जोमतळेच्या धोकादायक वळणावर भीषण अपघात; अज्ञात चारचाकीच्या धडकेत पती-पत्नी गंभीर जखमी.
खानापूर : प्रतिनिधी
खानापूर-लोंढा मार्गावरील जोमतळे (ता. खानापूर) येथील धोकादायक वळणावर अज्ञात चारचाकी वाहनाने दुचाकीला समोरून जोरदार धडक दिल्याने दुचाकीवरील पती-पत्नी गंभीर जखमी झाल्याची घटना शुक्रवारी (दि. 26 जून 2026) सायंकाळी सुमारे 7.30 ते 7.45 वाजण्याच्या दरम्यान घडली.
मिळालेल्या माहितीनुसार, शिवठाण (ता. खानापूर) येथील मूळ रहिवासी व सध्या रामनगर येथे वास्तव्यास असलेले मष्णु शिरोडकर (वय 64) आणि त्यांची पत्नी आनंदीबाई मष्णु शिरोडकर (वय 55) हे दुचाकीवरून एका हळदी समारंभासाठी खानापूरच्या दिशेने जात होते. दरम्यान, जोमतळे येथील धोकादायक वळणावर समोरून भरधाव वेगाने आलेल्या अज्ञात चारचाकी वाहनाने त्यांच्या दुचाकीला समोरून जोरदार धडक दिली. अपघातानंतर संबंधित वाहनचालक घटनास्थळी न थांबता पसार झाला.
या भीषण अपघातात पती-पत्नी दोघेही गंभीर जखमी झाले. घटनेची माहिती सामाजिक कार्यकर्ते विश्वनाथ केसरेकर यांना मिळताच त्यांनी तत्काळ रुग्णवाहिकेशी संपर्क साधला. मात्र रुग्णवाहिका येण्यास विलंब होत असल्याने त्यांनी वेळ न दवडता जखमी दाम्पत्याला स्वतःच्या कारमधून खानापूर येथील प्राथमिक आरोग्य केंद्रात दाखल केले. तेथे प्रथमोपचार करून दोघांनाही पुढील उपचारासाठी बेळगाव येथील केएलई रुग्णालयात हलविण्यात आले असून त्यांच्यावर उपचार सुरू आहेत.
जोमतळे वळण ठरत आहे ‘अपघातांचा हॉटस्पॉट’…
खानापूर-लोंढा मार्गावरील जोमतळे येथील वळण हे धोकादायक म्हणून ओळखले जाते. या ठिकाणी यापूर्वीही अनेक गंभीर अपघात झाले असून, गर्लगुंजी आणि मुंडवाड येथील दोन युवकांचा वेगवेगळ्या दुचाकी अपघातांत मृत्यू झाला आहे. काही दिवसांपूर्वी एक चारचाकी वाहनही याच ठिकाणी पलटी झाले होते.
या वळणावर सातत्याने अपघात होत असल्याने संबंधित सार्वजनिक बांधकाम विभाग व वाहतूक प्रशासनाने तातडीने सुरक्षा उपाययोजना कराव्यात, चेतावणी फलक, वेगमर्यादा, रस्त्यावरील परावर्तक चिन्हे आणि आवश्यक असल्यास वळणाचे सुधारित बांधकाम करावे, अशी मागणी नागरिकांकडून होत आहे. अन्यथा भविष्यात आणखी गंभीर अपघात होण्याची भीती व्यक्त केली जात आहे.
ಜೋಮತಳೆ ಊರಿನ ಬಳಿ ಅಪಾಯಕಾರಿ ತಿರುವಿನಲ್ಲಿ ಭೀಕರ ಅಪಘಾತ; ಅಪರಿಚಿತ ನಾಲ್ಕು ಚಕ್ರದ ವಾಹನದ ಡಿಕ್ಕಿಗೆ ಪತಿ-ಪತ್ನಿ ಗಂಭೀರ ಗಾಯ.
ಖಾನಾಪುರ : ಪ್ರತಿನಿಧಿಖಾನಾಪುರ–ಲೋಂಡಾ ರಸ್ತೆಯ ಜೋಮತಳೆ (ತಾ. ಖಾನಾಪುರ) ಊರಿನ ಬಳಿ ಅಪಾಯಕಾರಿ ತಿರುವಿನಲ್ಲಿ ಅಪರಿಚಿತ ನಾಲ್ಕು ಚಕ್ರದ ವಾಹನವು ದ್ವಿಚಕ್ರ ವಾಹನಕ್ಕೆ ಮುಂದಿನಿಂದ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ, ದ್ವಿಚಕ್ರ ವಾಹನ ಸವಾರ ಪತಿ-ಪತ್ನಿ ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ (ದಿ. 26 ಜೂನ್ 2026) ಸಂಜೆ ಸುಮಾರು 7.30 ರಿಂದ 7.45ರ ನಡುವೆ ನಡೆದಿದೆ.
ಖಾನಾಪುರ–ಲೋಂಡಾ ರಸ್ತೆಯ ಜೋಮತಳೆ (ತಾ. ಖಾನಾಪುರ) ಊರಿನ ಬಳಿ ಅಪಾಯಕಾರಿ ತಿರುವಿನಲ್ಲಿ ಅಪರಿಚಿತ ನಾಲ್ಕು ಚಕ್ರದ ವಾಹನವು ದ್ವಿಚಕ್ರ ವಾಹನಕ್ಕೆ ಮುಂದಿನಿಂದ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ, ದ್ವಿಚಕ್ರ ವಾಹನ ಸವಾರ ಪತಿ-ಪತ್ನಿ ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ (ದಿ. 26 ಜೂನ್ 2026) ಸಂಜೆ ಸುಮಾರು 7.30 ರಿಂದ 7.45ರ ನಡುವೆ ನಡೆದಿದೆ.
ಲಭ್ಯವಾದ ಮಾಹಿತಿಯ ಪ್ರಕಾರ, ಶಿವಠಾಣ (ತಾ. ಖಾನಾಪುರ) ಗ್ರಾಮದ ಮೂಲ ನಿವಾಸಿಗಳಾದ, ಹಾಗೂ ಪ್ರಸ್ತುತ ರಾಮನಗರದಲ್ಲಿ ವಾಸವಾಗಿರುವ ಮಷ್ಣು ಶಿರೋಡ್ಕರ್ (64) ಹಾಗೂ ಅವರ ಪತ್ನಿ ಆನಂದಿಬಾಯಿ ಮಷ್ಣು ಶಿರೋಡ್ಕರ್ (55) ಅವರು ದ್ವಿಚಕ್ರ ವಾಹನದಲ್ಲಿ ಅರಿಸಿನ ಕಾರ್ಯಕ್ರಮಕ್ಕೆ ಖಾನಾಪುರದ ಕಡೆಗೆ ತೆರಳುತ್ತಿದ್ದರು. ಈ ವೇಳೆ ಜೋಮತಳೆ ಗ್ರಾಮದ ಅಪಾಯಕಾರಿ ತಿರುವಿನಲ್ಲಿ ಎದುರು ದಿಕ್ಕಿನಿಂದ ಅತಿವೇಗವಾಗಿ ಬಂದ ಅಪರಿಚಿತ ನಾಲ್ಕು ಚಕ್ರದ ವಾಹನವು ಅವರ ಬೈಕ್ಗೆ ಮುಂದಿನಿಂದ ಭಾರೀ ಡಿಕ್ಕಿ ಹೊಡೆದಿದೆ.
ಅಪಘಾತದ ಬಳಿಕ ಸಂಬಂಧಿತ ವಾಹನ ಚಾಲಕ ಸ್ಥಳದಲ್ಲೇ ನಿಲ್ಲದೆ ಪರಾರಿಯಾಗಿದ್ದಾನೆ.
ಈ ಭೀಕರ ಅಪಘಾತದಲ್ಲಿ ಪತಿ-ಪತ್ನಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಮಾಹಿತಿ ಸಾಮಾಜಿಕ ಕಾರ್ಯಕರ್ತ ವಿಶ್ವನಾಥ ಕೇಸರೇಕರ್ ಅವರಿಗೆ ತಲುಪುತ್ತಿದ್ದಂತೆಯೇ ಅವರು ತಕ್ಷಣ ಆಂಬುಲೆನ್ಸ್ಗೆ ಸಂಪರ್ಕಿಸಿದರು. ಆದರೆ ಆಂಬುಲೆನ್ಸ್ ಆಗಮಿಸಲು ವಿಳಂಬವಾಗುತ್ತಿದ್ದ ಕಾರಣ ಸಮಯ ವ್ಯರ್ಥ ಮಾಡದೇ ಗಾಯಾಳು ದಂಪತಿಯನ್ನು ತಮ್ಮ ಸ್ವಂತ ಕಾರಿನಲ್ಲಿ ಖಾನಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನೂ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಜೋಮತಳೆ ತಿರುವು ‘ಅಪಘಾತಗಳ ಹಾಟ್ಸ್ಪಾಟ್’ ಆಗುತ್ತಿದೆ…
ಖಾನಾಪುರ–ಲೋಂಡಾ ರಸ್ತೆಯ ಜೋಮತಳೆ ಗ್ರಾಮದ ತಿರುವು ಅತ್ಯಂತ ಅಪಾಯಕಾರಿ ತಿರುವು ಎಂದು ಗುರುತಿಸಿಕೊಂಡಿದೆ. ಈ ಸ್ಥಳದಲ್ಲಿ ಈ ಹಿಂದೆ ಕೂಡ ಅನೇಕ ಗಂಭೀರ ಅಪಘಾತಗಳು ಸಂಭವಿಸಿದ್ದು, ಗುಂಜಿ ಹಾಗೂ ಮುಂಡವಾಡ ಗ್ರಾಮದ ಇಬ್ಬರು ಯುವಕರು ಪ್ರತ್ಯೇಕ ದ್ವಿಚಕ್ರ ವಾಹನ ಅಪಘಾತಗಳಲ್ಲಿ ಮೃತಪಟ್ಟಿದ್ದರು. ಕೆಲವು ದಿನಗಳ ಹಿಂದೆ ಇದೇ ಸ್ಥಳದಲ್ಲಿ ಒಂದು ನಾಲ್ಕು ಚಕ್ರದ ವಾಹನ ಕೂಡ ಪಲ್ಟಿಯಾಗಿತ್ತು.
ಈ ತಿರುವಿನಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಿತ ಸಾರ್ವಜನಿಕ ಕಾಮಗಾರಿ ಇಲಾಖೆ ಹಾಗೂ ಸಂಚಾರ ಇಲಾಖೆಯು ತುರ್ತಾಗಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಎಚ್ಚರಿಕೆ ಫಲಕಗಳು, ವೇಗ ಮಿತಿ ಸೂಚನೆಗಳು, ರಸ್ತೆಯ ಮೇಲಿನ ಪ್ರತಿಫಲಕ ಚಿಹ್ನೆಗಳು ಹಾಗೂ ಅಗತ್ಯವಿದ್ದಲ್ಲಿ ತಿರುವಿನ ಸುಧಾರಿತ ನಿರ್ಮಾಣ ಕಾರ್ಯ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಗಂಭೀರ ಅಪಘಾತಗಳು ಸಂಭವಿಸುವ ಭೀತಿ ವ್ಯಕ್ತವಾಗುತ್ತಿದೆ.


