खानापूरात विद्यार्थ्यांसाठी अमली पदार्थ विरोधी जनजागृती शिबिर; व्यसनमुक्तीची शपथ, तरुणांनी ड्रग्जपासून दूर राहण्याचे आवाहन.
खानापूर (प्रतिनिधी) : खानापूर पोलीस विभाग व प्रशासनाच्या संयुक्त विद्यमाने मराठा मंडळ पदवीपूर्व महाविद्यालयातील विद्यार्थ्यांसाठी बुधवारी (दि. 29 जुलै) अमली पदार्थ (ड्रग्ज) विरोधी जनजागृती व व्यसनमुक्ती शिबिराचे आयोजन करण्यात आले. विद्यार्थ्यांमध्ये व्यसनमुक्तीबाबत जागरूकता निर्माण करण्यासाठी आयोजित या कार्यक्रमात मान्यवरांनी मार्गदर्शन करत व्यसनमुक्त समाज घडविण्याचे आवाहन केले.

कार्यक्रमाच्या अध्यक्षस्थानी बैलहोंगलचे डीएसपी डॉ. वीरया हिरेमठ होते. यावेळी प्रमुख अतिथी म्हणून खानापूरचे आमदार विठ्ठलराव हलगेकर, तहसीलदार दुंडाप्पा कोमार, पोलीस निरीक्षक (पीआय) एल. एच. गोवंडी, आरोग्य विभागाच्या अधिकारी महानंदा पारीषवाड, महाविद्यालयाचे प्राचार्य वाय. एच. अनगोळकर यांच्यासह मान्यवर उपस्थित होते. कार्यक्रमाची सुरुवात मान्यवरांच्या हस्ते रोपट्याला पाणी घालून करण्यात आली.

प्रास्ताविकात पीआय एल. एच. गोवंडी यांनी अमली पदार्थांच्या व्यसनामुळे आरोग्य, कुटुंब आणि समाजावर होणाऱ्या दुष्परिणामांची माहिती दिली. अमली पदार्थांचा पुरवठा करणारे अथवा त्याच्या आहारी गेलेल्या व्यक्तींची माहिती पोलीसांना द्यावी, माहिती देणाऱ्यांची ओळख पूर्णपणे गुप्त ठेवली जाईल, असे त्यांनी सांगितले.
तहसीलदार दुंडाप्पा कोमार यांनी व्यसनामुळे संपूर्ण कुटुंब उद्ध्वस्त होऊ शकते, असे सांगत विद्यार्थ्यांनी स्वतः व्यसनापासून दूर राहण्याबरोबरच व्यसनाधीन व्यक्तींचे समुपदेशन करून त्यांचे मनपरिवर्तन करण्याचा प्रयत्न करावा, असे आवाहन केले.
आरोग्य विभागाच्या अधिकारी महानंदा पारीषवाड यांनी 15 ते 35 वयोगटातील युवकांमध्ये वाढत असलेल्या व्यसनाधीनतेबाबत चिंता व्यक्त केली. तंबाखू, गुटखा, सिगारेट आणि इतर व्यसनांपासून विद्यार्थ्यांनी दूर राहावे तसेच पालकांनीही मुलांना अशा वस्तू आणण्यासाठी पाठवू नये, कारण त्याचा मुलांच्या मानसिकतेवर विपरीत परिणाम होतो, असे त्यांनी स्पष्ट केले.
प्रमुख वक्ते पत्रकार वासुदेव चौगुले यांनी विद्यार्थ्यांना पुस्तकी ज्ञानासोबत चांगल्या सवयी अंगीकारण्याचे महत्त्व पटवून दिले. अमली पदार्थांचे व्यसन कोणत्याही परिस्थितीत करू नये, शिक्षकांचा सन्मान राखावा आणि छत्रपती शिवाजी महाराज, डॉ. ए. पी. जे. अब्दुल कलाम, भगतसिंग यांसारख्या महान व्यक्तींना आदर्श मानून जीवन घडवावे, असे त्यांनी सांगितले.
यावेळी आमदार विठ्ठलराव हलगेकर यांनी अमली पदार्थांचे व्यसन ही आजच्या युवा पिढीसमोरील गंभीर समस्या असल्याचे नमूद केले. खानापूर तालुका पूर्णपणे व्यसनमुक्त व सुरक्षित करण्यासाठी पोलीस विभाग आणि प्रशासनाला आपला संपूर्ण पाठिंबा असल्याचे त्यांनी जाहीर केले. गुरुपौर्णिमेच्या निमित्ताने विद्यार्थ्यांनी व्यसनमुक्त राहण्याची शपथ घेण्याचे आवाहन करत सर्व विद्यार्थ्यांकडून व्यसनमुक्तीची शपथही देण्यात आली.
अध्यक्षीय समारोपात डीएसपी डॉ. वीरया हिरेमठ यांनी त्यांच्या कार्यक्षेत्रातील खानापूर, नंदगड, कित्तूर, नेसरी, सौंदत्ती आणि बैलहोंगल या सहा पोलीस ठाण्यांच्या हद्दीत अमली पदार्थ विरोधी जनजागृती अभियान राबविण्यात येत असल्याची माहिती दिली. विद्यार्थ्यांनी व्यसनापासून दूर राहून नियमित अभ्यास, पुनरावृत्ती आणि शिस्तबद्ध जीवनशैली स्वीकारल्यास यश निश्चित मिळते, असा संदेश त्यांनी दिला.
कार्यक्रमाचे सूत्रसंचालन व आभार प्रदर्शन प्रा. एम. एन. पाटील यांनी केले. यावेळी पीएसआय निरंजन स्वामी, पीएसआय सौ पठाडे, पोलीस अधिकारी व कर्मचारी तसेच महाविद्यालयातील विद्यार्थी, शिक्षक व प्राध्यापक मोठ्या संख्येने उपस्थित होते.
ಖಾನಾಪುರದಲ್ಲಿ ವಿದ್ಯಾರ್ಥಿಗಳಿಗಾಗಿ ಮಾದಕ ವಸ್ತು ವಿರೋಧಿ ಜಾಗೃತಿ ಶಿಬಿರ; ವ್ಯಸನಮುಕ್ತಿಯ ಪ್ರತಿಜ್ಞೆ, ಯುವಕರು ಡ್ರಗ್ಸ್ ನಂತ ಅಮಲಿ ಪದಾರ್ಥ ಗಳಿಂದ ದೂರ ಇರಬೇಕೆಂದು ಕರೆ.
ಖಾನಾಪುರ (ಪ್ರತಿನಿಧಿ) : ಖಾನಾಪುರ ಪೊಲೀಸ್ ಇಲಾಖೆ ಹಾಗೂ ಆಡಳಿತದ ಸಂಯುಕ್ತ ಆಶ್ರಯದಲ್ಲಿ ಮರಾಠಾ ಮಂಡಳ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಬುಧವಾರ (ಜುಲೈ 29) ಮಾದಕ ವಸ್ತು (ಡ್ರಗ್ಸ್) ವಿರೋಧಿ ಜಾಗೃತಿ ಹಾಗೂ ವ್ಯಸನಮುಕ್ತಿ ಶಿಬಿರವನ್ನು ಆಯೋಜಿಸಲಾಯಿತು. ವಿದ್ಯಾರ್ಥಿಗಳಲ್ಲಿ ವ್ಯಸನಮುಕ್ತಿಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮದಲ್ಲಿ ಗಣ್ಯರು ಮಾರ್ಗದರ್ಶನ ನೀಡಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಲಹೊಂಗಲದ ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಖಾನಾಪುರ ಶಾಸಕ ವಿಠ್ಠಲರಾವ್ ಹಲಗೇಕರ, ತಹಶೀಲ್ದಾರ್ ದುಂಡಪ್ಪ ಕೋಮಾರ, ಪೊಲೀಸ್ ಇನ್ಸ್ಪೆಕ್ಟರ್ (ಪಿಐ) ಎಲ್. ಎಚ್. ಗೋವಂಡಿ, ಆರೋಗ್ಯ ಇಲಾಖೆಯ ಅಧಿಕಾರಿ ಮಹಾನಂದಾ ಪಾರೀಷವಾಡ, ಮಹಾವಿದ್ಯಾಲಯದ ಪ್ರಾಂಶುಪಾಲ ವೈ. ಎಚ್. ಅನಗೋಳಕರ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಚಾಲನೆ ನೀಡುವ ವೇಳೆ ಗಣ್ಯರು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದರು.
ಪ್ರಾಸ್ತಾವಿಕ ಭಾಷಣದಲ್ಲಿ ಪಿಐ ಎಲ್. ಎಚ್. ಗೋವಂಡಿ ಅವರು ಮಾದಕ ವಸ್ತುಗಳ ವ್ಯಸನದಿಂದ ಆರೋಗ್ಯ, ಕುಟುಂಬ ಹಾಗೂ ಸಮಾಜದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ವಿವರಿಸಿದರು. ಮಾದಕ ವಸ್ತುಗಳ ಸರಬರಾಜು ಮಾಡುವವರು ಅಥವಾ ಅದರ ವ್ಯಸನಕ್ಕೆ ಒಳಗಾದವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ ಅವರು, ಮಾಹಿತಿ ನೀಡುವವರ ಗುರುತನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗುವುದು ಎಂದು ಭರವಸೆ ನೀಡಿದರು.
ತಹಶೀಲ್ದಾರ್ ದುಂಡಪ್ಪ ಕೋಮಾರ ಅವರು ಮಾತನಾಡಿ, ವ್ಯಸನದಿಂದ ಒಂದು ಕುಟುಂಬವೇ ಸಂಪೂರ್ಣವಾಗಿ ಹಾಳಾಗಬಹುದು ಎಂದು ಎಚ್ಚರಿಸಿದರು. ವಿದ್ಯಾರ್ಥಿಗಳು ತಾವು ವ್ಯಸನದಿಂದ ದೂರವಿರುವುದರ ಜೊತೆಗೆ ವ್ಯಸನಕ್ಕೆ ಒಳಗಾದವರ ಮನವೊಲಿಸಿ, ಅವರಲ್ಲಿ ಬದಲಾವಣೆ ತರಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಆರೋಗ್ಯ ಇಲಾಖೆಯ ಅಧಿಕಾರಿ ಮಹಾನಂದಾ ಪಾರೀಷವಾಡ ಅವರು 15 ರಿಂದ 35 ವರ್ಷದೊಳಗಿನ ಯುವಕರಲ್ಲಿ ಹೆಚ್ಚುತ್ತಿರುವ ವ್ಯಸನದ ಬಗ್ಗೆ ಆತಂಕ ವ್ಯಕ್ತಪಡಿಸಿದರು. ತಂಬಾಕು, ಗುಟ್ಕಾ, ಸಿಗರೇಟ್ ಹಾಗೂ ಇತರ ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ದೂರವಿರಬೇಕು. ಅಲ್ಲದೆ, ಪಾಲಕರು ಸಹ ತಮ್ಮ ಮಕ್ಕಳನ್ನು ಇಂತಹ ವಸ್ತುಗಳನ್ನು ತರಲು ಕಳುಹಿಸಬಾರದು, ಏಕೆಂದರೆ ಇದರಿಂದ ಮಕ್ಕಳ ಮನಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀಳುತ್ತದೆ ಎಂದು ಅವರು ತಿಳಿಸಿದರು.
ಮುಖ್ಯ ಭಾಷಣಕಾರರಾದ ಪತ್ರಕರ್ತ ವಾಸುದೇವ ಚೌಗುಲೆ ಅವರು ವಿದ್ಯಾರ್ಥಿಗಳಿಗೆ ಪಠ್ಯ ಜ್ಞಾನದ ಜೊತೆಗೆ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮಹತ್ವವನ್ನು ವಿವರಿಸಿದರು. ಯಾವುದೇ ಕಾರಣಕ್ಕೂ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗಬಾರದು, ಶಿಕ್ಷಕರಿಗೆ ಗೌರವ ನೀಡಬೇಕು ಹಾಗೂ ಛತ್ರಪತಿ ಶಿವಾಜಿ ಮಹಾರಾಜ, ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಮತ್ತು ಭಗತ್ ಸಿಂಗ್ ಅವರಂತಹ ಮಹನೀಯರನ್ನು ಆದರ್ಶವಾಗಿ ತೆಗೆದುಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ವಿಠ್ಠಲರಾವ್ ಹಲಗೇಕರ ಅವರು ಮಾದಕ ವಸ್ತುಗಳ ವ್ಯಸನವು ಇಂದಿನ ಯುವ ಪೀಳಿಗೆಯ ಮುಂದಿರುವ ಗಂಭೀರ ಸಮಸ್ಯೆಯಾಗಿದೆ ಎಂದು ಹೇಳಿದರು. ಖಾನಾಪುರ ತಾಲ್ಲೂಕನ್ನು ಸಂಪೂರ್ಣವಾಗಿ ವ್ಯಸನಮುಕ್ತ ಹಾಗೂ ಸುರಕ್ಷಿತವಾಗಿಸಲು ಪೊಲೀಸ್ ಇಲಾಖೆ ಮತ್ತು ಆಡಳಿತಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು. ಗುರುಪೂರ್ಣಿಮೆಯ ಪ್ರಯುಕ್ತ ವಿದ್ಯಾರ್ಥಿಗಳು ವ್ಯಸನಮುಕ್ತರಾಗಿರುವ ಪ್ರತಿಜ್ಞೆ ಕೈಗೊಳ್ಳಬೇಕು ಎಂದು ಕರೆ ನೀಡಿದ ಅವರು, ಎಲ್ಲಾ ವಿದ್ಯಾರ್ಥಿಗಳಿಂದ ವ್ಯಸನಮುಕ್ತಿಯ ಪ್ರತಿಜ್ಞೆ ಬೋಧಿಸಿದರು.
ಅಧ್ಯಕ್ಷೀಯ ಸಮಾರೋಪ ಭಾಷಣದಲ್ಲಿ ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ ಅವರು ತಮ್ಮ ವ್ಯಾಪ್ತಿಯ ಖಾನಾಪುರ, ನಂದಗಡ, ಕಿತ್ತೂರು, ನೇಸರಗಿ, ಸವದತ್ತಿ ಹಾಗೂ ಬೈಲಹೊಂಗಲ ಈ ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತು ವಿರೋಧಿ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ವ್ಯಸನದಿಂದ ದೂರವಿದ್ದು, ನಿಯಮಿತ ಅಧ್ಯಯನ, ಪುನರಾವರ್ತನೆ ಹಾಗೂ ಶಿಸ್ತುಬದ್ಧ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಯಶಸ್ಸು ಖಚಿತ ಎಂದು ಸಂದೇಶ ನೀಡಿದರು.
ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಪ್ರಾ. ಎಂ. ಎನ್. ಪಾಟೀಲ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಪಿಎಸ್ಐ ನಿರಂಜನ್ ಸ್ವಾಮಿ, ಪಿಎಸ್ಐ ಶ್ರೀಮತಿ ಪಠಾಡೆ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪ್ರಾಧ್ಯಾಪಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


