माऊली स्पोर्ट्स क्लब गर्लगुंजीच्या 2026-27 हंगामातील जर्सीचे अनावरण; क्रीडा क्षेत्रात गावाचे नाव उज्ज्वल करण्याचा निर्धार.
गर्लगुंजी (प्रतिनिधी) : माऊली स्पोर्ट्स क्लब, गर्लगुंजी यांच्या 2026-27 वर्षातील क्रिकेट हंगामासाठीच्या नवीन जर्सीचे अनावरण शनिवारी सायंकाळी मारुती मंदिर समुदाय भवन येथे उत्साहपूर्ण वातावरणात पार पडले. सामाजिक कार्यकर्ते व गर्लगुंजी ग्रामपंचायतीचे माजी सदस्य प्रसाद पाटील यांच्या हस्ते जर्सीचे अनावरण करण्यात आले. यंदाच्या हंगामासाठी जर्सीचे प्रायोजक म्हणूनही प्रसाद पाटील यांनीच सहकार्य केले आहे.
माऊली स्पोर्ट्स क्लबची विजयी परंपरा गेल्या काही वर्षांपासून कायम असून, 2025-26 या हंगामात संघाने माचीगड, माळ अंकले, नंदगड, जांबोटी, हलसाल, कापोली आणि हलशी येथील क्रिकेट स्पर्धांमध्ये प्रथम क्रमांक पटकावला, तर माडीगुंजी येथील स्पर्धेत उपविजेतेपद मिळवले. याशिवाय जिल्ह्याबाहेरील अनेक स्पर्धांमध्येही संघाने उल्लेखनीय यश संपादन केले आहे. हाफ पीच आणि फुल पीच अशा दोन्ही प्रकारच्या क्रिकेट स्पर्धांमध्ये संघाने सातत्यपूर्ण उत्कृष्ट कामगिरी करत आपली वेगळी ओळख निर्माण केली आहे.
क्रिकेटबरोबरच माऊली स्पोर्ट्स क्लबच्या माध्यमातून गावात कबड्डी, क्रिकेट, व्हॉलीबॉल यांसारख्या विविध क्रीडा स्पर्धांचे आयोजन करून त्या यशस्वीपणे पार पाडल्या जात आहेत. ग्रामीण भागातील युवकांना क्रीडेकडे वळविण्यासाठी संघ सातत्याने कार्यरत आहे.
संघाला पीकेपीएसचे उपाध्यक्ष विनोद कुंभार, अष्टपैलू खेळाडू प्रताप पाटील, परशराम आस्टेकर, संघाचे कर्णधार सागर कोलेकर आणि पांडुरंग भातकांडे यांचे मार्गदर्शन लाभत आहे.
यावेळी यश चौगुले, हरीश चौगुले, योगेश पाटील, मल्लाप्पा पाटील, निलेश निट्टुरकर, श्रेयश निट्टुरकर, मंथन पाटील, प्रणय यलारीचे, संदेश कोलेकर, गणेश पाखरे, भुजंग मेलगे, गंधर्व बिर्जे, दत्ता पाटील, दत्ता देसाई, एकलव्य संघाचे प्रशिक्षक प्रशांत पाखरे, कल्लाप्पा लोहार, अनंत पाटील यांच्यासह खेळाडू व क्रीडाप्रेमी मोठ्या संख्येने उपस्थित होते. उपस्थित मान्यवरांनी संघाला आगामी सर्व स्पर्धांसाठी शुभेच्छा दिल्या.
यावेळी प्रसाद पाटील यांनी सांगितले की, यापूर्वीही एकलव्य संघाच्या माध्यमातून गावातील प्राथमिक व माध्यमिक शाळांतील विद्यार्थ्यांना जर्सी, शालेय बॅग आणि पाण्याच्या बाटल्यांचे वितरण करण्यात आले होते. युवकांनी व्यसनांपासून दूर राहून निरोगी जीवनशैली स्वीकारावी, गाव व्यसनमुक्त व्हावे, चांगल्या सवयी जोपासाव्यात, क्रीडा क्षेत्रात गाव व तालुक्याचे नाव उज्ज्वल करावे आणि खेळाच्या माध्यमातून करिअर घडवावे, हाच या उपक्रमामागील मुख्य उद्देश असल्याचे त्यांनी स्पष्ट केले.
ಮಾವುಲಿ ಸ್ಪೋರ್ಟ್ಸ್ ಕ್ಲಬ್ ಗರ್ಲಗುಂಜಿಯ 2026-27ರ ಕ್ರೀಡಾ ಹಂಗಾಮಿನ ಜರ್ಸಿ ಅನಾವರಣ; ಕ್ರೀಡಾ ಕ್ಷೇತ್ರದಲ್ಲಿ ಗ್ರಾಮದ ಹೆಸರನ್ನು ಉಜ್ವಲಗೊಳಿಸುವ ಸಂಕಲ್ಪ.
ಗರ್ಲಗುಂಜಿ (ಪ್ರತಿನಿಧಿ) : ಮಾವುಲಿ ಸ್ಪೋರ್ಟ್ಸ್ ಕ್ಲಬ್, ಗರ್ಲಗುಂಜಿ ವತಿಯಿಂದ 2026-27ರ ಕ್ರಿಕೆಟ್ ಹಂಗಾಮಿಗಾಗಿ ಸಿದ್ಧಪಡಿಸಲಾದ ಹೊಸ ಜರ್ಸಿಯ ಅನಾವರಣವು ಶನಿವಾರ ಸಂಜೆ ಮಾರುತಿ ದೇವಸ್ಥಾನ ಸಮುದಾಯ ಭವನದಲ್ಲಿ ಉತ್ಸಾಹದ ವಾತಾವರಣದಲ್ಲಿ ನೆರವೇರಿತು. ಸಮಾಜಸೇವಕರು ಹಾಗೂ ಗರ್ಲಗುಂಜಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರಾದ ಪ್ರಸಾದ್ ಪಾಟೀಲ ಅವರಿಂದ ಜರ್ಸಿಯನ್ನು ಅನಾವರಣಗೊಳಿಸಲಾಯಿತು. ಈ ವರ್ಷದ ಹಂಗಾಮಿನ ಜರ್ಸಿಗೆ ಪ್ರಾಯೋಜಕರಾಗಿಯೂ ಪ್ರಸಾದ್ ಪಾಟೀಲ ಅವರು ಸಹಕಾರ ನೀಡಿರುವುದು ವಿಶೇಷವಾಗಿದೆ.
ಕಳೆದ ಕೆಲವು ವರ್ಷಗಳಿಂದ ಮಾವುಲಿ ಸ್ಪೋರ್ಟ್ಸ್ ಕ್ಲಬ್ ತನ್ನ ವಿಜಯದ ಪರಂಪರೆಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿದೆ. 2025-26ರ ಹಂಗಾಮಿನಲ್ಲಿ ತಂಡವು ಮಾಚಿಗಡ, ಮಾಳ ಅಂಕಲೆ, ನಂದಗಡ, ಜಾಂಬೋಟಿ, ಹಲಸಾಳ, ಕಾಪೋಲಿ ಹಾಗೂ ಹಲಶಿ ಗ್ರಾಮಗಳಲ್ಲಿ ನಡೆದ ಕ್ರಿಕೆಟ್ ಟೂರ್ನಿಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು, ಮಾಡಿಗುಂಜಿ ಟೂರ್ನಿಯಲ್ಲಿ ರನ್ನರ್-ಅಪ್ ಸ್ಥಾನವನ್ನು ಗಳಿಸಿದೆ. ಇದಲ್ಲದೆ ಜಿಲ್ಲೆಯ ಹೊರಗಡೆಯಲ್ಲಿಯೂ ನಡೆದ ಅನೇಕ ಕ್ರಿಕೆಟ್ ಸ್ಪರ್ಧೆಗಳಲ್ಲಿ ತಂಡವು ಗಮನಾರ್ಹ ಸಾಧನೆ ಮಾಡಿದೆ.
ಹಾಫ್ ಪಿಚ್ ಹಾಗೂ ಫುಲ್ ಪಿಚ್ ಎಂಬ ಎರಡೂ ಮಾದರಿಯ ಕ್ರಿಕೆಟ್ ಟೂರ್ನಿಗಳಲ್ಲೂ ಮಾವುಲಿ ಸ್ಪೋರ್ಟ್ಸ್ ಕ್ಲಬ್ ನಿರಂತರವಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ತನ್ನದೇ ಆದ ವಿಶಿಷ್ಟ ಗುರುತನ್ನು ನಿರ್ಮಿಸಿಕೊಂಡಿದೆ.
ಕ್ರಿಕೆಟ್ ಮಾತ್ರವಲ್ಲದೆ, ಮಾವುಲಿ ಸ್ಪೋರ್ಟ್ಸ್ ಕ್ಲಬ್ ಮೂಲಕ ಗ್ರಾಮದಲ್ಲಿ ಕಬಡ್ಡಿ, ಕ್ರಿಕೆಟ್, ವಾಲಿಬಾಲ್ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ. ಗ್ರಾಮೀಣ ಭಾಗದ ಯುವಕರನ್ನು ಕ್ರೀಡೆಯತ್ತ ಆಕರ್ಷಿಸಿ, ಅವರಲ್ಲಿ ಕ್ರೀಡಾಸಕ್ತಿಯನ್ನು ಬೆಳೆಸುವ ಕಾರ್ಯವನ್ನು ಕ್ಲಬ್ ನಿರಂತರವಾಗಿ ನಡೆಸುತ್ತಿದೆ.
ತಂಡಕ್ಕೆ ಪಿಕೆಪಿಎಸ್ ಉಪಾಧ್ಯಕ್ಷ ವಿನೋದ ಕುಂಭಾರ, ಆಲ್ರೌಂಡರ್ ಆಟಗಾರ ಪ್ರತಾಪ ಪಾಟೀಲ, ಪರಶುರಾಮ ಅಷ್ಟೇಕರ್, ತಂಡದ ನಾಯಕ ಸಾಗರ್ ಕೊಲೆಕರ ಹಾಗೂ ಪಾಂಡುರಂಗ ಭಾತಕಾಂಡೆ ಅವರ ಮಾರ್ಗದರ್ಶನ ದೊರೆಯುತ್ತಿದೆ.
ಈ ಸಂದರ್ಭದಲ್ಲಿ ಯಶ್ ಚೌಗುಲೆ, ಹರೀಶ್ ಚೌಗುಲೆ, ಯೋಗೇಶ್ ಪಾಟೀಲ, ಮಲ್ಲಪ್ಪ ಪಾಟೀಲ, ನಿಲೇಶ್ ನಿಟ್ಟೂರ್ಕರ್, ಶ್ರೇಯಸ್ ನಿಟ್ಟೂರ್ಕರ್, ಮಂಥನ್ ಪಾಟೀಲ, ಪ್ರಣಯ್ ಯಲಾರಿಚೆ, ಸಂದೇಶ್ ಕೊಲೆಕರ, ಗಣೇಶ್ ಪಾಖರೆ, ಭುಜಂಗ್ ಮೆಳಗೆ, ಗಂಧರ್ವ ಬಿರ್ಜೆ, ದತ್ತ ಪಾಟೀಲ, ದತ್ತ ದೇಸಾಯಿ, ಏಕಲವ್ಯ ತಂಡದ ತರಬೇತುದಾರ ಪ್ರಶಾಂತ್ ಪಾಖರೆ, ಕಲ್ಲಪ್ಪ ಲೋಹಾರ, ಅನಂತ ಪಾಟೀಲ ಸೇರಿದಂತೆ ಅನೇಕ ಆಟಗಾರರು ಹಾಗೂ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಆಗಮಿಸಿದ ಗಣ್ಯರು ತಂಡಕ್ಕೆ ಮುಂಬರುವ ಎಲ್ಲಾ ಸ್ಪರ್ಧೆಗಳಿಗಾಗಿ ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ಪ್ರಸಾದ್ ಪಾಟೀಲ ಅವರು, ಈ ಹಿಂದೆಯೂ ಏಕಲವ್ಯ ತಂಡದ ಮೂಲಕ ಗ್ರಾಮದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಜರ್ಸಿ, ಶಾಲಾ ಬ್ಯಾಗ್ ಮತ್ತು ನೀರಿನ ಬಾಟಲಿಗಳನ್ನು ವಿತರಿಸಲಾಗಿತ್ತು ಎಂದು ತಿಳಿಸಿದರು. ಯುವಕರು ವ್ಯಸನಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು, ಗ್ರಾಮವು ವ್ಯಸನಮುಕ್ತವಾಗಬೇಕು, ಉತ್ತಮ ಸಂಸ್ಕಾರ ಹಾಗೂ ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು, ಕ್ರೀಡಾ ಕ್ಷೇತ್ರದಲ್ಲಿ ಗ್ರಾಮ ಮತ್ತು ತಾಲ್ಲೂಕಿನ ಹೆಸರನ್ನು ಉಜ್ವಲಗೊಳಿಸಬೇಕು ಹಾಗೂ ಕ್ರೀಡೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂಬುದೇ ಈ ಉಪಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

