खानापूर-नंदगड मार्गावर रूमेवाडी क्रॉस नजीक झाड कोसळल्याने वाहतूक ठप्प
खानापूर : खानापूर-नंदगड मार्गावर रूमेवाडी क्रॉसजवळ आज दुपारी वादळ-पावसामुळे एक भले मोठे झाड रस्त्यावर कोसळले. त्यामुळे या मार्गावरील वाहतूक पूर्णपणे ठप्प झाली होती. परंतु वन खात्याने हे झाड हठविण्यास सुरुवात केली आहे.
सुदैवाने झाड कोसळल्याच्या वेळी कोणतेही वाहन किंवा नागरिक त्या ठिकाणी नसल्याने मोठा अनर्थ टळला. हा मार्ग नेहमीच गजबजलेला असून वाहनांची व नागरिकांची सतत वर्दळ असते. मात्र झाड पडल्याने वाहतूक अडथळली असून लहान वाहने बाजूच्या कच्च्या रस्त्याने मार्गक्रमण करत आहेत. तथापि, अवजड वाहनांना या मार्गाने जाता येत नाही. या रस्त्यावर या झाडाला लागून अनेक झाडे पडण्याच्या स्थितीत आहेत. त्यासाठी वन खात्याने व पीडब्ल्यूडी खात्याने याकडे लक्ष देऊन धोकादायक स्थितीत असलेली झाडे काढण्याची मागणी नागरिकांतून होत आहे.
वन खात्याने याबाबतची तात्काळ दखल घेतली असून, सध्या वन खात्याचे आर एफ ओ श्रीकांत पाटील यांनी रस्त्यावर पडलेले हे झाड रस्त्यावरून हठविले आहे. त्यामुळे प्रवासी वर्गातून समाधान व्यक्त होत आहे
ಖಾನಾಪುರ-ನಂದಗಡ ರಸ್ತೆ ರುಮೇವಾಡಿ ಕ್ರಾಸ್ ಹತ್ತಿರ ಮರ ಬಿದ್ದು ಸಂಚಾರ ಸ್ಥಗಿತ
ಖಾನಾಪುರ : ಖಾನಾಪುರ-ನಂದಗಡ ಮಾರ್ಗದ ರುಮೇವಾಡಿ ಕ್ರಾಸ್ ಬಳಿ ಇಂದು ಮಧ್ಯಾಹ್ನ ಮಳೆ-ಗಾಳಿಯ ತೀವ್ರತೆಗೆ ಭಾರೀ ದೊಡ್ಡ ಮರ ಒಂದು ರಸ್ತೆ ಮೇಲೆ ಬಿದ್ದು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಅದೃಷ್ಟವಶಾತ್, ಮರ ಬಿದ್ದ ಸಮಯದಲ್ಲಿ ಯಾವುದೇ ವಾಹನ ಅಥವಾ ನಾಗರಿಕರು ಅಲ್ಲಿರಲಿಲ್ಲ. ಹೀಗಾಗಿ ದೊಡ್ಡ ಅನಾಹುತ ತಪ್ಪಿದೆ. ಈ ಮಾರ್ಗದಲ್ಲಿ ಸದಾ ವಾಹನಗಳ ಓಡಾಟ ಹಾಗೂ ನಾಗರಿಕರ ಸಂಚಾರ ಜೋರಾಗಿರುತ್ತದೆ. ಆದರೆ ಮರ ಬಿದ್ದ ಪರಿಣಾಮ ಸಣ್ಣ ವಾಹನಗಳು ಬದಿಯ ಕಚ್ಚಾ ರಸ್ತೆಯಿಂದ ಸಂಚಾರ ಮಾಡುತ್ತಿದ್ದು, ಭಾರಿ ವಾಹನಗಳಿಗೆ ಈ ಮಾರ್ಗ ಮುಚ್ಚಲಾಗಿದೆ.
ಈ ರಸ್ತೆಯಲ್ಲಿಯೇ ಇನ್ನೂ ಹಲವು ಮರಗಳು ಕುಸಿಯುವ ಸ್ಥಿತಿಯಲ್ಲಿದ್ದು, ಅವುಗಳನ್ನು ಅರಣ್ಯ ಇಲಾಖೆ ಹಾಗೂ ಪಿಡಬ್ಲ್ಯೂಡಿ ಇಲಾಖೆಯವರು ತಕ್ಷಣವೇ ತೆರವುಗೊಳಿಸಬೇಕೆಂದು ನಾಗರಿಕರು ಆಗ್ರಹ ವ್ಯಕ್ತಪಡಿಸಿದ್ದಾರೆ.
ಘಟನೆಯ ನಂತರ ಅರಣ್ಯ ಇಲಾಖೆಯ ಆರ್ಎಫ್ಒ ಶ್ರೀಕಾಂತ ಪಾಟೀಲ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ರಸ್ತೆ ಮೇಲೆ ಬಿದ್ದಿದ್ದ ಮರವನ್ನು ತೆರವುಗೊಳಿಸಿದರು. ಇದರ ಪರಿಣಾಮ ಸಂಚಾರ ಸುಗಮವಾಗಿದ್ದು, ಪ್ರಯಾಣಿಕರು ತೃಪ್ತಿ ವ್ಯಕ್ತಪಡಿಸಿದ್ದಾರೆ.



