सावकारीत अवाजवी व्याज आकारणाऱ्यांवर गुंडाविरोधी कायद्याची कारवाई; जिल्हा पोलिसांचा कडक इशारा.
बेळगाव (प्रतिनिधी) ; जिल्ह्यात बेकायदेशीर सावकारी करून नागरिकांची आर्थिक पिळवणूक करणारे, अवाजवी व्याजदर आकारणारे, कर्जदारांना धमकावणारे तसेच राऊडीशीटर, समाजकंटक आणि विविध प्रकारचे बेकायदेशीर धंदे करणाऱ्यांविरुद्ध बेळगाव जिल्हा पोलिसांनी व्यापक मोहीम सुरू केली आहे. अशा प्रवृत्तीच्या व्यक्तींवर कठोर कायदेशीर कारवाई केली जाणार असून, गरज भासल्यास गुंडाविरोधी कायदा, हद्दपारीसह इतर कठोर उपाययोजना राबविण्यात येतील, असा स्पष्ट इशारा जिल्हा पोलिस अधीक्षक के. रामराजन यांनी दिला.
जिल्ह्यात परवानगीशिवाय खासगी सावकारीचा व्यवसाय करून जादा व्याज आकारणे, कर्जदारांवर मानसिक व शारीरिक दबाव आणणे, धमकावणे, शिवीगाळ करणे किंवा त्यांच्या मालमत्तेवर बेकायदेशीर ताबा मिळविण्याचा प्रयत्न करणाऱ्यांविरोधात पोलिसांची ‘शून्य सहनशीलता’ भूमिका राहणार असल्याचे त्यांनी स्पष्ट केले.
अशा प्रकारच्या कोणत्याही तक्रारीची तातडीने दखल घेऊन संबंधितांविरुद्ध फौजदारी गुन्हे दाखल केले जातील. वारंवार गुन्हे करणारे, नागरिकांमध्ये भीतीचे वातावरण निर्माण करणारे अथवा संघटित पद्धतीने बेकायदेशीर सावकारी करणाऱ्यांवर गुंडाविरोधी कायद्यांतर्गत कारवाई करण्यात येणार असल्याचेही त्यांनी सांगितले.
पोलिस प्रशासनाने नागरिकांना आवाहन केले आहे की, कोणत्याही प्रकारचा आर्थिक छळ, अवाजवी व्याजदर, धमक्या किंवा बेकायदेशीर वसुलीचा सामना करावा लागत असल्यास तात्काळ जवळच्या पोलिस ठाण्यात किंवा जिल्हा पोलिस नियंत्रण कक्षाशी संपर्क साधावा. तक्रारदारांची ओळख गोपनीय ठेवून त्वरित कारवाई केली जाईल, असेही प्रशासनाने स्पष्ट केले.
जिल्ह्यात कायदा व सुव्यवस्था अबाधित ठेवण्यासाठी आणि सर्वसामान्य नागरिकांना आर्थिक शोषणापासून संरक्षण देण्यासाठी ही विशेष मोहीम राबविण्यात येत असून, बेकायदेशीर सावकारीला कोणत्याही परिस्थितीत पाठीशी घातले जाणार नाही, असा ठाम इशारा जिल्हा पोलिस प्रशासनाने दिला आहे.
ಅತಿಯಾದ ಬಡ್ಡಿ ವಸೂಲಿ ಮಾಡುವ ಅಕ್ರಮ ಸಾವಕಾರರ ವಿರುದ್ಧ ರೌಡಿಶೀಟರ್/ಗೂಂಡಾ ಕಾಯ್ದೆಯಡಿ ಕಠಿಣ ಕ್ರಮ; ಜಿಲ್ಲಾ ಪೊಲೀಸರಿಂದ ಕಠಿಣ ಎಚ್ಚರಿಕೆ
ಬೆಳಗಾವಿ (ಪ್ರತಿನಿಧಿ) : ಜಿಲ್ಲೆಯಲ್ಲಿ ಅಕ್ರಮವಾಗಿ ಸಾವಕಾರಿ ನಡೆಸಿ ಸಾರ್ವಜನಿಕರ ಆರ್ಥಿಕ ಶೋಷಣೆ ಮಾಡುವವರು, ಅತಿಯಾದ ಬಡ್ಡಿದರ ವಿಧಿಸುವವರು, ಸಾಲಗಾರರಿಗೆ ಬೆದರಿಕೆ ಹಾಕುವವರು, ರೌಡಿಶೀಟರ್ಗಳು, ಸಮಾಜಘಾತಕ ಚಟುವಟಿಕೆಗಳಲ್ಲಿ ತೊಡಗಿರುವವರು ಹಾಗೂ ವಿವಿಧ ರೀತಿಯ ಅಕ್ರಮ ವ್ಯವಹಾರ ನಡೆಸುವವರ ವಿರುದ್ಧ ಬೆಳಗಾವಿ ಜಿಲ್ಲಾ ಪೊಲೀಸರು ವ್ಯಾಪಕ ವಿಶೇಷ ಅಭಿಯಾನ ಆರಂಭಿಸಿದ್ದಾರೆ. ಇಂತಹ ಪ್ರವೃತ್ತಿಯವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದಲ್ಲಿ ಗೂಂಡಾ ಕಾಯ್ದೆ, ಜಿಲ್ಲೆಯಿಂದ ಗಡಿಪಾರು ಸೇರಿದಂತೆ ಇತರೆ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಅನುಮತಿಯಿಲ್ಲದೆ ಖಾಸಗಿ ಸಾವಕಾರಿ ನಡೆಸುವುದು, ಅತಿಯಾದ ಬಡ್ಡಿ ವಸೂಲಿ ಮಾಡುವುದು, ಸಾಲಗಾರರ ಮೇಲೆ ಮಾನಸಿಕ ಹಾಗೂ ದೈಹಿಕ ಒತ್ತಡ ಹೇರುವುದು, ಬೆದರಿಕೆ ಹಾಕುವುದು, ನಿಂದಿಸುವುದು ಅಥವಾ ಅವರ ಆಸ್ತಿಯನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಪ್ರಯತ್ನಿಸುವವರ ವಿರುದ್ಧ ಪೊಲೀಸರು ‘ಶೂನ್ಯ ಸಹಿಷ್ಣುತೆ’ (Zero Tolerance) ನೀತಿಯನ್ನು ಅನುಸರಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇಂತಹ ಯಾವುದೇ ದೂರು ಬಂದ ಕೂಡಲೇ ಅದನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಮರುಮರು ಅಪರಾಧ ಎಸಗುವವರು, ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುವವರು ಅಥವಾ ಸಂಘಟಿತ ರೀತಿಯಲ್ಲಿ ಅಕ್ರಮ ಸಾವಕಾರಿ ನಡೆಸುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದ್ದು, ಅತಿಯಾದ ಬಡ್ಡಿ ವಸೂಲಿ, ಆರ್ಥಿಕ ಕಿರುಕುಳ, ಬೆದರಿಕೆ ಅಥವಾ ಅಕ್ರಮ ಹಣ ವಸೂಲಿಯಂತಹ ಯಾವುದೇ ಸಮಸ್ಯೆ ಎದುರಾದಲ್ಲಿ ತಕ್ಷಣವೇ ಸಮೀಪದ ಪೊಲೀಸ್ ಠಾಣೆ ಅಥವಾ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬೇಕು ಎಂದು ಕೋರಿದೆ. ದೂರುದಾರರ ಗುರುತನ್ನು ಗೌಪ್ಯವಾಗಿರಿಸಿ ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತ ಸ್ಪಷ್ಟಪಡಿಸಿದೆ.
ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಹಾಗೂ ಸಾಮಾನ್ಯ ನಾಗರಿಕರನ್ನು ಆರ್ಥಿಕ ಶೋಷಣೆಯಿಂದ ರಕ್ಷಿಸುವ ಉದ್ದೇಶದಿಂದ ಈ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಯಾವುದೇ ಪರಿಸ್ಥಿತಿಯಲ್ಲೂ ಅಕ್ರಮ ಸಾವಕಾರಿಗೆ ಬೆಂಬಲ ನೀಡುವುದಿಲ್ಲ ಎಂದು ಜಿಲ್ಲಾ ಪೊಲೀಸ್ ಆಡಳಿತ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.



