अरविंद पाटील यांची बेळगाव जिल्हा मध्यवर्ती सहकारी बँकेच्या संचालकपदी बिनविरोध निवड; उद्या खानापुरात भव्य विजयी मिरवणूक.
बेळगाव : संपूर्ण बेळगाव जिल्ह्याचे तसेच राज्यातील सहकार क्षेत्राचे लक्ष लागून राहिलेल्या बेळगाव जिल्हा मध्यवर्ती सहकारी बँकेच्या (DCC Bank) निवडणुकीत माजी आमदार आणि विद्यमान संचालक अरविंद पाटील यांची बिनविरोध निवड झाली आहे.
रविवार, दिनांक 12 ऑक्टोबर रोजी झालेल्या नामनिर्देशन प्रक्रियेत गर्लगुंजी पी.के.पी.एस. चे चेअरमन राजू सिद्धांनी यांनी आपला उमेदवारी अर्ज मागे घेतला. त्यामुळे पाटील यांच्या विरोधात कोणताही उमेदवार शिल्लक न राहिल्याने अरविंद पाटील यांची बिनविरोध निवड जाहीर करण्यात आली.
या विजयानंतर त्यांच्या समर्थकांमध्ये आनंदाचे वातावरण निर्माण झाले असून खानापुर शहरात उद्या (13 ऑक्टोबर) भव्य विजयी मिरवणुकीचे आयोजन करण्यात आले आहे. सकाळी खानापुर बसस्थानकापासून ही मिरवणूक सुरुवात होऊन मुख्य रस्त्यांमार्गे विविध भागातून फिरणार आहे.
या प्रसंगी अरविंद पाटील यांचे हारतुरे व पुष्पवृष्टीद्वारे स्वागत करण्यात येणार असून खानापुर तालुका तसेच आसपासच्या भागातील कार्यकर्ते, सहकारी क्षेत्रातील मान्यवर, सामाजिक संस्था, ग्रामपंचायत सदस्य, महिला मंडळे आणि युवक मोठ्या संख्येने सहभागी होणार आहेत. अरविंद पाटील यांच्या बिनविरोध निवडीमुळे खानापुर तालुक्यात उत्साहाचे वातावरण निर्माण झाले असून हा विश्वास त्यांच्या कार्यशैलीचा आणि जनसंपर्काचा पुरावा असल्याचे मत स्थानिक नेत्यांनी व्यक्त केले आहे.
पाटील यांनी बिनविरोध निवडीनंतर दिलेल्या प्रतिक्रियेत म्हटले की, “ही माझ्या सहकारी मित्रांची, कार्यकर्त्यांची आणि जनतेने दिलेली जबाबदारी आहे. सहकार क्षेत्र अधिक बळकट करून शेतकरी व लघुउद्योगांच्या प्रगतीसाठी मी कटिबद्ध आहे.”
उद्या होणाऱ्या विजयी मिरवणुकीत खानापुर परिसरात उत्सवी जल्लोष पाहायला मिळणार आहे.
ಅರವಿಂದ ಪಾಟೀಲರು ಬೆಳಗಾವಿ ಜಿಲ್ಲಾ ಮಧ್ಯವರ್ಥಿ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ ಅವಿರೋಧ ಆಯ್ಕೆ; ನಾಳೆ ಖಾನಾಪುರದಲ್ಲಿ ಭವ್ಯ ವಿಜಯ ಮೆರವಣಿಗೆ
ಬೆಳಗಾವಿ : ಸಂಪೂರ್ಣ ಬೆಳಗಾವಿ ಜಿಲ್ಲೆ ಹಾಗೂ ರಾಜ್ಯದ ಸಹಕಾರ ಕ್ಷೇತ್ರದ ಗಮನ ಸೆಳೆದಿದ್ದ ಬೆಳಗಾವಿ ಜಿಲ್ಲಾ ಮಧ್ಯವರ್ಥಿ ಸಹಕಾರಿ ಬ್ಯಾಂಕ್ (DCC Bank) ಚುನಾವಣೆಯಲ್ಲಿ ಮಾಜಿ ಶಾಸಕರೂ ಹಾಗೂ ಹಾಲಿ ನಿರ್ದೇಶಕರೂ ಆದ ಅರವಿಂದ ಪಾಟೀಲ ಅವರು ಅವಿರೋಧ ಆಯ್ಕೆಯಾದರು.
ಭಾನುವಾರ (ಅಕ್ಟೋಬರ್ 12) ನಡೆದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಗರ್ಲಗುಂಜಿ ಪಿ.ಕೆ.ಪಿ.ಎಸ್. ಅಧ್ಯಕ್ಷ ರಾಜು ಸಿದ್ಧಣ್ಣಿ ಅವರು ತಮ್ಮ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಅರವಿಂದ್ ಪಾಟೀಲ ಅವರ ವಿರುದ್ಧ ಯಾವುದೇ ಸ್ಪರ್ಧಿ ಉಳಿದಿರಲಿಲ್ಲ. ಇದರಿಂದ ಅರವಿಂದ ಪಾಟೀಲ ಅವಿರೋಧ ಆಯ್ಕೆ ಘೋಷಿಸಲಾಯಿತು.
ಈ ವಿಜಯದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರಲ್ಲಿ ಸಂತೋಷದ ವಾತಾವರಣ ನಿರ್ಮಾಣಗೊಂಡಿದ್ದು, ನಾಳೆ (ಅಕ್ಟೋಬರ್ 13) ಖಾನಾಪುರದಲ್ಲಿ ಭವ್ಯ ವಿಜಯ ಮೆರವಣಿಗೆಯು ನಡೆಯಲಿದೆ. ಬೆಳಗ್ಗೆ ಖಾನಾಪುರ ಬಸ್ ನಿಲ್ದಾಣದಿಂದ ಮೆರವಣಿಗೆ ಪ್ರಾರಂಭವಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯುವ ನಿರೀಕ್ಷೆಯಿದೆ.
ಈ ಸಂದರ್ಭದಲ್ಲಿ ಅರವಿಂದ ಪಾಟೀಲ ಅವರಿಗೆ ಹೂವನ ಪುಷ್ಪವೃಷ್ಟಿಯಿಂದ ಭವ್ಯ ಸ್ವಾಗತ ನೀಡಲಾಗುತ್ತದೆ. ಖಾನಾಪುರ ತಾಲ್ಲೂಕು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕಾರ್ಯಕರ್ತರು, ಸಹಕಾರ ಕ್ಷೇತ್ರದ ಗಣ್ಯರು, ಸಾಮಾಜಿಕ ಸಂಸ್ಥೆಗಳು, ಗ್ರಾಮ ಪಂಚಾಯಿತಿ ಸದಸ್ಯರು, ಮಹಿಳಾ ಮಂಡಳಿಗಳು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಅರವಿಂದ ಪಾಟೀಲ ಅವರ ಅವಿರೋಧ ಆಯ್ಕೆ ಹಿನ್ನೆಲೆಯಲ್ಲಿ ಖಾನಾಪುರ ತಾಲ್ಲೂಕಿನಲ್ಲಿ ಉತ್ಸವದ ವಾತಾವರಣ ನಿರ್ಮಾಣವಾಗಿದ್ದು, ಇದು ಅವರ ಕಾರ್ಯಶೈಲಿ ಮತ್ತು ಜನಸಂಪರ್ಕದ ನೈಜ ಸಾಕ್ಷಿಯಾಗಿದೆ ಎಂದು ಸ್ಥಳೀಯ ನಾಯಕರು ತಿಳಿಸಿದ್ದಾರೆ.
ಅವಿರೋಧ ಆಯ್ಕೆಯ ನಂತರ ಪ್ರತಿಕ್ರಿಯೆ ನೀಡಿದ ಅರವಿಂದ ಪಾಟೀಲರು: “ಇದು ನನ್ನ ಸಹಕಾರಿ ಸ್ನೇಹಿತರ, ಕಾರ್ಯಕರ್ತರ ಮತ್ತು ಜನತೆಯ ವಿಶ್ವಾಸದ ಫಲವಾಗಿದೆ. ನಾನು ಸಹಕಾರ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಿ ರೈತರು ಮತ್ತು ಸಣ್ಣ ಉದ್ಯಮಿಗಳ ಅಭಿವೃದ್ಧಿಗಾಗಿ ತೊಡಗಿಕೊಳ್ಳುತ್ತೇನೆ.” ಎಂದರು.
ನಾಳೆ ನಡೆಯಲಿರುವ ವಿಜಯ ಮೆರವಣಿಗೆಯಲ್ಲಿ ಖಾನಾಪುರ ಪಟ್ಟಣದಾದ್ಯಂತ ಹಬ್ಬದ ಸಂಭ್ರಮ ಹಾಗೂ ಉತ್ಸಾಹದ ಜಲ್ಸಾ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಅವರ ಬೆಂಬಲಿಗರು ತಿಳಿಸಿದ್ದಾರೆ.

