खानापूरात 29 जुलै रोजी गुरुपौर्णिमा महोत्सव; ‘रामराज्याच्या निर्मितीची दिशा स्पष्ट करणारा’ विशेष कार्यक्रमाचे आयोजन.
खानापूर (प्रतिनिधी) : सनातन संस्थेच्या वतीने बुधवार, 29 जुलै 2026 रोजी आषाढ पौर्णिमेनिमित्त गुरुपौर्णिमा महोत्सव 2026 मोठ्या उत्साहात साजरा करण्यात येणार आहे. गोवा रोड, नवीन मच्छी मार्केटसमोर असलेल्या केदार मंगल कार्यालयात दुपारी 3.00 वाजता हा महोत्सव आयोजित करण्यात आला असून, भाविक, जिज्ञासू, साधक तसेच सर्व नागरिकांनी मोठ्या संख्येने उपस्थित राहावे, असे आवाहन आयोजकांनी केले आहे.
यंदाचा गुरुपौर्णिमा महोत्सव “रामराज्याच्या निर्मितीची दिशा स्पष्ट करणारा गुरुपौर्णिमा महोत्सव” या संकल्पनेवर आधारित आहे. सध्याच्या काळात देशासमोर उभ्या असलेल्या विविध सामाजिक, धार्मिक आणि राष्ट्रीय आव्हानांच्या पार्श्वभूमीवर समाजात धर्मजागृती, राष्ट्रनिष्ठा आणि अध्यात्माची भावना दृढ करण्याचा उद्देश या कार्यक्रमामागे असल्याचे सनातन संस्थेने स्पष्ट केले आहे.
कार्यक्रमाची सुरुवात महर्षी व्यास आणि गुरुंच्या प्रतिमेच्या पूजनाने होणार आहे. त्यानंतर संतसंदेश, साधकांचे अनुभवकथन, रामराज्य स्थापनेचा संकल्प व नामजप, धर्मरक्षक आणि हिंदुत्वनिष्ठांचा सत्कार, राष्ट्रभक्त व धर्मनिष्ठ मान्यवरांचे मार्गदर्शन, स्वसंरक्षणाच्या सोप्या पद्धतींची प्रात्यक्षिके तसेच सनातन संस्था आणि संस्थापक सच्चिदानंद परब्रह्म डॉ. जयंत आठवले यांच्या कार्यावर आधारित लघुपटाचे प्रदर्शन आयोजित करण्यात आले आहे.
याशिवाय “रामराज्य अर्थात हिंदू राष्ट्राच्या स्थापनेसाठीचा संघर्ष आणि दिशा” या विषयावर विशेष व्याख्यानही होणार आहे.
कार्यक्रमस्थळी आध्यात्मिक ग्रंथ आणि सात्त्विक उत्पादनांचे प्रदर्शन भरविण्यात येणार असून उपस्थितांना त्याचा लाभ घेण्याचे आवाहन करण्यात आले आहे.
या महोत्सवात सहभागी होऊन गुरुतत्त्वाचा आशीर्वाद प्राप्त करण्याबरोबरच राष्ट्र आणि धर्माप्रती आपले कर्तव्य पार पाडण्याची संधी साधावी, असे आवाहन सनातन संस्थेच्या वतीने करण्यात आले आहे.
संपर्कासाठी पुढील क्रमांक देण्यात आला आहे : 7892400185
ಖಾನಾಪುರದಲ್ಲಿ ಜುಲೈ 29ರಂದು ಗುರುಪೌರ್ಣಿಮಾ ಮಹೋತ್ಸವ; ‘ರಾಮರಾಜ್ಯದ ನಿರ್ಮಾಣದ ದಿಕ್ಕನ್ನು ಸ್ಪಷ್ಟಪಡಿಸುವ’ ವಿಶೇಷ ಕಾರ್ಯಕ್ರಮದ ಆಯೋಜನೆ.
ಖಾನಾಪುರ (ಪ್ರತಿನಿಧಿ) : ಸನಾತನ ಸಂಸ್ಥೆಯ ವತಿಯಿಂದ ಬುಧವಾರ, ಜುಲೈ 29, 2026ರಂದು ಆಷಾಢ ಪೂರ್ಣಿಮೆಯ ಅಂಗವಾಗಿ ಗುರುಪೌರ್ಣಿಮಾ ಮಹೋತ್ಸವ 2026 ಅನ್ನು ಅತ್ಯಂತ ಭಕ್ತಿಭಾವ ಹಾಗೂ ಉತ್ಸಾಹದಿಂದ ಆಚರಿಸಲಾಗುವುದು. ಗೋವಾ ರಸ್ತೆ, ಹೊಸ ಮೀನು ಮಾರುಕಟ್ಟೆ ಎದುರಿನ ಕೇದಾರ ಮಂಗಲ ಕಾರ್ಯಾಲಯದಲ್ಲಿ ಮಧ್ಯಾಹ್ನ 3.00 ಗಂಟೆಗೆ ಈ ಮಹೋತ್ಸವ ನಡೆಯಲಿದ್ದು, ಭಕ್ತರು, ಜಿಜ್ಞಾಸುಗಳು, ಸಾಧಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
ಈ ವರ್ಷದ ಗುರುಪೌರ್ಣಿಮಾ ಮಹೋತ್ಸವವು “ರಾಮರಾಜ್ಯದ ನಿರ್ಮಾಣದ ದಿಕ್ಕನ್ನು ಸ್ಪಷ್ಟಪಡಿಸುವ ಗುರುಪೌರ್ಣಿಮಾ ಮಹೋತ್ಸವ” ಎಂಬ ಪರಿಕಲ್ಪನೆಯ ಆಧಾರದ ಮೇಲೆ ಆಯೋಜಿಸಲಾಗಿದೆ. ಪ್ರಸ್ತುತ ದೇಶದ ಮುಂದೆ ನಿಂತಿರುವ ವಿವಿಧ ಸಾಮಾಜಿಕ, ಧಾರ್ಮಿಕ ಹಾಗೂ ರಾಷ್ಟ್ರೀಯ ಸವಾಲುಗಳ ಹಿನ್ನೆಲೆದಲ್ಲಿ ಸಮಾಜದಲ್ಲಿ ಧರ್ಮಜಾಗೃತಿ, ರಾಷ್ಟ್ರನಿಷ್ಠೆ ಹಾಗೂ ಆಧ್ಯಾತ್ಮಿಕತೆಯ ಭಾವನೆಯನ್ನು ಬಲಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸನಾತನ ಸಂಸ್ಥೆ ವತಿಯಿಂದ ತಿಳಿಸಲಾಗಿದೆ.
ಕಾರ್ಯಕ್ರಮವು ಮಹರ್ಷಿ ವ್ಯಾಸರು ಹಾಗೂ ಗುರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಆರಂಭವಾಗಲಿದೆ. ಬಳಿಕ ಸಂತರ ಸಂದೇಶ, ಸಾಧಕರ ಅನುಭವ ಹಂಚಿಕೆ, ರಾಮರಾಜ್ಯ ಸ್ಥಾಪನೆಯ ಸಂಕಲ್ಪ ಹಾಗೂ ನಾಮಜಪ, ಧರ್ಮರಕ್ಷಕರು ಮತ್ತು ಹಿಂದೂತ್ವನಿಷ್ಠರ ಸನ್ಮಾನ, ರಾಷ್ಟ್ರಭಕ್ತ ಹಾಗೂ ಧರ್ಮನಿಷ್ಠ ಗಣ್ಯರ ಮಾರ್ಗದರ್ಶನ, ಸ್ವರಕ್ಷಣೆಯ ಸರಳ ವಿಧಾನಗಳ ಪ್ರಾತ್ಯಕ್ಷಿಕೆಗಳು ಹಾಗೂ ಸನಾತನ ಸಂಸ್ಥೆ ಮತ್ತು ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ್ ಆಠವಲೆ ಅವರ ಕಾರ್ಯಾಧಾರಿತ ಕಿರುಚಿತ್ರ ಪ್ರದರ್ಶನ ನಡೆಯಲಿದೆ.
ಇದಲ್ಲದೆ, “ರಾಮರಾಜ್ಯ ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟ ಮತ್ತು ಅದರ ದಿಕ್ಕು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವೂ ಏರ್ಪಡಿಸಲಾಗಿದೆ.
ಕಾರ್ಯಕ್ರಮ ಸ್ಥಳದಲ್ಲಿ ಆಧ್ಯಾತ್ಮಿಕ ಗ್ರಂಥಗಳು ಹಾಗೂ ಸಾತ್ವಿಕ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಕೂಡ ಇರಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.
ಈ ಮಹೋತ್ಸವದಲ್ಲಿ ಭಾಗವಹಿಸುವ ಮೂಲಕ ಗುರುತತ್ತ್ವದ ಆಶೀರ್ವಾದವನ್ನು ಪಡೆಯುವುದರ ಜೊತೆಗೆ ರಾಷ್ಟ್ರ ಮತ್ತು ಧರ್ಮದ ಪ್ರತಿಯೊಬ್ಬರ ಕರ್ತವ್ಯವನ್ನು ಅರಿತು ಪಾಲಿಸುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸನಾತನ ಸಂಸ್ಥೆಯ ವತಿಯಿಂದ ಕರೆ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7892400185


