“उंदरी” कृषीपंचमीपूर्वी खानापुरात बकऱ्यांचा जंगी बाजार; एका दिवसात तब्बल 7 ते 8 कोटींची उलाढाल.
खानापूर : गणेशोत्सवाच्या पार्श्वभूमीवर खानापूर शहरातील पारंपरिक बकऱ्यांच्या बाजाराला रविवारी मोठी गर्दी झाली. उद्या सोमवार, दि. 14 सप्टेंबरपासून गणेशोत्सवाला सुरुवात होत असून, त्यानंतर दुसऱ्या दिवशी साजऱ्या होणाऱ्या ऋषिपंचमीच्या पारंपरिक प्रथेमुळे खानापूर तालुक्यात बकऱ्यांची मोठ्या प्रमाणावर खरेदी-विक्री केली जाते. यंदाही या बाजारात हजारो बकऱ्यांची उलाढाल झाली असून, आजच्या व्यवहारातून अंदाजे 7 ते 8 कोटी रुपयांची आर्थिक उलाढाल झाल्याचा अंदाज व्यक्त करण्यात येत आहे.
खानापूर शहरातील मरियम्मा मंदिरासमोरील परिसरात दरवर्षी गणेश चतुर्थीपूर्वी येणाऱ्या रविवारी बकऱ्यांचा पारंपरिक बाजार भरतो. या बाजारासाठी तालुक्यातील तसेच आसपासच्या ग्रामीण भागातून मोठ्या संख्येने बकरीपालक आपली बकरी विक्रीसाठी घेऊन येतात. त्याचप्रमाणे ऋषिपंचमीच्या पारंपरिक प्रथेसाठी बकरी खरेदी करण्यासाठी नागरिकांचीही मोठी गर्दी होते. यावेळी पोलीस बंदोबस्तही चोख ठेवण्यात आला होता.

‘उंदुर्पी’च्या (उंदरी) परंपरेमुळे बकऱ्यांना मोठी मागणी….
खानापूर तसेच बेळगाव जिल्ह्यातील काही ग्रामीण भागात ऋषिपंचमीला स्थानिक पातळीवर ‘उंदुर्पी’ किंवा ‘उंदरी’ असेही संबोधले जाते. या दिवशी गणपतीचे वाहन असलेल्या उंदराला मांसाहारी नैवेद्य दाखविण्याची काही भागांत पारंपरिक पद्धत आहे. या प्रथेमुळे ऋषिपंचमीच्या काळात बकऱ्यांना विशेष मागणी निर्माण होते.
या परंपरेचा थेट परिणाम ग्रामीण अर्थव्यवस्थेवरही दिसून येतो. लहान गावांमध्ये साधारण 25 ते 30 बकऱ्यांची, तर मोठ्या गावांमध्ये 50 ते 100 किंवा त्याहून अधिक बकऱ्यांची खरेदी केली जाते. त्यामुळे संपूर्ण खानापूर तालुक्याचा विचार करता, दरवर्षी ऋषिपंचमीच्या निमित्ताने बकऱ्यांच्या खरेदी-विक्रीतून अंदाजे 14 ते 15 कोटी रुपयांची उलाढाल होत असल्याचे सांगण्यात येते.

7 हजारांपासून 55 हजारांपर्यंत दर…
यंदाच्या बाजारात बकऱ्यांच्या आकारमानानुसार आणि वजनानुसार दरात मोठी तफावत दिसून आली. साधारण 7 हजार रुपयांपासून तब्बल 55 हजार रुपयांपर्यंत एका बकऱ्याची किंमत होती. चांगल्या वजनाच्या आणि आकर्षक बकऱ्यांना ग्राहकांकडून विशेष पसंती मिळत होती.
बकरी बाजारामुळे परिसरात छोट्या व्यावसायिकांनाही रोजगार….
बकऱ्यांच्या खरेदी-विक्रीसोबतच या बाजारामुळे परिसरातील छोट्या व्यावसायिकांनाही चांगला व्यवसाय मिळतो. बाजाराच्या ठिकाणी चहाचे स्टॉल, आईस्क्रीमच्या गाड्या, उकडून भाजलेल्या शेंगांची विक्री, जनावरांना बांधण्यासाठी रंगीबेरंगी दोऱ्यांची विक्री आदी व्यवसाय मोठ्या प्रमाणावर सुरू असतात. त्यामुळे एका दिवसाच्या या बाजारामुळे विविध छोट्या व्यावसायिकांचीही आर्थिक उलाढाल वाढते.

बाजार पाहण्यासाठीही नागरिकांची गर्दी….
बकरी खरेदीसाठी आलेल्या ग्राहकांसोबतच हा पारंपरिक बाजार हौसेने पाहण्यासाठीही नागरिक मोठ्या संख्येने उपस्थित राहतात. सकाळपासूनच मरियम्मा मंदिर परिसरात नागरिकांची वर्दळ वाढली होती. ग्रामीण भागातील बकरीपालकांसाठी हा बाजार महत्त्वाचा असून, सणासुदीच्या काळात त्यांच्या उत्पन्नाचा मोठा आधार या बाजारातून मिळतो.
नंदगड बाजारात मोठी उलाढाल…
खानापूर तालुक्यातील नंदगड येथे बुधवारी भरलेल्या बाजारातही हजारो बकऱ्यांची खरेदी-विक्री झाली. त्यामुळे ऋषिपंचमीच्या निमित्ताने तालुक्यातील विविध गावांमध्ये बकऱ्यांच्या बाजारांना चांगलीच रंगत आली आहे. खानापूर तालुक्यातील ही पारंपरिक बाजारपेठ केवळ धार्मिक प्रथेशी जोडलेली नसून, ग्रामीण अर्थचक्राला चालना देणारा महत्त्वाचा वार्षिक व्यवहार म्हणूनही तिच्याकडे पाहिले जाते.
‘ಉಂದರಿ’ ಋಷಿಪಂಚಮಿ ಮುನ್ನ ದಿನ ಖಾನಾಪುರದಲ್ಲಿ ಮೇಕೆ ಪೇಟೆಯಲ್ಲಿ ಭರ್ಜರಿ ಮಾರುಕಟ್ಟೆ; ಒಂದೇ ದಿನದಲ್ಲಿ ಬರೋಬ್ಬರಿ 7ರಿಂದ 8 ಕೋಟಿ ರೂಪಾಯಿ ವಹಿವಾಟು.
ಖಾನಾಪುರ : ಗಣೇಶೋತ್ಸವದ ಹಿನ್ನೆಲೆಯಲ್ಲಿ ಖಾನಾಪುರ ನಗರದ ಸಾಂಪ್ರದಾಯಿಕ ಮೇಕೆಗಳ ಮಾರುಕಟ್ಟೆಗೆ ಭಾನುವಾರ ಭಾರಿ ಜನಸಂದಣಿ ಕಂಡುಬಂದಿತು. ನಾಳೆ ಸೋಮವಾರ, ಸೆಪ್ಟೆಂಬರ್ 14ರಿಂದ ಗಣೇಶೋತ್ಸವ ಆರಂಭವಾಗಲಿದ್ದು, ಅದರ ನಂತರದ ದಿನ ಆಚರಿಸಲಾಗುವ ಋಷಿಪಂಚಮಿಯ ಸಾಂಪ್ರದಾಯಿಕ ಆಚರಣೆಯ ಹಿನ್ನೆಲೆಯಲ್ಲಿ ಖಾನಾಪುರ ತಾಲ್ಲೂಕಿನಲ್ಲಿ ಮೇಕೆಗಳ ಖರೀದಿ-ಮಾರಾಟ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಈ ವರ್ಷವೂ ಮಾರುಕಟ್ಟೆಯಲ್ಲಿ ಸಾವಿರಾರು ಮೇಕೆಗಳ ಖರೀದಿ-ಮಾರಾಟ ನಡೆದಿದ್ದು, ಇಂದಿನ ವ್ಯವಹಾರದಲ್ಲಿ ಅಂದಾಜು 7ರಿಂದ 8 ಕೋಟಿ ರೂಪಾಯಿಗಳ ಆರ್ಥಿಕ ವಹಿವಾಟು ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಪೊಲೀಸ್ ಇಲಾಖೆ ವತಿಯಿಂದ ಸಂಚಾರಕ್ಕೆ ಅಡಚಣೆಯಾಗದಂತೆ ಬಾರಿ ಬಂದೋಬಸ್ತ್ ಮಾಡಲಾಗಿದೆ.
ಖಾನಾಪುರ ನಗರದ ಮರಿಯಮ್ಮ ದೇವಸ್ಥಾನದ ಎದುರಿನ ಪ್ರದೇಶದಲ್ಲಿ ಪ್ರತಿವರ್ಷ ಗಣೇಶ ಚತುರ್ಥಿಗೂ ಮುನ್ನ ಬರುವ ಭಾನುವಾರದಂದು ಮೇಕೆಗಳ ಸಾಂಪ್ರದಾಯಿಕ ಮಾರುಕಟ್ಟೆ ನಡೆಯುತ್ತದೆ. ಈ ಮಾರುಕಟ್ಟೆಗೆ ತಾಲ್ಲೂಕಿನ ವಿವಿಧ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮೇಕೆ ಸಾಕಾಣಿಕೆದಾರರು ತಮ್ಮ ಮೇಕೆಗಳನ್ನು ಮಾರಾಟಕ್ಕಾಗಿ ತರುತ್ತಾರೆ. ಅದೇ ರೀತಿ ಋಷಿಪಂಚಮಿಯ ಸಾಂಪ್ರದಾಯಿಕ ಆಚರಣೆಗಾಗಿ ಮೇಕೆಗಳನ್ನು ಖರೀದಿಸಲು ನಾಗರಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.
‘ಉಂದುರ್ಪಿ’ (ಉಂದರಿ) ಸಂಪ್ರದಾಯದಿಂದ ಮೇಕೆಗಳಿಗೆ ಭಾರಿ ಬೇಡಿಕೆ….
ಖಾನಾಪುರ ಹಾಗೂ ಬೆಳಗಾವಿ ಜಿಲ್ಲೆಯ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಋಷಿಪಂಚಮಿಯನ್ನು ಸ್ಥಳೀಯವಾಗಿ ‘ಉಂದುರ್ಪಿ’ ಅಥವಾ ‘ಉಂದರಿ’ ಎಂದೂ ಕರೆಯಲಾಗುತ್ತದೆ. ಈ ದಿನ ಗಣಪತಿಯ ವಾಹನವಾಗಿರುವ ಇಲಿಗೆ ಮಾಂಸಾಹಾರಿ ನೈವೇದ್ಯ ಅರ್ಪಿಸುವ ಕೆಲವು ಭಾಗದಲ್ಲಿ ಸಾಂಪ್ರದಾಯಿಕ ಪದ್ಧತಿ ಇದೆ. ಈ ಸಂಪ್ರದಾಯದಿಂದಾಗಿ ಋಷಿಪಂಚಮಿಯ ಸಂದರ್ಭದಲ್ಲಿ ಮೇಕೆಗಳಿಗೆ ವಿಶೇಷ ಬೇಡಿಕೆ ಉಂಟಾಗುತ್ತದೆ.
ಈ ಸಂಪ್ರದಾಯದ ನೇರ ಪರಿಣಾಮ ಗ್ರಾಮೀಣ ಆರ್ಥಿಕತೆಯ ಮೇಲೂ ಕಂಡುಬರುತ್ತದೆ. ಸಣ್ಣ ಗ್ರಾಮಗಳಲ್ಲಿ ಸಾಮಾನ್ಯವಾಗಿ 25ರಿಂದ 30 ಮೇಕೆಗಳು, ದೊಡ್ಡ ಗ್ರಾಮಗಳಲ್ಲಿ 50ರಿಂದ 100 ಅಥವಾ ಅದಕ್ಕಿಂತಲೂ ಹೆಚ್ಚಿನ ಮೇಕೆಗಳನ್ನು ಖರೀದಿಸಲಾಗುತ್ತದೆ. ಹೀಗಾಗಿ ಇಡೀ ಖಾನಾಪುರ ತಾಲ್ಲೂಕನ್ನು ಪರಿಗಣಿಸಿದರೆ, ಪ್ರತಿವರ್ಷ ಋಷಿಪಂಚಮಿಯ ಸಂದರ್ಭದಲ್ಲಿ ಮೇಕೆಗಳ ಖರೀದಿ-ಮಾರಾಟದಿಂದ ಅಂದಾಜು 14ರಿಂದ 15 ಕೋಟಿ ರೂಪಾಯಿಗಳ ವಹಿವಾಟು ನಡೆಯುತ್ತದೆ ಎಂದು ಹೇಳಲಾಗುತ್ತಿದೆ.
7 ಸಾವಿರದಿಂದ 55 ಸಾವಿರ ರೂಪಾಯಿವರೆಗೆ ಬೆಲೆ….
ಈ ವರ್ಷದ ಮಾರುಕಟ್ಟೆಯಲ್ಲಿ ಮೇಕೆಗಳ ಗಾತ್ರ ಹಾಗೂ ತೂಕಕ್ಕೆ ಅನುಗುಣವಾಗಿ ಬೆಲೆಯಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿತು. ಸಾಮಾನ್ಯವಾಗಿ 7 ಸಾವಿರ ರೂಪಾಯಿಯಿಂದ ಬರೋಬ್ಬರಿ 55 ಸಾವಿರ ರೂಪಾಯಿವರೆಗೆ ಒಂದು ಮೇಕೆಯ ಬೆಲೆ ಕಂಡು ಬರುತ್ತದೆ. ಉತ್ತಮ ತೂಕ ಹೊಂದಿರುವ ಹಾಗೂ ಆಕರ್ಷಕವಾಗಿರುವ ಮೇಕೆಗಳಿಗೆ ಗ್ರಾಹಕರಿಂದ ವಿಶೇಷ ಬೇಡಿಕೆ ಕಂಡುಬಂದಿತು.
ಮೇಕೆಗಳ ಮಾರುಕಟ್ಟೆಯಿಂದ ಸಣ್ಣ ವ್ಯಾಪಾರಿಗಳಿಗೂ ಉದ್ಯೋಗ….
ಮೇಕೆಗಳ ಖರೀದಿ-ಮಾರಾಟದ ಜೊತೆಗೆ ಈ ಮಾರುಕಟ್ಟೆಯಿಂದ ಸುತ್ತಮುತ್ತಲಿನ ಸಣ್ಣ ವ್ಯಾಪಾರಿಗಳಿಗೂ ಉತ್ತಮ ವ್ಯಾಪಾರ ದೊರೆಯುತ್ತದೆ. ಮಾರುಕಟ್ಟೆ ಸ್ಥಳದಲ್ಲಿ ಚಹಾ ಅಂಗಡಿಗಳು, ಐಸ್ಕ್ರೀಂ ಗಾಡಿಗಳು, ಬೇಯಿಸಿದ ಹಾಗೂ ಹುರಿದ ಶೇಂಗಾ ಮಾರಾಟ, ಜಾನುವಾರುಗಳನ್ನು ಕಟ್ಟಲು ಬಳಸುವ ವಿವಿಧ ಬಣ್ಣದ ಹಗ್ಗಗಳ ಮಾರಾಟ ಸೇರಿದಂತೆ ವಿವಿಧ ಸಣ್ಣಪುಟ್ಟ ವ್ಯಾಪಾರಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತವೆ. ಇದರಿಂದ ಒಂದೇ ದಿನದ ಈ ಮಾರುಕಟ್ಟೆಯಿಂದ ವಿವಿಧ ಸಣ್ಣ ವ್ಯಾಪಾರಿಗಳ ಆರ್ಥಿಕ ವಹಿವಾಟು ಕೂಡ ಹೆಚ್ಚಾಗುತ್ತದೆ.
ಮಾರುಕಟ್ಟೆ ವೀಕ್ಷಿಸಲು ಕೂಡ ನಾಗರಿಕರ ದಟ್ಟಣೆ….
ಮೇಕೆ ಖರೀದಿಗಾಗಿ ಆಗಮಿಸಿದ ಗ್ರಾಹಕರ ಜೊತೆಗೆ ಈ ಸಾಂಪ್ರದಾಯಿಕ ಮಾರುಕಟ್ಟೆಯನ್ನು ಕುತೂಹಲದಿಂದ ವೀಕ್ಷಿಸಲು ಕೂಡ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಬೆಳಗ್ಗೆಯಿಂದಲೇ ಮರಿಯಮ್ಮ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಜನರ ಸಂಚಾರ ಹೆಚ್ಚಾಗಿತ್ತು. ಗ್ರಾಮೀಣ ಪ್ರದೇಶದ ಮೇಕೆ ಸಾಕಾಣಿಕೆದಾರರಿಗೆ ಈ ಮಾರುಕಟ್ಟೆ ಅತ್ಯಂತ ಮಹತ್ವದ್ದಾಗಿದ್ದು, ಹಬ್ಬದ ಸಂದರ್ಭದಲ್ಲಿ ಅವರ ಆದಾಯಕ್ಕೆ ಈ ಮಾರುಕಟ್ಟೆ ಪ್ರಮುಖ ಆಧಾರವಾಗಿದೆ.
ನಂದಗಡ ಮಾರುಕಟ್ಟೆಯಲ್ಲೂ ಭಾರಿ ವಹಿವಾಟು….
ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ಬುಧವಾರ ನಡೆದ ಮಾರುಕಟ್ಟೆಯಲ್ಲೂ ಸಾವಿರಾರು ಮೇಕೆಗಳ ಖರೀದಿ-ಮಾರಾಟ ನಡೆದಿದೆ. ಇದರಿಂದ ಋಷಿಪಂಚಮಿಯ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನಡೆಯುತ್ತಿರುವ ಮೇಕೆಗಳ ಮಾರುಕಟ್ಟೆಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.
ಖಾನಾಪುರ ತಾಲ್ಲೂಕಿನ ಈ ಸಾಂಪ್ರದಾಯಿಕ ಮಾರುಕಟ್ಟೆಗಳು ಕೇವಲ ಧಾರ್ಮಿಕ ಸಂಪ್ರದಾಯಕ್ಕೆ ಸಂಬಂಧಿಸಿದವುಗಳಾಗಿರದೆ, ಗ್ರಾಮೀಣ ಆರ್ಥಿಕ ಚಟುವಟಿಕೆಗೆ ವೇಗ ನೀಡುವ ಪ್ರಮುಖ ವಾರ್ಷಿಕ ವಹಿವಾಟು ಎಂದೂ ಪರಿಗಣಿಸಲಾಗುತ್ತಿದೆ.



