
बस थांबत नसल्याने, बेकवाड परीसरातील विद्यार्थ्यांना त्रास.
बेकवाड (प्रतिनिधी) : खानापूर-हलियाळ मार्गावरील बेकवाड या गावातील व परिसरातील विद्यार्थ्यांसाठी, बेकवाड गावच्या कत्री वर बस थांबत नसल्याने, त्रास सहन करावा लागत आहे. लवकरात लवकर बस थांबविण्यात यावीत, अन्यथा आंदोलनाचा इशारा या भागातील विद्यार्थ्यांनी व नागरिकांनी दिला आहे.
बेकवाड कत्रीवर झुंजवाड, हाडलगा, बंकीबसरीकट्टी, कोणकिकोप या पाच गावचे विद्यार्थी, बेकवाड क्रॉस वरती असलेल्या बस स्टॉपवर बससाठी थांबलेले असतात. सकाळी 8 पासून, याठिकाणी 100 ते 150 विद्यार्थ्यांची गर्दी झालेली असते. परंतु बस थांबविण्यात येत नाही त्यामुळे विद्यार्थ्यांचे हाल होत आहेत. यापूर्वी या ठिकाणी आंदोलन करण्यात आले होते. त्यामुळे आंदोलनाची दखल घेऊन या मार्गावरून जाणाऱ्या व येणाऱ्या सर्व बसना, या ठिकाणी थांबण्यास परवानगी देण्यात आली आहे. असे असले तरीही, या ठिकाणी मार्गावरून येणाऱ्या बस लोकांच्या गर्दीने भरून येत असल्याने, बेकवाड क्रॉसवर थांबलेल्या विद्यार्थ्यांना बस मध्ये जागा मिळत नाही. त्यासाठी यातून के एस आर टी सी. ने त्वरित मार्ग काढावा अन्यथा परत एकदा सरकारला व के एस आर टी सी. ला आंदोलनाचा, सामना करावा लागेल. असा इशारा या भागातील त्रस्त विद्यार्थ्यांनी व ग्रामस्थांनी दिला आहे.
ಬಸ್ ನಿಲ್ಲದ ಕಾರಣ ಬೇಕವಾಡ ಭಾಗದ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಬೇಕವಾಡ (ಪ್ರತಿನಿಧಿ) : ಖಾನಾಪುರ-ಹಳಿಯಾಳ ರಸ್ತೆಯಲ್ಲಿರುವ ಬೇಕವಾಡ ಗ್ರಾಮದ ಹಾಗೂ ಆ ಭಾಗದ ವಿದ್ಯಾರ್ಥಿಗಳಿಗೆ ಬೇಕವಾಡ ಗ್ರಾಮದ ಬಸ್ ನಿಲುಗಡೆಯಾಗದ ಕಾರಣಕ್ಕೆ ಪರದಾಡುವಂತಾಗಿದೆ. ಆದಷ್ಟು ಬೇಗ ಬಸ್ ಗಳನ್ನು ನಿಲ್ಲಿಸಬೇಕು, ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವುದಾಗಿ ಈ ಭಾಗದ ವಿದ್ಯಾರ್ಥಿಗಳು ಹಾಗೂ ನಾಗರಿಕರು ಸರಕಾರ ಹಾಗೂ ಕೆಎಸ್ ಆರ್ ಟಿಸಿಗೆ ಎಚ್ಚರಿಕೆ ನೀಡಿದ್ದಾರೆ.
ಬೇಕವಾಡ ಕತ್ರಿಯ ಐದು ಗ್ರಾಮಗಳ ಜುಂಜವಾಡ, ಹಡಲಗಾ, ಬಂಕಿಬಸರಿಕಟ್ಟಿ, ಕೊಂಕಿಕೋಪ್ನ ವಿದ್ಯಾರ್ಥಿಗಳು ಬೇಕವಾಡ ಕ್ರಾಸ್ ಮೇಲಿನ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದಾರೆ. ಬೆಳಗ್ಗೆ 8 ಗಂಟೆಯಿಂದ ಇಲ್ಲಿಗೆ 100ರಿಂದ 150 ವಿದ್ಯಾರ್ಥಿಗಳು ಸೇರುತ್ತಾರೆ. ಆದರೆ ಬಸ್ ನಿಲ್ಲಿಸದೇ ಇರುವುದರಿಂದ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಈ ಹಿಂದೆ ಈ ಸ್ಥಳದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಆದ್ದರಿಂದ ಪ್ರತಿಭಟನೆಯನ್ನು ಗಮನಿಸಿ ಈ ಮಾರ್ಗದಿಂದ ಹೋಗುವ ಮತ್ತು ಬರುವ ಎಲ್ಲಾ ಬಸ್ಗಳಿಗೆ ಈ ಸ್ಥಳದಲ್ಲಿ ನಿಲುಗಡೆಗೆ ಅವಕಾಶ ನೀಡಲಾಯಿತು. ಆದರೆ, ಈ ಮಾರ್ಗವಾಗಿ ಸಂಚರಿಸುವ ಬಸ್ ಗಳು ಕಿಕ್ಕಿರಿದು ತುಂಬಿರುವುದರಿಂದ ಬೇಕವಾಡ ಕ್ರಾಸ್ ನಲ್ಲಿ ನಿಲ್ಲುವ ವಿದ್ಯಾರ್ಥಿಗಳಿಗೆ ಬಸ್ ಗಳಲ್ಲಿ ಸೀಟು ಸಿಗುತ್ತಿಲ್ಲ. ಇದಕ್ಕಾಗಿ ಕೆ.ಎಸ್.ಆರ್.ಟಿ.ಸಿ. ಅವರು ಕೂಡಲೇ ಸಮಷ್ಟೆ ಬಗೆಹರಿಸಲು ಮನವಿ ಮಾಡಿದ್ದಾರೆ ಇಲ್ಲದಿದ್ದರೆ ಮತ್ತೊಮ್ಮೆ ಸರಕಾರ ಮತ್ತು ಕೆ.ಎಸ್.ಆರ್.ಟಿ.ಸಿ. ಆಂದೋಲನವನ್ನು ಎದುರಿಸಬೇಕಾಗುತ್ತದೆ. ಸಂತ್ರಸ್ತ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಈ ಎಚ್ಚರಿಕೆ ನೀಡಿದ್ದಾರೆ.
