रस्त्यांच्या दुरुस्तीसाठी आठ गावांचा एल्गार; सोमवारी 27 जुलै रोजी इटगी बंद ; बेमुदत आंदोलनाचा इशारा.
खानापूर (प्रतिनिधी) : खानापूर तालुक्यातील इटगी, गंदिगवाड, तोलगी, बोगूर, बेडरहट्टी, करविनकोप्प, चिक्कमुनवळी आणि हिरेमुनवळी या आठ गावांतील ग्रामस्थांनी रस्त्यांच्या दुरावस्थेविरोधात तीव्र आंदोलनाचा इशारा दिला आहे. येत्या सोमवारी 27 जुलै 2026 पासून इटगी येथे वैद्यकीय सेवा वगळता सर्व प्रकारच्या सेवा बंद ठेवून बेमुदत आंदोलन करण्यात येणार आहे. व यासंदर्भात सात दिवसांची पूर्वसूचना प्रशासनाला देण्यात आली आहे.
ग्रामस्थांनी दिलेल्या निवेदनात म्हटले आहे की, संबंधित रस्त्यांच्या दुरुस्तीसाठी अनेक वेळा लोकप्रतिनिधी व सार्वजनिक बांधकाम विभागाकडे निवेदने देऊनही आजपर्यंत कोणतीही ठोस कार्यवाही झालेली नाही. 12 ऑगस्ट 2024 रोजीही आमदार तसेच संबंधित अधिकाऱ्यांकडे रस्ता दुरुस्तीची मागणी करण्यात आली होती. मात्र, अद्याप कामाला सुरुवात झालेली नाही.
या रस्त्यांवरून दररोज हजारो विद्यार्थी, शिक्षक, कामगार, बँक कर्मचारी, दूध व भाजीपाला वाहने, शालेय मध्यान्ह भोजन वाहने तसेच दररोज 50 हून अधिक बसगाड्यांची वाहतूक होत असल्याने नागरिकांना मोठ्या अडचणींचा सामना करावा लागत आहे. खराब रस्त्यांमुळे अपघाताचा धोका वाढल्याचा आरोपही ग्रामस्थांनी केला आहे. खानापूर, बीडी, बेळगाव आणि बैलहोंगल या भागांतून इटगीला जोडणारे सर्व रस्ते अत्यंत खराब झाल्याने एसटी बससह इतर वाहने वेळेवर पोहोचत नाहीत. त्यामुळे नागरिक, विद्यार्थी आणि प्रवाशांना मोठ्या अडचणींचा सामना करावा लागत आहे.
रस्त्यांची तातडीने दुरुस्ती न झाल्यास सोमवार दिनांक 27 जुलैपासून इटगी येथे वैद्यकीय सेवा वगळता सर्व प्रकारच्या सेवा बंद ठेवून बेमुदत आंदोलन करण्यात येईल, असा इशारा ग्रामस्थांनी दिला आहे.
या निवेदनाच्या प्रती खानापूर तहसीलदार, सार्वजनिक बांधकाम विभागाचे एईई (खानापूर व बेळगाव), खानापूरचे आमदार, बेळगावचे पोलीस अधीक्षक, बैलहोंगलचे डीएसपी तसेच नंदगड आणि खानापूर पोलीस निरीक्षक यांना देण्यात आल्या आहेत.
ರಸ್ತೆ ದುರಸ್ತಿಗೆ ಎಂಟು ಗ್ರಾಮಗಳ ಎಚ್ಚರಿಕೆ; ಜುಲೈ 27ರಂದು ಸೋಮವಾರ ಇಟಗಿ ಬಂದಗೆ ಕರೆ, ಅನಿರ್ದಿಷ್ಟಾವಧಿ ಹೋರಾಟದ ಎಚ್ಚರಿಕೆ
ಖಾನಾಪುರ (ಪ್ರತಿನಿಧಿ): ಖಾನಾಪುರ ತಾಲ್ಲೂಕಿನ ಇಟಗಿ, ಗಂದಿಗವಾಡ, ತೋಲಗಿ, ಬೋಗೂರು, ಬೇಡರಹಟ್ಟಿ, ಕರವಿನಕೊಪ್ಪ, ಚಿಕ್ಕಮುನವಳ್ಳಿ ಹಾಗೂ ಹಿರೇಮುನವಳ್ಳಿ ಸೇರಿದಂತೆ ಎಂಟು ಗ್ರಾಮಗಳ ಗ್ರಾಮಸ್ಥರು ರಸ್ತೆ ದುಸ್ಥಿತಿಯನ್ನು ಖಂಡಿಸಿ ತೀವ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಬರುವ 2026ರ ಜುಲೈ 27ರಂದು ಸೋಮವಾರ ಇಟಗಿಯಲ್ಲಿ ವೈದ್ಯಕೀಯ ಸೇವೆಯನ್ನು ಹೊರತುಪಡಿಸಿ ಎಲ್ಲಾ ರೀತಿಯ ಸೇವೆಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ಘೋಷಿಸಿದ್ದಾರೆ. ಈ ಸಂಬಂಧ ಆಡಳಿತಕ್ಕೆ ಏಳು ದಿನಗಳ ಮುಂಗಡ ನೋಟಿಸ್ ಕೂಡ ಸಲ್ಲಿಸಲಾಗಿದೆ.
ಗ್ರಾಮಸ್ಥರು ನೀಡಿರುವ ಮನವಿಯಲ್ಲಿ, ಸಂಬಂಧಿತ ರಸ್ತೆಗಳ ದುರಸ್ತಿಗಾಗಿ ಅನೇಕ ಬಾರಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕ ಕಾಮಗಾರಿಗಳ ಇಲಾಖೆಗೆ ಮನವಿ ಸಲ್ಲಿಸಿದರೂ ಇದುವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ತಿಳಿಸಿದ್ದಾರೆ. 2024ರ ಆಗಸ್ಟ್ 12ರಂದು ಖಾನಾಪುರ ಶಾಸಕರು ಹಾಗೂ ಸಂಬಂಧಿತ ಅಧಿಕಾರಿಗಳಿಗೆ ರಸ್ತೆ ದುರಸ್ತಿ ಮಾಡುವಂತೆ ಮನವಿ ಸಲ್ಲಿಸಲಾಗಿತ್ತು. ಆದರೆ, ಇದುವರೆಗೆ ಕಾಮಗಾರಿಗೆ ಚಾಲನೆ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಈ ರಸ್ತೆಗಳಲ್ಲಿ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು, ಕಾರ್ಮಿಕರು, ಬ್ಯಾಂಕ್ ಸಿಬ್ಬಂದಿ, ಹಾಲು ಹಾಗೂ ತರಕಾರಿ ಸಾಗಣೆ ವಾಹನಗಳು, ಶಾಲಾ ಮಧ್ಯಾಹ್ನ ಉಪಾಹಾರ ಸಾಗಣೆ ವಾಹನಗಳು ಸೇರಿದಂತೆ ಪ್ರತಿದಿನ 50ಕ್ಕೂ ಹೆಚ್ಚು ಬಸ್ಗಳು ಸಂಚರಿಸುತ್ತಿರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಗಳ ದುಸ್ಥಿತಿಯಿಂದ ಅಪಘಾತಗಳ ಅಪಾಯವೂ ಹೆಚ್ಚಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಖಾನಾಪುರ, ಬೀಡಿ, ಬೆಳಗಾವಿ ಹಾಗೂ ಬೈಲಹೊಂಗಲ ಭಾಗಗಳಿಂದ ಇಟಗಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳು ಸಂಪೂರ್ಣ ಹದಗೆಟ್ಟಿರುವುದರಿಂದ ಕೆಎಸ್ಆರ್ಟಿಸಿ ಬಸ್ಗಳು ಸೇರಿದಂತೆ ಇತರೆ ವಾಹನಗಳು ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪ್ರತಿದಿನ ಸಂಕಷ್ಟ ಅನುಭವಿಸುತ್ತಿದ್ದಾರೆ.
ರಸ್ತೆಗಳನ್ನು ತಕ್ಷಣ ದುರಸ್ತಿ ಮಾಡದಿದ್ದರೆ ಜುಲೈ 27ರಿಂದ ಸೋಮವಾರ ಇಟಗಿಯಲ್ಲಿ ವೈದ್ಯಕೀಯ ಸೇವೆಯನ್ನು ಹೊರತುಪಡಿಸಿ ಎಲ್ಲಾ ರೀತಿಯ ಸೇವೆಗಳನ್ನು ಬಂದ್ ಮಾಡಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಈ ಮನವಿಯ ಪ್ರತಿಗಳನ್ನು ಖಾನಾಪುರ ತಹಶೀಲ್ದಾರ್, ಸಾರ್ವಜನಿಕ ಕಾಮಗಾರಿಗಳ ಇಲಾಖೆಯ ಎಇಇ (ಖಾನಾಪುರ ಹಾಗೂ ಬೆಳಗಾವಿ), ಖಾನಾಪುರ ಶಾಸಕರು, ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಬೈಲಹೊಂಗಲ ಡಿಎಸ್ಪಿ ಹಾಗೂ ನಂದಗಡ ಮತ್ತು ಖಾನಾಪುರ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರಿಗೆ ಸಲ್ಲಿಸಲಾಗಿದೆ.


