मुख्य न्यायाधीशावर जोडे फेकण्याच्या घटनेचा निषेध – खानापूर वकील संघटनेच्या वतीने तहसीलदारांना निवेदन.
खानापूर (ता. खानापूर): दिल्ली येथील वकील राकेश किशोर तिवारी यांनी सर्वोच्च न्यायालयात कार्यवाहीदरम्यान भारताचे मुख्य न्यायाधीश माननीय श्री. बी. आर. गवई यांच्या दिशेने जोडा फेकल्याच्या घटनेचा खानापूर ॲडव्होकेट्स बार असोसिएशनने तीव्र निषेध करूंन ठराव पास केला. व शासनाला पाठविण्यासाठी वकील संघटनेचे अध्यक्ष ईश्वर घाडी यांच्या नेतृत्वाखाली तहसीलदारांना निवेदन सुद्धा सादर करण्यात आले. निवेदनाचा स्वीकार उप तहसीलदार सोमशेखर संगोळी यांनी केला.
या घटनेविरोधात आज ( बुधवार दिनांक. 8 ऑक्टोबर 2025) रोजी, असोसिएशनच्या सभागृहात अध्यक्ष ॲड. आय. आर. घाडी यांच्या अध्यक्षतेखाली व्यवस्थापन समिती व सदस्यांची विशेष बैठक घेण्यात आली. व बैठकीत या प्रकरणावर सविस्तर चर्चा करण्यात आली. तसेच देशाच्या घटनेला व “न्यायालयाच्या सन्मानाला डाग आणणारी आणि अत्यंत खेदजनक कृती” असे वर्णन करत, सभेने एकमुखाने ठराव मंजूर करून निषेध नोंदविला. या प्रसंगी सदर घटनेच्या निषेधार्थ तहसीलदार, खानापूर यांच्यामार्फत शासनाला निवेदन सादर करण्याचा निर्णय घेण्यात आला. व खानापूरचे उप तहसीलदार सोमशेखर संगोळी यांना निवेदन सादर केले.
तत्पूर्वी झालेल्या बैठकीत ॲड. पी. एन. बाळेकुंद्री यांनी प्रस्ताव मांडला व ॲड. एच. एन. देसाई यांनी अनुमोदन दिले. ठराव एकमताने मंजूर करण्यात आला.
बार असोसिएशनने शासनाकडे न्यायालयीन सुरक्षेसंबंधी आवश्यक उपाययोजना करण्याची मागणी केली. तसेच 8 ऑक्टोबर रोजी न्यायालयीन कामकाजावर बहिष्कार घातला व कामकाजातील प्रकरणांमध्ये कोणतेही प्रतिकूल आदेश देऊ नयेत, अशी विनंतीही खानापूरच्या न्यायाधीशांना करण्यात आली आहे.
यावेळी अध्यक्ष ॲड. आय. आर. घाडी, उपाध्यक्ष ॲड. के. जी. कळेकर, सचिव ॲड. एम. वाय. कदम, खजिनदार ॲड. जी. जी. पाटील, एडवोकेट चेतन मनेरिकर, ॲड एस के नंदगडी, ॲड सिद्धार्थ कपिलेश्वरी, ॲड सुरेश भोसले, ॲड रुद्रगौडा पाटील, ॲड लंगोटी, ॲड हेरेकर, ॲड सुरेश लोटूलकर, ॲड स्वाती पाटील, ॲड सुरेखा उप्पीन तसेच बार असोसिएशनचे सर्व सदस्य व पदाधिकारी उपस्थित होते.
ಮುಖ್ಯ ನ್ಯಾಯಾಧೀಶರ ಮೇಲೆ ಪಾದರಕ್ಷೆ ಎಸೆದ ಘಟನೆ ಬಗ್ಗೆ ಖಂಡನೆ ವ್ಯಕ್ತ– ಖಾನಾಪುರ ವಕೀಲರ ಸಂಘದ ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಕೆ.
ಖಾನಾಪುರ (ತಾ. ಖಾನಾಪುರ):
ದೆಹಲಿಯ ವಕೀಲ ರಾಕೇಶ್ ಕಿಶೋರ್ ತಿವಾರಿ ಅವರು ಸುಪ್ರೀಂ ಕೋರ್ಟ್ನಲ್ಲಿ ನಡೆದ ವಿಚಾರಣೆ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ ಮಾನ್ಯ ಶ್ರೀ. ಬಿ. ಆರ್. ಗವೈ ಅವರತ್ತ ಪಾದರಕ್ಷೆ ಎಸೆದ ಘಟನೆಗೆ ಖಾನಾಪುರ ಅಡ್ವೋಕೇಟ್ಸ್ ಬಾರ್ ಅಸೋಸಿಯೇಶನ್ ತೀವ್ರ ಖಂಡನೆ ವ್ಯಕ್ತಪಡಿಸಿ ನಿರ್ಣಯ ಅಂಗೀಕರಿಸಿತು. ಈ ಕುರಿತು ಸರ್ಕಾರಕ್ಕೆ ಮನವಿ ಕಳುಹಿಸಲು ವಕೀಲರ ಸಂಘದ ಅಧ್ಯಕ್ಷ ಅಡ್ವೊ. ಈಶ್ವರ ಘಾಡಿ ಅವರ ನೇತೃತ್ವದಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಮನವಿಯನ್ನು ಉಪ ತಹಶೀಲ್ದಾರ ಸೋಮನಾಥ ಸಂಗೋಳ್ಳಿ ಅವರು ಸ್ವೀಕರಿಸಿದರು.
ಈ ಘಟನೆಯ ವಿರೋಧವಾಗಿ ಇಂದು (ಬುಧವಾರ, ದಿನಾಂಕ 8 ಅಕ್ಟೋಬರ್ 2025) ಅಸೋಸಿಯೇಶನ್ ಸಭಾಂಗಣದಲ್ಲಿ ಅಧ್ಯಕ್ಷ ಅಡ್ವೊ. ಐ. ಆರ್. ಘಾಡಿ ಅವರ ಅಧ್ಯಕ್ಷತೆಯಲ್ಲಿ ನಿರ್ವಹಣಾ ಸಮಿತಿ ಹಾಗೂ ಸದಸ್ಯರ ವಿಶೇಷ ಸಭೆ ನಡೆಯಿತು. ಸಭೆಯಲ್ಲಿ ಈ ವಿಷಯದ ಕುರಿತು ಸವಿಸ್ತಾರ ಚರ್ಚೆ ನಡೆದು. ದೇಶದ ಸಂವಿಧಾನ ಮತ್ತು “ನ್ಯಾಯಾಲಯದ ಗೌರವಕ್ಕೆ ಧಕ್ಕೆ ತರುವ ಹಾಗೂ ಅತ್ಯಂತ ಖೇದಕರ ಘಟನೆ” ಎಂದು ವರ್ಣನೆ ನೀಡಿ, ಸಭೆಯಲ್ಲಿ ಏಕಮತದಿಂದ ಖಂಡನಾ ನಿರ್ಣಯ ಅಂಗೀಕರಿಸಲಾಯಿತು.
ಸಭೆಯಲ್ಲಿ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವ ನಿರ್ಧಾರ ಕೈಗೊಳ್ಳಲಾಯಿತು ಮತ್ತು ಖಾನಾಪುರ ಉಪ ತಹಶೀಲ್ದಾರ ಸೋಮನಾಥ ಸಂಗೋಳ್ಳಿ ಅವರಿಗೆ ಮನವಿ ನೀಡಲಾಯಿತು.
ಸಭೆಯ ಆರಂಭದಲ್ಲಿ ಅಡ್ವೊ. ಪಿ. ಎನ್. ಬಾಳೇಕುಂದ್ರಿ ಅವರು ಪ್ರಸ್ತಾವನೆ ಮಂಡಿಸಿದರು ಹಾಗೂ ಅಡ್ವೊ. ಎಚ್. ಎನ್. ದೇಸಾಯಿ ಅವರು ಅನುಮೋದನೆ ನೀಡಿದರು. ನಿರ್ಣಯವನ್ನು ಏಕಮತದಿಂದ ಅಂಗೀಕರಿಸಲಾಯಿತು.
ಬಾರ್ ಅಸೋಸಿಯೇಶನ್ ಸರ್ಕಾರದತ್ತ ನ್ಯಾಯಾಲಯದ ಭದ್ರತೆ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ಜೊತೆಗೆ 8 ಅಕ್ಟೋಬರ್ ರಂದು ನ್ಯಾಯಾಲಯದ ಕಾರ್ಯದಿಂದ ಬಹಿಷ್ಕಾರ ಘೋಷಿಸಿ, ಕಾರ್ಯನಿರ್ವಹಣೆಯ ವೇಳೆ ಯಾವುದೇ ಪ್ರತಿಕೂಲ ಆದೇಶಗಳನ್ನು ನೀಡದಂತೆ ಖಾನಾಪುರ ನ್ಯಾಯಾಧೀಶರಿಗೆ ವಿನಂತಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಅಡ್ವೊ. ಐ. ಆರ್. ಘಾಡಿ, ಉಪಾಧ್ಯಕ್ಷ ಅಡ್ವೊ. ಕೆ. ಜಿ. ಕಳ್ಳೇಕರ್, ಕಾರ್ಯದರ್ಶಿ ಅಡ್ವೊ. ಎಂ. ವೈ. ಕದಮ, ಖಜಾಂಚಿ ಅಡ್ವೊ. ಜಿ. ಜಿ. ಪಾಟೀಲ್, ಅಡ್ವೊ. ಚೇತನ ಮನೇರಿಕರ್, ಅಡ್ವೊ. ಎಸ್. ಕೆ. ನಂದಗಡಿ, ಅಡ್ವೊ. ಸಿದ್ಧಾರ್ಥ ಕಪಿಲೇಶ್ವರಿ, ಅಡ್ವೊ. ಸುರೇಶ್ ಭೋಸಲೆ, ಅಡ್ವೊ. ರುದ್ರಗೌಡ ಪಾಟೀಲ್, ಅಡ್ವೊ. ಲಂಗೋಟಿ, ಅಡ್ವೊ. ಹೇರೆಕರ, ಅಡ್ವೊ. ಸುರೇಶ್ ಲೋಟೂಲ್ಕರ್, ಅಡ್ವೊ. ಸ್ವಾತಿ ಪಾಟೀಲ್, ಅಡ್ವೊ. ಸುರೇಖಾ ಉಪ್ಪೀನ್ ಹಾಗೂ ಬಾರ್ ಅಸೋಸಿಯೇಶನ್ನ ಎಲ್ಲಾ ಸದಸ್ಯರು ಮತ್ತು ಪದಾಧಿಕಾರಿಗಳು ಹಾಜರಿದ್ದರು.

