पत्नीची पतीकडून निर्घृण हत्या; बैलहोंगल तालुक्यात खळबळ.
बेळगाव ; बैलहोंगल तालुक्यातील गोवनकोप्पा गावात कौटुंबिक वादातून पतीने पत्नीची निर्घृण हत्या केल्याची धक्कादायक घटना शनिवारी सकाळी उघडकीस आली आहे. या घटनेमुळे परिसरात मोठी खळबळ उडाली आहे.
मृत महिलेचे नाव शिवक्क बसवराज जोडळी (वय 33) असे असून आरोपी पती बसवराज यानेच ही हत्या केल्याचे समोर आले आहे. दोघांनी प्रेमविवाह केला होता. त्यांना सौम्या, प्रविण आणि प्रभू अशी तीन मुले आहेत.

मागील सहा वर्षांपासून आरोपी दारूच्या नशेत येऊन पत्नीवर संशय घेऊन वारंवार मारहाण करत होता तसेच तिला शारीरिक व मानसिक छळ देत असल्याची माहिती मिळाली आहे. या त्रासाला कंटाळून शिवक्क या दोन मुलांना घेऊन माहेरी राहायला गेल्या होत्या, तर मुलगी सौम्या हिला आरोपीने बेंगळुरूमध्ये स्वतःकडे ठेवले होते.
दरम्यान, आरोपी अधूनमधून गावात येऊन पत्नीशी वाद घालत व तिला धमक्या देत होता. यापूर्वीही यासंदर्भात दोडवाड पोलिस ठाण्यात गुन्हा दाखल करण्यात आला होता.
शनिवारी सकाळी आरोपी घरात येऊन शिवक्क यांना शिवीगाळ करत “तुला जिवंत सोडणार नाही” अशी धमकी दिली. त्यानंतर त्याने तिचे केस ओढत घराबाहेर रस्त्यावर आणले व बेदम मारहाण केली. पुढे जवळच असलेल्या मोठ्या दगडाने डोके व पायावर वार करून तिची हत्या केली, असे तक्रारीत नमूद आहे.
या वेळी मध्ये पडून वाचवण्याचा प्रयत्न करणाऱ्या मृत महिलेच्या वडिलांनाही आरोपीने लाथाबुक्क्यांनी मारहाण केल्याचे समजते.
या प्रकरणी दोडवाड पोलिसांनी तत्काळ कारवाई करत अवघ्या 24 तासांत आरोपीला अटक करून न्यायालयीन कोठडीत पाठवले आहे. घटनास्थळी कित्तूर सीपीआय शिवानंद गुडगनट्टी तसेच पीएसआय एच. के. पाटील यांनी भेट देऊन तपास केला.
ಬೈಲಹೊಂಗಲ – ಪ್ರೀತಿಸಿ ಮದುವೆಯಾದವಳನ್ನು ಬರ್ಬರವಾಗಿ ಹತ್ಯೆಗೈದ ಪತಿ…!
ಬೈಲಹೊಂಗಲ : ಗೃಹ ಕಲಹದ ಹಿನ್ನೆಲೆ ಪತ್ನಿಯನ್ನು ಪತಿ ಕ್ರೂರವಾಗಿ ಹತ್ಯೆ ಮಾಡಿದ ದಾರುಣ ಘಟನೆ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಮೃತ ಮಹಿಳೆಯನ್ನು ಶಿವಕ್ಕ ಬಸವರಾಜ ಜೋಡಳಿ (33) ಎಂದು ಗುರುತಿಸಲಾಗಿದೆ. ಆರೋಪಿತ ಬಸವರಾಜ ಆಕೆಯನ್ನು ಪ್ರೀತಿಸಿ ಮದುವೆಯಾಗಿದ್ದು, ದಂಪತಿಗಳಿಗೆ ಸೌಮ್ಯ, ಪ್ರವೀಣ ಹಾಗೂ ಪ್ರಭು ಎಂಬ ಮೂವರು ಮಕ್ಕಳು ಇದ್ದರು.
ಕಳೆದ ಸುಮಾರು ಆರು ವರ್ಷಗಳಿಂದ ಆರೋಪಿ ಮದ್ಯಪಾನ ಮಾಡಿ ಬಂದು ಸಂಶಯದ ಹಿನ್ನೆಲೆಯಲ್ಲಿ ಪತ್ನಿಗೆ ಹಲ್ಲೆ ನಡೆಸಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದನು ಎಂದು ತಿಳಿದುಬಂದಿದೆ ಎನ್ನಲಾಗಿದೆ.
ಇದರಿಂದ ಬೇಸತ್ತ ಶಿವಕ್ಕ ಅವರು ಇಬ್ಬರು ಗಂಡು ಮಕ್ಕಳನ್ನು ಕರೆದುಕೊಂಡು ತಮ್ಮ ಮನೆಗೆ ಬಂದು ವಾಸವಾಗಿದ್ದರು. ಮಗಳು ಸೌಮ್ಯಳನ್ನು ಆರೋಪಿತನು ಬೆಂಗಳೂರಿನಲ್ಲಿ ತನ್ನೊಂದಿಗೆ ಇಟ್ಟುಕೊಂಡಿದ್ದನು.
ಈ ನಡುವೆ ಆರೋಪಿ ಆಗಾಗ್ಗೆ ಊರಿಗೆ ಬಂದು ಮೃತೆಯೊಂದಿಗೆ ತಂಟೆ ಮಾಡಿ, ಬೆದರಿಕೆ ಹಾಕುತ್ತಿದ್ದನು. ಈ ಕುರಿತು ಈಗಾಗಲೇ ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.
ಶನಿವಾರ ಬೆಳಿಗ್ಗೆ ಆರೋಪಿ ಮನೆಗೆ ಬಂದು ಮೃತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, “ನಿನ್ನನ್ನು ಜೀವಂತ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದ್ದಾನೆ. ಬಳಿಕ ಕೂದಲು ಹಿಡಿದು ಎಳೆದುಕೊಂಡು ಮನೆಯ ಮುಂದೆ ರಸ್ತೆಗೆ ಕರೆದುಕೊಂಡು ಬಂದು ಹಲ್ಲೆ ನಡೆಸಿ
ನಂತರ ಅಲ್ಲೇ ಇದ್ದ ದೊಡ್ಡ ಕಲ್ಲು ತೆಗೆದುಕೊಂಡು ತಲೆ ಹಾಗೂ ಕಾಲಿನ ಮೇಲೆ ಹೊಡೆದು ಗಂಭೀರ ಗಾಯಪಡಿಸಿ ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಧ್ಯೆ ಬಿಡಿಸಲು ಬಂದ ಮೃತೆಯ ತಂದೆಯ ಮೇಲೂ ಆರೋಪಿ ಕಾಲಿನಿಂದ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ದೊಡವಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕೇವಲ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ ಹಾಗೂ ಪಿಎಸ್ಐ ಎಚ್.ಕೆ. ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು.



