लोकोळी-जैनकोप्प वारकऱ्यांच्या पंढरपूर भक्तनिवासाच्या स्लॅब कामाला राजवर्धन अरविंद पाटील यांच्या हस्ते प्रारंभ. दोन गावांच्या एकी, सेवाभाव आणि योगदानातून साकारतोय भक्तनिवास; अवघ्या 40 ते 50 दिवसांत स्लॅबचे काम पूर्णत्वाकडे.
खानापूर : खानापूर तालुक्यातील लोकोळी व जैनकोप्प येथील ग्रामस्थ आणि वारकऱ्यांच्या एकत्रित प्रयत्नातून तसेच लोकवर्गणीतून श्रीक्षेत्र पंढरपूर येथे उभारण्यात येत असलेल्या भक्तनिवासाच्या स्लॅब कामाचा शुभारंभ शनिवार, दि. 8 ऑगस्ट 2026 रोजी भाजपाचे नेते माजी आमदार व बेळगाव जिल्हा मध्यवर्ती सहकारी बँकेचे संचालक अरविंद पाटील यांच्या अनुपस्थितीत त्यांचे सुपुत्र राजवर्धन अरविंद पाटील यांच्या हस्ते पूजन करून शुभारंभ करण्यात आला.

लोकोळी व जैनकोप्प येथील वारकरी आणि ग्रामस्थांनी एकत्र येत पंढरपूर येथे विठ्ठल-रुक्मिणीच्या दर्शनासाठी येणाऱ्या भाविकांच्या निवासाची सोय व्हावी, या उद्देशाने भक्तनिवास उभारण्याचा उपक्रम हाती घेतला आहे. दोन गावांतील नागरिकांनी एकजुटीने पुढाकार घेतल्याने हा उपक्रम वेगाने आकार घेत असून, भविष्यात पंढरपूरला दर्शनासाठी येणाऱ्या वारकरी, भाविक आणि ग्रामस्थांना निवासाची मोठी सुविधा उपलब्ध होणार आहे.
अवघ्या 40 ते 50 दिवसांत स्लॅबचे काम…
सुमारे 50 दिवसांपूर्वी लोकोळी व जैनकोप्प ग्रामस्थांच्या उपस्थितीत पंढरपूर येथे भक्तनिवासाच्या कॉलम भरणीचा समारंभ पार पडला होता. त्यानंतर अवघ्या 40 ते 50 दिवसांच्या कालावधीत स्लॅबचे काम सुरू करण्यापर्यंतची मजल ग्रामस्थांनी गाठली आहे. दोन्ही गावांतील ग्रामस्थांनी दाखविलेली एकजूट, परस्पर सहकार्य, सेवाभाव आणि मेहनत यामुळेच हे काम वेगाने पुढे सरकत असल्याचे यावेळी सांगण्यात आले.
राजवर्धन पाटील यांनी केले ग्रामस्थांच्या सेवाभावाचे कौतुक…
स्लॅब कामाच्या शुभारंभप्रसंगी राजवर्धन अरविंद पाटील म्हणाले, “खानापूर तालुक्यातील लोकोळी व जैनकोप्प येथील वारकरी आणि ग्रामस्थांनी एकत्रित येऊन पंढरपूरच्या पांडुरंगाच्या दर्शनासाठी येणाऱ्या भाविकांसाठी उभारलेला हा भक्तनिवासाचा उपक्रम कौतुकास्पद आहे. वारकरी व ग्रामस्थांचा हा सेवाभाव आमच्यासारख्या युवा पिढीसाठी निश्चितच प्रेरणादायी आहे.”
पंढरपूर हे लाखो वारकरी व भाविकांचे श्रद्धास्थान असून, आपल्या गावातील वारकऱ्यांना निवासाची सुविधा उपलब्ध करून देणे ही मोठी सेवा आहे. लोकोळी आणि जैनकोप्प ग्रामस्थांनी एकत्र येऊन हाती घेतलेला हा उपक्रम सामाजिक एकतेचे आणि धार्मिक सेवाभावाचे उदाहरण ठरत आहे.
माजी आमदार अरविंद पाटील यांचे सहकार्य….
भक्तनिवासाच्या कॉलम भरणीच्या कामापासून स्लॅबच्या कामापर्यंत माजी आमदार तथा बेळगाव जिल्हा मध्यवर्ती सहकारी बँकेचे संचालक अरविंद पाटील यांनी आपल्या परीने देणगी स्वरूपात आर्थिक सहकार्य केले आहे. त्यांच्या सहकार्याबद्दल लोकोळी व जैनकोप्प येथील ग्रामस्थ आणि वारकऱ्यांनी आभार व्यक्त केले.
भक्तनिवासाचे बांधकाम पूर्ण झाल्यानंतर पंढरपूर येथे विठ्ठल-रुक्मिणीच्या दर्शनासाठी जाणाऱ्या दोन्ही गावांतील तसेच परिसरातील वारकरी व भाविकांना मोठा आधार मिळणार आहे. त्यामुळे हा भक्तनिवास केवळ निवासाची सुविधा न राहता वारकरी सेवेसाठीचे एक महत्त्वाचे केंद्र ठरणार आहे.
ग्रामस्थांची मोठी उपस्थिती…
यावेळी दीपक पाटील, संतोष चिनवाल, तुकाराम चव्हाण, पुंडलिक वालेकर, बाळू चव्हाण, रामचंद्र पाटील, विलास पाटील, सुनील पाटील, महेश पाटील, मारुती सुतार, परशराम पाटील यांच्यासह लोकोळी व जैनकोप्प येथील वारकरी, ग्रामस्थ आणि भाविक मोठ्या संख्येने उपस्थित होते.
दोन गावांची एकी, ग्रामस्थांचे योगदान आणि वारकरी सेवाभावातून साकारत असलेला हा भक्तनिवास भविष्यात पंढरपूरला येणाऱ्या भाविकांसाठी निश्चितच उपयुक्त ठरणार आहे.
ಲೋಕೋಳಿ–ಜೈನಕೊಪ್ಪ ವಾರಕರಿಗಳ ಪಂಢರಪುರ ಭಕ್ತನಿವಾಸದ ಸ್ಲ್ಯಾಬ್ ಕಾಮಗಾರಿಗೆ ರಾಜವರ್ಧನ ಅರವಿಂದ ಪಾಟೀಲ ಅವರಿಂದ ಚಾಲನೆ. ಎರಡು ಗ್ರಾಮಗಳ ಒಗ್ಗಟ್ಟು, ಸೇವಾಭಾವ ಮತ್ತು ಕೊಡುಗೆಯಿಂದ ನಿರ್ಮಾಣವಾಗುತ್ತಿರುವ ಭಕ್ತನಿವಾಸ; ಕೇವಲ 40ರಿಂದ 50 ದಿನಗಳಲ್ಲಿ ಸ್ಲ್ಯಾಬ್ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ
ಖಾನಾಪುರ : ಖಾನಾಪುರ ತಾಲೂಕಿನ ಲೋಕೋಳಿ ಹಾಗೂ ಜೈನಕೊಪ್ಪ ಗ್ರಾಮದ ಗ್ರಾಮಸ್ಥರು ಮತ್ತು ವಾರಕರಿಗಳ ಒಗ್ಗಟ್ಟಿನ ಪ್ರಯತ್ನ ಹಾಗೂ ಜನರ ಸಹಕಾರದಿಂದ ಶ್ರೀಕ್ಷೇತ್ರ ಪಂಢರಪುರದಲ್ಲಿ ನಿರ್ಮಿಸಲಾಗುತ್ತಿರುವ ಭಕ್ತನಿವಾಸದ ಸ್ಲ್ಯಾಬ್ ಕಾಮಗಾರಿಗೆ ಶನಿವಾರ, ದಿ. 8 ಆಗಸ್ಟ್ 2026ರಂದು ಬಿಜೆಪಿಯ ಯುವ ನಾಯಕ ಹಾಗೂ ಮಾಜಿ ಶಾಸಕ ಅರವಿಂದ ಪಾಟೀಲ ಅವರ ಪುತ್ರ ರಾಜವರ್ಧನ ಅರವಿಂದ ಪಾಟೀಲ ಅವರ ಹಸ್ತದಿಂದ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.
ಲೋಕೋಳಿ ಹಾಗೂ ಜೈನಕೊಪ್ಪ ಗ್ರಾಮದ ವಾರಕರಿಗಳು ಮತ್ತು ಗ್ರಾಮಸ್ಥರು ಒಗ್ಗೂಡಿ, ಪಂಢರಪುರಕ್ಕೆ ವಿಠ್ಠಲ–ರುಕ್ಮಿಣಿ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ವಸತಿ ಸೌಲಭ್ಯ ಕಲ್ಪಿಸಬೇಕೆಂಬ ಉದ್ದೇಶದಿಂದ ಭಕ್ತನಿವಾಸ ನಿರ್ಮಿಸುವ ಉಪಕ್ರಮವನ್ನು ಕೈಗೊಂಡಿದ್ದಾರೆ. ಎರಡು ಗ್ರಾಮಗಳ ನಾಗರಿಕರು ಒಗ್ಗಟ್ಟಿನಿಂದ ಮುಂದಾಳತ್ವ ವಹಿಸಿರುವುದರಿಂದ ಈ ಉಪಕ್ರಮವು ವೇಗವಾಗಿ ರೂಪ ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಪಂಢರಪುರಕ್ಕೆ ದರ್ಶನಕ್ಕಾಗಿ ಆಗಮಿಸುವ ವಾರಕರಿಗಳು, ಭಕ್ತರು ಹಾಗೂ ಗ್ರಾಮಸ್ಥರಿಗೆ ವಸತಿ ಸೌಲಭ್ಯ ದೊರೆಯಲಿದೆ.
ಕೇವಲ 40ರಿಂದ 50 ದಿನಗಳಲ್ಲಿ ಸ್ಲ್ಯಾಬ್ ಕಾಮಗಾರಿ
ಸುಮಾರು 50 ದಿನಗಳ ಹಿಂದೆ ಲೋಕೋಳಿ ಹಾಗೂ ಜೈನಕೊಪ್ಪ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಪಂಢರಪುರದಲ್ಲಿ ಭಕ್ತನಿವಾಸದ ಕಾಲಂ ಭರಣಿ ಸಮಾರಂಭ ನೆರವೇರಿತ್ತು. ಅದರ ನಂತರ ಕೇವಲ 40ರಿಂದ 50 ದಿನಗಳ ಅವಧಿಯಲ್ಲಿ ಸ್ಲ್ಯಾಬ್ ಕಾಮಗಾರಿ ಆರಂಭಿಸುವ ಹಂತವನ್ನು ಗ್ರಾಮಸ್ಥರು ತಲುಪಿದ್ದಾರೆ. ಎರಡೂ ಗ್ರಾಮಗಳ ಗ್ರಾಮಸ್ಥರು ತೋರಿಸಿರುವ ಒಗ್ಗಟ್ಟು, ಪರಸ್ಪರ ಸಹಕಾರ, ಸೇವಾಭಾವ ಮತ್ತು ಪರಿಶ್ರಮದಿಂದಲೇ ಈ ಕಾಮಗಾರಿ ವೇಗವಾಗಿ ಮುಂದುವರಿಯುತ್ತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.
ರಾಜವರ್ಧನ ಪಾಟೀಲರಿಂದ ಗ್ರಾಮಸ್ಥರ ಸೇವಾಭಾವಕ್ಕೆ ಮೆಚ್ಚುಗೆ
ಸ್ಲ್ಯಾಬ್ ಕಾಮಗಾರಿಗೆ ಚಾಲನೆ ನೀಡುವ ಸಂದರ್ಭದಲ್ಲಿ ರಾಜವರ್ಧನ ಅರವಿಂದ ಪಾಟೀಲ ಮಾತನಾಡಿ, “ಖಾನಾಪುರ ತಾಲೂಕಿನ ಲೋಕೋಳಿ ಹಾಗೂ ಜೈನಕೊಪ್ಪ ಗ್ರಾಮದ ವಾರಕರಿಗಳು ಮತ್ತು ಗ್ರಾಮಸ್ಥರು ಒಗ್ಗೂಡಿ ಪಂಢರಪುರದ ಪಾಂಡುರಂಗನ ದರ್ಶನಕ್ಕಾಗಿ ಆಗಮಿಸುವ ಭಕ್ತರಿಗಾಗಿ ನಿರ್ಮಿಸುತ್ತಿರುವ ಈ ಭಕ್ತನಿವಾಸದ ಉಪಕ್ರಮ ಶ್ಲಾಘನೀಯವಾಗಿದೆ. ವಾರಕರಿಗಳು ಹಾಗೂ ಗ್ರಾಮಸ್ಥರ ಈ ಸೇವಾಭಾವ ನಮ್ಮಂತಹ ಯುವ ಪೀಳಿಗೆಗೆ ಖಂಡಿತವಾಗಿಯೂ ಪ್ರೇರಣಾದಾಯಕವಾಗಿದೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪಂಢರಪುರವು ಲಕ್ಷಾಂತರ ವಾರಕರಿಗಳು ಮತ್ತು ಭಕ್ತರ ಶ್ರದ್ಧಾಕೇಂದ್ರವಾಗಿದ್ದು, ತಮ್ಮ ಗ್ರಾಮಗಳ ವಾರಕರಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವುದು ದೊಡ್ಡ ಸೇವೆಯಾಗಿದೆ. ಲೋಕೋಳಿ ಹಾಗೂ ಜೈನಕೊಪ್ಪ ಗ್ರಾಮಸ್ಥರು ಒಗ್ಗೂಡಿ ಕೈಗೊಂಡಿರುವ ಈ ಉಪಕ್ರಮವು ಸಾಮಾಜಿಕ ಒಗ್ಗಟ್ಟು ಮತ್ತು ಧಾರ್ಮಿಕ ಸೇವಾಭಾವಕ್ಕೆ ಉತ್ತಮ ಉದಾಹರಣೆಯಾಗಿದೆ.
ಅರವಿಂದ ಪಾಟೀಲರ ಸಹಕಾರ
ಭಕ್ತನಿವಾಸದ ಕಾಲಂ ಭರಣಿ ಕಾಮಗಾರಿಯಿಂದ ಸ್ಲ್ಯಾಬ್ ಕಾಮಗಾರಿವರೆಗೆ ಮಾಜಿ ಶಾಸಕ ಹಾಗೂ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ ನಿರ್ದೇಶಕ ಅರವಿಂದ ಪಾಟೀಲ ಅವರು ತಮ್ಮಿಂದಾದಷ್ಟು ದೇಣಿಗೆ ರೂಪದಲ್ಲಿ ಆರ್ಥಿಕ ಸಹಕಾರ ನೀಡಿದ್ದಾರೆ. ಅವರ ಸಹಕಾರಕ್ಕಾಗಿ ಲೋಕೋಳಿ ಹಾಗೂ ಜೈನಕೊಪ್ಪ ಗ್ರಾಮದ ಗ್ರಾಮಸ್ಥರು ಮತ್ತು ವಾರಕರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.
ಭಕ್ತನಿವಾಸದ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಬಳಿಕ ಪಂಢರಪುರದಲ್ಲಿ ವಿಠ್ಠಲ–ರುಕ್ಮಿಣಿ ದರ್ಶನಕ್ಕಾಗಿ ತೆರಳುವ ಎರಡೂ ಗ್ರಾಮಗಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ವಾರಕರಿಗಳು ಮತ್ತು ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಹೀಗಾಗಿ ಈ ಭಕ್ತನಿವಾಸವು ಕೇವಲ ವಸತಿ ಸೌಲಭ್ಯವಾಗಿರದೆ ವಾರಕರಿಗಳ ಸೇವೆಗಾಗಿ ಪ್ರಮುಖ ಕೇಂದ್ರವಾಗಲಿದೆ.
ಗ್ರಾಮಸ್ಥರ ಭಾರೀ ಉಪಸ್ಥಿತಿ
ಈ ಸಂದರ್ಭದಲ್ಲಿ ದೀಪಕ ಪಾಟೀಲ, ಸಂತೋಷ ಚಿನವಾಳ, ತುಕಾರಾಮ ಚವ್ಹಾಣ, ಪುಂಡಲಿಕ ವಾಲೇಕರ, ಬಾಳು ಚವ್ಹಾಣ, ರಾಮಚಂದ್ರ ಪಾಟೀಲ, ವಿಲಾಸ ಪಾಟೀಲ, ಸುನೀಲ ಪಾಟೀಲ, ಮಹೇಶ ಪಾಟೀಲ, ಮಾರುತಿ ಸುತಾರ, ಪರಶರಾಮ ಪಾಟೀಲ ಸೇರಿದಂತೆ ಲೋಕೋಳಿ ಹಾಗೂ ಜೈನಕೊಪ್ಪ ಗ್ರಾಮದ ವಾರಕರಿಗಳು, ಗ್ರಾಮಸ್ಥರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಎರಡು ಗ್ರಾಮಗಳ ಒಗ್ಗಟ್ಟು, ಗ್ರಾಮಸ್ಥರ ಕೊಡುಗೆ ಮತ್ತು ವಾರಕರಿಗಳ ಸೇವಾಭಾವದಿಂದ ನಿರ್ಮಾಣವಾಗುತ್ತಿರುವ ಈ ಭಕ್ತನಿವಾಸವು ಮುಂದಿನ ದಿನಗಳಲ್ಲಿ ಪಂಢರಪುರಕ್ಕೆ ಆಗಮಿಸುವ ಭಕ್ತರಿಗೆ ಖಂಡಿತವಾಗಿಯೂ ಬಹಳ ಉಪಯುಕ್ತವಾಗಲಿದೆ.



