बेकवाड येथे दुर्गामाता दौडीचे भव्य आयोजन. 9 दिवस पारायण व कीर्तनाचे आयोजन.

खानापूर : खानापूर तालुक्यातील बेकवाड गावात नवरात्र उत्सव मोठ्या उत्साहात साजरा करण्यात येत आहे. सालाबादप्रमाणे यंदाही गावात दुर्गामाता दौडीचे आयोजन पारंपारिक उत्साहात झाले. गावातील हनुमान मंदिराजवळ नऊ दिवसांचा पारायण सोहळा सुरू असून, सकाळी काकड आरती, सायंकाळी प्रवचन, तर रात्री कीर्तनानंतर महाप्रसाद असा कार्यक्रम रोज भक्तिमय वातावरणात पार पडत आहे. आज शनिवारी रात्री, खानापूर तालुक्याचे आमदार विठ्ठल हलगेकर पारायण स्थळी भेट देणार आहेत.
नवरात्रोत्सवाच्या निमित्ताने नऊ दिवस गावभर दवडीचे आयोजन केले जाते. यात गावकरीच नव्हे तर शेजारील खेड्यांतील भाविकही मोठ्या संख्येने सहभागी होतात. आज पारंपारिक पद्धतीत सजवलेल्या गल्लीत आदर्श देखावा सादर करण्यात आला. यामध्ये धार्मिक आणि सांस्कृतिक मूल्यांचा संगम पाहायला मिळाला.
या दुर्गामाता दौडीत बालकांपासून ते वृद्धांपर्यंत सर्वांनी उत्साहाने सहभाग नोंदवला. महिलांचा सहभागही उल्लेखनीय राहिला. ढोल-ताशांच्या गजरात, जयघोषाच्या आरोळ्यांत गावामध्ये एक वेगळाच धार्मिक उत्साह पाहायला मिळाला.
गावकऱ्यांच्या एकत्रित प्रयत्नांमुळे आणि युवकांच्या पुढाकारामुळे हा उत्सव यशस्वीरीत्या पार पडत आहे. श्रद्धा, भक्ती आणि उत्साह यांचा सुंदर मिलाफ असलेली दुर्गामाता दौड ही बेकवाडसह संपूर्ण खानापूर तालुक्याच्या धार्मिक आणि सांस्कृतिक जिव्हाळ्याची परंपरा आहे.
ಬೆಕವಾಡ ಊರಿನಲ್ಲಿ ಭವ್ಯವಾದ ದುರ್ಗಾಮಾತಾ ದೌಡ ; 9 ದಿನ ಪಾರಾಯಣ ಮತ್ತು ಕೀರ್ತನೆಗಳ ಆಯೋಜನೆ
ಖಾನಾಪುರ : ಖಾನಾಪುರ ತಾಲ್ಲೂಕಿನ ಬೆಕವಾಡ ಗ್ರಾಮದಲ್ಲಿ ನವರಾತ್ರಿ ಉತ್ಸವವನ್ನು ಭಕ್ತಿಭಾವದಿಂದ ಹಾಗೂ ಉತ್ಸಾಹಭರಿತವಾಗಿ ಆಚರಿಸಲಾಗುತ್ತಿದೆ. ಪ್ರತಿವರ್ಷದಂತೆ ಈ ಬಾರಿಯೂ ಗ್ರಾಮದಲ್ಲಿ ದುರ್ಗಾಮಾತಾ ದೌಡ ಪಾರಂಪರಿಕ ಶೈಲಿಯಲ್ಲಿ ಭವ್ಯವಾಗಿ ಆಯೋಜಿಸಲಾಯಿತು. ಗ್ರಾಮದ ಹನುಮಾನ್ ದೇವಾಲಯದ ಬಳಿಯಲ್ಲಿ ಒಂಬತ್ತು ದಿನಗಳ ಕಾಲ ಪಾರಾಯಣ ಮಹೋತ್ಸವ ನಡೆಯುತ್ತಿದ್ದು, ಬೆಳಿಗ್ಗೆ ಕಾಕಡ ಆರತಿ, ಸಂಜೆ ಪ್ರವಚನ ಹಾಗೂ ರಾತ್ರಿ ಕೀರ್ತನೆ ಬಳಿಕ ಮಹಾಪ್ರಸಾದ ವಿತರಣೆ ಕಾರ್ಯಕ್ರಮ ದಿನವೂ ಭಕ್ತಿ ಮಯ ವಾತಾವರಣದಲ್ಲಿ ನೆರವೇರುತ್ತಿದೆ.
ಇಂದು (ಶನಿವಾರ) ರಾತ್ರಿ ಖಾನಾಪುರ ಜನ ಪ್ರಿಯ ಶಾಸಕ ವಿಠ್ಠಲ ಹಲಗೇಕರ್ ಅವರು ಪಾರಾಯಣ ಸ್ಥಳಕ್ಕೆ ಆಗಮಿಸಲಿದ್ದಾರೆ.
ನವರಾತ್ರಿಯ ಅಂಗವಾಗಿ ಗ್ರಾಮದಲ್ಲಿ ಒಂಬತ್ತು ದಿನ ದೌಡ ಆಯೋಜನೆ ಕೂಡ ನಡೆಯುತ್ತಿದೆ. ಇದರಲ್ಲಿ ಗ್ರಾಮಸ್ಥರ ಜೊತೆಗೆ ಹತ್ತಿರದ ಹಳ್ಳಿಗಳಿಂದಲೂ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಇಂದು ಪರಂಪರೆಯಂತೆ ಅಲಂಕರಿಸಿದ ಬೀದಿಯಲ್ಲಿ ಆದರ್ಶ ದರ್ಶನವನ್ನು (ದೃಶ್ಯಾವಳಿಯನ್ನು) ಪ್ರದರ್ಶಿಸಲಾಯಿತು. ಇದರಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಸಮನ್ವಯವನ್ನು ಕಾಣಬಹುದಾಗಿದೆ.
ಈ ದುರ್ಗಾಮಾತಾ ದೌಡದಲ್ಲಿ ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರೂ ಉತ್ಸಾಹದಿಂದ ಭಾಗವಹಿಸಿದರು. ಮಹಿಳೆಯರ ಪಾಲ್ಗೊಳ್ಳಿಕೆ ವಿಶೇಷವಾಗಿ ಗಮನ ಸೆಳೆಯಿತು. ಢೋಳ-ತಾಶೆಗಳ ಸದ್ದಿನಲ್ಲಿ, ಜಯಘೋಷದ ನಾದದಲ್ಲಿ ಗ್ರಾಮದಲ್ಲಿ ವಿಶೇಷ ಧಾರ್ಮಿಕ ವಾತಾವರಣ ನಿರ್ಮಾಣವಾಯಿತು.
ಗ್ರಾಮಸ್ಥರ ಸಮೂಹಿಕ ಪ್ರಯತ್ನ ಹಾಗೂ ಯುವಕರ ಮುಂದಾಳತ್ವದಿಂದ ಉತ್ಸವ ಯಶಸ್ವಿಯಾಗಿ ನೆರವೇರುತ್ತಿದೆ. ನಂಬಿಕೆ, ಭಕ್ತಿ ಮತ್ತು ಉತ್ಸಾಹಗಳ ಸಂಗಮವಾಗಿರುವ ದುರ್ಗಾಮಾತಾ ದೌಡ, ಬೆಕವಾಡ ಮಾತ್ರವಲ್ಲದೆ ಇಡೀ ಖಾನಾಪುರ ತಾಲ್ಲೂಕಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಒಡನಾಟದ ಪರಂಪರೆ ಎಂದು ಗುರುತಿಸಿಕೊಂಡಿದೆ.

