सेंट तेरेजा हायस्कूलमध्ये शालेय संसद उद्घाटन. “बदलाची मोठी ताकद नेतृत्वगुणांत दडलेली असते” : फा. अल्वीन सुधीर.
अळणावर (प्रतिनिधी) : शालेय संसद ही विद्यार्थ्यांमध्ये नेतृत्व, जबाबदारीची जाणीव आणि लोकशाही मूल्ये रुजविणारे प्रभावी व्यासपीठ आहे. विद्यार्थ्यांनी उत्तम नेतृत्वगुण आत्मसात करून समाजासमोर आदर्श निर्माण करावा. बदलाची मोठी ताकद नेतृत्वगुणांत दडलेली असते, असे प्रतिपादन सेंट तेरेजा शिक्षण महाविद्यालयाचे प्राचार्य फा. अल्वीन सुधीर यांनी केले.
येथील सेंट तेरेजा हायस्कूलमध्ये शुक्रवारी आयोजित शालेय संसद उद्घाटन समारंभाच्या अध्यक्षस्थानावरून ते बोलत होते. शालेय संसद सदस्यांनी शिस्त, सेवाभाव आणि सांघिक नेतृत्व विकसित करून आपली जबाबदारी प्रामाणिकपणे पार पाडावी, असे आवाहन त्यांनी केले.
सेंट तेरेजा इंग्रजी माध्यम शाळेचे मुख्याध्यापक फा. मरियादास यांनी विद्यार्थ्यांनी शालेय जीवनातच नेतृत्वगुण विकसित केल्यास भविष्यात ते जबाबदार आणि आदर्श नागरिक बनू शकतील, असे सांगितले.
कार्यक्रमास अरवटगी ग्रामपंचायतीचे माजी अध्यक्ष अशोक जोडट्टी, सिस्टर मारिया लुसिया, बी. एल. दारला, शालेय संसद अध्यक्ष मंजुनाथ पाटील, उपाध्यक्षा पल्लवी शिंगरगावकर, रघू कुलकर्णी, राजू अष्टेकर आणि सचिन सागरेकर यांची प्रमुख उपस्थिती होती.
मागील वर्षीच्या एसएसएलसी परीक्षेत उत्कृष्ट गुण मिळविलेल्या तोफिया डोरी, सावित्री पाटील आणि शीफा नदाफ यांचा यावेळी सत्कार करण्यात आला. तसेच नवनिर्वाचित शालेय संसद सदस्यांनी पद व गोपनीयतेची शपथ घेतली. शालेय संसद सदस्यांच्या छायाचित्राचे अनावरण करण्यात आले. विद्यार्थ्यांनी सादर केलेल्या सांस्कृतिक कार्यक्रमांनी उपस्थितांची मने जिंकली.
प्रारंभी विद्यार्थिनींनी प्रार्थना सादर केली. संगीता कोरमेकर यांनी स्वागत केले. मंजुनाथ काशिमनवर यांनी सूत्रसंचालन केले, तर ग्लोरिया सोज यांनी आभार मानले.
ಸೇಂಟ್ ತೆರೇಜಾ ಪ್ರೌಢ ಶಾಲಾ ಸಂಸತ್ತು ಉದ್ಘಾಟನೆ
“ಬದಲಾವಣೆಯ ಅಗಾಧ ಶಕ್ತಿ ನಾಯಕತ್ವದ ಗುಣದಲ್ಲಿ ಅಡಗಿದೆ” : ಫಾ. ಅಲ್ವೀನ್ ಸುಧೀರ್.
ಅಳ್ನಾವರ : “ಶಾಲಾ ಸಂಸತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಪರಿಣಾಮಕಾರಿ ವೇದಿಕೆಯಾಗಿದೆ. ವಿದ್ಯಾರ್ಥಿಗಳು
ಉತ್ತಮ ನಾಯಕತ್ವದ ಗುಣಗಳನ್ನು ರೂಢಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು. ಬದಲಾವಣೆಯ ಅಗಾಧ ಶಕ್ತಿ ನಾಯಕತ್ವದ ಗುಣದಲ್ಲಿ ಅಡಗಿದೆ,” ಎಂದು ಸೇಂಟ್
ತೆರೇಜಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಫಾ. ಅಲ್ವೀನ್ ಸುಧೀರ್ ಹೇಳಿದರು.
ಇಲ್ಲಿನ ಸೇಂಟ್ ತೆರೇಜಾ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ಸಂಸತ್ತಿನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಾಲಾ ಸಂಸತ್ತಿನ
ಸದಸ್ಯರು ಶಿಸ್ತು, ಸೇವಾ ಮನೋಭಾವ ಮತ್ತು ತಂಡದ ನಾಯಕತ್ವವನ್ನು ಬೆಳೆಸಿಕೊಂಡು ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಕರೆ ನೀಡಿದರು.
ಸೇಂಟ್ ತೆರೇಜಾ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಫಾ. ಮರಿಯಾದಾಸ್ ಮಾತನಾಡಿ, ಶಾಲಾ ಜೀವನದಲ್ಲಿಯೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡರೆ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅರವಟಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕ ಜೋಡಟ್ಟಿಯವರ, ಸಿಸ್ಟರ್ ಮರಿಯಾ ಲೂಸಿಯಾ, ಬಿ.ಎಲ್. ದಾರ್ಲಾ, ಶಾಲಾ ಸಂಸತ್ತಿನ ಅಧ್ಯಕ್ಷ
ಮಂಜುನಾಥ ಪಾಟೀಲ, ಉಪಾಧ್ಯಕ್ಷೆ ಪಲ್ಲವಿ ಶಿಂಗರಗಾAವಕರ, ರಘು ಕುಲಕರ್ಣಿ, ರಾಜು ಅಷ್ಟೇಕರ, ಸಚಿನ ಸಾಗರೇಕರ ಇದ್ದರು.
ಕಳೆದ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ತೋಫಿಯಾ ಡೋರಿ, ಸಾವಿತ್ರಿ ಪಾಟೀಲ ಹಾಗೂ ಶೀಫಾ ನದಾಫ್ ಅವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ನೂತನ ಶಾಲಾ ಸಂಸತ್ತಿನ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು ಹಾಗೂ ಸದಸ್ಯರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಆರಂಭದಲ್ಲಿ ವಿದ್ಯಾರ್ಥಿನಿಯರು ಪ್ರಾರ್ಥನೆ ಸಲ್ಲಿಸಿದರು. ಸಂಗೀತಾ ಕೊರಮೇಕರ ಸ್ವಾಗತಿಸಿದರು. ಮಂಜುನಾಥ ಕಾಶಿಮನವರ ಕಾರ್ಯಕ್ರಮ ನಿರೂಪಿಸಿದರು. ಗ್ಲೋರಿಯಾ ಸೋಜ್
ವಂದಿಸಿದರು.



