दोडवाड (ता. बैलहोंगल) : जाण्या-येण्याच्या वाटेच्या वादातून नातेवाईकाचा खून.
बेळगाव ; बैलहोंगल तालुक्यातील दोडवाड गावात जाण्या-येण्याच्या वाटेवरून सुरू असलेल्या वादाचे भीषण रूप घेत मंगळवारी सायंकाळी खूनाची घटना घडली. या घटनेमुळे परिसरात खळबळ उडाली आहे.
या घटनेत महेश बसय्या उजनिमठ (वय 33) यांचा मृत्यू झाला असून, आरोपी रुद्रय्या उजनिमठ हा त्यांचा नातेवाईक असल्याची माहिती पोलिसांनी दिली. दोघांमध्ये घरासमोरील वाटेच्या वापरावरून मागील काही दिवसांपासून वाद सुरू होता.
मिळालेल्या माहितीनुसार, मंगळवारी सायंकाळी गावातील एका चिकन दुकानाजवळ रुद्रय्या उजनिमठ हा रामनगौडा दिंडिगट्टी व रवी मिर्जी यांच्याशी वाद घालत होता. त्यावेळी महेश उजनिमठ यांनी मध्यस्थी करत भांडण थांबवण्याचा प्रयत्न केला आणि तेथून निघून गेले.

यानंतर सायंकाळी सुमारे 6.45 वाजता महेश हे नागप्पा केंचरामनहाळ यांच्यासोबत घरी परतत असताना आरोपीने अचानक घरातून धारदार शस्त्र घेऊन मागून हल्ला केला. या हल्ल्यात महेश यांच्या मानेवर गंभीर जखम झाली आणि ते जागीच कोसळले.
जखमी महेश यांना तातडीने दोडवाड येथील सरकारी रुग्णालयात दाखल करण्यात आले. त्यानंतर पुढील उपचारासाठी बैलहोंगल येथील रुग्णालयात हलविण्यात आले. मात्र उपचारादरम्यान त्यांचा मृत्यू झाला.
जुन्या वैमनस्यातून आणि जाण्या-येण्याच्या वाटेच्या वादातून हा खून झाल्याचा प्राथमिक अंदाज व्यक्त केला जात असून, या प्रकरणी दोडवाड पोलीस ठाण्यात गुन्हा दाखल करण्यात आला आहे. पुढील तपास सुरू आहे.
दरम्यान, घटनास्थळी बेळगाव जिल्ह्याचे पोलीस अधीक्षक के. रामानुज, डीवायएसपी वीरेश हिरेमठ, कित्तूर सीपीआय शिवानंद गुडगनट्टी तसेच पीएसआय एच. के. पाटील यांनी भेट देऊन पाहणी केली.
ಬೈಲಹೊಂಗಲ: ದೊಡ್ವಾಡ್ನಲ್ಲಿ ಒಬ್ಬ ವ್ಯಕ್ತಿಯ ಕೊಲೆ.
ಬೈಲಹೊಂಗಲ: ತಾಲೂಕಿನ ದೊಡವಾಡ ಗ್ರಾಮದಲ್ಲಿ ದಾಟಾಡುವ ಹಾದಿ ವಿಚಾರವಾಗಿ ನಡೆದ ತಂಟೆ ಕೊಲೆಯಲ್ಲಿ ಅಂತ್ಯಗೊಂಡ ದುರ್ಘಟನೆ ಮಂಗಳವಾರ ಸಂಜೆ ನಡೆದಿದೆ.
ಮೃತನನ್ನು ಮಹೇಶ ಬಸಯ್ಯ ಉಜನಿಮಠ (33) ಎಂದು ಗುರುತಿಸಲಾಗಿದೆ. ಆರೋಪಿ ರುದ್ರಯ್ಯ ಉಜ್ಜನಿಮಠ ಮತ್ತು ಮೃತನು ಸಂಬಂಧಿಕರಾಗಿದ್ದು, ತಮ್ಮ ಮನೆಯ ಮುಂದೆ ಇರುವ ದಾಟಾಡುವ ಹಾದಿ ವಿಚಾರವಾಗಿ ಇವರಿಬ್ಬರ ನಡುವೆ ಹಿಂದಿನಿಂದಲೂ ವೈಮನಸ್ಸು ಇತ್ತು ಎನ್ನಲಾಗಿದೆ.
ಮಂಗಳವಾರ ಸಂಜೆ ದೊಡವಾಡ ಗ್ರಾಮದ ಚಿಕನ್ ಅಂಗಡಿ ಹತ್ತಿರ ಆರೋಪಿ ರುದ್ರಯ್ಯ ಈತನು ರಾಮನಗೌಡ ದಿಂಡಿಗಟ್ಟಿ ಮತ್ತು ರವಿ ಮಿರ್ಜಿ ಅವರೊಂದಿಗೆ ಜಗಳವಾಡುತ್ತಿದ್ದ ವೇಳೆ, ಮೃತ ಮಹೇಶ ಮಧ್ಯಪ್ರವೇಶಿಸಿ ಜಗಳ ಮಾಡಬೇಡ ಎಂದು ಬುದ್ಧಿ ಹೇಳಿ ಮನೆಗೆ ತೆರಳಿದ್ದಾನೆ.
ನಂತರ ಸಂಜೆ 6:45 ಗಂಟೆ ಸುಮಾರಿಗೆ ಮೃತನು ನಾಗಪ್ಪ ಕೆಂಚರಾಮನಹಾಳ ಜೊತೆ ಮನೆಗೆ ಮರಳುವಾಗ, ಆರೋಪಿ ಏಕಾಏಕಿ ಮನೆಯಿಂದ ಕುಡಗೋಲು ತೆಗೆದುಕೊಂಡು ಬಂದು ಹಿಂದಿನಿಂದ ದಾಳಿ ನಡೆಸಿದ್ದಾನೆ. ಕುತ್ತಿಗೆ ಭಾಗಕ್ಕೆ ಗಂಭೀರವಾಗಿ ಗಾಯಗೊಂಡ ಮಹೇಶ ಸ್ಥಳದಲ್ಲೇ ಕುಸಿದುಬಿದ್ದನು.
ತಕ್ಷಣ ಗಾಯಾಳುವನ್ನು ದೊಡವಾಡ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೈಲಹೊಂಗಲ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮಹೇಶ ಮೃತಪಟ್ಟಿದ್ದಾನೆ.
ಹಿಂದಿನ ದ್ವೇಷ ಹಾಗೂ ದಾಟಾಡುವ ಹಾದಿ ವಿಚಾರವೇ ಈ ಕೊಲೆಗೆ ಕಾರಣ ಎನ್ನಲಾಗಿದ್ದು, ಈ ಕುರಿತು ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಘಟನಾ ಸ್ಥಳಕ್ಕೆ ಬೆಳಗಾವಿ ಎಸ್ ಪಿ ಕೆ ರಾಮಾನುಜ ಡಿ ವೈ ಎಸ್ ಪಿ ವಿರೇಶ್ ಹಿರೇಮಠ, ಕಿತ್ತೂರು CPI ಶಿವಾನಂದ್ ಗುಡಗನಟ್ಟಿ ಪಿಎಸ್ಐ ಎಚ್ ಕೆ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು


