नीट आंदोलनाच्या पार्श्वभूमीवर भाजपचा काँग्रेसविरोधात निषेध मोर्चा; देशविरोधी घोषणाबाजीचा आरोप, कारवाईची मागणी.
बेळगाव (प्रतिनिधी) : बेळगावात नीट परीक्षेच्या पेपरफुटीच्या मुद्द्यावरून सुरू असलेल्या आंदोलनाच्या पार्श्वभूमीवर भारतीय जनता पक्षाने काँग्रेसविरोधात तीव्र निषेध आंदोलन छेडले. आंदोलनादरम्यान देशाच्या पंतप्रधानांचा अवमान, देशविरोधी घोषणाबाजी तसेच भाजपच्या एका आमदारावर अंडीफेक करण्याचा प्रयत्न झाल्याचा आरोप करत भाजप कार्यकर्त्यांनी जोरदार घोषणाबाजी केली.
राणी चन्नम्मा चौकातून सुरू झालेला निषेध मोर्चा काँग्रेस भवनाला घेराव घालण्यासाठी निघाला होता. मात्र, कायदा व सुव्यवस्थेचा प्रश्न निर्माण होऊ नये म्हणून पोलिसांनी मोठा बंदोबस्त ठेवत आंदोलकांना मार्गातच अडवले. यावेळी आंदोलक आणि पोलिसांमध्ये काही काळ शाब्दिक चकमक झाली. कार्यकर्त्यांनी बॅरिकेड्स हटवून पुढे जाण्याचा प्रयत्न केला, मात्र पोलिसांनी वेळीच हस्तक्षेप करून परिस्थिती नियंत्रणात ठेवली.
या वेळी भाजपचे राज्य उपाध्यक्ष अनिल बेनके यांनी काँग्रेस सरकारवर जोरदार टीका केली. विद्यार्थ्यांच्या न्याय्य मागण्यांना भाजपचा पाठिंबा असल्याचे स्पष्ट करत, आंदोलनाच्या नावाखाली देशविरोधी विचारांना प्रोत्साहन देणे आणि पंतप्रधानांविषयी आक्षेपार्ह वक्तव्य करणे कोणत्याही परिस्थितीत खपवून घेतले जाणार नाही, असा इशारा त्यांनी दिला. बेळगावच्या शांतताप्रिय वातावरणात देशविरोधी मागण्या करणाऱ्यांवर कठोर कारवाई करण्याची मागणीही त्यांनी केली.
माजी आमदार अरविंद पाटील यांनी बंगळुरू येथे भाजप आमदारावर झालेल्या अंडीफेकीच्या घटनेचा निषेध व्यक्त केला. राज्यातील काँग्रेस सरकार शेतकरी, दुष्काळग्रस्त आणि सर्वसामान्यांच्या प्रश्नांकडे दुर्लक्ष करून राजकीय वातावरण दूषित करत असल्याचा आरोप त्यांनी केला.
निदर्शनानंतर माजी आमदार महांतेश कवटगीमठ यांच्या नेतृत्वाखाली भाजपच्या शिष्टमंडळाने बेळगावच्या जिल्हाधिकाऱ्यांची भेट घेऊन निवेदन सादर केले. आंदोलनातील व्हिडिओंची सखोल चौकशी करून देशविरोधी घोषणाबाजी करणाऱ्यांवर तसेच पंतप्रधानांचा अवमान करणाऱ्यांविरोधात तातडीने कायदेशीर कारवाई करण्यात यावी, अशी मागणी निवेदनाद्वारे करण्यात आली.
या आंदोलनात भाजपचे अनेक पदाधिकारी, कार्यकर्ते आणि समर्थक मोठ्या संख्येने सहभागी झाले होते.
ನೀಟ್ ಹಗರಣದ ಕುರಿತು ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ವತಿಯಿಂದ ವಿರುದ್ಧ ಪ್ರತಿಭಟನಾ ಮೆರವಣಿಗೆ; ಪ್ರತಿಭಟನೆಯಲ್ಲಿ ದೇಶವಿರೋಧಿ ಘೋಷಣೆಗಳ ಆರೋಪ, ಕಠಿಣ ಕ್ರಮಕ್ಕೆ ಆಗ್ರಹ.
ಬೆಳಗಾವಿ (ಪ್ರತಿನಿಧಿ): ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಬೆನ್ನಲ್ಲೇ ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿತು. ಪ್ರತಿಭಟನೆಯ ವೇಳೆ ದೇಶದ ಪ್ರಧಾನಮಂತ್ರಿಯವರಿಗೆ ಅವಮಾನ, ದೇಶವಿರೋಧಿ ಘೋಷಣೆಗಳು ಹಾಗೂ ಬಿಜೆಪಿ ಶಾಸಕರೊಬ್ಬರ ಮೇಲೆ ಮೊಟ್ಟೆ ಎಸೆಯಲು ಯತ್ನಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಣಿ ಚೆನ್ನಮ್ಮ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಕಾಂಗ್ರೆಸ್ ಭವನಕ್ಕೆ ಮುತ್ತಿಗೆ ಹಾಕಲು ಹೊರಟಿತ್ತು. ಆದರೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸರು ಭಾರೀ ಬಂದೋಬಸ್ತ್ ಏರ್ಪಡಿಸಿ ಪ್ರತಿಭಟನಾಕಾರರನ್ನು ಮಾರ್ಗಮಧ್ಯೆಯೇ ತಡೆದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಕಾರ್ಯಕರ್ತರು ಬ್ಯಾರಿಕೇಡ್ಗಳನ್ನು ತೆರವುಗೊಳಿಸಿ ಮುಂದೆ ನುಗ್ಗಲು ಪ್ರಯತ್ನಿಸಿದರೂ, ಪೊಲೀಸರು ಸಮಯೋಚಿತವಾಗಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವಿದ್ಯಾರ್ಥಿಗಳ ನ್ಯಾಯಸಮ್ಮತ ಬೇಡಿಕೆಗಳಿಗೆ ಬಿಜೆಪಿಯ ಸಂಪೂರ್ಣ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದ ಅವರು, ಪ್ರತಿಭಟನೆಯ ಹೆಸರಿನಲ್ಲಿ ದೇಶವಿರೋಧಿ ಚಿಂತನೆಗಳಿಗೆ ಉತ್ತೇಜನ ನೀಡುವುದು ಹಾಗೂ ಪ್ರಧಾನಮಂತ್ರಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಅಲ್ಲದೆ, ಬೆಳಗಾವಿಯ ಶಾಂತಿಪ್ರಿಯ ವಾತಾವರಣದಲ್ಲಿ ದೇಶವಿರೋಧಿ ಘೋಷಣೆಗಳನ್ನು ಕೂಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮಾಜಿ ಶಾಸಕ ಅರವಿಂದ ಪಾಟೀಲ ಅವರು ಬೆಂಗಳೂರಿನಲ್ಲಿ ಬಿಜೆಪಿ ಶಾಸಕರೊಬ್ಬರ ಮೇಲೆ ಮೊಟ್ಟೆ ಎಸೆಯಲು ಯತ್ನಿಸಿದ ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದರು. ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರು, ಬರಪೀಡಿತರು ಹಾಗೂ ಸಾಮಾನ್ಯ ಜನರ ಸಮಸ್ಯೆಗಳತ್ತ ಗಮನ ಹರಿಸುವ ಬದಲು ರಾಜ್ಯದ ರಾಜಕೀಯ ವಾತಾವರಣವನ್ನು ಕಲುಷಿತಗೊಳಿಸುತ್ತಿದೆ ಎಂದು ಅವರು ಆರೋಪಿಸಿದರು.
ಪ್ರತಿಭಟನೆಯ ಬಳಿಕ ಮಾಜಿ ಶಾಸಕ ಮಹಾಂತೇಶ ಕವಟಗಿಮಠ ಅವರ ನೇತೃತ್ವದಲ್ಲಿ ಬಿಜೆಪಿ ನಿಯೋಗವು ಬೆಳಗಾವಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಪ್ರತಿಭಟನೆಯ ವೇಳೆ ನಡೆದ ಘಟನೆಗಳ ವಿಡಿಯೋಗಳನ್ನು ಸಮಗ್ರವಾಗಿ ಪರಿಶೀಲಿಸಿ, ದೇಶವಿರೋಧಿ ಘೋಷಣೆಗಳನ್ನು ಕೂಗಿದವರು ಹಾಗೂ ಪ್ರಧಾನಮಂತ್ರಿಯವರನ್ನು ಅವಮಾನಿಸಿದವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಈ ಪ್ರತಿಭಟನೆಯಲ್ಲಿ ಬಿಜೆಪಿ ಪಕ್ಷದ ಅನೇಕ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.


