जांबोटी–खानापूर रस्त्यावर अज्ञात वाहनाची धडक; गंभीर जखमी तरुणाचा उपचारादरम्यान मृत्यू – वाहनचालक फरार..
खानापूर : जांबोटी–खानापूर मुख्य रस्त्यावर झालेल्या भीषण अपघातात गंभीर जखमी झालेल्या शिवम संजय कुंभार (वय 17 वर्षे, रा. नागुर्डावाडा, ता. खानापूर) या तरुणाचा उपचारादरम्यान मृत्यू झाला आहे. सोमवार दिनांक 17 नोव्हेंबर रोजी सकाळी झालेल्या या अपघातामध्ये अज्ञात वाहनाने शिवमला जोरदार धडक दिल्यानंतर वाहनचालक घटनास्थळावरून वाहनासह पसार झाल्याची माहिती मिळाली आहे.
घटनेविषयी माहिती अशी की, सोमवार दिनांक 17 नोव्हेंबर 2025 रोजी सकाळी सुमारास 8 ते 9 दरम्यान शिवम हा जांबोटीहून खानापूर दिशेने पायी चालत (वाकिंग करत) येत होता. नागुर्डावाडा गाव हद्दीतील मोदेकोप क्रॉसजवळ वड्डिनावर यांच्या शेताजवळ पोहोचताच जांबोटीच्या दिशेने वेगाने येणाऱ्या अज्ञात वाहनाने बेफिकीर व निष्काळजीपणे त्याला जोराची धडक दिली.
या धडकेत शिवमच्या डोक्याला तसेच उजव्या बाजूच्या पाठीस गंभीर दुखापती झाल्या. अपघातानंतर गंभीर जखमी अवस्थेत त्याला तत्काळ खानापूर येथील प्राथमिक आरोग्य केंद्रात प्रथमोपचार करून बेळगाव येथील खाजगी रुग्णालयात हलविण्यात आले. मात्र उपचारांचा काहीही उपयोग न होता मंगळवार दिनांक 18 नोव्हेंबर रोजी दुपारी 2:45 वाजता त्याचा दुर्दैवी मृत्यू झाला.
दरम्यान, मृतदेह खाजगी रुग्णालयातून बेळगाव जिल्हा रुग्णालयात उत्तरीय तपासणीसाठी हलविण्यात आला असून, उत्तरीय तपासणी पूर्ण झाल्यानंतर रात्री मृतदेह नातेवाईकांच्या ताब्यात देण्यात आला आहे. अपघातानंतर फरार झालेल्या आरोपी वाहनचालकाचा शोध सुरू आहे.
या प्रकरणी खानापूर पोलीस ठाण्यात गुन्हा क्र. 243/2025 भादंवि कलम 134, 281, 187 तसेच मोटार वाहन कायदा कलम 125(9) अंतर्गत गुन्हा नोंद करण्यात आला असून पीएसआय एम. बी. बिरादार पुढील तपास करीत आहेत.
ಜಾಂಬೋಟಿ–ಖಾನಾಪುರ ರಸ್ತೆಯಲ್ಲಿ ಅಜ್ಞಾತ ವಾಹನದ ಡಿಕ್ಕಿ; ಗಂಭೀರವಾಗಿ ಗಾಯಗೊಂಡ ಯುವಕನ ಚಿಕಿತ್ಸೆ ಸಂದರ್ಭದಲ್ಲಿ ಸಾವು – ವಾಹನ ಚಾಲಕ ಪರಾರಿ..
ಖಾನಾಪುರ : ಜಾಂಬೋಟಿ–ಖಾನಾಪುರ ಮುಖ್ಯ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಿವಮ್ ಸಂಜಯ ಕುಂಭಾರ (ವಯಸ್ಸು 17 ವರ್ಷ,ಸಾ: ನಾಗುರ್ಡಾವಾಡಾ, ತಾ. ಖಾನಾಪುರ) ಎಂಬ ಯುವಕನು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಸೋಮವಾರ 17 ನವೆಂಬರ್ ಬೆಳಿಗ್ಗೆ ನಡೆದ ಈ ಅಪಘಾತದಲ್ಲಿ ಅಜ್ಞಾತ ವಾಹನವು ಶಿವಂಗೆ ರಭಸದಿಂದ ಡಿಕ್ಕಿ ಹೊಡೆದ ನಂತರ ವಾಹನಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ.
ಘಟನೆಯ ವಿವರ — ಸೋಮವಾರ ದಿನಾಂಕ 17 ನವೆಂಬರ್ 2025 ಬೆಳಿಗ್ಗೆ ಸುಮಾರು 8 ರಿಂದ 9 ಗಂಟೆಗಳ ನಡುವೆ, ಶಿವಮ್ ಜಾಂಬೋಟಿಯಿಂದ ಖಾನಾಪುರ ದಿಕ್ಕಿಗೆ ಕಾಲ್ನಡಿಗೆಯಲ್ಲಿ (ವಾಕಿಂಗ್ ಮಾಡುತ್ತ) ಬರುತ್ತಿದ್ದ. ನಾಗುರ್ಡಾವಾಡಾ ಗ್ರಾಮದ ಹದ್ದಿಯಲ್ಲಿರುವ ಮೊಡೆಕೋಪ ಕ್ರಾಸ್ ಸಮೀಪ, ವಡ್ಡಿನವರ ಅವರ ಹೊಲದ ಬಳಿ ತಲುಪುತ್ತಿದ್ದಂತೆಯೇ ಜಾಂಬೋಟಿ ದಿಕ್ಕಿನಿಂದ ವೇಗವಾಗಿ ಬರುತ್ತಿದ್ದ ಅಜ್ಞಾತ ವಾಹನವು ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಾಗಿ ವಾಹನ ಚಲಾಯಿಸಿ ಅವನಿಗೆ ರಭಸದಿಂದ ಡಿಕ್ಕಿ ಹೊಡೆದಿತ್ತು.
ಡಿಕ್ಕಿಯಿಂದ ಶಿವಮ್ ಅವರ ತಲೆಗೆ ಹಾಗೂ ಬಲಭಾಗದ ಬೆನ್ನಿಗೆ ಗಂಭೀರ ಗಾಯಗಳು ಸಂಭವಿಸಿದ್ದವು. ಅಪಘಾತದ ನಂತರ ಅವರನ್ನು ಗಂಭೀರ ಪರಿಸ್ಥಿತಿಯಲ್ಲಿ ತಕ್ಷಣ ಖಾನಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ, ನಂತರ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ದಿನಾಂಕ 18 ನವೆಂಬರ್ ಮಧ್ಯಾಹ್ನ 2:45 ಗಂಟೆಗೆ ದುರದೃಷ್ಟಕರವಾಗಿ ಅವರ ಸಾವು ಸಂಭವಿಸಿದೆ.
ಈ ನಡುವೆ, ಖಾಸಗಿ ಆಸ್ಪತ್ರೆಯಿಂದ ಮೃತದೇಹವನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸಲಾಗಿದ್ದು, ಪರೀಕ್ಷೆ ನಂತರ ರಾತ್ರಿ ಮೃತದೇಹವನ್ನು ಸಂಬಂಧಿಕರ ವಶಕ್ಕೆ ಹಸ್ತಾಂತರಿಸಲಾಗಿದೆ. ಅಪಘಾತದ ನಂತರ ಪರಾರಿಯಾಗಿರುವ ಆರೋಪಿತ ವಾಹನ ಚಾಲಕನ ಹುಡುಕಾಟ ಮುಂದುವರಿದಿದೆ.
ಈ ಪ್ರಕರಣ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 243/2025 ಭಾರತೀಯ ದಂಡ ಸಂಹಿತೆ ಕಲಂ 134, 281, 187 ಹಾಗು ಮೋಟಾರ್ ವಾಹನ ಕಾಯ್ದೆ ಕಲಂ 125(9) ಅಡಿಯಲ್ಲಿ ಪ್ರಕರಣ ದಾಖಲ ಮಾಡಲಾಗಿದ್ದು ಪಿಎಸ್ಐ ಎಂ. ಬಿ. ಬಿರಾದಾರ ಅವರು ಮುಂದಿನ ತನಿಖೆ ನಡೆಸುತ್ತಿದ್ದಾರೆ.


