रोजगार हमीच्या कामावरून डॉक्टरांकडे जाताना काळाचा घाला; बाळगुंदच्या मजुराचा दुचाकी अपघातात मृत्यू.
खानापूर : रोजगार हमी योजनेच्या कामासाठी सकाळी घराबाहेर पडलेल्या बाळगुंद येथील एका मजुराचा दुचाकी अपघातात जागीच मृत्यू झाल्याची हृदयद्रावक घटना शनिवारी घडली. संजय गणपती सुतार (रा. बाळगुंद) असे अपघातात मृत्यू झालेल्या मजुराचे नाव आहे. गणेश चतुर्थीच्या पूर्वसंध्येला घडलेल्या या दुर्दैवी घटनेमुळे बाळगुंद परिसरात शोककळा पसरली आहे.

गोधोळी ग्रामपंचायतीच्या हद्दीतील बाळगुंद येथे व्हीबी रामजी योजनेअंतर्गत रोजगार हमीचे काम सुरू होते. नेहमीप्रमाणे संजय सुतार हे शनिवारी सकाळी कामाच्या ठिकाणी हजर झाले होते. कामासाठी आवश्यक असलेला फोटोही त्यांनी काढून दिला होता. मात्र, काही वेळानंतर त्यांना अचानक डोकेदुखीचा त्रास जाणवू लागला.

कामाच्या ठिकाणी त्यांच्यावर प्राथमिक उपचार करण्यात आले. प्रकृतीची तपासणी करण्यासाठी डॉक्टरांकडे जाण्याचा सल्ला मिळाल्यानंतर संजय सुतार हे स्वतःच्या दुचाकीवरून डॉक्टरांकडे रवाना झाले. उपचार घेऊन घरी परतत असताना गोदगेरी क्रॉसजवळ त्यांच्या दुचाकीचे नियंत्रण सुटून रस्त्यालगतच्या झाडावर जोरदार धडक झाली.
धडक इतकी भीषण होती की, या अपघातात संजय सुतार यांचा घटनास्थळीच मृत्यू झाला. घटनेची माहिती मिळताच परिसरातील नागरिकांनी घटनास्थळी धाव घेतली.
दरम्यान, नंदगड येथे सुरू असलेल्या प्रजासेवा आंदोलनाच्या कार्यक्रमादरम्यान प्रशासनातील अधिकाऱ्यांना या अपघाताची माहिती मिळाली. त्यानंतर तालुका पंचायतचे कार्यकारी अधिकारी रमेश मैत्री, संबंधित सहाय्यक अधिकारी तसेच ग्रामपंचायत विकास अधिकारी हनुमंत पाटील यांनी घटनास्थळी भेट देऊन परिस्थितीची पाहणी केली.
तसेच व्हीबी रामजी योजनेचे वरिष्ठ प्रोजेक्ट डायरेक्टर गंगाधर यांनीही घटनास्थळी भेट देऊन घटनेची माहिती घेतली.
या अपघाताची नोंद नंदगड पोलीस ठाण्यात करण्यात आली असून, अपघात नेमका कशामुळे झाला, याबाबत पोलिसांकडून पुढील तपास सुरू आहे.
कुटुंबीयांना शासनाकडून मदतीची अपेक्षा…
रोजगाराच्या कामासाठी घराबाहेर पडलेल्या मजुराचा दुर्दैवी अपघातात मृत्यू झाल्याने ग्रामस्थ आणि रोजगार हमीवरील कामगारांमध्ये हळहळ व्यक्त होत आहे. मृत संजय सुतार यांच्या कुटुंबावर अचानक दुःखाचा डोंगर कोसळला आहे. रोजगार हमी योजनेच्या कामाशी संबंधित असलेल्या या घटनेची प्रशासनाने गांभीर्याने दखल घेऊन शासनाच्या नियमानुसार मृताच्या कुटुंबीयांना योग्य ती आर्थिक नुकसानभरपाई व आवश्यक शासकीय मदत तातडीने उपलब्ध करून द्यावी, अशी मागणी ग्रामस्थ आणि कामगार वर्गातून करण्यात येत आहे.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿ ವೈದ್ಯರ ಬಳಿ ತೆರಳುವಾಗ ವಿಧಿಯಾಟ; ಬಾಳಗುಂದ ಊರಿನ ಕೂಲಿ ಕಾರ್ಮಿಕ ದ್ವಿಚಕ್ರ ವಾಹನ ಅಪಘಾತದಲ್ಲಿ ಸಾವು.
ಖಾನಾಪುರ : ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸಕ್ಕಾಗಿ ಬೆಳಿಗ್ಗೆ ಮನೆಯಿಂದ ಹೊರಟಿದ್ದ ಬಾಳಗುಂದ ಗ್ರಾಮದ ಕೂಲಿ ಕಾರ್ಮಿಕರೊಬ್ಬರು ದ್ವಿಚಕ್ರ ವಾಹನ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಶನಿವಾರ ನಡೆದಿದೆ. ಸಂಜಯ ಗಣಪತಿ ಸುತಾರ (ವಾಸಸ್ಥಳ ಬಾಳಗುಂದ) ಎಂಬವರು ಅಪಘಾತದಲ್ಲಿ ಮೃತಪಟ್ಟ ಕೂಲಿ ಕಾರ್ಮಿಕರಾಗಿದ್ದಾರೆ. ಗಣೇಶ ಚತುರ್ಥಿಯ ಮುನ್ನಾದಿನವೇ ಈ ದುರ್ಘಟನೆ ಸಂಭವಿಸಿರುವುದರಿಂದ ಬಾಳಗುಂದ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಗೋಧೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳಗುಂದ ಗ್ರಾಮದಲ್ಲಿ ವಿಬಿ ರಾಮಜಿ ಯೋಜನೆಯಡಿ ಉದ್ಯೋಗ ಖಾತ್ರಿ ಕೆಲಸ ನಡೆಯುತ್ತಿತ್ತು. ಎಂದಿನಂತೆ ಸಂಜಯ ಸುತಾರ ಅವರು ಶನಿವಾರ ಬೆಳಿಗ್ಗೆ ಕೆಲಸದ ಸ್ಥಳಕ್ಕೆ ಹಾಜರಾಗಿದ್ದರು. ಕೆಲಸಕ್ಕೆ ಅಗತ್ಯವಿದ್ದ ಫೋಟೋವನ್ನು ಸಹ ಅವರು ತೆಗೆಸಿಕೊಟ್ಟಿದ್ದರು. ಆದರೆ ಸ್ವಲ್ಪ ಸಮಯದ ಬಳಿಕ ಅವರಿಗೆ ಹಠಾತ್ತನೆ ತಲೆನೋವಿನ ತೊಂದರೆ ಕಾಣಿಸಿಕೊಂಡಿತು.
ಕೆಲಸದ ಸ್ಥಳದಲ್ಲಿಯೇ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ. ಆರೋಗ್ಯ ತಪಾಸಣೆಗಾಗಿ ವೈದ್ಯರ ಬಳಿ ತೆರಳಿ ಪರೀಕ್ಷಿಸಿಕೊಳ್ಳುವಂತೆ ಸಲಹೆ ನೀಡಿದ ನಂತರ, ಸಂಜಯ ಸುತಾರ ಅವರು ತಮ್ಮದೇ ದ್ವಿಚಕ್ರ ವಾಹನದಲ್ಲಿ ವೈದ್ಯರ ಬಳಿಗೆ ತೆರಳಿದರು. ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಗೋದಗೆರಿ ಕ್ರಾಸ್ ಸಮೀಪ ಅವರ ದ್ವಿಚಕ್ರ ವಾಹನದ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ. ಭಾರಿ ಡಿಕ್ಕಿಯ ರಭಸದಿಂದ, ಈ ಅಪಘಾತದಲ್ಲಿ ಸಂಜಯ ಸುತಾರ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲಿನ ನಾಗರಿಕರು ಸ್ಥಳಕ್ಕೆ ಧಾವಿಸಿದರು.
ಈ ನಡುವೆ ನಂದಗಡದಲ್ಲಿ ನಡೆಯುತ್ತಿದ್ದ ಪ್ರಜಾಸೇವಾ ಆಂದೋಲನದ ಕಾರ್ಯಕ್ರಮದ ಸಂದರ್ಭದಲ್ಲಿ ಆಡಳಿತದ ಅಧಿಕಾರಿಗಳಿಗೆ ಈ ಅಪಘಾತದ ಮಾಹಿತಿ ಲಭಿಸಿತು. ನಂತರ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಮೈತ್ರಿ, ಸಂಬಂಧಿತ ಸಹಾಯಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹನುಮಂತ ಪಾಟೀಲ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಅಲ್ಲದೆ ವಿಬಿ ರಾಮಜಿ ಯೋಜನೆಯ ಹಿರಿಯ ಪ್ರಾಜೆಕ್ಟ್ ಡೈರೆಕ್ಟರ್ ಗಂಗಾಧರ ಅವರು ಸಹ ಘಟನಾ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಕುರಿತು ಮಾಹಿತಿ ಪಡೆದರು.
ಈ ಅಪಘಾತದ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅಪಘಾತವು ನಿಖರವಾಗಿ ಯಾವ ಕಾರಣದಿಂದ ಸಂಭವಿಸಿದೆ ಎಂಬುದರ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಕುಟುಂಬಸ್ಥರಿಗೆ ಸರ್ಕಾರದಿಂದ ನೆರವಿನ ನಿರೀಕ್ಷೆ…
ಉದ್ಯೋಗದ ಕೆಲಸಕ್ಕಾಗಿ ಮನೆಯಿಂದ ಹೊರಟಿದ್ದ ಕೂಲಿ ಕಾರ್ಮಿಕರು ದುರಂತ ಅಪಘಾತದಲ್ಲಿ ಮೃತಪಟ್ಟಿರುವುದರಿಂದ ಗ್ರಾಮಸ್ಥರು ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿರುವ ಕಾರ್ಮಿಕರಲ್ಲಿ ತೀವ್ರ ದುಃಖ ವ್ಯಕ್ತವಾಗಿದೆ. ಮೃತ ಸಂಜಯ ಸುತಾರ ಅವರ ಕುಟುಂಬದ ಮೇಲೆ ದಿಢೀರ್ ದುಃಖದ ಬೆಟ್ಟವೇ ಕುಸಿದಂತಾಗಿದೆ.
ಉದ್ಯೋಗ ಖಾತ್ರಿ ಯೋಜನೆಯ ಕೆಲಸಕ್ಕೆ ಸಂಬಂಧಿಸಿದ ಈ ಘಟನೆಯನ್ನು ಆಡಳಿತವು ಗಂಭೀರವಾಗಿ ಪರಿಗಣಿಸಿ, ಸರ್ಕಾರದ ನಿಯಮಾನುಸಾರ ಮೃತರ ಕುಟುಂಬಸ್ಥರಿಗೆ ಸೂಕ್ತ ಆರ್ಥಿಕ ಪರಿಹಾರ ಹಾಗೂ ಅಗತ್ಯ ಸರ್ಕಾರಿ ನೆರವನ್ನು ತುರ್ತಾಗಿ ಒದಗಿಸಬೇಕು, ಎಂದು ಗ್ರಾಮಸ್ಥರು ಹಾಗೂ ಕಾರ್ಮಿಕ ವರ್ಗದವರು ಒತ್ತಾಯಿಸಿದ್ದಾರೆ.



