ಲಿ ಗ್ರಾಮಪಂಚಾಯತ್ ಸದಸ್ಯ ದೀಪಕ್ ಗವಾಳ್ಕರ್ ಅವರು ಎಲ್ಲರಿಗೂ ಸ್ವಾಗತ ಕೋರಿದ ನಂತರ ಸಭೆಯ ಉದ್ದೇಶ ವಿವರಿಸಿದರು.
ಇದೇ ಸಂದರ್ಭದಲ್ಲಿ ಹಳಿಯಾಳ ಮತ್ತು ಜೋಯ್ಡಾ ತಾಲೂಕಿನ ಮಾಜಿ ಶಾಸಕರು ಸುನಿಲ್ ಹೆಗಡೆ ಅವರು ಮಾರ್ಗದರ್ಶನ ನೀಡುತ್ತ “ಸ್ಥಳಾಂತರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಹೋರಾಟದಲ್ಲಿ ನಾನು ಯಾವಾಗಲೂ ನಿಮ್ಮ ಜೊತೆಯಲ್ಲಿರುತ್ತೇನೆ.” ಎಂದು ಆಶ್ವಾಸನೆ ನೀಡಿದರು.
ಅದೇ ರೀತಿ ವಕೀಲರ ಸಂಘದ ಅಧ್ಯಕ್ಷ ಈಶ್ವರ ಘಾಡಿ ಅವರು ಕಾನೂನು ಹೋರಾಟಕ್ಕೆ ಬೆಂಬಲ ನೀಡುತ್ತಾ “ನಾಗರಿಕರ ನ್ಯಾಯ ಮತ್ತು ಹಕ್ಕಿಗಾಗಿ ನಾವು ನ್ಯಾಯಾಲಯದಲ್ಲಿ ನಿಮ್ಮ ಪರವಾಗಿ ಬಲಿಷ್ಠವಾಗಿ ವಾದಿಸುತ್ತೇವೆ, ಅಗತ್ಯವಿದ್ದರೆ ನ್ಯಾಯಕ್ಕಾಗಿ ರಸ್ತೆಗೂ ಇಳಿಯುತ್ತೇವೆ.” ಎಂದರು.
ಇದರ ನಡುವೆ ಬಿಜೆಪಿ ಜಿಲ್ಲೆ ಉಪಾಧ್ಯಕ್ಷ ಪ್ರಮೋದ ಕೋಚೇರಿ, ಸಂಜಯ ಕುಬಲ್ ಮತ್ತು ಪಂಡಿತ ಓಗಲೆ ಅವರು ಮುಂದಿನ ಕೆಲ ದಿನಗಳಲ್ಲಿ ಶಾಸಕರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿಯ ನಿಲುವು ಘೋಷಣೆಯಾಗಲಿದೆ ಎಂದು ಹೇಳುತ್ತಾ ಸ್ಥಳಾಂತರಕ್ಕೆ ತಮ್ಮ ತೀವ್ರ ವಿರೋಧವನ್ನು ನೊಂದಿಸಿದರು.
ಗ್ರಾಮಪಂಚಾಯತ್ ಸದಸ್ಯ ಕೃಷ್ಣ ಗುರುವ ಅವರು ತಾಲ್ಲೂಕಿನ ಜನಪ್ರತಿನಿಧಿಗಳು ಸ್ಪಷ್ಟ ನಿಲುವು ತೋರುತ್ತಿಲ್ಲ ಎಂಬ ಪ್ರಶ್ನೆ ಎತ್ತಿದರು. “ದ್ವಂದ್ವ ನಿಲುವನ್ನು ಬಿಟ್ಟು ನಾಗರಿಕರ ಬೆಂಬಲಕ್ಕೆ ನೇರವಾಗಿ ನಿಲ್ಲಿ,” ಎಂದು ಅವರು ಮನವಿ ಮಾಡಿದರು.
ಸಭೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ನಾಯಕ ವಿಲಾಸ್ ಬೆಳಗಾವ್ಕರ್, ಅಡ್ವ. ಚೇತನ ಮನೇರಿಕರ್, ಭೈರು ಪಾಟೀಲ್ ಮತ್ತು ಪತ್ರಕರ್ತ ವಿವೇಕ ಗಿರಿ ಅವರು ಸ್ಥಳಾಂತರ ವಿರೋಧಿ ಭಾಷಣಗಳನ್ನು ಮಾಡಿದರು.
ವೇದಿಕೆಯಲ್ಲಿ ಶಿರೋಳಿ ಗ್ರಾಮಪಂಚಾಯತ್ ಅಧ್ಯಕ್ಷೆ ನಿಲಂ ಮಾದಾರ್, ಸದಸ್ಯೆ ಗೀತಾ ಮಾದಾರ್, ವಿಜಯ ಮಾದಾರ್, ಕಿಶೋರ್ ಹೆಬಾಳ್ಕರ್ ಹಾಗೂ ಭಾಗದ ಗಣ್ಯರು ಉಪಸ್ಥಿತರಿದ್ದರು. ಸಭೆಗೆ ಪರಿಸರದ 13 ಗ್ರಾಮಗಳ ಪ್ರಮುಖರು ಭಾರೀ ಸಂಖ್ಯೆಯಲ್ಲಿ ಹಾಜರಿದ್ದರು.
ಸಭೆಯ ಕಾರ್ಯಕ್ರಮ ನಿರ್ವಹಣೆಯನ್ನು ದೀಪಕ್ ಗವಾಳ್ಕರ್ ಮಾಡಿದರೆ ಧನ್ಯವಾದ ಗ್ರಾಮಪಂಚಾಯತ್ ಸದಸ್ಯ ಮಹಾದೇವ ಶಿವೋಲ್ಕರ್ ಸಲ್ಲಿಸಿದರು.

