खानापूर-नंदगड मार्गावर गवि रेड्यांचा कळप; वाहनधारकांची उडाली धांदल, ग्रामस्थांत भीतीचे वातावरण.
खानापूर (ता.18): खानापूर-नंदगड मार्गावर करंबळ व कौंदल गावांच्या दरम्यान गवि रेड्यांचा मोठा कळप आढळून आला. शुक्रवारी (दि.17 ऑक्टोबर 2025) सायंकाळी सुमारे 7:30 वाजण्याच्या सुमारास हा कळप रस्त्याच्या मधोमध थांबल्याने काही काळ वाहतुकीस अडथळा निर्माण झाला होता.
या घटनेमुळे दुचाकी आणि चारचाकी वाहनचालकांना भीतीने वाहनं थांबवावी लागली, तर काही वाहनचालकांनी गवि रेड्यांचा कळप हुसकावून लावण्याचा प्रयत्न केला. परिस्थिती नियंत्रणात आणण्यासाठी स्थानिक नागरिकांनी पुढाकार घेतला.
दरम्यान, मास्केनहट्टी गावचे रहिवासी आणि पत्रकार ज्योतिबा भेंडीगिरी हे आपल्या गावी जात असताना या ठिकाणी थांबले. त्यांनी तत्परतेने आरडाओरडा करून गवि रेड्यांचा कळप रस्त्यावरून हटवला, त्यामुळे काही वेळानंतर वाहतूक सुरळीत झाली.
घटनेनंतर या परिसरात भीतीचे वातावरण निर्माण झाले असून, शेतकरी आणि ग्रामस्थ आता पिकांच्या तसेच स्वतःच्या सुरक्षेबाबत चिंतित झाले आहेत. विशेष म्हणजे, मागील वर्षी याच परिसरात एका हत्तीच्या पिल्लाने थैमान घातले होते, त्यावेळी शिमोगा येथून पथक बोलावून त्या हत्तीला पकडून शिमोग्याला हलवण्यात आले होते.
त्या घटनेची आठवण ताजी असतानाच आता गवि रेड्यांचा कळप दिसल्याने ग्रामस्थ आणि शेतकऱ्यांमध्ये दहशतीचे वातावरण निर्माण झाले आहे.
स्थानिक नागरिकांनी वन विभागाला तत्काळ लक्ष देऊन खबरदारीचे उपाययोजना करण्याची मागणी केली आहे. वन अधिकाऱ्यांनी परिसराची पाहणी करून ग्रामस्थांच्या व पिकांच्या सुरक्षेसाठी आवश्यक पावले उचलावीत, अशी मागणी नागरिकांकडून करण्यात येत आहे.
ಖಾನಾಪುರ–ನಂದಗಡ್ ರಸ್ತೆಯಲ್ಲಿ ಕಾಡು ಎಮ್ಮೆಗಳ ಕಾಟ; ವಾಹನ ಸವಾರರಲ್ಲಿ ಗೊಂದಲ – ಗ್ರಾಮಸ್ಥರಲ್ಲಿ ಆತಂಕ
ಖಾನಾಪುರ (ತಾ.18): ಖಾನಾಪುರ–ನಂದಗಡ್ ಮಾರ್ಗದ ಕರಂಬಳ ಮತ್ತು ಕೌಂದಲ್ ಗ್ರಾಮಗಳ ಮಧ್ಯೆ ಶುಕ್ರವಾರ (ಅ.17) ಸಂಜೆ ಸುಮಾರು 7.30ರ ಸುಮಾರಿಗೆ ಕಾಡು ಎಮ್ಮೆಗಳ ದೊಡ್ಡ ಗುಂಪು ರಸ್ತೆ ಮಧ್ಯೆ ನಿಂತ ಕಾರಣ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.
ಅಕಸ್ಮಾತ್ ರಸ್ತೆ ತಡೆದ ಎಮ್ಮೆಗಳ ಗುಂಪನ್ನು ಕಂಡು ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನ ಸವಾರರು ಆತಂಕಗೊಂಡು ವಾಹನಗಳನ್ನು ನಿಲ್ಲಿಸಿದರು. ಕೆಲವರು ಧೈರ್ಯ ತೋರಿಸಿ ಎಮ್ಮೆಗಳನ್ನು ರಸ್ತೆಯಿಂದ ಓಡಿಸಲು ಪ್ರಯತ್ನಿಸಿದರು. ಸ್ಥಳೀಯ ನಾಗರಿಕರ ಸಹಕಾರದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು.
ಈ ವೇಳೆ ಮಾಸ್ಕೆನಹಟ್ಟಿ ಗ್ರಾಮದ ನಿವಾಸಿ ಮತ್ತು ಪತ್ರಕರ್ತ ಜ್ಯೋತಿಬಾ ಭೆಂಡಿಗಿರಿ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದಾಗ ಘಟನಾ ಸ್ಥಳದಲ್ಲಿ ನಿಂತು ತಕ್ಷಣ ಎಚ್ಚರಿಕೆ ಕೂಗಿ ಕಾಡು ಎಮ್ಮೆಗಳನ್ನು ಓಡಿಸಿದರು. ಅವರ ಚುರುಕಿನಿಂದ ಕೆಲವೇ ನಿಮಿಷಗಳಲ್ಲಿ ಸಂಚಾರ ಹಳಿಗೆ ಬಂತು.
ಘಟನೆಯ ನಂತರ ಗ್ರಾಮಸ್ಥರು ಮತ್ತು ರೈತರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪಿಕಗಳು ಹಾಗೂ ಪ್ರಾಣಿಗಳ ಸುರಕ್ಷತೆ ಬಗ್ಗೆ ಎಲ್ಲರೂ ಚಿಂತೆ ವ್ಯಕ್ತಪಡಿಸಿದ್ದಾರೆ. ವಿಶೇಷವೆಂದರೆ, ಕಳೆದ ವರ್ಷ ಇದೇ ಭಾಗದಲ್ಲಿ ಕಾಡಾನೆ ಮರಿ ಹಾವಳಿ ನಡೆಸಿತ್ತು. ಆಗ ಶಿಮೋಗಾದಿಂದ ಅರಣ್ಯಾಧಿಕಾರಿಗಳ ಪಥಕ ಬಂದು ಆ ಆನೆಯನ್ನು ಹಿಡಿದು ಶಿಮೋಗಾಗೆ ಕರೆದೊಯ್ದಿತ್ತು.
ಆ ಘಟನೆ ಇನ್ನೂ ಹೊಸದಾಗಿಯೇ ಮನಸ್ಸಿನಲ್ಲಿ ಉಳಿದಿರುವಾಗ ಇದೀಗ ಕಾಡು ಎಮ್ಮೆಗಳ ಕಾಟದಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಸ್ಥಳೀಯರು ಅರಣ್ಯ ಇಲಾಖೆಗೆ ತಕ್ಷಣ ಕ್ರಮಗಳನ್ನು ಜಾರಿಗೆ ತರಬೇಕೆಂದು ಮನವಿ ಮಾಡಿದ್ದಾರೆ. ಅರಣ್ಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಗ್ರಾಮಸ್ಥರು ಮತ್ತು ಪಿಕಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

